ಹಾಸನ ಜಿಲ್ಲೆಯಲ್ಲಿ ಇಂದು 34 ಕೊರೋನಾ ವೈರಸ್ ಹೊಸ ಪ್ರಕರಣ ಪತ್ತೆ; ಮಾರಕ ಸೋಂಕಿಗೆ 2 ಸಾವು
ಜಿಲ್ಲೆಯಲ್ಲಿ ಒಟ್ಟು 9323 ಗರ್ಭಿಣಿಯರಿದ್ದು, ಎಲ್ಲರಿಗೂ ಸೂಕ್ತ ಚಿಕಿತ್ಸೆ ಸಿಗುತ್ತಿದೆ ಯಾವುದೇ ಸಮಸ್ಯೆ ಇಲ್ಲ. ಆಲೂರು ಮತ್ತು ಸಕಲೇಶಪುರ ತಾಲೂಕಿನ ಇಬ್ಬರು ಗರ್ಭಿಣಿಯರಿಗೆ ಕೊರೋನಾ ಪಾಸಿಟಿವ್ ಬಂದಿತ್ತು. ಒಬ್ಬರು ಏಳು ತಿಂಗಳು ಮತ್ತೊಬ್ಬರು ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಾರೆ. ಈಗ ಒಬ್ಬರು ಗುಣಮುಖರಾಗಿದ್ದು, ಮತ್ತೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
news18-kannada Updated:July 11, 2020, 7:59 PM IST

ಸಾಂದರ್ಭಿಕ ಚಿತ್ರ.
- News18 Kannada
- Last Updated: July 11, 2020, 7:59 PM IST
ಹಾಸನ; ಜಿಲ್ಲೆಯಲ್ಲಿ ಇಂದು ಹೊಸದಾಗಿ 34 ಕೋವಿಡ್-19 ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 655ಕ್ಕೆ ಏರಿಕೆಯಾಗಿದೆ. ಈವರೆಗೆ 421 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 217 ಸಕ್ರಿಯ ಸೋಂಕಿತರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಇಬ್ಬರು ಸೋಂಕಿಗೆ ಬಲಿಯಾಗಿದ್ದು, ಇದುವರೆಗೆ 17 ಮಂದಿ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ತಿಳಿಸಿದ್ದಾರೆ.
ಇಂದು ಪತ್ತೆಯಾದ 34 ಪ್ರಕರಣಗಳಲ್ಲಿ 16 ಜನ ಅರಸೀಕೆರೆ ತಾಲ್ಲೂಕಿನವರು, 11 ಮಂದಿ ಹಾಸನ ತಾಲೂಕಿನವರು, ಇಬ್ಬರು ಆಲೂರು ತಾಲೂಕಿನವರು, 3 ಮಂದಿ ಅರಕಲಗೂಡು ತಾಲೂಕಿನವರು, ಒಬ್ಬರು ಚನ್ನರಾಯಪಟ್ಟಣ ಹಾಗೂ ಒಬ್ಬರು ಸಕಲೇಶಪುರ ತಾಲೂಕಿನವರಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 9323 ಗರ್ಭಿಣಿಯರಿದ್ದು, ಎಲ್ಲರಿಗೂ ಸೂಕ್ತ ಚಿಕಿತ್ಸೆ ಸಿಗುತ್ತಿದೆ ಯಾವುದೇ ಸಮಸ್ಯೆ ಇಲ್ಲ. ಆಲೂರು ಮತ್ತು ಸಕಲೇಶಪುರ ತಾಲೂಕಿನ ಇಬ್ಬರು ಗರ್ಭಿಣಿಯರಿಗೆ ಕೊರೋನಾ ಪಾಸಿಟಿವ್ ಬಂದಿತ್ತು. ಒಬ್ಬರು ಏಳು ತಿಂಗಳು ಮತ್ತೊಬ್ಬರು ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಾರೆ. ಈಗ ಒಬ್ಬರು ಗುಣಮುಖರಾಗಿದ್ದು, ಮತ್ತೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಡೀ ಜಿಲ್ಲೆಯಲ್ಲಿ ಈ ಹಿಂದೆ 100 ಮಂದಿಗೆ 'ಎ' ಸಿಂಟಮ್ಸ್ ಇತ್ತು ಈಗ ಎಲ್ಲರದೂ ನೆಗೆಟಿವ್ ಬಂದಿದೆ ಎಂದು ಮಾಹಿತಿ ನೀಡಿದರು.
ಇದನ್ನು ಓದಿ: Lockdown - ಮಂಗಳವಾರದಿಂದ ಒಂದು ವಾರ ಕಾಲ ಲಾಕ್ಡೌನ್?
ಸಾಮಾನ್ಯವಾಗಿ ಆಸ್ಪತ್ರೆಗೆ ಹೋಗಲು ಭಯಪಡುತ್ತಾರೆ. ಈಗ ಆಶಾ ಕಾರ್ಯಕರ್ತೆಯರೆಲ್ಲರೂ ಕೊರೋನಾ ಕರ್ತವ್ಯ ಮಾಡುತ್ತಿದ್ದಾರೆ. ಆದರೂ ಎಲ್ಲಾ ತಾಲೂಕು ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೊರೋನಾ ಮತ್ತು ಜ್ವರದ ಕೌಂಟರ್ ಅನ್ನು ಪ್ರತ್ಯೇಕವಾಗಿ ಅಂತರದಲ್ಲಿ ತೆರೆಯಲಾಗಿದೆ. ಯಾವುದೇ ಸಮಸ್ಯೆ ಇಲ್ಲಾ. ಗರ್ಭಿಣಿಯರು ಎಂದಿನಂತೆ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ. ಇಡೀ ಜಿಲ್ಲೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಕೊರೋನಾದಿಂದಾಗಿ ಗರ್ಭಿಣಿಯರಿಗೆ ಯಾವುದೇ ಸಮಸ್ಯೆ ಇಲ್ಲಾ ಆರೋಗ್ಯ ಇಲಾಖೆ ವತಿಯಿಂದ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಡಿಎಚ್ಒ ಡಾ.ಸತೀಶ್ ತಿಳಿಸಿದ್ದಾರೆ.
ಇಂದು ಪತ್ತೆಯಾದ 34 ಪ್ರಕರಣಗಳಲ್ಲಿ 16 ಜನ ಅರಸೀಕೆರೆ ತಾಲ್ಲೂಕಿನವರು, 11 ಮಂದಿ ಹಾಸನ ತಾಲೂಕಿನವರು, ಇಬ್ಬರು ಆಲೂರು ತಾಲೂಕಿನವರು, 3 ಮಂದಿ ಅರಕಲಗೂಡು ತಾಲೂಕಿನವರು, ಒಬ್ಬರು ಚನ್ನರಾಯಪಟ್ಟಣ ಹಾಗೂ ಒಬ್ಬರು ಸಕಲೇಶಪುರ ತಾಲೂಕಿನವರಾಗಿದ್ದಾರೆ.
ಇದನ್ನು ಓದಿ: Lockdown - ಮಂಗಳವಾರದಿಂದ ಒಂದು ವಾರ ಕಾಲ ಲಾಕ್ಡೌನ್?
ಸಾಮಾನ್ಯವಾಗಿ ಆಸ್ಪತ್ರೆಗೆ ಹೋಗಲು ಭಯಪಡುತ್ತಾರೆ. ಈಗ ಆಶಾ ಕಾರ್ಯಕರ್ತೆಯರೆಲ್ಲರೂ ಕೊರೋನಾ ಕರ್ತವ್ಯ ಮಾಡುತ್ತಿದ್ದಾರೆ. ಆದರೂ ಎಲ್ಲಾ ತಾಲೂಕು ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೊರೋನಾ ಮತ್ತು ಜ್ವರದ ಕೌಂಟರ್ ಅನ್ನು ಪ್ರತ್ಯೇಕವಾಗಿ ಅಂತರದಲ್ಲಿ ತೆರೆಯಲಾಗಿದೆ. ಯಾವುದೇ ಸಮಸ್ಯೆ ಇಲ್ಲಾ. ಗರ್ಭಿಣಿಯರು ಎಂದಿನಂತೆ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ. ಇಡೀ ಜಿಲ್ಲೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಕೊರೋನಾದಿಂದಾಗಿ ಗರ್ಭಿಣಿಯರಿಗೆ ಯಾವುದೇ ಸಮಸ್ಯೆ ಇಲ್ಲಾ ಆರೋಗ್ಯ ಇಲಾಖೆ ವತಿಯಿಂದ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಡಿಎಚ್ಒ ಡಾ.ಸತೀಶ್ ತಿಳಿಸಿದ್ದಾರೆ.