• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Ambareesh Death Anniversary: ಅಂಬಿ ಸಮಾಧಿಗೆ ಪೂಜೆ ಸಲ್ಲಿಸಿದ ದರ್ಶನ್​: ಅಪ್ಪಾಜಿ ಬೈಯ್ಯುವುದನ್ನು ಮಿಸ್​ ಮಾಡಿಕೊಳ್ಳುತ್ತಿದ್ದೇನೆ ಎಂದ ಡಿಬಾಸ್​

Ambareesh Death Anniversary: ಅಂಬಿ ಸಮಾಧಿಗೆ ಪೂಜೆ ಸಲ್ಲಿಸಿದ ದರ್ಶನ್​: ಅಪ್ಪಾಜಿ ಬೈಯ್ಯುವುದನ್ನು ಮಿಸ್​ ಮಾಡಿಕೊಳ್ಳುತ್ತಿದ್ದೇನೆ ಎಂದ ಡಿಬಾಸ್​

ಅಂಬರೀಷ್​ 2ನೇ ಪುಣ್ಯಸ್ಮರಣೆಯಲ್ಲಿ ದರ್ಶನ್​, ಸುಮಲತಾ ಹಾಗೂ ಅಭಿಷೇಕ್​ ಅಂಬರೀಷ್​

ಅಂಬರೀಷ್​ 2ನೇ ಪುಣ್ಯಸ್ಮರಣೆಯಲ್ಲಿ ದರ್ಶನ್​, ಸುಮಲತಾ ಹಾಗೂ ಅಭಿಷೇಕ್​ ಅಂಬರೀಷ್​

Ambareesh Death Anniversary: ಅಂಬರೀಷ್ ಅವರ 2ನೇ ಪುಣ್ಯ ಸ್ಮರಣೆಯ ಅಂಗವಾಗಿ ಸುಮಲತಾ ಹಾಗೂ ಅಭಿಷೇಕ್​ ಸಮಾಧಿಯ ಬಳಿ ಹೋಗಿ ಪೂಜೆ ಸಲ್ಲಿಸಿದ್ದಾರೆ. ಇತ್ತೀಚೆಗಷ್ಟೆಬೈಕ್​ ಟ್ರಿಪ್​ ಮುಗಿಸಿಕೊಂಡು ಬೆಂಗಳೂರಿಗೆ ಮರಳಿರುವ ದರ್ಶನ್​, ಸಹ ಇಂದು ಅಂಬರೀಷ್​ ಅವರ ಸಮಾಧಿಯ ಬಳಿ ಹೋಗಿ ಪೂಜೆಯಲ್ಲಿ ಭಾಗಿಯಾಗಿದ್ದಾರೆ.

ಮುಂದೆ ಓದಿ ...
  • Share this:

ಇಂದು ರೆಬೆಲ್​ ಸ್ಟಾರ್ ಅಂಬರೀಷ್​ ಅವರ 2ನೇ ವರ್ಷದ ಪುಣ್ಯ ಸ್ಮರಣೆ. ಅಂಬರೀಷ್​ ಅವರು ಅಗಲಿ ಎರಡು ವರ್ಷಗಳೇ ಕಳೆದಿದೆ. ಚಿತ್ರರಂಗದ ಸೆಲೆಬ್ರಿಟಿಗಳು ಹಾಗೂ ರಾಜಕೀಯ ನಾಯಕರು ರೆಬೆಲ್​ ಅಂಬಿಯನ್ನು ಸ್ಮರಿಸುತ್ತಿದ್ದಾರೆ. ಅವರೊಂದಿಗೆ ಕಳೆದ ಆ ದಿನಗಳನ್ನು ನೆನಪಿಸಿಕೊಳ್ಳುತ್ತಾ, ಅವರ ಜೊತೆ ತೆಗೆಸಿಕೊಂಡ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ನಟಿ ಸುಮಲತಾ ಸಹ ತಮ್ಮ ಇನ್​ಸ್ಟಾಗ್ರಾಂನಲ್ಲಿ ದೀರ್ಘವಾಗಿ ಪತ್ರವೊಂದನ್ನು ಬರೆದು ತಮ್ಮ ನೋವನ್ನು ಹೊರ ಹಾಕಿದ್ದಾರೆ. ರೆಬೆಲ್​ ಕುಟುಂಬದ ಹಿರಿಯ ಮಗ ಎಂದೇ ಕರೆಸಿಕೊಳ್ಳುವ ದರ್ಶನ್​ ಸಹ ಸೀನಿಯರ್​ ಅಂಬಿಯನ್ನು ಸ್ಮರಿಸಿದ್ದಾರೆ. ಅಂಬಿ ಬುದಕಿದ್ದಾಗ ದರ್ಶನ್​ ಅವರನ್ನು ಹಿರಿಯ ಮಗನಂತೆಯೇ ನೋಡಿಕೊಳ್ಳುತ್ತಿದ್ದರು. ಅದಕ್ಕೆ ದರ್ಶನ್ ಅವರನ್ನು ಅಪ್ಪಾಜಿ ಎಂದು ಕರೆಯುತ್ತಿದ್ದರು. ಅಂಬರೀಷ್​ ಅವರು ಅಗಲಿದಾಗಲೂ ದರ್ಶನ್​ ಹಿರಿಯ ಮಗನಂತೆ ನಿಂತು ತಮ್ಮ ಜವಾಬ್ದಾರಿ ನಿರ್ವಹಿಸಿದರು. ಅಪ್ಪ ಇಲ್ಲದ ಅಭಿಷೇಕ್​ಗೆ ಹಿರಿಯಣ್ಣನಾಗಿ ಬೆನ್ನ ಹಿಂದೆ ನಿಂತು ಬೆಂಬಲ ನೀಡುತ್ತಿದ್ದಾರೆ ಡಿಬಾಸ್​. 


ಅಂಬರೀಷ್ ಅವರ 2ನೇ ಪುಣ್ಯ ಸ್ಮರಣೆಯ ಅಂಗವಾಗಿ ಸುಮಲತಾ ಹಾಗೂ ಅಭಿಷೇಕ್​ ಸಮಾಧಿಯ ಬಳಿ ಹೋಗಿ ಪೂಜೆ ಸಲ್ಲಿಸಿದ್ದಾರೆ. ಇತ್ತೀಚೆಗಷ್ಟೆ ಬೈಕ್​ ಟ್ರಿಪ್​ ಮುಗಿಸಿಕೊಂಡು ಬೆಂಗಳೂರಿಗೆ ಮರಳಿರುವ ದರ್ಶನ್​, ಸಹ ಇಂದು ಅಂಬರೀಷ್​ ಅವರ ಸಮಾಧಿಯ ಬಳಿ ಹೋಗಿ ಪೂಜೆಯಲ್ಲಿ ಭಾಗಿಯಾಗಿದ್ದಾರೆ.


ಅಂಬಿ ಅಮರ Exclusive pic 😍🤗@dasadarshan @sumalathaA pic.twitter.com/ezwz85dbnW



ಮಾಧ್ಯಮಗಳೊಂದಿಗೆ ಮಾತನಾಡಿದ ದರ್ಶನ್​, ಅಂಬಿ ನನ್ನ ಜೊತೆ ಸದಾ ಇರುತ್ತಾರೆ. ಇವತ್ತು ಬಂದು ಪೂಜೆ ಮಾಡುತ್ತಿದ್ದೇವೆ ಅಷ್ಟೆ. ಅವರು ಬೈಯ್ಯುವುದನ್ನು ತುಂಬಾ ಮಿಸ್​ ಮಾಡಿಕೊಳ್ಳುತ್ತೇನೆ. ಅವರು ನನಗೆ ದೇವರಂತೆ. ಅವರನ್ನು ಸದಾ ಪೂಜಿಸುತ್ತೇನೆ ಎಂದಿದ್ದಾರೆ. ಅದಕ್ಕೂ ಮೊದಲು ದರ್ಶನ್​ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸಿನೀಯರ್​ ಅಂಬಿ ಅವರ ಕುರಿತಾಗಿ ಟ್ವೀಟ್​ ಮಾಡುವ ಮೂಲಕ ಸ್ಮರಿಸಿದ್ದಾರೆ.


ಸಿನಿ ಸೆಲೆಬ್ರಿಟಿಗಳ ಜೊತೆಗೆ ರಾಜಕೀಯ ನಾಯಕರೂ ಅಂಬರೀಷ್ ಅವರನ್ನು ಸ್ಮರಿಸಿದ್ದಾರೆ. ಪಿ.ಸಿ. ಮೋಹನ್​, ಪ್ರತಾಪ್​ ಸಿಂಹ ಸೇರಿದಂತೆ ಹಲವಾರು ಮಂದಿ ಮಾಡಿರುವ ಟ್ವೀಟ್​ಗಳು ಇಲ್ಲಿವೆ.





ಕೊರೋನಾ ಕಾರಣದಿಂದಾಗಿ ಅಂಬರೀಷ್​ ಅವರ ಪುಣ್ಯ ಸ್ಮರಣೆಯಲ್ಲಿ ಅವರ ಕುಟುಂಬದವರು ಮಾತ್ರ ಭಾಗಿಯಾಗಿದ್ದಾರೆ. ಜೊತೆಗೆ ಅಂಬಿ ಅವರ ಅಭಿಮಾನಿಗಳೂ ಸಹ ಅವರ ಸಮಾಧಿ ಬಳಿ ಬಂದು ಪೂಜೆ ಸಲ್ಲಿಸುತ್ತಿದ್ದಾರೆ.

Published by:Anitha E
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು