• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • ವಿಷ್ಣುವರ್ಧನ್​ ಪುತ್ಥಳಿ ಮರುಸ್ಥಾಪನೆಗೆ ಗುದ್ದಲಿ ಪೂಜೆ ನೆರವೇರಿಸಿದ ಅನಿರುದ್ಧ್​​..!

ವಿಷ್ಣುವರ್ಧನ್​ ಪುತ್ಥಳಿ ಮರುಸ್ಥಾಪನೆಗೆ ಗುದ್ದಲಿ ಪೂಜೆ ನೆರವೇರಿಸಿದ ಅನಿರುದ್ಧ್​​..!

ವಿಷ್ಣು ಪ್ರತಿಮೆ ಧ್ವಂಸ

ವಿಷ್ಣು ಪ್ರತಿಮೆ ಧ್ವಂಸ

Vishnuvardhan Statue: ವಿಷ್ಣು ಅವರ ಪುತ್ಥಳಿ ಧ್ವಂಸ ಕುರಿತಂತೆ ಮಾಗಡಿ ರಸ್ತೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ಸಹ ದಾಖಲಿಸಲಾಗಿತ್ತು. ಈಗ ಅದೇ ಟೋಲ್​ಗೇಟ್ ಸರ್ಕಲ್​ನಲ್ಲಿ ವಿಷ್ಣುವರ್ಧನ್ ಪುತ್ಥಳಿ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿದೆ. ಟೋಲ್​ಗೇಟ್ ಸರ್ಕಲ್​ನಲ್ಲಿ ಈ ಹಿಂದೆ ಪ್ರತಿಮೆ ಇದ್ದ ಕಡೆಯ ಬದಲಾಗಿ ಮತ್ತೊಂದು ಕಡೆ ವಿಷ್ಣುವರ್ಧನ್ ಪುತ್ಥಳಿ ಸ್ಥಾಪನೆಗೆ ಅವಕಾಶ ನೀಡಲಾಗಿದೆ.

ಮುಂದೆ ಓದಿ ...
  • Share this:

ವಿಷ್ಣುವರ್ಧನ್​... ಕೋಟಿ ಕೋಟಿ ಕನ್ನಡಿಗರ ಹೃದಯಗೆದ್ದ ನಟ. ಅಭಿಮಾನಿಗಳ ಪಾಲಿನ ಸಾಹಸಸಿಂಹ. ವಿಷ್ಣುವರ್ಧನ್ ಅವರಿಗೆ ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಗಳಲ್ಲೂ ಸಹ ಅಭಿಮಾನಿಗಳಿದ್ದಾರೆ. ತಮ್ಮ ನೆಚ್ಚಿನ ನಟನ ಸ್ಮರಣೆಗಾಗಿ ಅಭಿಮಾನಿಗಳು ಪ್ರತಿಮೆ ಸ್ಥಾಪಿಸಿ ಪ್ರೀತಿ ಅಭಿಮಾನ ತೋರಿದ್ದರು. ಆದರೆ ರಾತ್ರೋರಾತ್ರಿ ಕಿಡಿಗೇಡಿಗಳ ಗುಂಪು ಡಾ. ವಿಷ್ಣುವರ್ಧನ್ ಅವರ ಪ್ರತಿಮೆ ಧ್ವಂಸಗೊಳಿಸಿ ವಿಕೃತಿ ಮರೆದಿದ್ದಾರೆ. ಶುಕ್ರವಾರ ರಾತ್ರಿ ಟೋಲ್​ಗೇಟ್​ ಬಳಿ ಇರುವ ವೃತ್ತದಲ್ಲಿ ಈ ಘಟನೆ ನಡೆದಿದೆ. ಈವಿಷಯ ತಿಳಿಯುತ್ತಿದ್ದಂತೆಯೇ ವಿಷ್ಣು ಅಭಿಮಾನಿಗಳು ಹಾಗೂ ಕನ್ನಡಪರ ಸಂಘಟೆಗಳು ಪ್ರತಿಭಟನೆಗಿಳಿದಿದ್ದರು. ನಂತರ ಸ್ಥಳಕ್ಕೆ ದೌಡಾಯಿಸಿದ್ದ ಪೊಲೀಸರು ಪರಿಸ್ಥಿತಿ ನಿಯಂತ್ರಿಸುವಲ್ಲಿ ನಿರತರಾದರು. ಇನ್ನು ಸೆಲೆಬ್ರಿಟಿಗಳು ಸಹ ನಡೆದ ಘಟನೆಯನ್ನು ಖಂಡಿಸುತ್ತಾ ಸಾಮಾಜಿಕ ಜಾಲತಾಣದಲ್ಲಿ ಕಿಡಿಗೇಡಿಗಳನ್ನು ಬಂಧಿಸುವಂತೆ ಒತ್ತಡ ಹೇರಲಾರಂಭಿಸಿದ್ದರು. 


ವಿಷ್ಣು ಅವರ ಪುತ್ಥಳಿ ಧ್ವಂಸ ಕುರಿತಂತೆ ಮಾಗಡಿ ರಸ್ತೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ಸಹ ದಾಖಲಿಸಲಾಗಿತ್ತು. ಈಗ ಅದೇ ಟೋಲ್​ಗೇಟ್ ಸರ್ಕಲ್​ನಲ್ಲಿ ವಿಷ್ಣುವರ್ಧನ್ ಪುತ್ಥಳಿ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿದೆ. ಟೋಲ್​ಗೇಟ್ ಸರ್ಕಲ್​ನಲ್ಲಿ ಈ ಹಿಂದೆ ಪ್ರತಿಮೆ ಇದ್ದ ಕಡೆಯ ಬದಲಾಗಿ ಮತ್ತೊಂದು ಕಡೆ ವಿಷ್ಣುವರ್ಧನ್ ಪುತ್ಥಳಿ ಸ್ಥಾಪನೆಗೆ ಅವಕಾಶ ನೀಡಲಾಗಿದೆ.


Actor Vishnuvardhan's Statue Desecrated in Bengaluru, vishnuvardhan, Vishnu pratime dhvamsa, vishnu vardhan statue demolition, Magadi road police station,
ವಿಷ್ಣು ಪ್ರತಿಮೆ ಧ್ವಂಸ


ಈ ಹಿಂದೆ ವಿಷ್ಣುವರ್ಧನ್ ಪುತ್ಥಳಿಯಿದ್ದ ಜಾಗದಲ್ಲಿ ಬಾಲಗಂಗಾಧರನಾಥ ಸ್ವಾಮೀಜಿ ಪುತ್ಥಳಿ ಸ್ಥಾಪನೆಗೆ ನಿರ್ಧರಿಸಲಾಗಿದ್ದು. ಅದೇ ವೃತ್ತದ ಮತ್ತೊಂದು ಭಾಗದಲ್ಲಿ ವಿಷ್ಣುವರ್ಧನ್​ ಅವರ ಪ್ರತಿಮೆ ಸ್ಥಾಪನೆಗೆ ಇಂದು ಗುದ್ದಲಿ ಪೂಜೆ ನೆರವೇರಿತು. ಇದರಲ್ಲಿ ವಿಷ್ಣುವರ್ಧನ್​ ಅವರ ಅಳಿಯ ಅನಿರುದ್ಧ್​ ಭಾಗಿಯಾಗಿದ್ದರು. ಡಿ. 30ಕ್ಕೆ ಪ್ರತಿಮೆ ಲೋಕಾರ್ಪಣೆಗೊಳ್ಳಲಿದೆ.


ಇದನ್ನೂ ಓದಿ: ಹುಟ್ಟುಹಬ್ಬದ ಸಂಭ್ರಮದಲ್ಲಿ ದಿಗಂತ್​: ಶುಭ ಕೋರಿದ ಮಡದಿ ಐಂದ್ರಿತಾ ರೇ..!


ಟೋಲ್​ಗೇಟ್​ನ ಬಾಲಗಂಗಾಧರನಾಥ ಸ್ವಾಮೀಜಿ ವೃತ್ತದಲ್ಲಿ ಡಾ. ವಿಷ್ಣುವರ್ಧನ್ ಸೇನಾ ಸಮಿತಿಯಿಂದ ಒಂದೂವರೆ ವರ್ಷದ ಹಿಂದೆ ಪ್ರತಿಮೆಯನ್ನ ಪ್ರತಿಷ್ಠಾಪಿಸಲಾಗಿತ್ತು. ಆದ್ರೆ ಪ್ರತಿಮೆ ಸ್ಥಾಪನೆ ಆದಾಗಿನಿಂದಲೂ ಒಂದಲ್ಲ ಒಂದು ವಿವಾದ ಪ್ರತಿಮೆ ವಿಚಾರಕ್ಕೆ ಉದ್ಭವವಾಗುತ್ತಲ್ಲೆ ಇತ್ತಂತ್ತೆ. ವಿಷ್ಣು ಪ್ರತಿಮೆ ಇದ್ದ ಸ್ಥಳದಲ್ಲಿ ಬಾಲಗಂಗಾಧರನಾಥ ಸ್ವಾಮಿಗಳ ಪುತ್ಥಳಿ ನಿರ್ಮಾಣಕ್ಕೆ ಸ್ಥಳೀಯರು ಮುಂದಾಗಿದ್ದರಂತೆ. ಅದಕ್ಕಾಗಿ ಕೆಲವು ಸಿದ್ದತೆಗಳು ಸಹ ನಡೆದಿದ್ದವು ಎನ್ನಲಾಗುತ್ತಿದೆ.


ಈ ಬಗ್ಗೆ ಕೆಲ ಹಿರಿಯ ಜೊತೆ ಮಾತುಕತೆ ನಡೆಸಿ ವಿಷ್ಣು ಪ್ರತಿಮೆ ಅದೇ ವೃತ್ತದ ಬೇರೆಡೆ ಪ್ರತಿಷ್ಠಾಪಿಸಲು ನಿರ್ಧರಿಸಲಾಗಿತ್ತಂತೆ. ಇನ್ನೇನು ಕೆಲವೇ ದಿನಗಳಲ್ಲಿ ಪ್ರತಿಮೆ ಸ್ಥಳಾಂತರ ಮಾಡಲು ಚಿಂತನೆ ನಡೆಸಿದ್ದಾಗಲೇ ದುಷ್ಕರ್ಮಿಗಳು ವಿಷ್ಣುವರ್ಧನ್ ಪುತ್ಥಳಿಯನ್ನ ಧ್ವಂಸಗೊಳಿಸಿ ವಿಕೃತಿ ಮೆರೆದರು.




ರಾತ್ರೋರಾತ್ರಿ ವಿಷ್ಣುವರ್ಧನ್ ಪುತ್ಥಳಿ ಧ್ವಂಸಗೊಳಿಸಿದ ವಿಚಾರ ತಿಳಿದ ಅಭಿಮಾನಿಗಳು ಬೆಳ್ಳಂಬೆಳಗ್ಗೆ ಟೋಲ್ ಗೇಟ್ ನ ವಿಷ್ಣು ಪ್ರತಿಮೆ ಬಳಿ ಜಮಾಯಿಸಿದರು. ವಿಷ್ಣು ಪ್ರತಿಮೆ ಧ್ವಂಸಗೊಳಿಸಿದ್ದನ್ನ ಖಂಡಿಸಿ ಪ್ರತಿಭಟನೆ ನಡೆಸಿದರು. ವಿಷ್ಣುವರ್ಧನ್ ಅಭಿಮಾನಿಗಳು ಕನ್ನಡ ಪರ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಯಾಗಿದ್ದು ಧ್ವಂಸಗೊಳಿಸಿದ ಕಿಡಿಗೇಡಿಗಳನ್ನ ಕೂಡಲೇ ಬಂಧಿಸುವಂತೆ ಆಗ್ರಹಿಸಿದರು.


ಘಟನೆ ನಡೆದ ಕೂಡಲೇ ಅನಿರುದ್ಧ್​ ಹಾಗೂ ಇತರೆ ಸೆಲೆಬ್ರಿಟಿಗಳು ನಡೆದ ಘಟನೆ ಖಂಡಿಸಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು, ದರ್ಶನ್​, ಕಿಚ್ಚ ಸುದೀಪ್​, ನೀನಾಸಂ ಸತೀಶ್​ ಹೀಗೆ ಹಲವಾರು ಮಂದಿ ಟ್ವೀಟ್  ಮಾಡಿದ್ದರು.


ಕನ್ನಡದ ನಮ್ಮ ತ್ರಿಮೂರ್ತಿಗಳಲ್ಲಿ ಒಬ್ಬರು ವಿಷ್ಣು ಸಾರ್.





top videos



    ಸದ್ಯ ಪರಿಸ್ಥಿತಿ ಹತೋಟಿಯಲ್ಲಿದ್ದು ವಿಷ್ಣು ಅಭಿಮಾನಿಗಳ ಮನವೊಲಿಸಲಾಗಿದೆ. ಇತ್ತ ಪುತ್ಥಳಿ ಧ್ವಂಸಗೊಳಿಸಿದ ಕಿಡಿಗೇಡಿಗಳು ಯಾರು ಅನ್ನೋ ಬಗ್ಗೆ ಕುತೂಹಲ ಉಂಟಾಗಿದ್ದು, ಅವರನ್ನ ಪೊಲೀಸರು ಬಂಧಿಸ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.

    First published: