• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಸಚಿವ ಜಗದೀಶ್ ಶೆಟ್ಟರ್‌‌ ನಿವಾಸಕ್ಕೆ ಶಾಸಕ ಮುನಿರತ್ನ ದಿಢೀರ್ ಭೇಟಿ; ಮಂತ್ರಿ ಸ್ಥಾನಕ್ಕಾಗಿ ಏಕಾಂಗಿ ಸಂಚಾರ?

ಸಚಿವ ಜಗದೀಶ್ ಶೆಟ್ಟರ್‌‌ ನಿವಾಸಕ್ಕೆ ಶಾಸಕ ಮುನಿರತ್ನ ದಿಢೀರ್ ಭೇಟಿ; ಮಂತ್ರಿ ಸ್ಥಾನಕ್ಕಾಗಿ ಏಕಾಂಗಿ ಸಂಚಾರ?

ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್ ಭೇಟಿಯಾದ ಮುನಿರತ್ನ.

ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್ ಭೇಟಿಯಾದ ಮುನಿರತ್ನ.

ಕಳೆದ ಬಾರಿ ಉಪ‌ ಚುನಾವಣೆಯಲ್ಲಿ ಗೆದ್ದವರು ಮುನಿರತ್ನ ಬೆಂಬಲಕ್ಕೆ ನಿಲ್ಲುವುದು ಅನುಮಾನವಾಗಿದೆ. ಹೀಗಾಗಿ ಪಕ್ಷದ ಪ್ರಮುಖರ ಮನವೊಲಿಸಲು ಓಡಾಡುತ್ತಿದ್ದಾರೆ. ಮಂತ್ರಿಯಾಗಲು ಏಕಾಂಗಿಯಾಗಿ ಕಸರತ್ತು ನಡೆಸಿರುವ ಮುನಿರತ್ನಗೆ ಜಗದೀಶ್ ಶೆಟ್ಟರ್ ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ ಎನ್ನಲಾಗುತ್ತಿದೆ.

ಮುಂದೆ ಓದಿ ...
  • Share this:

ಹುಬ್ಬಳ್ಳಿ; ಹುಬ್ಬಳ್ಳಿಯಲ್ಲಿ ಸಚಿವ ಜಗದೀಶ್ ಶೆಟ್ಟರ್‌‌ರನ್ನು ನೂತನ ಶಾಸಕ ಮುನಿರತ್ನ ಭೇಟಿಯಾಗಿದ್ದಾರೆ. ಹುಬ್ಬಳ್ಳಿಯ ಮಧುರಾ ಎಸ್ಟೇಟ್‌‌ನಲ್ಲಿರುವ ಶೆಟ್ಟರ್ ನಿವಾಸಕ್ಕೆ ಆಗಮಿಸಿದ ಆರ್‌ಆರ್‌ ನಗರದ ನೂತನ ಶಾಸಕ ಮುನಿರತ್ನ ಜಗದೀಶ್ ಶೆಟ್ಟರ್‌ರನ್ನು ಸನ್ಮಾನಿಸಿದ್ದಾರೆ. ಜಗದೀಶ್ ಶೆಟ್ಟರ್ ಕೂಡ ನೂತನ ಶಾಸಕ ಮುನಿರತ್ನರಿಗೆ ಶಾಲು ಹೊದಿಸಿ, ಪುಷ್ಪಗುಚ್ಛ ನೀಡಿ‌ ಅಭಿನಂದಿಸಿದ್ದಾರೆ.


ಶೆಟ್ಟರ್ ಜೊತೆ ಕೆಲ ಹೊತ್ತು ಚರ್ಚೆ ನಡೆಸಿದ ಮುನಿರತ್ನ ನಂತರ ಬೆಂಗಳೂರಿಗೆ ವಾಪಸಾಗಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ  ಶೆಟ್ಟರ್, ಇದು ಸೌಹಾರ್ದಯುತ ಭೇಟಿ, ನೂತನ ಶಾಸಕರಿಗೆ ಆಶೀರ್ವಾದ ಮಾಡಿ ಕಳಿಸಲಾಗಿದೆ ಎಂದಿದ್ದಾರೆ. ಸಚಿವ ಸ್ಥಾನಕ್ಕೆ ತೀವ್ರ ಪ್ರಯತ್ನ ನಡೆಸಿರುವ ಮುನಿರತ್ನ ದಿಢೀರನೆ ಹುಬ್ಬಳ್ಳಿಗೆ ಆಗಮಿಸಿ ಶೆಟ್ಟರ್‌ರನ್ನು ಭೇಟಿಯಾಗಿರುವುದು ತೀವ್ರ ಕುತೂಹಲ ಕೆರಳಿಸಿದೆ.


ಕಳೆದ ಬಾರಿ ಉಪ‌ ಚುನಾವಣೆಯಲ್ಲಿ ಗೆದ್ದವರು ಮುನಿರತ್ನ ಬೆಂಬಲಕ್ಕೆ ನಿಲ್ಲುವುದು ಅನುಮಾನವಾಗಿದೆ. ಹೀಗಾಗಿ ಪಕ್ಷದ ಪ್ರಮುಖರ ಮನವೊಲಿಸಲು ಓಡಾಡುತ್ತಿದ್ದಾರೆ. ಮಂತ್ರಿಯಾಗಲು ಏಕಾಂಗಿಯಾಗಿ ಕಸರತ್ತು ನಡೆಸಿರುವ ಮುನಿರತ್ನಗೆ ಜಗದೀಶ್ ಶೆಟ್ಟರ್ ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ ಎನ್ನಲಾಗುತ್ತಿದೆ.


ಇದನ್ನು ಓದಿ: ಕ್ರಿಕೆಟ್ ಬೆಟ್ಟಿಂಗ್​ಗೂ ನನಗೂ ಸಂಬಂಧವಿಲ್ಲ, ಇದು ನನ್ನ ವಿರುದ್ಧದ ರಾಜಕೀಯ ಷಡ್ಯಂತ್ರ; ಶಾಸಕ ಮತ್ತಿಮೋಡ


ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹುಬ್ಬಳ್ಳಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ  ಭೂಮಿ ಪೂಜೆ ನೆರವೇರಿಸಿದರು. ಏಳು ಕೋಟಿ ರೂಪಾಯಿ ವೆಚ್ಚದಲ್ಲಿ ಉಣಕಲ್‌- ಮಾರಡಗಿ ಹಾಗೂ ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ಉಣಕಲ್‌- ಹೆಬ್ಬಳ್ಳಿ ರಸ್ತೆ ನಿರ್ಮಾಣದ ಕಾಮಗಾರಿಗೆ ಚಾಲನೆ ನೀಡಿದರು. ‌


ಈ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಹಾನಗರ ಪಾಲಿಕೆ ಮಾಜಿ ಸದಸ್ಯರುಗಳಾದ ಉಮೇಶ್ ಕೌಜಗೇರಿ, ರಾಜಣ್ಣ ಕೊರವಿ, ಮಲ್ಲಿಕಾರ್ಜುನ ಗುಡೂರ, ಲೋಕೋಪಯೋಗಿ ಇಲಾಖೆಯ ಹೆಚ್.ಡಿ.ಗುಂಡಳ್ಳಿ, ಎಸ್.ಪಿ.ಪಾಟೀಲ, ವಿನೂತ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ನಂತರ ಉಣಕಲ್‌ನಿಂದ ಶಿವಳ್ಳಿವರೆಗೆ ನಿರ್ಮಿಸಲಾಗುತ್ತಿರುವ ರಸ್ತೆ ಕಾಮಗಾರಿಯನ್ನು ವೀಕ್ಷಿಸಿದ್ರು. ಸ್ಥಳೀಯರ ಜೊತೆ ಮಾತುಕತೆ ನಡೆಸಿದ್ರು. ತ್ವರಿತವಾಗಿ ಗುಣಮಟ್ಟದ ರಸ್ತೆಯನ್ನು ನಿರ್ಮಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

Published by:HR Ramesh
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು