ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ಲಾಂಛನದ ಹೊಸ ಶಿಲ್ಪ (National Emblem Issue) ಅನಾವರಣಗೊಳಿಸಿದ ನಂತರ ವಿವಾದ ಹೊತ್ತಿಕೊಂಡಿದೆ. ರಾಷ್ಟ್ರೀಯ ಲಾಂಛನದ ಸೌಮ್ಯ ರೂಪವನ್ನು ಉಗ್ರ ರೂಪವನ್ನಾಗಿ ಪರಿವರ್ತಿಸಲಾಗಿದೆ ಎಂದು ವಿಪಕ್ಷಗಳು ಟೀಕಿಸಿದ್ದುವು. ಇದೀಗ ನಟ ಪ್ರಕಾಶ್ ರೈ (Prakash Rai) ಸಹ ರಾಷ್ಟ್ರ ಲಾಂಛನದ ಹೊಸ ಶಿಲ್ಪದ ಬಗ್ಗೆ ಆಕ್ಷೇಪ ತೆಗೆದಿದ್ದಾರೆ. ನಾವು ಎತ್ತ ಸಾಗುತ್ತಿದ್ದೇವೆ ಎಂದು ಪ್ರಶ್ನಿಸಿ ಟ್ವೀಟ್ ಮಾಡಿರುವ ಪ್ರಕಾಶ್ ರೈ #justasking ಹ್ಯಾಷ್ಟ್ಯಾಗ್ನಡಿ ಪ್ರಶ್ನೆ ಎತ್ತಿದ್ದಾರೆ. ಆದರೆ ಮತ್ತೋರ್ವ ಖ್ಯಾತ ನಟ ಅನುಪಮ್ ಖೇರ್ (Anupam Kher) ರಾಷ್ಟ್ರ ಲಾಂಛನದ ಹೊಸ ಶಿಲ್ಪವನ್ನು ಬೆಂಬಲಿಸಿದ್ದಾರೆ.
ಶ್ರೀರಾಮ, ಹನುಮಂತ ಮತ್ತು ರಾಷ್ಟ್ರೀಯ ಲಾಂಛನದ ಮೊದಲಿನ ರೂಪ- ಇಂದಿನ ರೂಪ ಎಂಬ ಕ್ಯಾಪ್ಷನ್ ನೀಡಿ ಫೋಟೋವೊಂದನ್ನು ಹಂಚಿಕೊಂಡು ನಾವು ಎತ್ತ ಸಾಗುತ್ತಿದ್ದೇವೆ ಎಂದು ನಟ ಪ್ರಕಾಶ್ ರೈ ಪ್ರಶ್ನಿಸಿದ್ದಾರೆ. ಇತ್ತ ನಟ ಅನುಪಮ್ ಖೇರ್ ಸಿಂಹಕ್ಕೆ ಹಲ್ಲುಗಳು ಇರುವುದು ಸಹಜ. ಅಲ್ಲದೇ ತನ್ನ ಹಲ್ಲುಗಳನ್ನು ಸಿಂಹ ಪ್ರದರ್ಶಿಸುವುದು ಸಹಜ ಅಷ್ಟೇ ಸಹಜ ಎಂದು ವ್ಯಂಗ್ಯ ಮಾಡಿದ್ದಾರೆ.
ಮೊದಲಿಂದಲೂ ಪ್ರಶ್ನೆ ಎತ್ತುತ್ತಿದ್ದ ಪ್ರಕಾಶ್ ರೈ
ಈ ಮುಂಚಿನಿಂದಲೂ #justasking ಹ್ಯಾಷ್ಟ್ಯಾಗ್ನಡಿ ಕೇಂದ್ರ ಸರ್ಕಾರ ಮತ್ತು ಬಿಜೆಪಿಯ ವಿರುದ್ಧ ವಿವಿಧ ಪ್ರಶ್ನೆಗಳನ್ನು ಕೇಳುತ್ತಲೆ ಬಂದಿದ್ದಾರೆ ನಟ ಪ್ರಕಾಶ್ ರೈ. ಇದಿಗ ರಾಷ್ಟ್ರೀಯ ಲಾಂಛನದ ಹೊಸ ಶಿಲ್ಪ ಅನಾವರಣದ ಕುರಿತು ಸಹ ಅವರ ದನಿಯೆತ್ತಿದ್ದಾರೆ.
Where are we heading… #justasking pic.twitter.com/WjQI1O18pp
— Prakash Raj (@prakashraaj) July 14, 2022
अरे भाई! शेर के दांत होंगे तो दिखाएगा ही! आख़िरकार स्वतंत्र भारत का शेर है। ज़रूरत पड़ी तो काट भी सकता है! जय हिंद! 🙏🇮🇳🙏 Video shot at #PrimeMinistersSangrahlaya pic.twitter.com/cMqM326P2C
— Anupam Kher (@AnupamPKher) July 13, 2022
6,500 ಕೆ.ಜಿ ಉಕ್ಕಿನ ರಕ್ಷಣಾ ಕವಚ!
ರಾಷ್ಟ್ರೀಯ ಲಾಂಛನಕ್ಕೆ 6,500 ಕೆ.ಜಿ ತೂಕದ ಉಕ್ಕಿನ ರಕ್ಷಣಾ ಕವಚವನ್ನು ನಿರ್ಮಿಸಲಾಗಿದೆ. ಹೊಸ ಸಂಸತ್ತಿನ ಕಟ್ಟಡದ ಛಾವಣಿಯ ಮೇಲೆ ರಾಷ್ಟ್ರೀಯ ಲಾಂಛನವನ್ನು ಬಿತ್ತರಿಸುವ ಪರಿಕಲ್ಪನೆಯ ರೇಖಾಚಿತ್ರ ಮತ್ತು ಪ್ರಕ್ರಿಯೆಯನ್ನು ಒಟ್ಟು 8 ಹಂತಗಳಲ್ಲಿ ನಡೆಸಲಾಗಿದೆ.
ಇದನ್ನೂ ಓದಿ: National Emblem: ಹೊಸ ಸಂಸತ್ ಭವನದ ಬಳಿ ರಾಷ್ಟ್ರೀಯ ಲಾಂಛನ; ಫೋಟೊ ನೋಡಿ
ಕ್ಲೇ ಮಾಡೆಲಿಂಗ್/ಕಂಪ್ಯೂಟರ್ ಗ್ರಾಫಿಕ್ನಿಂದ ಕಂಚಿನ ಎರಕಹೊಯ್ದ ಮತ್ತು ಪಾಲಿಶ್ ಮಾಡುವ ಹಂತವನ್ನು ಸಹ ಹೊಂದಿದೆ.
ತೃಣಮೂಲ ಕಾಂಗ್ರೆಸ್ ನಾಯಕನಿಂದಲೂ ಟೀಕೆ
ರಾಷ್ಟ್ರೀಯ ಲಾಂಛನದ ಹೊಸ ಶಿಲ್ಪದ ಚಿತ್ರವನ್ನು ಹಂಚಿಕೊಂಡಿರುವ ತೃಣಮೂಲ ಕಾಂಗ್ರೆಸ್ನ ರಾಜ್ಯಸಭಾ ಸದಸ್ಯ ಜವ್ಹಾರ್ ಸಿರ್ಕಾರ್, ರಾಷ್ಟ್ರ ಲಾಂಛನದ ಹಳೆಯ ಮತ್ತು ಹೊಸ ಆವೃತ್ತಿಯ ಚಿತ್ರಗಳನ್ನು ಅಕ್ಕಪಕ್ಕದಲ್ಲಿ ಹಂಚಿಕೊಂಡಿರುವ ಅವರು ಟ್ವೀಟ್ ಮಾಡಿದ್ದಾರೆ, "ಎಡಭಾಗದಲ್ಲಿ ರಾಷ್ಟ್ರೀಯ ಲಾಂಛನದ ಮೊದಲ ರೂಪವಿದೆ. ಅದು ಆಕರ್ಷಕವಾಗಿದೆ. ಗೌರವಾನ್ವಿತ ಅನಿಸುವಂತಿದೆ. ಬಲಭಾಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅನಾವರಣಗೊಳಿಸಿದ ರಾಷ್ಟ್ರೀಯ ಲಾಂಛನದ ಹೊಸ ಶಿಲ್ಪವಾಗಿದೆ. ಇದನ್ನು ತಕ್ಷಣ ಬದಲಾಯಿಸಬೇಕು ಎಂದು ಟೀಕಿಸಿ ಒತ್ತಾಯಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ