ಮೈಸೂರು; ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪಟಾಕಿ ಮಾರಾಟದ ಬಗ್ಗೆ ಇದ್ದ ಗೊಂದಲ ಮೈಸೂರಿನಲ್ಲೂ ಮುಂದುವರೆದಿತ್ತು. ಹಬ್ಬದ ದಿನವು ಪಟಾಕಿ ಮಾರಾಟಗಾರರು ಪಟಾಕಿ ಮಾರಬೇಕಾ, ಬೇಡ್ವಾ ಅನ್ನೋ ಗೊಂದಲದಲ್ಲಿ ಇರುವಾಗಲೇ ಅಧಿಕೃತ ಪಟಾಕಿ ಮಾರಾಟದ ಸ್ಥಳಕ್ಕೆ ದಿಢೀರ್ ಭೇಟಿ ಕೊಟ್ಟ ಅಧಿಕಾರಿಗಳು ಪಟಾಕಿ ಮಾರಾಟಕ್ಕೆ ಅವಕಾಶ ನಿರಾಕರಣೆ ಮಾಡಿದರು. ಪೊಲೀಸರು ವಾಯು ನಿಯಂತ್ರಣ ಮಂಡಳಿ ಅಧಿಕಾರಿಗಳ ಭೇಟಿಯಿಂದ ವರ್ಷದಲ್ಲಿ ಒಮ್ಮೆ ವ್ಯಾಪಾರಕ್ಕೆ ಬಂದಿದ್ದ ಪಟಾಕಿ ವ್ಯಾಪಾರಸ್ಥರಲ್ಲಿ ನಿರಾಸೆ ಉಂಟಾಯಿತು.
ಮೈಸೂರಿನ ಜೆ.ಕೆ.ಮೈದಾನದಲ್ಲಿ ಇಂದು ಪಟಾಕಿ ಮಾರಾಟದ ವಿಚಾರದಲ್ಲಿ ಗೊಂದಲ ಉಂಟಾಗಿತ್ತು. ಸರ್ಕಾರ ಹಸಿರು ಪಟಾಕಿ ಮಾರಾಟ ಮಾಡಿ ಅಂತ ಆದೇಶ ನೀಡಿರುವ ಹಿನ್ನೆಯಲ್ಲಿ ಮೈಸೂರಿನಲ್ಲೂ ಹಸಿರು ಪಟಾಕಿ ಮಾತ್ರ ಮಾರಾಟಕ್ಕೆ ಅವಕಾಶ ನೀಡಲಾಗಿತ್ತು. ಆದರೆ ಆದೇಶ ಉಲ್ಲಂಘಿಸಿದ ಹಲವು ಪಟಾಕಿ ಅಂಗಡಿ ವ್ಯಾಪಾರಸ್ಥರು ಹಸಿರು ಪಟಾಕಿ ಅಲ್ಲದ ಪಟಾಕಿಗಳನ್ನು ಮಾರಾಟ ಮಾಡುತ್ತಿದ್ದರು. ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ವಾಯುಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಎಲ್ಲ ಅಂಗಡಿಗಳನ್ನು ಪರಿಶೀಲನೆ ಮಾಡಿದರು. ಪಟಾಕಿ ಬಾಕ್ಸ್ಗಳ ಮೇಲೆ ಹಸಿರು ಪಟಾಕಿ ಲೋಗೋ ಹಾಗೂ ಲೈಸನ್ಸ್ ನಂಬರ್ ಪರಿಶೀಲಿಸಿ. ಹಸಿರು ಪಟಾಕಿ ಅಲ್ಲದ ಪಟಾಕಿಗಳನ್ನು ಮಾರಾಟ ಮಾಡದಂತೆ ಸೂಚಿಸಿದರು.
ಇದನ್ನು ಓದಿ: ದೀಪಾವಳಿ ಹಬ್ಬ ಬಂದರೂ ಸಾರಿಗೆ ಇಲಾಖೆ ಸಿಬ್ಬಂದಿಗಿಲ್ಲ ಸಂಬಳ; ಜವಾನನಿಂದ ಎಂಡಿ ವರೆಗೂ ವೇತನವಿಲ್ಲ!
ಇನ್ನು ಈ ಬಗ್ಗೆ ಮೊದಲೇ ಸುತ್ತೋಲೆ ಹೊರಡಿಸಿದ್ದ ಮೈಸೂರು ನಗರ ಪೊಲೀಸರು ಪಾಲಿಕೆ ಅಧಿಕಾರಿಗಳು ಹಾಗೂ ಪಟಾಕಿ ವ್ಯಾಪಾರಸ್ಥರಿಗೆ ಸೂಚನೆ ನೀಡಿತ್ತು. ಇಂದು ವಾಯುಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ಭೇಟಿಯ ನಂತರ ಅವರಿಂದಲೇ ಮಾಹಿತಿ ಪಡೆದು. ಯಾವ ಅಂಗಡಿಯಲ್ಲಿ ಹಸಿರು ಪಟಾಕಿ ಇಲ್ಲವೋ ಅಂತಹ ಅಂಗಡಿಗಳಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ ಇಲ್ಲ ಎಂದು ಖಡಕ್ ಆದೇಶ ನೀಡಿ, ಜೆ.ಕೆ.ಮೈದಾನದಲ್ಲಿದ್ದ ಸಾಮಾನ್ಯ ಪಟಾಕಿ ಅಂಗಡಿಗಳನ್ನು ಮುಚ್ಚಿಸಿದರು. ಅಲ್ಲದೇ ಕೇವಲ ಹಸಿರು ಪಟಾಕಿ ಮಾರಾಟ ಮಾಡಬೇಕು ಎಂದು ಸೂಚಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ