• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Yash: ರಾಕಿಂಗ್​ ಸ್ಟಾರ್​​ಗೆ ಅದೃಷ್ಟ ತಂದುಕೊಟ್ಟ ಕೆಜಿಎಫ್​: ದೊಡ್ಡ ದೊಡ್ಡ ಬ್ರ್ಯಾಂಡ್​ಗಳಿಗೆ ಸಹಿ ಮಾಡಿದ ಯಶ್​..!

Yash: ರಾಕಿಂಗ್​ ಸ್ಟಾರ್​​ಗೆ ಅದೃಷ್ಟ ತಂದುಕೊಟ್ಟ ಕೆಜಿಎಫ್​: ದೊಡ್ಡ ದೊಡ್ಡ ಬ್ರ್ಯಾಂಡ್​ಗಳಿಗೆ ಸಹಿ ಮಾಡಿದ ಯಶ್​..!

ರಾಕಿಂಗ್​ ಸ್ಟಾರ್​ ಯಶ್​

ರಾಕಿಂಗ್​ ಸ್ಟಾರ್​ ಯಶ್​

ಕೆಜಿಎಫ್​ ಸಿನಿಮಾದ ಯಶಸ್ಸಿನ ನಂತರ ಯಶ್​ಗೆ ಸಾಕಷ್ಟು ದೊಡ್ಡ ದೊಡ್ಡ ಬ್ರ್ಯಾಂಡ್​ಗಳು ಹುಡುಕಿಕೊಂಡು ಬಂದು ಆಫರ್​ ಕೊಡುತ್ತಿದ್ದಾರೆ. ಈಗಾಗಲೇ ಯಶ್​ ಬಿಯರ್ಡ್​ ಪ್ರಾಡಕ್ಟ್​ ಬ್ರ್ಯಾಂಡ್​ ಒಂದಕ್ಕೆ ರಾಯಭಾರಿಯಾಗಿದ್ದಾರೆ. ಇದರ ಜೊತೆಗೆ ಸಾಕಷ್ಟು ದೊಡ್ಡ ದೊಡ್ಡ ಬ್ರ್ಯಾಂಡ್​ಗಳ ಪ್ರಾಡಕ್ಟ್​ಗಳ ಜಾಹೀರಾತಿಗೆ ಸಹಿ ಮಾಡಿದ್ದಾರಂತೆ.

ಮುಂದೆ ಓದಿ ...
  • Share this:

ರಾಕಿಂಗ್​ ಯಶ್​ ಈಗ ಪ್ಯಾನ್​ ಇಂಡಿಯಾ ಸ್ಟಾರ್. ಕೆಜಿಎಫ್​ ಚಾಪ್ಟರ್​ 1 ರಿಲೀಸ್​ ಆಗುತ್ತಿದ್ದಂತೆಯೇ ಯಶ್​ ಅದೃಷ್ಟ ಬದಲಾಗಿ ಹೋಯಿತು. ಕನ್ನಡದ ಸಿನಿಮಾದ ಇತಿಹಾಸದಲ್ಲೇ ಹೊಸ  ದಾಖಲೆಗಳನ್ನು ಸೃಷ್ಟಿಸಿದ ಚಿತ್ರ ಕೆಜಿಎಫ್​. ಪ್ರಶಾಂತ್​ ನೀಲ್​ ನಿರ್ದೇಶನದ ಈ ಸಿನಿಮಾ ಎರಡು ವರ್ಷಗಳ ಹಿಂದೆ  ಅಂದರೆ, 2018ರಲ್ಲಿ ತೆರೆ ಕಂಡಿತ್ತು. ಈ ಚಿತ್ರ ಯಶಸ್ಸಿಗೆ ನಿರ್ದೇಶಕರ ಜೊತೆಗೆ ಯಶ್​ ಸಹ ಕಾರಣವಾಗಿದ್ದರು. ರಾಕಿಂಗ್​ ಸ್ಟಾರ್​ ಅಭಿನಯ ಅಭಿಮಾನಿಗಳನ್ನು ಹುಚ್ಚೆಬ್ಬಿಸಿತ್ತು. ಜೊತೆಗೆ ಪಾತ್ರಕ್ಕೆ ತಕ್ಕಂತೆ ಇದ್ದ ಖಡಕ್​ ಡೈಲಾಗ್​ಗಳು ಈ ಚಿತ್ರ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗುವಂತೆ ಮಾಡಿತ್ತು. ಕೇವಲ ಸ್ಯಾಂಡಲ್​ವುಡ್​ನಲ್ಲಿ ಸ್ಟಾರ್​ ಆಗಿದ್ದ ಯಶ್​ ಈ ಸಿನಿಮಾದ ನಂತರ ನ್ಯಾಷನಲ್​ ಸ್ಟಾರ್​ ಆಗಿ ಬಡ್ತಿ ಪಡೆದರು. ಇನ್ನು ಕನ್ನಡದ ಸ್ಟಾರ್​ಗಳು ದೊಡ್ಡ ಬ್ರ್ಯಾಂಡ್​ಗಳ  ರಾಯಭಾರಿಗಳಾಗುವುದು ತೀರಾ ವಿರಳ. ಆದರೆ ಯಶ್​ಗೆ ಈಗ ಅದೃಷ್ಟ ಖುಲಾಯಿಸಿದೆ. 


ಕೆಜಿಎಫ್​ ಸಿನಿಮಾದ ಯಶಸ್ಸಿನ ನಂತರ ಯಶ್​ಗೆ ಸಾಕಷ್ಟು ದೊಡ್ಡ ದೊಡ್ಡ ಬ್ರ್ಯಾಂಡ್​ಗಳು ಹುಡುಕಿಕೊಂಡು ಬಂದು ಆಫರ್​ ಕೊಡುತ್ತಿದ್ದಾರೆ. ಈಗಾಗಲೇ ಯಶ್​ ಬಿಯರ್ಡ್​ ಪ್ರಾಡಕ್ಟ್​ ಬ್ರ್ಯಾಂಡ್​ ಒಂದಕ್ಕೆ ರಾಯಭಾರಿಯಾಗಿದ್ದಾರೆ. ಇದರ ಜೊತೆಗೆ ಸಾಕಷ್ಟು ದೊಡ್ಡ ದೊಡ್ಡ ಬ್ರ್ಯಾಂಡ್​ಗಳ ಪ್ರಾಡಕ್ಟ್​ಗಳ ಜಾಹೀರಾತಿಗೆ ಸಹಿ ಮಾಡಿದ್ದಾರಂತೆ.









View this post on Instagram






A post shared by Yash (@thenameisyash)





ಯಶ್​ ಅವರ ಬಳಿ ಈಗಾಗಲೇ ಸಾಕಷ್ಟು ದೊಡ್ಡ ಬ್ರ್ಯಾಂಡ್​ಗಳ ಆಫರ್​ಗಳು ಇವೆಯಂತೆ. ಆದರೆ ಕೆಜಿಎಫ್​ ಸಿನಿಮಾದ ಚಿತ್ರೀಕರಣದ ಕಾರಣದಿಂದ ಅವುಗಳು ಸದ್ಯಕ್ಕೆ ಯಶ್​ ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎನ್ನಲಾಗುತ್ತಿದೆ.









View this post on Instagram






A post shared by Yash (@thenameisyash)





ಇದರ ಜೊತೆಗೆ ಯಶ್​ ಅವರ ಬಳಿ ಈಗ ಮೊಬೈಲ್​ ಫೋನ್​ ಹಾಗೂ ಒಂದು ಆಟೊಮೊಬೈಲ್​ ಸಂಸ್ಥೆಯ ಜಾಹೀರಾತು ಸಹ ಇದೆಯಂತೆ. ಇದು ಮುಂದಿನ ವರ್ಷ ಲಾಂಚ್​ ಆಗಲಿದೆ ಎಂದೂ ಹೇಳಲಾಗುತ್ತಿದೆ.









View this post on Instagram






A post shared by Yash (@thenameisyash)





ಯಶ್​ ಸದ್ಯ ಕೆಜಿಎಫ್​ ಚಾಪ್ಟರ್​ 2 ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಮಂಗಳೂರು, ಹೈದರಾಬಾದ್​ ನಂತರ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಯಲಿದೆ. ಇನ್ನು ಈ ಸಿನಿಮಾದ ವಿಲನ್​ ಅಧೀರ ಸಹ ಚಿತ್ರತಂಡ ಸೇರಿಕೊಂಡಿದ್ದಾರೆ. ಲಾಕ್​ಡೌನ್ ಸಡಿಲಗೊಳ್ಳಲು ಆತಂಭವಾದಾಗ ಪ್ರಕಾಶ್​ ರೈ ಸಹ ಚಿತ್ರತಂಡ ಸೇರಿಕೊಂಡರು.









View this post on Instagram






A post shared by Yash (@thenameisyash)





ಪ್ರಕಾಶ್​ ರೈ ಅವರನ್ನು ಸಿನಿಮಾಗೆ ತೆಗೆದುಕೊಂಡ ಸುದ್ದಿ ಹಬ್ಬುತ್ತಿದ್ದಂತೆಯೇ ನೆಟ್ಟಿಗರು ಬಾಯ್ಕಾಟ್​ ಕೆಜಿಎಫ್​ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದರು. ಪ್ಯಾನ್​ ಇಂಡಿಯಾ ಸಿನಿಮಾ ಆದರೂ ಪ್ರಕಾಶ್​ ನಟಿಸಲಿರುವ ಪಾತ್ರಕ್ಕೆ ಬೇರೆ ನಟರನ್ನು ತೆಗೆದುಕೊಳ್ಳಬಹುದಿತ್ತು ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು.

Published by:Anitha E
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು