ಕಲರ್ಸ್ ಕನ್ನಡ (Colors Kannada) ವಾಹಿನಿಯೂ ವಿಭಿನ್ನ ಧಾರಾವಾಹಿಗಳು (Serial) ಹಾಗೂ ರಿಯಾಲಿಟಿ ಶೋಗಳ ಮೂಲಕ ಜನರನ್ನು ರಂಜಿಸುತ್ತಿದೆ. ಇದರಲ್ಲಿ ಬರುವ ಕನ್ನಡತಿ (Kannadati) ಧಾರಾವಾಹಿ ಎಂದರೆ ವೀಕ್ಷಕರಿಗೆ ಅಚ್ಚು ಮೆಚ್ಚು. ಕೇವಲ ಇದೊಂದೆ ಅಲ್ಲ ಎದೆ ತುಂಬಿ ಹಾಡುವೆನು, ಬಿಗ್ಬಾಸ್ (Bigboss) ಹೀಗೆ ರಿಯಾಲಿಟಿ ಶೋಗಳು ಎಂದರೆ ಸಹ ಜನರಿಗೆ ಬಹಳ ಇಷ್ಟ. ಹಾಗೆಯೇ ಜನರ ನೆಚ್ಚಿನ ರಿಯಾಲಿಟಿ ಶೋಗಳಲ್ಲಿ ಒಂದಾದ ಜನಪ್ರಿಯ ಶೋ ಎಂದರೆ ರಾಜ - ರಾಣಿ. ಇದೀಗ ಇದರ ಎರಡನೇ ಸೀಸನ್ ಆರಂಭವಾಗಿದೆ. ಆದರೆ ಇದರಲ್ಲಿನ ಒಂದು ಬದಲಾವಣೆ ಮಾತ್ರ ಅಭಿಮಾನಿಗಳ ಗೊಂದಲಕ್ಕೆ ಕಾರಣವಾಗಿದೆ. ಅದು ನಿರೂಪಕಿ ಅನುಪಮಾ ಗೌಡ.
ರಿಯಾಲಿಟಿ ಶೋಗೆ ಹೊಸ ನಿರೂಪಕಿ
ಹೌದು, ಕಳೆದ ರಾಜ – ರಾಣಿ ರಿಯಾಲಿಟಿ ಶೋ ಅನ್ನು ನಟಿ, ನಿರೂಪಕಿ ಅನುಪಮಾ ಗೌಡ ಚೆಂದವಾಗಿ ನಿರೂಪಣೆ ಮಾಡಿದ್ದರು. ಆದರೆ ಇಂದಿನ ಮೊದಲ ಎಪಿಸೋಡ್ನಲ್ಲಿ ಮಾತ್ರ ಅವರು ಕಾಣಿಸಿಕೊಂಡಿಲ್ಲ. ಇದು ರಾಜ – ರಾಣಿ ಶೋ ಅಭಿಮಾನಿಗಳ ಗೊಂದಲಕ್ಕೆ ಕಾರಣವಾಗಿದೆ. ಈ ಬಾರಿಯ ರಾಜಾ ರಾಣಿ-2’ ರಿಯಾಲಿಟಿ ಶೋಗೆ ನಿರೂಪಕಿಯಾಗಿ ಡಾ.ಜಾನ್ವಿ ರಾಯಲ ಕಾಣಿಸಿಕೊಂಡಿದ್ದು, ಅನುಪಮಾ ಗೌಡ ಯಾಕಿಲ್ಲ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.
View this post on Instagram
ಇದನ್ನೂ ಓದಿ: ಹೆಂಡತಿ ಮಾಡಿದ ತಪ್ಪಿಗೆ ಕ್ಷಮೆ ಕೋರಿದ ವಿಘ್ನೇಶ್ ಶಿವನ್, ಫೋಟೋ ತೆಗೆಯುವಾಗ ತಪ್ಪಾಗಿದೆ ಕ್ಷಮಿಸಿ ಎಂದ ನಿರ್ದೇಶಕ
ಈಗಾಗಲೇ ಯಶಸ್ವಿಯಾಗಿ ಮೊದಲನೆ ಸೀಸನ್ ಪೂರ್ಣಗೊಳಿಸಿರುವ ಈ ಶೋ ಮತ್ತೆ ಬಂದಿದ್ದು, ವೀಕ್ಷಕರಿಗೆ ಬಹಳ ಸಂತೋಷವಾಗಿದೆ. ಈ ಶೋದಲ್ಲಿ ಸೆಲೆಬ್ರಿಟಿಗಳು ತಮ್ಮ ಸಂಗಾತಿಯೊಂದಿಗೆ ಬಂದು ಆಟವಾಡುವುದರ ಜೊತೆಗೆ ಅವರ ಜೀವನದ ಬಗ್ಗೆ ಗುಟ್ಟುನ್ನು ಬಿಚ್ಚುಡುತ್ತಾರೆ. ಅವರ ಬದುಕಿನಲ್ಲಿ ನಡೆದ ಸಿಹಿ, ಕಹಿ ಘಟನೆಗಳನ್ನು ಜನರ ಮುಂದೆ ತೆರೆದಿಟ್ಟು ಮನಸ್ಸನ್ನು ಹಗುರಗೊಳಿಸಿಕೊಳ್ಳಲು ಒಂದು ಅವಕಾಶ ಎನ್ನಬಹುದು.
ಸಂಬಂಧವನ್ನು ಮತ್ತಷ್ಟು ಗಟ್ಟಿಯಾಗಿಸುವ ರಿಯಾಲಿಟಿ ಶೋ ರಾಜಾ-ರಾಣಿ ಮತ್ತೆ ಬರುತ್ತಿದೆ ಎಂದು ಕಲರ್ಸ್ ವಾಹಿನಿ ತಿಳಿಸಿದ್ದು, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಸ್ಪರ್ಧಿಗಳ ಲಿಸ್ಟ್ ಇಲ್ಲಿದೆ
12 ಸೆಲೆಬ್ರಿಟಿ ಜೋಡಿಗಳನ್ನು ಒಳಗೊಂಡ ಗೇಮ್ ಶೋ ಇದಾಗಿದ್ದು, ಒಬ್ಬರನ್ನೊಬ್ಬರು ಬಿಟ್ಟುಕೊಡದೇ ಆಡಿ ಗೆಲ್ಲುವ ಅವಕಾಶ ಇಲ್ಲಿದೆ. ಈ ಶೋ ಮೂಲಕ ಸಂಬಂಧಗಳು ಇನ್ನಷ್ಟು ಗಟ್ಟಿಯಾಗುತ್ತದೆ ಎಂಬುದು ವಾಹಿನಿ ಮಾತ್ರವಲ್ಲದೇ ಕಳೆದ ಸೀಸನ್ನಲ್ಲಿ ಸ್ಪರ್ಧಿಸಿದ್ದ ಸ್ಪರ್ಧಿಗಳ ಅಂಬೋಣ.
ಇದನ್ನೂ ಓದಿ: ಬರೋಬ್ಬರಿ 700 ಸಂಚಿಕೆಗಳನ್ನು ಪೂರೈಸಿದ ಜೊತೆ ಜೊತೆಯಲಿ, ಮುಂದೇನ್ ಟ್ವಿಸ್ಟ್ ಕಾದಿದೆ ಪ್ರೇಕ್ಷಕರಿಗೆ?
ಇನ್ನು ಈ ಬಾರಿ ವಿಜಯ್ ಶೋಭಾರಾಜ್ ಹಾಗೂ ಪತ್ನಿ ದೀಪಿಕಾ ಸುವರ್ಣಾ, ನಮ್ಮನೆ ಯುವರಾಣಿಯಲ್ಲಿ ಅಹಲ್ಯಾ ಪಾತ್ರದ ಮೂಲಕ ಪ್ರಸಿದ್ಧರಾಗಿರುವ ನಟಿ ಕಾವ್ಯಾ ಹಾಗೂ ಅವರ ಪತಿ ಕುಮಾರ್ ಅವರು ಸಹ ಈ ಶೋದಲ್ಲಿ ಭಾಗವಹಿಸುತ್ತಿದ್ದಾರೆ. ಅಲ್ಲದೇ, ನಟಿ ವೀಣಾ ಸುಂದರ್ ಹಾಗೂ ಅವರ ಪತಿ ಸುಂದರ್, ಸಂದೇಶ್ ಹಾಗೂ ಅವರ ಪತ್ನಿ ಮನೀಶಾ, ಸಂಗೀತ ನಿರ್ದೇಶಕ ವಿ ಮನೋಹರ್ ಹಾಗೂ ಪತ್ನಿ ವೇಣಿ, ನಟಿ ಸುಜಾತ-ಅಕ್ಷಯ್, ಅರುಣ್- ಮಾಧುರ್ಯಾ, ಅಕ್ಷಿತಾ ಮತ್ತು ರಜತ್, ನಿಶಿತಾ ಗೌಡ ಮತ್ತು ಪ್ರಸನ್ನ, ಐಶ್ವರ್ಯ ಸಾಲಿಮಠ ಮತ್ತು ವಿನಯ್, ಧನರಾಜ್ ಮತ್ತು ಶಾಲಿನಿ ದಂಪತಿಗಳು ಭಾಗವಹಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ