ಯಾದಗಿರಿ: ಕೃಷ್ಣಾ ನದಿಯ ಪ್ರವಾಹಕ್ಕೆ ನಡುಗಡ್ಡೆಯಲ್ಲೇ ಕುರಿಗಳು ಸಿಲುಕಿದ್ದವು. ಇಂದು ಪ್ರವಾಹ ತಗ್ಗಿದ ಹಿನ್ನೆಲೆ ಮೀನುಗಾರರ ಸಹಾಯದಿಂದ ಕುರಿಗಾಹಿ ಟೋಪಣ್ಣ ಕುರಿಗಳನ್ನು ರಕ್ಷಣೆ ಮಾಡಿದ್ದಾರೆ.
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದ ಛಾಯಾಭಗವತಿ ದೇಗುಲದ ತೀರದ ಕೃಷ್ಣಾ ನದಿಯ ನಡುಗಡ್ಡೆಯಲ್ಲಿ ಕಳೆದ 26 ದಿನಗಳಿಂದ ಕುರಿಗಳು ಸಿಲುಕಿದ್ದವು. ಇಂದು ಕೃಷ್ಣಾ ನದಿಯ ನೀರಿನ ಹರಿವು ಪ್ರಮಾಣ ಸಂಪೂರ್ಣ ಕಡಿಮೆಯಾದ ಹಿನ್ನೆಲೆ ಕುರಿಗಾಹಿ ಟೋಪಣ್ಣ, ಡೀಕಪ್ಪ, ಸಂತೋಷ,ಕೃಷ್ಣಾ, ಹೇಮಂತ ಅವರು ಮೀನುಗಾರರ ಸಹಾಯದಿಂದ ತೆಪ್ಪದ ಮೂಲಕ ರಕ್ಷಣೆ ಮಾಡಿದ್ದಾರೆ.
194 ಕುರಿಗಳ ರಕ್ಷಣೆ 36 ಕುರಿಗಳು ಕೃಷ್ಣಾ ನದಿ ಪಾಲು...!
ಒಟ್ಟು 230 ಕುರಿಗಳು ನಡುಗಡ್ಡೆಯಲ್ಲಿ ಸಿಲುಕಿದ್ದವು. ಆದರೆ, ಅದರಲ್ಲಿ 36 ಕುರಿಗಳು ಕೃಷ್ಣಾ ನದಿಯ ಪ್ರವಾಹಕ್ಕೆ ಕೊಚ್ಚಿಕೊಂಡು ಹೋಗಿವೆ. ಅದರಲ್ಲಿ ಉಳಿದ 194 ಕುರಿಗಳನ್ನು ಸುರಕ್ಷಿತವಾಗಿ ತೆಪ್ಪದಲ್ಲಿ ರಕ್ಷಿಸಿ ತರಲಾಗಿದೆ.
ಕುರಿಗಾಗಿ ಕಣ್ಣೀರು...!
ಐಬಿ ತಾಂಡಾದ ನಿವಾಸಿ ಟೋಪಣ್ಣ ಕೂಡ ಕೃಷ್ಣಾ ನದಿಯ ಪ್ರವಾಹದಲ್ಲಿ ಕುರಿಗಳ ಜೊತೆ ನಡುಗಡ್ಡೆಯಲ್ಲಿ ಸಿಲುಕಿದ್ದರು. ನಂತರ ಎನ್ ಡಿಆರ್ ಎಫ್ ತಂಡವು ಅಗಸ್ಟ್ 9 ರಂದು ಬೋಟ್ ಮೂಲಕ ಕುರಿಗಾಹಿ ಟೋಪಣ್ಣ ಅವರನ್ನು ರಕ್ಷಣೆ ಮಾಡಲಾಗಿತ್ತು. ಆದರೆ, ಕೃಷ್ಣಾ ನದಿಯಲ್ಲಿ ಹೆಚ್ಚಿನ ಪ್ರವಾಹ ಹಿನ್ನೆಲೆ ನಡುಗಡ್ಡೆಯಲ್ಲಿರುವ ಕುರಿಗಳನ್ನು ತರಲು ಸಾಧ್ಯವಾಗಿರಲಿಲ್ಲ. ಕಳೆದ 26 ದಿನಗಳಿಂದ ಕುರಿಗಾಹಿ ಟೋಪಣ್ಣ, ಸಂತೋಷ,ಹಾಗೂ ಕೃಷ್ಣಾ, ಡೀಕಪ್ಪ ಅವರು ನದಿ ತೀರದಲ್ಲಿ ಕುರಿಗಳನ್ನು ದೂರದಿಂದ ಕಾಯುತ್ತಿದ್ದರು.
ಟೋಪಣ್ಣ ಕುರಿಗಳ ಬಗ್ಗೆ ಚಿಂತೆ ಮಾಡುತ್ತಿದ್ದರು ಕೆಲವೊಮ್ಮೆ ಊಟ ಕೂಡ ಸರಿಯಾಗಿ ಮಾಡಿರಲಿಲ್ಲ. ಆದರೆ, ಈಗ ಇಂದು ಕುರಿಗಳನ್ನು ರಕ್ಷಣೆ ಮಾಡಲಾಗಿದೆ. ನಡುಗಡ್ಡೆಯಲ್ಲಿ ಕುರಿ ತರಲು ಹೋದಾಗ 36 ಕುರಿಗಳು ಕಡಿಮೆ ಕಂಡು ಬಂದ ಹಿನ್ನೆಲೆ ಕೆಲಹೊತ್ತು ಕುರಿಗಾಹಿ ಕಣ್ಣೀರು ಹಾಕಿದ್ದಾನೆ. ನಡುಗಡ್ಡೆಯಲ್ಲಿ ಸಿಲುಕಿದ 194 ಕುರಿಗಳನ್ನು ತೆಪ್ಪದ ಮೂಲಕ ಮೀನುಗಾರರ ಸಹಾಯದಿಂದ ರಕ್ಷಣೆ ಮಾಡಲಾಗಿದೆ.36 ಕುರಿಗಳು ಕೃಷ್ಣಾ ನದಿಯ ಪಾಲಾಗಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ