• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ವೈದ್ಯರಿಗೆ ಬ್ಲಾಕ್​ಮೇಲ್; ಪತ್ರಕರ್ತೆಯರು ಎಂದು ಹೇಳಿಕೊಂಡಿದ್ದ ಮೂವರು ಯುವತಿಯರ ಬಂಧನ

ವೈದ್ಯರಿಗೆ ಬ್ಲಾಕ್​ಮೇಲ್; ಪತ್ರಕರ್ತೆಯರು ಎಂದು ಹೇಳಿಕೊಂಡಿದ್ದ ಮೂವರು ಯುವತಿಯರ ಬಂಧನ

ನಕಲಿ ಗುರುತಿನ ಚೀಟಿ.

ನಕಲಿ ಗುರುತಿನ ಚೀಟಿ.

ಪತ್ರಿಕೋದ್ಯಮ, ಮಾನವ ಹಕ್ಕು, ಭ್ರಷ್ಟಾಚಾರ ನಿಯಂತ್ರಣ ಸಮಿತಿ ಹೀಗೆ ತರಹೇವಾರಿ ಕಥೆ ಹೇಳಿದಾಗಲೇ ಡಾಕ್ಟರ್​ ಅಲರ್ಟ್ ಆಗಬಹುದಿತ್ತು. ಆದ್ರೂ 50 ಸಾವಿರ ರೂ. ಕೊಟ್ಟು ಬಂದಿದ್ದಾರು ಏಕೆ ಎಂಬ ಪ್ರಶ್ನೆ ಸಹಜವಾಗಿಯೇ ಅನುಮಾನ ಮೂಡಿಸಿದೆ.‌ ಆದರೆ ಈ ರೀತಿ ಬ್ಲಾಕ್ ಮೇಲ್ ಮಾಡುವವರ ಬಗ್ಗೆ ಎಚ್ಚರಿಕೆಯಿಂದರಬೇಕು ಎಂಬುದು ಪೊಲೀಸರ ಸಲಹೆಯಾಗಿದೆ.

ಮುಂದೆ ಓದಿ ...
  • Share this:

ಮೈಸೂರು; ಮಾಧ್ಯಮ, ಮಾನವ ಹಕ್ಕುಗಳ ಹೆಸರಲ್ಲಿ ವೈದ್ಯರಿಗೆ ಬ್ಲ್ಯಾಕ್‌ಮೇಲ್ ಮಾಡಿದ ಮೂವರು ಯುವತಿಯರ ಬಂಧಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಸರ್ಕಾರಿ ವೈದ್ಯನಿಂದ ಹಣ ಪೀಕಲು ವಿಫಲ ಯತ್ನ ಮಾಡಿದ ಅಮ್ರೀನ್, ಆಯಿಷಾ ಬಾಯಿ, ಶಹೀನಾ ನವೀದ್  ಪೊಲೀಸರು ಬಂಧಿಸಿರುವ ಆರೋಪಿಗಳಾಗಿದ್ದು, ಮೂವರ ವಿರುದ್ದ ಎಫ್‌ಐಆರ್ ದಾಖಲಿಸಿದ್ದಾರೆ. ಅವರು ಹೇಗೆ ಕಾರ್ಯಾಚರಣೆ ಮಾಡ್ತಿದ್ರು ಹೇಗೆ ಬೆದರಿಕೆ ಹಾಕ್ತಿದ್ರು ಅಂತ ಕೇಳಿ ಪೊಲೀಸರೆ ಶಾಕ್ ಆಗಿದ್ದಾರೆ. ಯುವತಿಯರೇ ನಡೆಸಿದ ಈ ಕಾರ್ಯಾಚರಣೆಯ ಸಂಪೂರ್ಣ ಇಲ್ಲಿದೆ.


ಮೈಸೂರಿನಲ್ಲಿ ಬಂಧನವಾಗಿರುವ ಅವರ್ಯಾರು ಪತ್ರಕರ್ತರಲ್ಲ, ಯಾವುದೇ ಮಾಧ್ಯಮ ಸಂಸ್ಥೆಯಲ್ಲಿ ಕೆಲಸವನ್ನೂ ಮಾಡುತ್ತಿರಲಿಲ್ಲ. ಕೇವಲ ನಕಲಿ ಕಾರ್ಡ್ ಬಳಸಿಕೊಂಡು ವೈದ್ಯರಿಂದ ಹಣಕ್ಕೆ ಬ್ಲಾಕ್ ಮೇಲ್ ಮಾಡೋಕೆ ಪ್ರಾರಂಭಿಸಿದ್ದರು. ಸ್ವಲ್ಪ ಹಣ ಕೊಟ್ಟ ನಂತರ ಹೆಚ್ಚಿನ ಹಣಕ್ಕಾಗಿ ಗಲಾಟೆ ಮಾಡೋಕೆ ಶುರುಮಾಡ್ತಿದ್ರು. ಕೊನೆಗೂ ಮೂವರ ಅಸಲಿ ಬಣ್ಣ ಬಯಲಾಗಿ ಮೂವರು ಯುವತಿಯರು ಇದೀಗ ಜೈಲು ಸೇರಿದ್ದಾರೆ.


ಹೌದು, ಬಂಧಿತರಾಗಿರುವ ಆರೋಪಿಗಳಲ್ಲಿ ಒಬ್ಬರು ಕ್ರೈಂ ರಿಪೋರ್ಟರ್, ಹೆಸರು ಅಮ್ರೀನ್. ಮತ್ತೊಬ್ಬಳು ಪೊಲಿಟಿಕಲ್ ರಿಪೋರ್ಟರ್, ಹೆಸರು ಶಾಯಿದಾ ಬಾಯಿ, ಇನ್ನೊಬ್ಬಳು ಶಾಹೀನಾ ನವೀದ್, ಈಕೆಯಂತೂ ಕೇಂದ್ರ ಸರ್ಕಾರದ ಸಿಟಿಜನ್ ಲೇಬರ್ ವೆಲ್​ಫೇರ್ ಆ್ಯಂಡ್ ಆ್ಯಂಟಿ ಕರಪ್ಷನ್ ಕಮಿಟಿ ಪ್ರಧಾನ ಕಾರ್ಯದರ್ಶಿ. ಇನ್​ಫ್ಯಾಕ್ಟ್, ಇವರು ಹೇಳುತ್ತಿರುವ ಸಂಸ್ಥೆಗಳೇ ಅಸ್ತಿತ್ವದಲ್ಲಿ ಇಲ್ಲ. ನಕಲಿ ಗುರುತಿನ ಚೀಟಿ ತೋರಿಸಿ ಹಣ ವಸೂಲಿ ಮಾಡಲು ಯತ್ನಿಸಿದ್ದ ಇವರೆಲ್ಲ, ಇದೀಗ ಜೈಲು ಪಾಲಾಗಿದ್ದಾರೆ. ಮೈಸೂರಿನ ಕೆ.ಆರ್.ಆಸ್ಪತ್ರೆಯ ನರರೋಗ ತಜ್ಞ ಟಿ.ಎಸ್.ರಾಜೇಶ್ ಅವರನ್ನು ಈ ಯುವತಿಯರು ನಾವು ಸುವರ್ಣ ಕಾವೇರಿ ಎಕ್ಸ್​ಪ್ರೆಸ್​ ಚಾನಲ್​ ವರದಿಗಾರ್ತಿಯರು ಅಂತ ಪರಿಚಯ ಮಾಡಿಕೊಂಡಿದ್ದಾರೆ. ನಂತರ ನೀವು ಸರ್ಕಾರಿ ವೈದ್ಯರಾಗಿದ್ದುಕೊಂಡು ರೋಗಿಗಳಿಂದ ಕಾನೂನು ಬಾಹಿರವಾಗಿ ಹಣ ವಸೂಲಿ ಮಾಡಿದ್ದೀರಿ. ಈ ಸಂಬಂಧ ವಿಡಿಯೋ ದೃಶ್ಯಗಳಿವೆ. ಅದನ್ನು‌ ಮಾಧ್ಯಮದಲ್ಲಿ ಹಾಕ್ತಿವಿ ಅಂತ ಬ್ಲಾಕ್​ಮೇಲ್ ಶುರುಮಾಡಿದ್ದಾರೆ. ಜೊತೆಗೆ ಹಣಕ್ಕೂ ಬೇಡಿಕೆ ಇಟ್ಟು ಅಲ್ಪ ಮೊತ್ತದ ಹಣ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.


ನಕಲಿ ಗುರುತಿನ ಚೀಟಿ.


ನಕಲಿ ಗುರುತಿನ ಚೀಟಿ.


ಇದನ್ನು ಓದಿ: ಖಾಸಗಿ ಕಂಪನಿಯಿಂದ ಅಕ್ರಮವಾಗಿ ಭೂಮಿ‌ ಕಬಳಿಕೆ ಅರೋಪ: ನಮಗೆ ನ್ಯಾಯ ಕೊಡಿ ಎನ್ನುತ್ತಿರುವ ರೈತರು


ಈ ರೀತಿ ಬ್ಲಾಕ್ ಮೇಲ್ ಶುರು ಮಾಡಿದ ಇವರುಗಳು ಮೊದಲಿಗೆ  5 ಲಕ್ಷ ರೂ. ಕೊಟ್ಟರೆ ಸುಮ್ಮನಾಗುತ್ತೇವೆ ಅಂತ ಬೇಡಿಕೆ‌ ಇಟ್ಟಿದ್ದರು. ನಂತರ ಪೋನಲ್ಲಿ ಮಾತಾಡಿ 2 ಲಕ್ಷಕ್ಕೆ ಫೈನಲ್ ಮಾಡಿದ್ದಾರೆ. ನಂತರ ಮುಂಗಡವಾಗಿ 50 ಸಾವಿರ ಕೊಟ್ಟು ಸುಮ್ಮನಾಗಿಸಲು ವೈದ್ಯ ರಾಜೇಶ್ ಯತ್ನಿಸಿದ್ದಾರೆ. ಇದಾದ ನಂತರ ಪೂರ್ತಿ ಹಣಕ್ಕೆ ಬೇಡಿಕೆ ಇಟ್ಟು ವೈದ್ಯರು ಹಣ ನೀಡದೆ ಇದ್ದಾಗ ವೈದ್ಯರ ಜೊತೆ ಗಲಾಟೆ ಮಾಡಲು ಶುರುಮಾಡಿದ್ದಾರೆ. ಗಲಾಟೆ ಹೆಚ್ಚಾಗಿ ಅಕ್ಕಪಕ್ಕದವರೆಲ್ಲ ಬಂದಾಗ ವೈದ್ಯ ರಾಜೇಶ್  ಮಂಡಿ ಠಾಣೆ ಪೊಲೀಸರಿಗೆ  ದೂರು ನೀಡಿದ್ದಾರೆ. ಯುವತಿಯರನ್ನು ಕರೆಸಿ  ತನಿಖೆ ನಡೆಸಿದಾಗ ಈ ಮೂವರು ನಕಲಿ ಪತ್ರಕರ್ತರು ಹಾಗೂ ಸರ್ಕಾರಿ ಇಲಾಖೆಯ ನಕಲಿ ಸಂಸ್ಥೆಯ ಸಿಬ್ಬಂದಿ ಎಂದು ಹೇಳಿದ್ದ ಇವರ ಬಣ್ಣ ಬಯಲಾಗಿದೆ. ಅಂತಿಮವಾಗಿ ಮೂವರನ್ನು ಬಂಧಿಸಿರುವ ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.


ಪತ್ರಿಕೋದ್ಯಮ, ಮಾನವ ಹಕ್ಕು, ಭ್ರಷ್ಟಾಚಾರ ನಿಯಂತ್ರಣ ಸಮಿತಿ ಹೀಗೆ ತರಹೇವಾರಿ ಕಥೆ ಹೇಳಿದಾಗಲೇ ಡಾಕ್ಟರ್​ ಅಲರ್ಟ್ ಆಗಬಹುದಿತ್ತು. ಆದ್ರೂ 50 ಸಾವಿರ ರೂ. ಕೊಟ್ಟು ಬಂದಿದ್ದಾರು ಏಕೆ ಎಂಬ ಪ್ರಶ್ನೆ ಸಹಜವಾಗಿಯೇ ಅನುಮಾನ ಮೂಡಿಸಿದೆ.‌ ಆದರೆ ಈ ರೀತಿ ಬ್ಲಾಕ್ ಮೇಲ್ ಮಾಡುವವರ ಬಗ್ಗೆ ಎಚ್ಚರಿಕೆಯಿಂದರಬೇಕು ಎಂಬುದು ಪೊಲೀಸರ ಸಲಹೆಯಾಗಿದೆ.

Published by:HR Ramesh
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು