ತೆರೆಗೂ ಮುನ್ನವೇ ದಾಖಲೆಯತ್ತ ಸಾಗಿದೆ ರೆಬೆಲ್ ಮಗ ಅಭಿನಯದ 'ಅಮರ್' ಸಿನಿಮಾ..!
news18
Updated:August 21, 2018, 6:07 PM IST
news18
Updated: August 21, 2018, 6:07 PM IST
ನ್ಯೂಸ್ 18 ಕನ್ನಡ
ರೆಬೆಲ್ಸ್ಟಾರ್ ಅಂಬರೀಷ ಅವರ ಮಗ ಅಭಿಷೇಕ್ ನಾಯಕನಾಗಿ ನಟಿಸುತ್ತಿರುವ 'ಅಮರ್'. ಈ ಸಿನಿಮಾ ಚಿತ್ರೀಕರಣಕ್ಕೂ ಮುಂಚಿತವಾಗಿಯೇ ಸ್ಯಾಂಡಲ್ವುಡ್ನಲ್ಲಿ ಬಹಳ ಸದ್ದು ಮಾಡಿತ್ತು. ಕನ್ನಡ ಚಿತ್ರರಂಗದಲ್ಲಿ ಅಂಬರೀಷ ಅವರ ಮಾತಿಗೆ ತಿರುಗಿ ಬಿದ್ದವರೇ ಇಲ್ಲ. ಇಂಡಸ್ಟ್ರಿಯಲ್ಲಿ ಇಷ್ಟು ಹವಾ ಇರೋ ಅಂಬಿ ಮಗನ ಸಿನಿಮಾ ಅಂದರೆ ಸುಮ್ಮನೆಯೇನಲ್ಲ. ಹೌದು ರೆಬೆಲ್ ಮಗನ ಸಿನಿಮಾ ಎಂದರೇನೆ ಒಂದು ವಿಶೇಷ.
ಸಂದೇಶ್ ನಾಗರಾಜ್ ನಿರ್ಮಾಣದ ಈ ಸಿನಿಮಾಗೆ ನಾಗಶೇಖರ್ ಆ್ಯಕ್ಷನ್-ಕಟ್ ಹೇಳಿದ್ದು, 90ರ ದಶಕದಲ್ಲಿ ನಡೆದ ಒಂದು ನೈಜ ಘಟನೆಯಾಧರಿಸಿ ಈ ಚಿತ್ರಕ್ಕೆ ಕಥೆ ಹೆಣೆಯಲಾಗಿದೆ. ಈಗಾಗಲೇ ಬೆಂಗಳೂರಿನಲ್ಲಿ 10 ದಿನಗಳ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ರಾಜ್ಯದ ಬಹುತೇಕ ಲೊಕೇಶನ್ಗಳಲ್ಲಿ ಶೂಟಿಂಗ್ ನಡೆಸುತ್ತಿದೆ.
ಮಣಿಪಾಲದಲ್ಲಿ 7 ದಿನ, ಮಂಗಳೂರಿನಲ್ಲಿ 7 ದಿನ, ಮಡಿಕೇರಿಯಲ್ಲಿ 7 ದಿನ ಹಾಗೂ ಕೇರಳದ ಸುಲ್ತಾನ್ ಬತೇರಿಯಲ್ಲಿ 2 ದಿನಗಳ ಕಾಲ ಚಿತ್ರೀಕರಣ ಮಾಡಿದೆ. ಅಲ್ಲದೆ ಊಟಿಯಲ್ಲಿ 6 ದಿನ ಮತ್ತು ಮೈಸೂರಿನಲ್ಲಿ 2 ದಿನಗಳ ಕಾಲ ಚಿತ್ರೀಕರಣ ನಡೆಸುವ ಮೂಲಕ ಈ ಸಿನಿಮಾ ಅತಿಹೆಚ್ಚು ಲೊಕೇಶನ್ಗಳಲ್ಲಿ ಚಿತ್ರೀಕರಣಗೊಳ್ಳುತ್ತಿರುವ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.ವಿಶೇಷ ಎಂದರೆ ಈ ಎಲ್ಲಾ ಪ್ರದೇಶಗಳಲ್ಲೂ ಚಿತ್ರೀಕರಣದ ಸಮಯದಲ್ಲಿ ಮಳೆ ಇವರನ್ನು ಹಿಂಬಾಲಿಸಿದೆ. ಈಗಾಗಲೇ 50 ದಿನಗಳ ಕಾಲ ಚಿತ್ರೀಕರಣ ನಡೆಸಿರುವ 'ಅಮರ್' ಸಿನಿತಂಡ ಮುಂದಿನ ಷೆಡ್ಯೂಲ್ನಲ್ಲಿ ಜೈಪುರದಲ್ಲಿ 5 ದಿನ ಸ್ಕೂಟರ್ ರೇಸ್ ಚಿತ್ರೀಕರಣ ಹಾಗೂ ಹೊರದೇಶದಲ್ಲಿ ಪ್ರಮುಖ ಮಾತಿನ ಭಾಗದ ಚಿತ್ರೀಕರಣ ನಡೆಸುವ ಯೋಜನೆ ಹಾಕಿಕೊಂಡಿದೆ.
ಈ ಚಿತ್ರದಲ್ಲಿ ಬೈಕ್ರೇಸ್ ಪ್ರಮುಖ ಭಾಗವಾಗಿ ಮೂಡಿಬಂದಿದೆ. 'ಗೋ ಗ್ರೀನ್' ಅಡಿ ಬರಹದೊಂದಿಗೆ ಮರಗಿಡ ಬೆಳೆಸಿ ಅನ್ನೋ ಪರಿಕಲ್ಪನೆಯನ್ನು ಈ ಸಿನಿಮಾ ಮೂಲಕ ಜನರಿಗೆ ಮುಟ್ಟಿಸುವ ಪ್ರಯತ್ನ ಮಾಡಲಾಗಿದೆ. ಅದರಲ್ಲೂ ಈ ದೃಶ್ಯಕ್ಕೆಂದು 50 ಜನ ರಿಯಲ್ ಬೈಕರ್ಸ್ಗಳನ್ನು ಈ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ.
ಚಿತ್ರದ ಕೊನೆಯ ಭಾಗವನ್ನು ಬೆಂಗಳೂರಿನಲ್ಲಿ 10 ದಿನಗಳ ಕಾಲ ಚಿತ್ರೀಕರಿಸಲಿದೆ. ಇನ್ನೂ 45 ದಿನಗಳ ಚಿತ್ರೀಕರಣ ಬಾಕಿಯಿದ್ದು, ಚಿತ್ರಕತೆಗೆ ಅಗತ್ಯವಿರುವ ಕಾರಣಕ್ಕೆ ವಿದೇಶದಲ್ಲಿ ಹಾಡುಗಳ ಚಿತ್ರೀಕರಣ ನಡೆಸಲಿದೆಯಂತೆ ಈ ತಂಡ.ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆ ಇರುವ ಈ ಸಿನಿಮಾಗೆ ನಾಗಶೇಖರ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಜಾಲಿಬಾಸ್ಟಿನ್ ಹಾಗೂ ಪಾಡ್ಯನ್ ಅವರ ಸಾಹಸ, ಮೋಹನ್ ಬಿ.ಕೆರೆ ಅವರ ಕಲೆ, ದೀಪು ಎಸ್.ಕುಮಾರ್ ಅವರ ಸಂಕಲನ ಈ ಚಿತ್ರಕ್ಕಿದೆ. ಅಭಿಷೇಕ್, ತಾನ್ಯಾ ಹೋಪ್, ಚಿಕ್ಕಣ್ಣ, ಸುಧಾರಾಣಿ, ದೀಪಕ್ ಶೆಟ್ಟಿ, ಸಾಧುಕೋಕಿಲ ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ.
ರೆಬೆಲ್ಸ್ಟಾರ್ ಅಂಬರೀಷ ಅವರ ಮಗ ಅಭಿಷೇಕ್ ನಾಯಕನಾಗಿ ನಟಿಸುತ್ತಿರುವ 'ಅಮರ್'. ಈ ಸಿನಿಮಾ ಚಿತ್ರೀಕರಣಕ್ಕೂ ಮುಂಚಿತವಾಗಿಯೇ ಸ್ಯಾಂಡಲ್ವುಡ್ನಲ್ಲಿ ಬಹಳ ಸದ್ದು ಮಾಡಿತ್ತು. ಕನ್ನಡ ಚಿತ್ರರಂಗದಲ್ಲಿ ಅಂಬರೀಷ ಅವರ ಮಾತಿಗೆ ತಿರುಗಿ ಬಿದ್ದವರೇ ಇಲ್ಲ. ಇಂಡಸ್ಟ್ರಿಯಲ್ಲಿ ಇಷ್ಟು ಹವಾ ಇರೋ ಅಂಬಿ ಮಗನ ಸಿನಿಮಾ ಅಂದರೆ ಸುಮ್ಮನೆಯೇನಲ್ಲ. ಹೌದು ರೆಬೆಲ್ ಮಗನ ಸಿನಿಮಾ ಎಂದರೇನೆ ಒಂದು ವಿಶೇಷ.
ಸಂದೇಶ್ ನಾಗರಾಜ್ ನಿರ್ಮಾಣದ ಈ ಸಿನಿಮಾಗೆ ನಾಗಶೇಖರ್ ಆ್ಯಕ್ಷನ್-ಕಟ್ ಹೇಳಿದ್ದು, 90ರ ದಶಕದಲ್ಲಿ ನಡೆದ ಒಂದು ನೈಜ ಘಟನೆಯಾಧರಿಸಿ ಈ ಚಿತ್ರಕ್ಕೆ ಕಥೆ ಹೆಣೆಯಲಾಗಿದೆ. ಈಗಾಗಲೇ ಬೆಂಗಳೂರಿನಲ್ಲಿ 10 ದಿನಗಳ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ರಾಜ್ಯದ ಬಹುತೇಕ ಲೊಕೇಶನ್ಗಳಲ್ಲಿ ಶೂಟಿಂಗ್ ನಡೆಸುತ್ತಿದೆ.
ಮಣಿಪಾಲದಲ್ಲಿ 7 ದಿನ, ಮಂಗಳೂರಿನಲ್ಲಿ 7 ದಿನ, ಮಡಿಕೇರಿಯಲ್ಲಿ 7 ದಿನ ಹಾಗೂ ಕೇರಳದ ಸುಲ್ತಾನ್ ಬತೇರಿಯಲ್ಲಿ 2 ದಿನಗಳ ಕಾಲ ಚಿತ್ರೀಕರಣ ಮಾಡಿದೆ. ಅಲ್ಲದೆ ಊಟಿಯಲ್ಲಿ 6 ದಿನ ಮತ್ತು ಮೈಸೂರಿನಲ್ಲಿ 2 ದಿನಗಳ ಕಾಲ ಚಿತ್ರೀಕರಣ ನಡೆಸುವ ಮೂಲಕ ಈ ಸಿನಿಮಾ ಅತಿಹೆಚ್ಚು ಲೊಕೇಶನ್ಗಳಲ್ಲಿ ಚಿತ್ರೀಕರಣಗೊಳ್ಳುತ್ತಿರುವ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.ವಿಶೇಷ ಎಂದರೆ ಈ ಎಲ್ಲಾ ಪ್ರದೇಶಗಳಲ್ಲೂ ಚಿತ್ರೀಕರಣದ ಸಮಯದಲ್ಲಿ ಮಳೆ ಇವರನ್ನು ಹಿಂಬಾಲಿಸಿದೆ. ಈಗಾಗಲೇ 50 ದಿನಗಳ ಕಾಲ ಚಿತ್ರೀಕರಣ ನಡೆಸಿರುವ 'ಅಮರ್' ಸಿನಿತಂಡ ಮುಂದಿನ ಷೆಡ್ಯೂಲ್ನಲ್ಲಿ ಜೈಪುರದಲ್ಲಿ 5 ದಿನ ಸ್ಕೂಟರ್ ರೇಸ್ ಚಿತ್ರೀಕರಣ ಹಾಗೂ ಹೊರದೇಶದಲ್ಲಿ ಪ್ರಮುಖ ಮಾತಿನ ಭಾಗದ ಚಿತ್ರೀಕರಣ ನಡೆಸುವ ಯೋಜನೆ ಹಾಕಿಕೊಂಡಿದೆ.
ಈ ಚಿತ್ರದಲ್ಲಿ ಬೈಕ್ರೇಸ್ ಪ್ರಮುಖ ಭಾಗವಾಗಿ ಮೂಡಿಬಂದಿದೆ. 'ಗೋ ಗ್ರೀನ್' ಅಡಿ ಬರಹದೊಂದಿಗೆ ಮರಗಿಡ ಬೆಳೆಸಿ ಅನ್ನೋ ಪರಿಕಲ್ಪನೆಯನ್ನು ಈ ಸಿನಿಮಾ ಮೂಲಕ ಜನರಿಗೆ ಮುಟ್ಟಿಸುವ ಪ್ರಯತ್ನ ಮಾಡಲಾಗಿದೆ. ಅದರಲ್ಲೂ ಈ ದೃಶ್ಯಕ್ಕೆಂದು 50 ಜನ ರಿಯಲ್ ಬೈಕರ್ಸ್ಗಳನ್ನು ಈ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ.
ಚಿತ್ರದ ಕೊನೆಯ ಭಾಗವನ್ನು ಬೆಂಗಳೂರಿನಲ್ಲಿ 10 ದಿನಗಳ ಕಾಲ ಚಿತ್ರೀಕರಿಸಲಿದೆ. ಇನ್ನೂ 45 ದಿನಗಳ ಚಿತ್ರೀಕರಣ ಬಾಕಿಯಿದ್ದು, ಚಿತ್ರಕತೆಗೆ ಅಗತ್ಯವಿರುವ ಕಾರಣಕ್ಕೆ ವಿದೇಶದಲ್ಲಿ ಹಾಡುಗಳ ಚಿತ್ರೀಕರಣ ನಡೆಸಲಿದೆಯಂತೆ ಈ ತಂಡ.
Loading...
Loading...