• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಸಿದ್ದರಾಮಯ್ಯ ರಾಮಮಂದಿರಕ್ಕೆ ದೇಣಿಗೆ ಕೊಟ್ಟಿರುತ್ತಾರೆ ಬಹಿರಂಗಪಡಿಸಲು ಹಿಂದೇಟು; ಎಸ್‌.ಟಿ. ಸೋಮಶೇಖರ್

ಸಿದ್ದರಾಮಯ್ಯ ರಾಮಮಂದಿರಕ್ಕೆ ದೇಣಿಗೆ ಕೊಟ್ಟಿರುತ್ತಾರೆ ಬಹಿರಂಗಪಡಿಸಲು ಹಿಂದೇಟು; ಎಸ್‌.ಟಿ. ಸೋಮಶೇಖರ್

ಎಸ್​.ಟಿ. ಸೋಮಶೇಖರ್​.

ಎಸ್​.ಟಿ. ಸೋಮಶೇಖರ್​.

ಶ್ರೀರಾಮ ಮಂದಿರ ನಿರ್ಮಾಣಕ್ಕೆ ಯಾರೂ ಸಹ ಬಲವಂತವಾಗಿ ದೇಣಿಗೆ ಸಂಗ್ರಹಿಸುತ್ತಿಲ್ಲ, ರಾಜ್ಯ ಹಾಗೂ ದೇಶದ್ಯಾಂತ ಸಂಗ್ರಹವಾಗುತ್ತಿರುವ ಹಣದ ಒಂದೊಂದು ಪೈಸೆ ಸಹ ರಾಮಮಂದಿರಕ್ಕೆ ಉಪಯೋಗವಾಗಲಿದೆ ಎಂದು ಸಚಿವ ಎಸ್​.ಟಿ. ಸೋಮಶೇಖರ್​ ತಿಳಿಸಿದ್ದಾರೆ.

  • Share this:

ಮೈಸೂರು (ಫೆಬ್ರವರಿ 22); ರಾಮ ಮಂದಿರಕ್ಕೆ ದೇಣಿಗೆ ನೀಡುವ ವಿಚಾರ ದೇಶದ ಎಲ್ಲಾ ಭಾಗಕ್ಕಿಂತ ಕರ್ನಾಟಕದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಅದರಲ್ಲೂ ಮಾಜಿ ಸಿಎಂ ಸಿದ್ದರಾಮಯ್ಯ ಅವರ ದೇಣಿಗೆ ಕುರಿತ ಹೇಳಿಕೆಗಳಿಗೆ ಬಿಜೆಪಿ ನಾಯಕರು ಹಾಗೂ ರಾಜ್ಯದ ಬಿಜೆಪಿ ಸರ್ಕಾರದ ಸಚಿವರುಗಳು ಸಿಡಿಮಿಡಿಗೊಂಡಿದ್ದಾರೆ.  ಇಂದು ಮೈಸೂರಿನಲ್ಲಿ ಸಿದ್ದರಾಮಯ್ಯರ ದೇಣಿಗೆ ಹೇಳಿಕೆ ಕುರಿತು ಪ್ರತಿಕ್ರೀಯಿಸಿದ ಸಹಕಾರ ಇಲಾಖೆ ಸಚಿವ ಎಸ್.ಟಿ.ಸೋಮಶೇಖರ್. ಸಿದ್ದರಾಮಯ್ಯ ಅವರು ಸಹ ರಾಮಮಂದಿರಕ್ಕೆ ದೇಣಿಗೆ ಕೊಟ್ಟಿರುತ್ತಾರೆ, ಆದ್ರೆ ಬಹಿರಂಗವಾಗಿ ಹೇಳಲು ಹಿಂದೇಟು ಹಾಕುತ್ತಿರಬಹುದು ಅಂತ ವ್ಯಂಗ್ಯವಾಗಿ ಲೇವಡಿ ಮಾಡಿದ್ದಾರೆ.


ಮೈಸೂರಿನ ಚಾಮಂಡಿಬೆಟ್ಟಕ್ಕೆ ಭೇಟಿ ನೀಡಿದ್ದ ಸಚಿವ ಎಸ್.ಟಿ. ಸೋಮಶೇಖರ್, ರಾಮಮಂದಿರ ವಿಚಾರವಾಗಿ ದೇಣಿಗೆ ಬಗ್ಗೆ ಪ್ರಶ್ನಿಸಿರುವ ಸಿದ್ದರಾಮಯ್ಯರಿಗೆ ವ್ಯಂಗ್ಯವಾಗಿ ಕಾಲೇಳೆದಿದ್ದಾರೆ. ರಾಮಮಂದಿರಕ್ಕೆ ಸಿದ್ದರಾಮಯ್ಯ ಸಹ ದೇಣಿಗೆ ಕೊಟ್ಟಿರುತ್ತಾರೆ, ಆದ್ರೆ ಅದನ್ನ ಬಹಿರಂಗವಾಗಿ ಹೇಳಲು ಹಿಂದೇಟು ಹಾಕಿರುತ್ತಾರೆ ಅಷ್ಟೆ. ಯಾಕಂದ್ರೆ ಸರ್ಕಾರ ಸುಗಮವಾಗಿ ಸಾಗುತ್ತಿದೆ ಅವರಿಗೆ ಬೇರೆ ವಿಚಾರ ಮಾತನಾಡಲು ಸಿಗುತ್ತಿಲ್ಲ, ವಿರೋಧ ಪಕ್ಷದಲ್ಲಿದ್ದುಕೊಂಡುಸರ್ಕಾರದ ಬಗ್ಗೆ ಮಾತನಾಡಲೇಬೇಕು ಅದಕ್ಕಾಗಿ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಇವರೋಬ್ಬರೆ ಅಲ್ಲ ವಿಪಕ್ಷದ ಯಾರೋಬ್ಬರಿಗು ಮಾತನಾಡಲೂ ಏನೂ ಉಳಿದಿಲ್ಲವಾದ್ದರಿಂದ ಇಂತಹ ಹೇಳಿಕೆ ಕೊಡುತ್ತಿದ್ದಾರೆ, ಇದೇಲ್ಲವು ಬಾಯಿ ಚಪಲಕ್ಕೆ ಹೇಳುತ್ತಿರುವ ಹೇಳಿಕೆಗಳು ಎಂದು ತಿರುಗೇಟು ನೀಡಿದರು.


ಶ್ರೀರಾಮ ಮಂದಿರ ನಿರ್ಮಾಣಕ್ಕೆ ಯಾರೂ ಸಹ ಬಲವಂತವಾಗಿ ದೇಣಿಗೆ ಸಂಗ್ರಹಿಸುತ್ತಿಲ್ಲ, ರಾಜ್ಯ ಹಾಗೂ ದೇಶದ್ಯಾಂತ ಸಂಗ್ರಹವಾಗುತ್ತಿರುವ ಹಣದ ಒಂದೊಂದು ಪೈಸೆ ಸಹ ರಾಮಮಂದಿರಕ್ಕೆ ಉಪಯೋಗವಾಗಲಿದೆ. ಎಲ್ಲದಕ್ಕೂಲೆಕ್ಕವನ್ನು ಇಡಲಾಗಿದೆ, ಯಾರು ಬೇಕಾದ್ರು ಲೆಕ್ಕ ಪಡೆದುಕೊಳ್ಳಬಹುದು. ದೇಣಿಗೆ ಸಂಗ್ರಹಿಸಿದ ಮನೆಯ ಸಂಖ್ಯೆ, ಸಹಿ ಪಡೆದು, ಪ್ಯಾನ್ ಸಂಖ್ಯೆಯನ್ನು ನಮೂದಿಸಲಾಗುತ್ತಿದೆ.


ಸಂಪೂರ್ಣ ವ್ಯವವಸ್ಥಿತವಾಗಿ ರಾಮಮಂದಿರಕ್ಕೆ ಹಣ ಸಂಗ್ರಹಿಸಲಾಗುತ್ತಿದೆ. ವಿರೋಧ ಪಕ್ಷದವರು ಹೇಳಿದಂತೆ ಶ್ರೀರಾಮಮಂದಿರಕ್ಕೆ ನೀಡಿದ ದೇಣಿಗೆಯ ಹಣ ದುರುಪಯೋಗವಾಗಿಲ್ಲ, ಖಂಡಿತವಾಗಿಯೂ ದೇಣಿಗೆಯ ಲೆಕ್ಕ ಸಿಗಲಿದೆ ಎಂದು ಸಚಿವ ಎಸ್. ಟಿ.ಸೋಮಶೇಖರ್ ಸ್ಪಷ್ಟನೆ ನೀಡಿದರು.


ಇದನ್ನೂ ಓದಿ: ಸ್ವತಂತ್ರ್ಯ ಸಂಸದ ಮೋಹನ್​ ಡೆಲ್ಕರ್​ ಮುಂಬೈ ಹೋಟೆಲ್​​ನಲ್ಲಿ ಶವವಾಗಿ ಪತ್ತೆ; ಆತ್ಮಹತ್ಯೆ ಶಂಕೆ

top videos


    ರಾಮನೆಂದರೆ ದೇಶದ ಜನರಲ್ಲಿ ಅಪಾರ ಭಕ್ತಿ ಗೌರವ ಇದೆ. ನಾವು ಮನೆಮನೆಗೆ ಹೋಗಿ ಹಣ ಕೇಳಿದಾಗ, ಯಾರೋಬ್ಬರು ಹಣ ಇಲ್ಲ ಅಂತ ಹೇಳಿಲ್ಲ, ಬದಲಿಗೆ ನಾವು ಕೇಳಿದಕ್ಕಿಂತ ಹೆಚ್ಚಿನ ಹಣ ಕೊಡ್ತಿದ್ದಾರೆ. ಸಿದ್ದರಾಮಯ್ಯ ಅವರು ಕೊಡೊಲ್ಲ ಅಂದ್ರೆ ಅವರದ್ದು ಒಂಥರ ಸಪರೇಟ್ ಇದ್ದಂಗೆ. ಆದ್ರೆ ಯಾರು ಸಹ ಮಂದಿರಕ್ಕೆ ಹಣ ಕೊಡೋಲ್ಲ ಅಂತ ಇವತ್ತಿನವರೆಗೆ ಹೇಳಿಲ್ಲ. ಜಾತಿ, ಮತ ಎನ್ನದೆ ಎಲ್ಲರು ಹಣ ನೀಡುತ್ತಿದ್ದು ಮಂದಿರಕ್ಕೆ ಸಂಗ್ರಹಿಸಿದ ಹಣ ಮಂದಿರ ಕಟ್ಟುವುದಕ್ಕೆ ಬಳಕೆಯಾಗಲಿದೆ ಎಂದು ತಿಳಿಸಿದರು.


    ಇದೆ ವೇಳೆ ಚಾಮುಂಡಿಬೆಟ್ಟದಲ್ಲಿನ  ಚಾಮುಂಡೇಶ್ವರಿ ರಥೋತ್ಸವಕ್ಕೆ ನೂತನ ಲಿಫ್ಟ್ ಅನ್ನ ಲೋಕಾರ್ಪಣೆ ಮಾಡಲಾಯಿತು, ಮೈಸೂರು ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್,  ಸಂಸದ ಪ್ರತಾಪ್‌ಸಿಂಹರಿಂದ ನೂತನ ಲಿಫ್ಟ್‌ಗೆ ಪೂಜೆ ಸಲ್ಲಿಸಿ ಲೋಕಾರ್ಪಣೆ ಮಾಡಿದರು. ರಥೋತ್ಸವ ಸಂದರ್ಭದಲ್ಲಿ ಉತ್ಸವ ಮೂರ್ತಿ ಸಾಗಿಸಲು ಉಪಯೋಗಿಸುವ ಲಿಫ್ಟ್ ಅನ್ನ ಮಹಾರಾಜ ಕಾಲದಲ್ಲಿ ಉತ್ಸವ ಮೂರ್ತಿ ಸಾಗಿಸಲು ಮರದಲ್ಲಿ ನಿರ್ಮಿಸಲಾಗಿತ್ತು. ಅದು ದರುಸ್ಥಿಯಾಗಿದ್ದ ಹಿನ್ನೆಲೆಯಲ್ಲಿ ಇದೀಗ ಅದೆ ಮಾದರಿಯ ಕಬ್ಬಿಣದ ಲಿಫ್ಟ್ ತಯಾರಿಸಿದ್ದು, ಮೈಸೂರು ರೈಲ್ವೆ ವರ್ಕ್‌ಶಾಪ್‌ನಲ್ಲೆ ನಿರ್ಮಾಣವಾಗಿರುವ ಈ ಲಿಫ್ಟ್ ಗೆ 5 ಲಕ್ಷ ವೆಚ್ಚವಾಗಿದೆ ಎಂದು ದೇವಾಲಯದ ಮೂಲಗಳು ತಿಳಿಸಿವೆ.

    First published: