ಹುಬ್ಬಳ್ಳಿ; ಜಿಲ್ಲೆಯಲ್ಲಿ ಕೋವಿಡ್ ವ್ಯಾಕ್ಸಿನ್ ಗಾಗಿ ಜನರ ಪರದಾಟ ಮುಂದುವರೆ ದಿದೆ. ಭಾನುವಾರವಾಗಿದ್ದರಿಂದ ಹುಬ್ಬಳ್ಳಿಯ ಕಿಮ್ಸ್ ಗೆ ಜನಸಾಗರ ಹರಿದು ಬಂದಿತ್ತು. ಸಾಮಾಜಿಕ ಅಂತರ ಮರೆತು ಜನ ವ್ಯಾಕ್ಸಿನ್ ಗಾಗಿ ಮುಗಿಬಿದಿದ್ದರು. ಮತ್ತೊಂದೆಡೆ ಜನರಿಗೆ ಬುದ್ಧಿವಾದ ಹೇಳಬೇಕಾದ ಕಾಂಗ್ರೆಸ್ ನಾಯಕರೇ ಕೊರೋನಾ ರೂಲ್ಸ್ ಬ್ರೇಕ್ ಮಾಡಿ ಆಕ್ರೋಶಕ್ಕೆ ಕಾರಣವಾಗಿದ್ದಾರೆ. ಹುಬ್ಬಳ್ಳಿಯಲ್ಲಿ ಕೋವಿಡ್ ವ್ಯಾಕ್ಸಿನ್ ಗಾಗಿ ನೂಕುನುಗ್ಗಲು ಏರ್ಪಟ್ಟಿದೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಆವರಣದಲ್ಲಿ ನೂಕುನುಗ್ಗಲು ನಡೆದಿದೆ. ಬೆಳಿಗ್ಗೆಯಿಂದಲೇ ವ್ಯಾಕ್ಸಿನ್ ಗಾಗಿ ಜನ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಇವತ್ತು ಭಾನುವಾರ ಆಗಿರೋದ್ರಿಂದ ಜನದಟ್ಟಣೆ ಹೆಚ್ಚಳವಾಗಿದೆ. ಸಾವಿರಾರು ಜನ ಸಾಲುಗಟ್ಟಿ ನಿಂತಿದ್ದಾರೆ. ಮೊದಲ ವ್ಯಾಕ್ಸಿನ್ ಮತ್ತು ಎರಡನೇ ವ್ಯಾಕ್ಸಿನ್ ಹಾಕಿಸಿಕೊಳ್ಳುವವರಿಗೆ ಪ್ರತ್ಯೇಕ ಲೈನ್ ಮಾಡಲಾಗಿತ್ತು.
ಆದರೆ ಜನ ಮಾತ್ರ ಸಾಮಾಜಿಕ ಅಂತರ ಕಾಪಾಡದೆ ನಿಂತಿದ್ದಾರೆ. ವ್ಯಾಕ್ಸಿನ್ ಸೀಮಿತ ಸ್ಟಾಕ್ ಇರೋದ್ರಿಂದ ನಿತ್ಯ ಸರತಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಸೀಮಿತ ಕೇಂದ್ರಗಳಲ್ಲಿ ಮಾತ್ರ ಲಸಿಕೆ ಸಿಗುತ್ತಿದೆ. ಇದರಿಂದಾಗಿ ರಶ್ ಹೆಚ್ಚಾಗಿದೆ. ಎಲ್ಲ ಕಡೆ ಲಸಿಕೆ ಕೊಡುವ ವ್ಯವಸ್ಥೆ ಮಾಡಲಿ. ಅನಗತ್ಯ ರಶ್ ತಪ್ಪಿಸುವಂತೆ ಜನರು ಆಗ್ರಹಿಸಿದ್ದಾರೆ.
ಮಾಲ್ ತೆರೆಯಲು ಭರದ ಸಿದ್ಧತೆ;
ನಾಳೆಯಿಂದ ಮಾಲ್ ಗಳು ಒಪೆನ್ ಮಾಡಲು ಅವಕಾಶ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ. ಹುಬ್ಬಳ್ಳಿಯ 3 ಮಾಲ್ ಗಳಲ್ಲಿ ಮಾಲ್ ಗಳ ಓಪೆನ್ ಗೆ ಸಿದ್ಧತೆ ಕೈಗೊಳ್ಳಲಾಗಿದೆ. ನಾಳೆಯಿಂದ ಬಹುತೇಕ ಮಾಲ್ ಗಳು ಆರಂಭವಾಗಲಿವೆ. ಕಳೆದ ಎರಡು ತಿಂಗಳಿನಿಂದ ಬಂದ್ ಆಗಿದ್ದ ಪ್ರಮುಖ ಮಾಲ್ ಗಳು, ಇದೀಗ ರಾಜ್ಯಾದ್ಯಂತ ಕೋವಿಡ್ ಹರಡುವಿಕೆಯಲ್ಲಿ ಇಳಿಮುಖ ಹಿನ್ನೆಲೆ, ಹುಬ್ಬಳ್ಳಿಯಲ್ಲಿಯೂ ನಾಳೆಯಿಂದ ಮಾಲ್ ಗಳ ಚಟುವಟಿಕೆಗಳು ಬಿರುಸುಗೊಳ್ಳಲಿವೆ.
ಕಾಂಗ್ರೆಸ್ ನಾಯಕರಿಂದ ಕೊರೋನಾ ರೂಲ್ಸ್ ಬ್ರೇಕ್;
ಕಾಂಗ್ರೆಸ್ ಮುಖಂಡರಿಂದ ಕೊರೋನಾ ರೂಲ್ಸ್ ಬ್ರೇಕ್ ಆದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ವಾರಾಂತ್ಯದ ಲಾಕ್ ಡೌನ್ ಇದ್ದರೂ ಸಭೆ ನಡೆಲಾಗಿದೆ. ಕಾನೂನಿಗೆ ಡೋಂಟ್ ಕೇರ್ ಅನ್ನೋ ರೀತಿಯಲ್ಲಿ ನಾಯಕರು ವರ್ತಿಸಿದ್ದಾರೆ. ಮಾಜಿ ಸಚಿವ ಆರ್ ವಿ ದೇಶಪಾಂಡೆ ನೇತೃತ್ವದಲ್ಲಿ ಕಾರವಾರ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಸಭೆ ನಡೆಯಿತು. ಬೆಲೆ ಏರಿಕೆ ವಿರುದ್ಧ ಕೈಗೊಳ್ಳಬೇಕಿರುವ ಸೈಕಲ್ ಜಾಥಾ ಹೋರಾಟದ ಕುರಿತು ಸಭೆ ಆಯೋಜಿಸಲಾಗಿತ್ತು.
ಕೊರೋನಾ ತಡೆಗಟ್ಟಲು ರಾಜ್ಯ ಸರ್ಕಾರದಿಂದ ವಾರಾಂತ್ಯದ ಲಾಕ್ ಡೌನ್ ಜಾರಿಗೊಳಿಸಿರುವಾಗ, ಜಾಗೃತಿ ಮೂಡಿಸಬೇಕಿದ್ದ ಜನಪ್ರತಿನಿಧಿಗಳೆಂದಲೇ ರೂಲ್ಸ್ ಬ್ರೇಕ್ ಮಾಡಿದ್ದಾರೆ. ಸಾಮಾಜಿಕ ಅಂತರ ಮರೆತು ಸಭೆಯಲ್ಲಿ ಭಾಗಿಯಾಗಿದ್ದಾರೆ. ಹಲವರು ಮಾಸ್ಕ್ ಅನ್ನೂ ಧರಿಸದೆ ಸಭೆಯಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ: Online Education| ಕೊಪ್ಪಳದ ಬಡ ಮಕ್ಕಳ ಪಾಲಿಗೆ ಗಗನ ಕುಸುವಮವಾದ ಆನ್ಲೈನ್ ಶಿಕ್ಷಣ
ಶಾಸಕಿ ಕುಸುಮಾ ಶಿವಳ್ಳಿ, ಮಾಜಿ ಸಂಸದ ಐ.ಜಿ.ಸನದಿ' ಮಾಜಿ ಸಚಿವ ಎ.ಎಂ.ಹಿಂಡಸಗೇರಿ, ಸಂತೋಷ್ ಲಾಡ್ ಮತ್ತಿತರರು ಭಾಗಿಯಾಗಿದ್ದರು. ವಾರಾಂತ್ಯದ ಲಾಕ್ಡೌನ್ ಹಿನ್ನೆಲೆಯಲ್ಲಿ ಮಧ್ಯಾಹ್ನ 2 ಗಂಟೆ ವರೆಗೆ ಮಾತ್ರ ವ್ಯಾಪಾರ ವಹಿವಾಟಿಗೆ ಮಾತ್ರ ಅವಕಾಶ ಕೊಡಲಾಗಿದೆ. ಆದರೆ ವ್ಯವಹಾರದ ಸಮಯದ ಹೊರತಾಗಿಯೂ ಸಭೆ ನಡೆಸಿ, ಸಾಮಾಜಿಕ ಅಂತರ ಮರೆತ ಕಾಂಗ್ರೆಸ್ ಮುಖಂಡರು ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ