ಅಪ್ಪಟ ದೇಸಿ ಪ್ರತಿಭೆ ಸತೀಶ್ ನೀನಾಸಂ. ಪೋಷಕ ಪಾತ್ರಗಳ ಮೂಲಕ ನಾಯಕನಾಗಿ ಬಡ್ತಿ ಪಡೆದು ಯಶಸ್ಸಿನ ಹಾದಿಯಲ್ಲಿ ನಡೆಯುತ್ತಿರುವ ನಾಯಕ ನಟ. ಸದ್ಯ ಸ್ಯಾಂಡಲ್ವುಡ್ನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಲಾಕ್ಡೌನ್ನಲ್ಲಿ ಮೂರ್ನಾಲ್ಕು ಸಿನಿಮಾಗಳನ್ನು ಒಪ್ಪಿಕೊಂಡಿರುವ ಸತೀಶ್ ನೀನಾಸಂ ಈಗ ಒಂದೊಂದಾಗಿ ಚಿತ್ರಗಳ ಚಿತ್ರೀಕರಣ ಆರಂಭಿಸುತ್ತಿದ್ದಾರೆ. ನಿನ್ನೆಯಷ್ಟೆ ಒಂದೇ ದಿನ ಎರಡು ಸಿನಿಮಾಗಳ ಮುಹೂರ್ತ ನೆರವೇರಿಸಿದ್ದು, ಚಿತ್ರೀಕರಣ ಸಹ ಶುರು ಮಾಡಿದ್ದಾರೆ. ಈ ವಿಷಯವನ್ನು ಸತೀಶ್ ಅವರೇ ತಮ್ಮ ಸಾಮಾಜಿಕ ಜಾಲತಾಣದಲ್ಲಿರುವ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ನೀಡಿದ್ದಾರೆ. ಅಲ್ಲದೆ ಒಂದೇ ದಿನ ಎರಡು ಸಿನಿಮಾಗಳ ಚಿತ್ರೀಕರಣ ಆರಂಭಿಸಿರುವುದು ತಮ್ಮಗೆ ಖುಷಿ ನೀಡಿದೆ ಎಂದಿದ್ದಾರೆ. ಒಂದು ಸಿನಿಮಾ ಮೈಸೂರಿನಲ್ಲಿ ಸೆಟ್ಟೇರಿದರೆ, ಮತ್ತೊಂದು ಬೆಂಗಳೂರಿನಲ್ಲಿ ಆರಂಭವಾಗಿದೆ.
ಮೈಸೂರಿನಲ್ಲಿ ನಿನ್ನೆ ಪೆಟ್ರೋಮ್ಯಾಕ್ಸ್ ಸಿನಿಮಾ ಚಿತ್ರೀಕರಣ ಆರಂಭವಾಗಿದೆ. ಇದು ನೀರ್ ದೋಸೆ ಖ್ಯಾತಿಯ ನಿರ್ದೇಶಕ ವಿಜಯ್ ಪ್ರಸಾದ್ ಅವರು ಆ್ಯಕ್ಷನ್ ಕಟ್ ಹೇಳುತ್ತಿರುವ ಸಿನಿಮಾ ಇದಾಗಿದೆ. ಇದರಲ್ಲಿ ನಟಿ ಹರಿಪ್ರಿಯಾ ನಾಯಕಿಯಾಗಿದ್ದಾರೆ.
ಇನ್ನು, ಈ ಸಿನಿಮಾದ ಜೊತೆಗೆ ಬೆಂಗಳೂರಿನಲ್ಲಿ ಮ್ಯಾಟ್ನಿ ಎಂಬ ಶೀರ್ಷಿಕೆಯ ಚಿತ್ರ ಸಹ ಸೆಟ್ಟೇರಿದೆ. ನಿನ್ನೆಯಷ್ಟೆ ಈ ಸಿನಿಮಾದ ಮುಹೂರ್ತ ನೆರವೇರಿದ್ದು, ಚಿತ್ರೀಕರಣ ಆರಂಭವಾಗಿದೆ.
ಮ್ಯಾಟ್ನಿ ಸಿನಿಮಾದಲ್ಲಿ ರಚಿತಾ ರಾಮ್ ನಾಯಕಿಯಾಗಿದ್ದಾರೆ. ಇದರ ಚಿತ್ರೀಕರಣ ಯಾಗಾಗಲೇ ಆರಂಭವಾಗಿದೆ. ಇನ್ನು ರಚಿತಾ ಹಾಗೂ ಸತೀಶ್ ಅವರು ಕೆಲವೇ ದಿನಗಳಲ್ಲಿ ಚಿತ್ರತಂಡ ಸೇರಿಕೊಳ್ಳಲಿದ್ದಾರೆ.
ಸತೀಶ್ ನೀನಾಸಂ ಅಭಿನಯದ ಗೋದ್ರಾ ಸಿನಿಮಾ ಕುರಿತಾಗಿ ಇತ್ತೀಚೆಗಷ್ಟೆ ಅಪ್ಡೇಟ್ ಸಿಕ್ಕಿದೆ. ಸಿನಿಮಾ ಚಿತ್ರೀಕರಣ ಮುಗಿದಿದ್ದು, ರಿಲೀಸ್ಗೆ ರೆಡಿಯಾಗಿರುವ ಈ ಸಿನಿಮಾ ಟೈಟಲ್ ಅನ್ನು ಬದಲಾಯಿಸೋಕೆ ಮುಂದಾಗಿದೆ ಚಿತ್ರತಂಡ. ಸೆನ್ಸಾರ್ ಮಂಡಳಿ ಚಿತ್ರದ ಟೈಟಲ್ ಬದಲಾಯಿಸುವಂತೆ ಸೂಷಿಸಿದೆಯಂತೆ. ಇದೇ ಕಾರಣದಿಂದ ಈಗ ಈ ಚಿತ್ರತಂಡ ಹೊಸ ಶೀರ್ಷಿಕೆಯ ಹುಟುಕಾಟದಲ್ಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ