ಸ್ವಚ್ಚ ಭಾರತ ಮಿಷನ್; ರಾಜ್ಯದಲ್ಲಿ 2ನೇ ಸ್ಥಾನಕ್ಕೇರಿದ ತುಮಕೂರು

ತುಮಕೂರು ಸ್ವಚ್ಛ ಸರ್ವೇಕ್ಷಣ್- 2021 ಸೈಕ್ಲಾಥಾನ್ ಜಾಥಾ

ತುಮಕೂರು ಸ್ವಚ್ಛ ಸರ್ವೇಕ್ಷಣ್- 2021 ಸೈಕ್ಲಾಥಾನ್ ಜಾಥಾ

ಚ್ಚತೆಗೆ ಸಂಬಂಧಿಸಿದಂತೆ ಪಾಲಿಕೆಯು ನೂತನವಾಗಿ ಬಿಡುಗಡೆ ಮಾಡಿರುವ ಆಪ್ ಇನ್‌ಸ್ಟಾಲ್ ಮಾಡಿಕೊಂಡು ಅದರ ಮೂಲಕ ಪ್ರತಿನಿತ್ಯ ಸಲಹೆ ಸೂಚನೆ ನೀಡಿದರೆ ಕೆಲವೇ ನಿಮಿಷಗಳಲ್ಲಿ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು ಎಂದು ಫರೀದಾ ಬೇಗಂ ತಿಳಿಸಿದ್ದಾರೆ.

  • Share this:

ತುಮಕೂರು : ಸ್ವಚ್ಛತೆಯಲ್ಲಿ 48 ನೇ ಸ್ಥಾನದಲ್ಲಿದ್ದ ತುಮಕೂರು ಮಹಾನಗರ ಪಾಲಿಕೆ ಇದೀಗ 2 ನೇ ಸ್ಥಾನಕ್ಕೆ ಏರಿದೆ. ಇನ್ನೂ ಮೊದಲನೆ ಸ್ಥಾನಕ್ಕೆ ಬರಲು ಪಾಲಿಕೆಯ ಸಿಬ್ಬಂದಿಗಳು ಸೇರಿದಂತೆ ನಗರದ ನಾಗರಿಕರು ಸಹಕಾರ ನೀಡಬೇಕು ಎಂದು ಮೇಯರ್ ಫರೀದಾ ಬೇಗಂ ಮನವಿ ಮಾಡಿದ್ದಾರೆ. ನಗರದ ಟೌನ್‌ಹಾಲ್ ವೃತ್ತದಲ್ಲಿ ಮಹಾನಗರ ಪಾಲಿಕೆ ವತಿಯಿಂದ ಏರ್ಪಡಿಸಿದ್ದ ಸ್ವಚ್ಛ ಸರ್ವೇಕ್ಷಣ್- 2021 ರ ಅಂಗವಾಗಿ ಸೈಕ್ಲಾಥಾನ್ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದ ಅವರು, "ತುಮಕೂರು ಮಹಾನಗರ ಪಾಲಿಕೆ ಮೈಸೂರನ್ನು ಹಿಂದಿಕ್ಕಿ ಮೊದಲನೆಯ ಸ್ಥಾನಕ್ಕೆ ಬರುವವರೆಗೂ ನಾವು ವಿರಮಿಸುವುದಿಲ್ಲ. ಪಾಲಿಕೆಯ 35 ವಾರ್ಡಿನ ಸದಸ್ಯರೊಂದಿಗೆ ಐನೂರಕ್ಕೂ ಹೆಚ್ಚು ಮಂದಿ ಪೌರ ಕಾರ್ಮಿಕರು, ಅಧಿಕಾರಿಗಳು, ಸಿಬ್ಬಂದಿಗಳ ಜತೆಗೂಡಿ ಸ್ವಚ್ಚತೆಗೆ ನಗರದ ಪ್ರತಿಯೊಬ್ಬರೂ ಸಹಕರಿಸಿದರೆ ರೋಗ ಮುಕ್ತ ನಗರವನ್ನಾಗಿ ಮಾಡಬಹುದು" ಎಂದು ತಿಳಿಸಿದ್ದಾರೆ.


"ಸ್ವಚ್ಚತೆಗೆ ಸಂಬಂಧಿಸಿದಂತೆ ಪಾಲಿಕೆಯು ನೂತನವಾಗಿ ಬಿಡುಗಡೆ ಮಾಡಿರುವ ಆಪ್ ಇನ್‌ಸ್ಟಾಲ್ ಮಾಡಿಕೊಂಡು ಅದರ ಮೂಲಕ ಪ್ರತಿನಿತ್ಯ ಸಲಹೆ ಸೂಚನೆ ನೀಡಿದರೆ ಕೆಲವೇ ನಿಮಿಷಗಳಲ್ಲಿ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು" ಎಂದು ಫರೀದಾ ಬೇಗಂ ತಿಳಿಸಿದ್ದಾರೆ.


"ನಗರದಲ್ಲಿ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಸ್ಮಾರ್ಟ್ ಸಿಟಿ ಯೋಜನೆ ಸುಮಾರು 2000 ಕೋಟಿ ರೂ. ಅನುದಾನದಲ್ಲಿ ಅಭಿವೃದ್ಧಿಯಾಗುತ್ತಿದೆ . ಕೋವಿಡ್ -19 ವೈರಸ್ ಹಿನ್ನೆಲೆಯಲ್ಲಿ ಕಳೆದ 9 ತಿಂಗಳಿಂದ ಕಾಮಗಾರಿಗಳು ಮಂದಗತಿಯಲ್ಲಿ ಸಾಗಿದ ಪರಿಣಾಮವಾಗಿ ಅಭಿವೃದ್ಧಿಗೆ ಹಿನ್ನಡೆಯಾಗಿದೆ.


ಇದನ್ನೂ ಓದಿ: Bhagyavantharu: ನೂತನ ತಂತ್ರಜ್ಞಾನದ ಜೊತೆ ರಿಲೀಸ್ ಗೆ ಸಜ್ಜಾದ ಡಾ.ರಾಜ್​ ಅಭಿನಯದ ಭಾಗ್ಯವಂತರು ಸಿನಿಮಾ


ಈಗಾಗಲೇ ಶೇ.90 ರಷ್ಟು ಕಾಮಗಾರಿಗಳು ಮುಗಿದಿವೆ . ಇನ್ನೊಂದು ವರ್ಷದಲ್ಲಿ ಕಾಮಗಾರಿಗಳು ಪೂರ್ಣಗೊಳ್ಳಲಿವೆ . ಆಗ ತುಮಕೂರು ನಗರ ಅತ್ಯಂತ ಸುಂದರವಾಗಿ ಕಾಣಲಿದೆ . ಮೈಸೂರನ್ನು ತುಮಕೂರು ಹಿಂದಿಕ್ಕಿ ಸ್ವಚ್ಚತೆಯಲ್ಲಿ ಮೂದಲ ಸ್ಥಾನಕ್ಕೇರಲಿದೆ .


ಆದ್ದರಿಂದ ಪ್ರತಿಯೊಬ್ಬ ನಾಗರಿಕರು ಸ್ವಚ್ಚತೆಗೆ ಆದ್ಯತೆ ನೀಡಬೇಕು. ನಗರದ 35 ವಾರ್ಡ್ ಗಳಲ್ಲಿ ದಿನನಿತ್ಯ ಪಾಲಿಕೆಯ ಕಾರ್ಪೋರೇಟರ್ ಗಳು ಸೇರಿದಂತೆ ಪಾಲಿಕೆಯ ಆರೋಗ್ಯ ವಿಭಾಗದ ಅಧಿಕಾರಿಗಳು, ಸಿಬ್ಬಂದಿಗಳು , ಪೌರ ಕಾರ್ಮಿಕರು, ಕುಡಿಯುವ ನೀರು, ರಸ್ತೆಗಳು, ಚರಂಡಿ ವ್ಯವಸ್ಥೆಯ ಬಗ್ಗೆ ಹೆಚ್ಚಿನ ನಿಗಾ ವಹಿಸಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ರೋಗ ಮುಕ್ತ ನಗರವನ್ನಾಗಿ ಮಾಡಲು ಪಾಲಿಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ" ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

top videos
    First published: