• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಮಂಗಗಳ ಹಸಿವು ನೀಗಿಸಿದ ನವಜೋಡಿ: ಮಂಗಗಳಿಗೆ ಹಣ್ಣು- ಹಂಪಲು ನೀಡಿ ಖುಷಿಪಟ್ಟ ನವ ದಂಪತಿ

ಮಂಗಗಳ ಹಸಿವು ನೀಗಿಸಿದ ನವಜೋಡಿ: ಮಂಗಗಳಿಗೆ ಹಣ್ಣು- ಹಂಪಲು ನೀಡಿ ಖುಷಿಪಟ್ಟ ನವ ದಂಪತಿ

ಮಂಗಗಳ ಹಣ್ಣುಗಳನ್ನು ನೀಗಿಸಿದ ನವಜೋಡಿ

ಮಂಗಗಳ ಹಣ್ಣುಗಳನ್ನು ನೀಗಿಸಿದ ನವಜೋಡಿ

ಹಣ್ಣು ಹಂಪಲುಗಳನ್ನು ನೋಡುತ್ತಲೇ ಮಂಗಗಳು, ತಾ ಮುಂದು ನಾ ಮುಂದು ಅಂತ ಹಣ್ಣುಗಳನ್ನು ತಿಂದು ಹಸಿವನ್ನ ನೀಗಿಸಿಕೊಂಡವು.

  • Share this:

ಚಿಕ್ಕಮಗಳೂರು(ನವೆಂಬರ್​. 27): ನವ ಜೋಡಿವೊಂದು ಮಂಗಗಳಿಗೆ ಹಣ್ಣು-ಹಂಪಲು ನೀಡಿ ಖುಷಿಪಟ್ಟ ಅಪರೂಪದ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ನಲ್ಲಿ ನಡೆಯಿತು. ನಿನ್ನೆ ಬಣಕಲ್ ನ ಜಯಪಾಲ್ ಎಂಬುವವರು ಅನಿತಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮನೆಯಲ್ಲಿ ನೆಂಟರು, ಸ್ನೇಹಿತರು ಇದ್ದರೂ ಕೂಡ ಪರಿಸರ, ಪ್ರಾಣಿ ಪ್ರಿಯರಾಗಿರುವ ಜಯಪಾಲ್, ಇಂದು ಹೆಂಡತಿ ಜೊತೆಗೆ ಹಣ್ಣು ಹಂಪಲಗಳನ್ನು ಹಿಡಿದುಕೊಂಡು ಸೀದಾ ಚಾರ್ಮಾಡಿ ಘಾಟಿಗೆ ಆಗಮಿಸಿದರು. ವಧು-ವರರು ವಾನರ ಸೇನೆಗೆ ಬಾಳೆಹಣ್ಣು, ಸೇಬು, ಟೊಮ್ಯಾಟೊ ಮುಂತಾದ ಹಣ್ಣುಗಳನ್ನು ನೀಡಿ ಹಸಿವನ್ನ ತಣಿಸಿದರು.


ಹಣ್ಣು ಹಂಪಲುಗಳನ್ನು ನೋಡುತ್ತಲೇ ಮಂಗಗಳು, ತಾ ಮುಂದು ನಾ ಮುಂದು ಅಂತ ಹಣ್ಣುಗಳನ್ನು ತಿಂದು ಹಸಿವನ್ನ ನೀಗಿಸಿಕೊಂಡವು. ಮಂಗಗಳು ಚಾರ್ಮಾಡಿ ಘಾಟ್ ನ ರಸ್ತೆಬದಿಯ ತಡೆಗೋಡೆ ಮೇಲೆ ಸಾಲಾಗಿ ಕುಳಿತು ಹಣ್ಣನ್ನ ತಿನ್ನುವ ದೃಶ್ಯ ಕಣ್ಣಿಗೆ ಇಂಪಾಗಿತ್ತು.


ಇದನ್ನು ಓದಿ : ಗ್ರಾಮೀಣಾಭಿವೃದ್ಧಿಗೆ ಕಾಂಗ್ರೆಸ್-ಜೆಡಿಎಸ್‌ ಕೊಡುಗೆ ಶೂನ್ಯ: ಡಿಸಿಎಂ ಅಶ್ವತ್ಹನಾರಾಯಣ


ಹಣ್ಣುಗಳನ್ನು ವಧು-ವರರ ಕೈಯಿಂದ ಕಿತ್ಕೊಂಡು, ಮಂಗಗಳು ತಿನ್ನುವುದನ್ನ ನೋಡಿ ನವಜೋಡಿ ಖುಷಿಪಟ್ಟರು. ಮಂಗಗಳಿಗೆ ಹಣ್ಣು-ಹಂಪಲು ಕೊಡಲು ದೂರದ ಊರಿಂದ ವಧು-ವರರು ಬಂದಿದನ್ನ ನೋಡಿ, ಪ್ರವಾಸಿಗರು ಮೆಚ್ಚುಗೆ ವ್ಯಕ್ತಪಡಿಸಿದರು. ಮೂಕ ಪ್ರಾಣಿಗಳಿಗೆ ಹಸಿವು ನೀಗಿಸಿದ ಆತ್ಮತೃಪ್ತಿ ನವ ಜೋಡಿದಾಗಿತ್ತು.


ಇನ್ನು ಇದೇ ವೇಳೆ ಮಾತಾನಾಡಿದ ಪ್ರಾಣಿಪ್ರಿಯ ಜಯಪಾಲ್ ಇದೊಂದು ಸಂತೋಷದ ವಿಚಾರ, ನಾವು ಮದುವೆಯಾಗಿ ಮರುದಿನ ನಮ್ಮ ಜೊತೆ ಪ್ರಾಣಿಗಳು ಖುಷಿಯಾಗಿರಬೇಕೆಂಬ ಬಯಕೆಯಿಂದ ನಾವು ಸೀದಾ ಚಾರ್ಮಾಡಿ ಘಾಟ್ ಗೆ ಬಂದು ಮಂಗಗಳಿಗೆ ಹಣ್ಣು ಹಂಪಲು ನೀಡಿದ್ದೇವೆ. ಇದು ನನಗೆ ಹಾಗೂ ನನ್ನ ಹೆಂಡತಿಗೆ ಅತ್ಯಂತ ಸಂತೋಷ ತರಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು.

Published by:G Hareeshkumar
First published: