ಹಾಸನ; ಅರಸೀಕೆರೆ ಕೃಷ್ಣಾ ನದಿ ಪಾತ್ರಕ್ಕೆ ಸೇರುತ್ತೆ, ಕೆಸಿ ರೆಡ್ಡಿ ವರದಿ ಪ್ರಕಾರ ಭದ್ರಾ ಮೇಲ್ದಂಡೆ ನದಿ ಪಾತ್ರದಿಂದ ಅರಸೀಕೆರೆಗೆ ನೀರು ಕೊಡುವ ವಿಷಯ ಪ್ರಸ್ತಾಪವಾಗಿದೆ. ಜೆಎಚ್ ಪಟೇಲ್ ಮತ್ತು ದೇವೇಗೌಡರು ಸಿಎಂ ಆಗಿದ್ದಾಗಲೂ ಈ ವಿಷಯ ಪ್ರಸ್ತಾಪಿಸಿದ್ದಾರೆ. ನಮ್ಮ ಅರಸೀಕೆರೆಯಿಂದಲೇ ಚಿಕ್ಕಮಗಳೂರಿಗೆ ಪೈಪ್ ಲೈನ್ ಹೋಗುತ್ತೆ. ಕಣಕಟ್ಟೆ ಮೂಲಕ ಚಿಕ್ಕಮಗಳೂರಿಗೆ ಭದ್ರಾ ಮೇಲ್ದಂಡೆಯಿಂದ ನೀರು ಹರಿಸುತ್ತಿದ್ದಾರೆ. ಡಿಪಿಆರ್ ನಲ್ಲಿ ಅರಸೀಕೆರೆಯ 28 ಕೆರೆಗಳು ಸೇರಿವೆ. ಡಿಪಿಆತನಾರ್ ನಲ್ಲಿ ಸೇರಿದರೂ ಎಲ್ಲಾ ಕೆರೆಗಳನ್ನು ಕೈಬಿಟ್ಟಿದ್ದಾರೆ. ಕೇವಲ ಒಂದೇ ಒಂದು ಕೆರೆ ಮಾತ್ರ ಈ ಯೋಜನೆಗೆ ಸೇರಿಸಿದ್ದಾರೆ. ಕಂಟ್ರೋಲ್ ಮಾಸ್ಟರ್ ಸಿಟಿ ರವಿ ಯೋಜನೆ ಬದಲಾವಣೆ ಮಾಡಿಸಿದ್ದಾರೆ ಎಂದು ಜೆಡಿಎಸ್ ಶಾಸಕ ಶಿವಲಿಂಗೇಗೌಡ ಅವರು ಕಿಡಿಕಾರಿದರು.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಂಬಂಧ ಸಿಎಂಗೆ ಹಲವು ಬಾರಿ ಮನವಿ ಮಾಡಿದ್ದೇನೆ. ಕೆರೆಗಳಿಗೆ ನೀರು ಕೊಡಿಸುತ್ತೇನೆ ಅಂತಾ ಹೇಳಿ ಸಿಎಂ ಈವರೆಗೂ ಕೆಲಸ ಮಾಡಿಲ್ಲಾ. ಭದ್ರಾ ಮೇಲ್ದಂಡೆ ನೀರು ಕೊಡುವಂತೆ ಪಕ್ಷಾತೀತವಾಗಿ ಸಮಿತಿ ರಚಿಸಿ ಉಗ್ರ ಹೋರಾಟ ಮಾಡುತ್ತೇವೆ. ಮೈತ್ರಿ ಸರ್ಕಾರದ ಮಾಸ್ಟರ್ ಪ್ಲಾನ್ ಅನ್ನು ಬದಲಾವಣೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ವಿಪಕ್ಷದವರು ಚುನಾವಣೆಗೆ ನಿಲ್ಲುವಂತಿಲ್ಲ. ಕೇವಲ ಆಡಳಿತ ಪಕ್ಷದವರೇ ಚುನಾವಣೆಗೆ ನಿಲ್ಲುವಂತಹ ಪರಿಸ್ಥಿತಿ ಉಂಟಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಇದುವರೆಗೂ ಕೆರೆಗಳಿಗೆ ನೀರು ಕೊಡಿಸುವ ಕೆಲಸ ಮಾಡಿಲ್ಲ. ಭದ್ರಾ ಮೇಲ್ದಂಡೆ ನೀರನ್ನು ಅರಸೀಕೆರೆ ತಾಲೂಕಿಗೆ ಕೊಡಿಸುವಂತೆ ಪಕ್ಷಾತೀತವಾಗಿ ಒಂದು ಸಮಿತಿ ರಚಿಸಿ ಉಗ್ರವಾದ ಹೋರಾಟ ಮಾಡುವುದಾಗಿ ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಎಚ್ಚರಿಸಿದರು.
ಇದನ್ನು ಓದಿ: ಎನ್ಡಿಎ ಜೊತೆಗೆ ಜೆಡಿಎಸ್ ವಿಲೀನ ಇಲ್ಲ; ಮಾಜಿ ಸಚಿವ ಎಚ್.ಡಿ.ರೇವಣ್ಣ ಸ್ಪಷ್ಟನೆ
ಈ ವಿಚಾರವನ್ನು ಮುಖ್ಯಮಂತ್ರಿಗಳಿಗೆ ಹಲವು ಬಾರಿ ಮನವಿ ಮಾಡಲಾಗಿತ್ತು. ಕೆರೆಗಳಿಗೆ ನೀರು ಕೊಡಿಸುತ್ತೇನೆ ಎಂದು ಹೇಳಿ ಈವರೆಗೂ ಕೆಲಸ ಮಾಡಿಲ್ಲ. ಭದ್ರಾ ಮೇಲ್ದಂಡೆ ನೀರು ಕೊಡುವಂತೆ ಪಕ್ಷಾತೀತವಾಗಿ ಸಮಿತಿ ರಚಿಸಿ ಉಗ್ರ ಹೋರಾಟದ ಹಾದಿ ಹಿಡಿಯಲಾಗುವುದು. ನಂತರ ಮಾಜಿ ಪ್ರಧಾನಿ ದೇವೇಗೌಡರು ಗಮನ ಸೆಳೆಯಲಿದ್ದಾರೆ ಎಂದರು.
ವರದಿ - ಡಿಎಂಜಿಹಳ್ಳಿಅಶೋಕ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ