ಬೆಂಗಳೂರು; ಕೆಫೆ ಕಾಫಿ ಡೇನ ಮ್ಯಾನೇಜರ್ ಮೇಲೆ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ಕಸ್ತೂರಿನಗರ ಕೆಫೆ ಕಾಫಿ ಡೇನಲ್ಲಿ ನಡೆದಿದೆ. ನಿನ್ನೆ ರಾತ್ರಿ ಸುಮಾರು 9 ಗಂಟೆ ವೇಳೆಗೆ ಕಿರಣ್ ಎಂಬಾತ ಕಾಫಿ ಡೇ ಗೆ ಬಂದಿದ್ದಾನೆ. ಬಂದ ಕೂಡಲೇ ಆತನ ಬಳಿ ಇರೋ ಸಿಗರೇಟ್ ತೆಗೆದು ಅದ್ರಲ್ಲಿರೋ ಪುಡಿಯನ್ನು ಉದರಿಸಿ ಅದಕ್ಕೆ ಗಾಂಜಾ ಮಾದರಿಯ ಪುಡಿಯನ್ನು ತುಂಬಲು ಮುಂದಾಗಿದ್ದಾನೆ. ಇದನ್ನು ನೋಡಿದ ಮ್ಯಾನೇಜರ್ ನವೀನ್ ಕುಮಾರ್ ಏನ್ ಮಾಡ್ತಾ ಇದೀರಾ, ಇದಕ್ಕೆಲ್ಲಾ ಇಲ್ಲಿ ಯಾವುದೇ ಅನುಮತಿ ಇಲ್ಲ ಅಂತೇಳಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳಿದಿದೆ. ಜಗಳ ನೋಡುತ್ತಿದ್ದಂತೆ ವಿಕೋಪಕ್ಕೆ ಹೋಗಿದ್ದು ಕಿರಣ್ ಕಾಫಿ ಡೇ ನಲ್ಲಿ ಇದ್ದ ಕಬ್ಬಿಣದ ರಾಡೊಂದನ್ನು ತಗೊಂಡು ಮ್ಯಾನೇಜರ್ ತಲೆಗೆ ಬಲವಾಗಿ ಹೊಡೆದಿದ್ದಾನೆ.
ನಂತರ ತೀವ್ರ ರಕ್ತಸ್ರಾವ ಆಗಿದ್ದು ಇಬ್ಬರು ಒಬ್ಬರನ್ನು ಒಬ್ಬರು ಹೊಡೆದಾಡಿಕೊಂಡಿದ್ದಾರೆ. ಕೂಡಲೇ ಕಾಫಿ ಡೇನಲ್ಲಿ ಇದ್ದ ಇತರೇ ಸಿಬ್ಬಂದಿಯವರು ರಾಮಮೂರ್ತಿ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದು ತಕ್ಷಣವೇ ಪೊಲೀಸರು ಸ್ಥಳಕ್ಕೆ ಬಂದು ತೀವ್ರ ರಕ್ತಸ್ರಾವವಾಗಿದ್ದ ಮ್ಯಾನೇಜರ್ ನವೀನ್ ಕುಮಾರ್ ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮತ್ತೊಂದು ಕಡೆ ಘಟನೆಗೆ ಕಾರಣವಾದ ಕಿರಣ್ ಎಂಬಾತನನ್ನು ವಶಕ್ಕೆ ಪಡೆದು ಪೊಲೀಸರು ಆತ ಸಿಗರೇಟ್ ಗೆ ತುಂಬಿಸುತ್ತಾ ಇರೋದು ಗಾಂಜಾ ಅಥವಾ ಏನು ಅನ್ನೋದ್ರ ಬಗ್ಗೆ ತನಿಖೆ ಮಾಡ್ತಾ ಇದ್ದು ಆರೋಪಿ ಕಿರಣ್ ಮೇಲೆ ಎಫ್ ಐ ಆರ್ ಸಹ ದಾಖಲು ಮಾಡಿದ್ದಾರೆ.
ಇದನ್ನೂ ಓದಿ : ಅರಣ್ಯ ಅಭಿವೃದ್ಧಿ ನಿಗಮಕ್ಕೆ ತಾರಾ ಅನುರಾಧಾ; ಇಲ್ಲಿದೆ ನಿಗಮ ಮಂಡಳಿ ಅಧ್ಯಕ್ಷರ ಪಟ್ಟಿ
ಇದರ ಜೊತೆಗೆ ಆರೋಪಿ ಕಿರಣ್ ಬಳಿ ಒಂದು ಚಾಕು ಸಹ ಪತ್ತೆಯಾಗಿದ್ದು ಆರೋಪಿಯ ಹಿನ್ನಲೆ ಏನು ಅನ್ನೋದ್ರ ಬಗ್ಗೆಯೂ ಪೊಲೀಸರು ಈಗ ವಿಚಾರಣೆ ನಡೆಸುತ್ತಿದ್ದಾರೆ. ಇದಲ್ಲದೆ, ಘಟನೆಗೆ ಪ್ರಮುಖ ವಾದ ಕಾರಣ ಏನು ಅಂತ ಕಾಫಿ ಡೇ ನಲ್ಲಿ ಕೆಲಸ ಮಾಡ್ತಾ ಇದ್ದ ಸಿಬ್ಬಂದಿಯನ್ನು ಸಹ ಠಾಣೆಗೆ ಕರೆದು ವಿಚಾರಣೆಗೊಳಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ