ಜಮ್ಮು ಮತ್ತು ಕಾಶ್ಮೀರದಲ್ಲಿ ವಿಜಯಪುರದ ಯೋಧ ಹುತಾತ್ಮ

ಹುತಾತ್ಮ ಯೋಧ ಶಿವಾನಂದ ಜಗನ್ನಾಥ ಬಡಿಗೇರ

ಹುತಾತ್ಮ ಯೋಧ ಶಿವಾನಂದ ಜಗನ್ನಾಥ ಬಡಿಗೇರ

ಸೇನೆಯಲ್ಲಿ ಎಲೆಕ್ಟ್ರಿಕಲ್​​ ವಿಭಾಗದಲ್ಲಿ ಎಲೆಕ್ಟ್ರಿಕ್ ಗಾರ್ಡ್ ಆಗಿ ಯೋಧ ಕೆಲಸ ಮಾಡುತ್ತಿದ್ದ.  ಇಂದು ಮಧ್ಯಾಹ್ನ ಕೆಲಸ ಮಾಡುವಾಗ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಸಾವಿಗೀಡಾಗಿದ್ದಾರೆ

  • Share this:

ವಿಜಯಪುರ(ಆಗಸ್ಟ್. 30): ಕರ್ತವ್ಯ ನಿರತ ಬಿಎಸ್ಎಫ್ ಯೋಧನೊಬ್ಬ ವಿದ್ಯುತ್ ತಗುಲಿ ಸಾವಿಗೀಡಾದ ಘಟನೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿದೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಸರಕೋಡ ಗ್ರಾಮದ ಯೋಧ ಶಿವಾನಂದ ಜಗನ್ನಾಥ ಬಡಿಗೇರ ಹುತಾತ್ಮರಾಗಿದ್ದಾರೆ. 29 ವರ್ಷದ ಶಿವಾನಂದ ಜಗನ್ನಾಥ ಬಡಿಗೇರ 9 ವರ್ಷಗಳ ಹಿಂದೆ ಸೇನೆ ಸೇರಿದ್ದರು. ಕಳೆದ ಒಂದು ವರ್ಷದ ಹಿಂದೆ ತಾಳಿಕೋಟೆ ತಾಲೂಕಿನ ಪುಷ್ಪಾ ಎಂಬುವವರ ಜೊತೆ ಮದುವೆಯಾಗಿದ್ದರು.


ಸೇನೆಯಲ್ಲಿ ಎಲೆಕ್ಟ್ರಿಕಲ್​​​ ವಿಭಾಗದಲ್ಲಿ ಎಲೆಕ್ಟ್ರಿಕ್ ಗಾರ್ಡ್ ಆಗಿ ಯೋಧ ಕೆಲಸ ಮಾಡುತ್ತಿದ್ದ.  ಇಂದು ಮಧ್ಯಾಹ್ನ ಕೆಲಸ ಮಾಡುವಾಗ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಸಾವಿಗೀಡಾಗಿದ್ದಾರೆ ಎಂದು ಸೇನೆಯ ಕಡೆಯಿಂದ ಯೋಧನ ಕುಟುಂಬಕ್ಕೆ ಮಾಹಿತಿ ಬಂದಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.


ಇದನ್ನೂ ಓದಿ : ಕೊರೋನಾ ಸಂಕಷ್ಟ : ಸರ್ಕಾರಿ ಶಾಲೆಗಳತ್ತ ಒಲವು ತೋರುತ್ತಿರುವ ಪೋಷಕರು


ಒಂಬತ್ತು ವರ್ಷಗಳ ಹಿಂದೆ ಸೇನೆಗೆ ಸೇರಿದ್ದ ಶಿವಾನಂದ ಜಗನ್ನಾಥ ಬಡಿಗೇರ, ಮೊದಲು ಬಾಂಗ್ಲಾದೇಶ ಮತ್ತು ನಂತರ ಚೀನಾ ಗಡಿಯಲ್ಲಿ ಸೇವೆ ಸಲ್ಲಿಸಿದ್ದರು. ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರಕ್ಕೆ ವರ್ಗಾವಣೆಗೊಂಡಿದ್ದರು. ಇಂದು ಕರ್ತವ್ಯ ನಿರತರಾಗಿದ್ದಾಗ ವಿದ್ಯುತ್ ತಗುಲಿ ಸಾವಿಗೀಡಾಗಿದ್ದಾರೆ. ಮಂಗಳವಾರ ಯೋಧನ ಪಾರ್ಥಿವ ಶರೀರ ಆತನ ತವರು ಬಸರಕೋಡ ಗ್ರಾಮಕ್ಕೆ ಆಗಮಿಸಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.



ಈ ಮಧ್ಯೆ ಮಗನ ಸಾವಿನ ಸುದ್ದಿ ಕೇಳಿ ಆತನ ತಂದೆ ಮತ್ತು ತಾಯಿ ಪ್ರಜ್ಞಾಹೀನರಾಗಿದ್ದಾರೆ. ನಂತರ ಉಪಚರಿಸಿದ ಬಳಿಕ ಚೇತರಿಸಿಕೊಂಡಿದ್ದಾರೆ.  ಯೋಧನ ಮತ್ತೋಬ್ಬ ಸಹೋದರ ಕೂಡ ಸೇನೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಬಸರಕೋಡ ಗ್ರಾಮದ ಮೂಲಗಳು ತಿಳಿಸಿವೆ. ಬೇಗನೇ ತಮ್ಮ ಸಹೋದರನ ಪಾರ್ಥೀವ ಶರೀರ ತರುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ ಯೋಧನ ಸಹೋದರ ಕಾಳಪ್ಪ ಬಡಿಗೇರ ಮನವಿ ಮಾಡಿದ್ದಾರೆ.

Published by:G Hareeshkumar
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು