• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • Kodagu Rains: ಕೊಡಗಿನಲ್ಲಿ ಭಾರೀ ಮಳೆಗೆ ಬಿರುಕು ಬಿಟ್ಟ ಸೇತುವೆಗಳು; ಹಲವೆಡೆ ಗುಡ್ಡ ಕುಸಿತ, ಆತಂಕದಲ್ಲಿ ಜನರು

Kodagu Rains: ಕೊಡಗಿನಲ್ಲಿ ಭಾರೀ ಮಳೆಗೆ ಬಿರುಕು ಬಿಟ್ಟ ಸೇತುವೆಗಳು; ಹಲವೆಡೆ ಗುಡ್ಡ ಕುಸಿತ, ಆತಂಕದಲ್ಲಿ ಜನರು

ಬಿರುಕು ಬಿಟ್ಟಿರುವ ರಸ್ತೆ-ಗುಡ್ಡ ಕುಸಿತ

ಬಿರುಕು ಬಿಟ್ಟಿರುವ ರಸ್ತೆ-ಗುಡ್ಡ ಕುಸಿತ

ಭೂಕುಸಿತವಾಗಿರುವ ಪ್ರದೇಶಗಳಲ್ಲಿ ಈಗಲೂ ಭೂಮಿಯೊಳಗಿಂದ ಭಾರೀ ಶಬ್ಧ ಬರುತ್ತಿದ್ದು ಜನರು ಆತಂಕದಲ್ಲಿ ಕಾಲ ದೂಡುವಂತಾಗಿದೆ. ಅಲ್ಲದೆ ಭಾರೀ ಮಳೆಗೆ  ಭೂಮಿ ಕುಸಿದಿದ್ದರಿಂದ ಆ ಒತ್ತಡಕ್ಕೆ ಮನೆಗಳು ಬಿರುಕುಬಿಟ್ಟಿದ್ದು, ಕುಸಿದು ಬೀಳುವ ಸ್ಥಿತಿ ತಲುಪಿವೆ.

  • Share this:

ಕೊಡಗು(ಆ.10): ಕೊಡಗು ಜಿಲ್ಲೆಯ ಮಡಿಕೇರಿ ಮತ್ತು ಸೋಮವಾರಪೇಟೆ ತಾಲ್ಲೂಕಿನ ಹಲವೆಡೆ ಕಳೆದ ಎರಡು ಮೂರು ದಿನಗಳಲ್ಲಿ ಸುರಿದ ಭಾರೀ ಮಳೆಗೆ  ಹಮ್ಮಿಯಾಲ, ಆವಂಡಿ, ಮುಟ್ಲುು,  ಮತ್ತು ಮುಕ್ಕೋಡ್ಲು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮೂರು ಸೇತುವೆಗಳು ಸಂಪೂರ್ಣ ಬಿರುಕು ಬಿಟ್ಟಿವೆ. ಪರಿಣಾಮವಾಗಿ ಈ ಮೂರು ಗ್ರಾಮಗಳ ಸಂಪರ್ಕ ದುಸ್ತರವಾಗಿದ್ದು, ಜನರು ಪರದಾಡುವಂತಾಗಿದೆ.


ಮುಕ್ಕೋಡ್ಲು, ಹಮ್ಮಿಯಾಲ, ಆವಂಡಿ ಮತ್ತು ಮುಟ್ಲು ಗ್ರಾಮಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ಕುಟುಂಬಗಳಿದ್ದು ಅಷ್ಟು ಕುಟುಂಬಗಳು ಈಗ ನಡೆದುಕೊಂಡೇ ಓಡಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಭಾರೀ ಮಳೆ ಸುರಿದ ಪರಿಣಾಮ ಹೊಳೆಗಳು ತುಂಬಿ ಹರಿದಿದ್ದು, ನೀರಿನ ರಭಸಕ್ಕೆ ಸೇತುವೆಗಳು ಸಂಪೂರ್ಣ ಬಿರುಕು ಬಿಟ್ಟಿವೆ. ಮುಟ್ಲು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಬಹುತೇಕ ಕುಸಿದು ಹಾಗೆ ನಿಂತಿದೆ. ಸದ್ಯ ಅಪಾಯದ ಸ್ಥಿತಿಯಲ್ಲಿರುವ ಸೇತುವೆಗಳ ಮೇಲೆ ಜನರು ನಡೆದುಕೊಂಡೆ ಓಡಾಡುತ್ತಿದ್ದಾರೆ.


ಇದನ್ನೂ ಓದಿ:Karnataka Weather Today: ರಾಜ್ಯದಲ್ಲಿ ಇಂದು ಭಾರೀ ಮಳೆ; ಬೆಂಗಳೂರಿಗರು ಸಂಜೆ ವೇಳೆಗೆ ಮನೆ ಸೇರಿಕೊಳ್ಳುವುದು ಒಳಿತು..!


ಇನ್ನು ಮೇರಿಯಂಡ ತೋಟದ ಬಳಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿದಿದ್ದು, ರಸ್ತೆ ಬಹುತೇಕ ಬಂದ್ ಆಗಿದೆ. ರಸ್ತೆ ಮೇಲಿದ್ದ ಮಣ್ಣನ್ನು ಸ್ವಲ್ಪ ತೆರವು ಮಾಡಲಾಗಿದ್ದು, ಜನರು ಓಡಾಡಲು ಸಾಧ್ಯವಾಗುವಂತೆ ಮಾಡಲಾಗಿದೆ. ಸೋಮವಾರ ಸ್ಥಳಕ್ಕೆ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಭೇಟಿ ನೀಡಿ ಹಮ್ಮಿಯಾಲ, ಆವಂಡಿ ಮತ್ತು ಮುಟ್ಲು ಗ್ರಾಮಗಳಲ್ಲಿ ಮಳೆಯಿಂದ ತೊಂದರೆಗೆ ಈಡಾಗಿರುವ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿದರು.


ಭೂಕುಸಿತವಾಗಿರುವ ಪ್ರದೇಶಗಳಲ್ಲಿ ಈಗಲೂ ಭೂಮಿಯೊಳಗಿಂದ ಭಾರೀ ಶಬ್ಧ ಬರುತ್ತಿದ್ದು ಜನರು ಆತಂಕದಲ್ಲಿ ಕಾಲ ದೂಡುವಂತಾಗಿದೆ. ಅಲ್ಲದೆ ಭಾರೀ ಮಳೆಗೆ  ಭೂಮಿ ಕುಸಿದಿದ್ದರಿಂದ ಆ ಒತ್ತಡಕ್ಕೆ ಮನೆಗಳು ಬಿರುಕುಬಿಟ್ಟಿದ್ದು, ಕುಸಿದು ಬೀಳುವ ಸ್ಥಿತಿ ತಲುಪಿವೆ.


ಇನ್ನು ರೈತರ ನೂರಾರು ಎಕರೆಯ ವಿವಿಧ ಬೆಳೆಗಳು ಹಾಳಾಗಿವೆ. ಕಾಫಿ, ಏಲಕ್ಕಿ ಬೆಳೆ ಕೊಳೆ ರೋಗಕ್ಕೆ ಸಂಪೂರ್ಣ ಹಾಳಾಗಿವೆ. ನಾಟಿ ಮಾಡಿದ್ದ ಭತ್ತದ ಗದ್ದೆಗಳಲ್ಲಿ ಭಾರೀ ಪ್ರಮಾಣದಲ್ಲಿ ನೀರು ತುಂಬಿಕೊಂಡು ಕರಗಿ ಹೋಗಿವೆ. ಹೀಗಾಗಿಿ ಈ ಭಾಗದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರೆಲ್ಲರಿಗೂ ಎನ್ ಡಿಆರ್ ಎಫ್ ನಿಯಮಗಳ ಪ್ರಕಾರ ಪರಿಹಾರ ವಿತರಿಸಲಾಗುವುದು. ಜೊತೆಗೆ ಮಳೆ ಹಾನಿ ಅನುದಾನದಲ್ಲಿ ಕೂಡಲೇ ಸೇತುವೆಗಳ ಮರು ನಿರ್ಮಿಸಲಾಗುವುದು ಎಂದಿದ್ದಾರೆ.


ಇದನ್ನೂ ಓದಿ:Health Tips: ಹಸಿ ಈರುಳ್ಳಿ ನೋಡಿದ್ರೆ ದೂರ ಹೋಗ್ತೀರಾ? ಅದರ ಪ್ರಯೋಜನ ಕೇಳಿದ್ರೆ ಈಗಿನಿಂದಲೇ ತಿನ್ನೋಕೆ ಶುರು ಮಾಡ್ತೀರಾ..!


ಮೇರಿಯಂಡ ತೋಟದ ಬಳಿ ಭೂಮಿ ಕುಸಿಯುವ ಮೊದಲು ಭಾರೀ ಶಬ್ಧ ಬಂದಿತು. ಏನಾಯಿತೆಂತು ನೋಡುವಷ್ಟರಲ್ಲಿ ಗುಡ್ಡ ಕುಸಿದಿತ್ತು. ನಮ್ಮ ಮನೆಗಳ ಬಳಿಯೂ ಭೂಮಿ ಒಳಗಿಂದ ಭಾರೀ ಶಬ್ಧ ಬರುತ್ತಿದೆ. ಇದು ನಮಗೂ ಸಾಕಷ್ಟು ಆತಂಕ ಮೂಡಿಸಿದೆ. ಹೆದರಿಕೆಯಲ್ಲೇ ಜೀವನ ಮಾಡಬೇಕಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.


ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಈ ಭಾರಿ ಅಂತಹ ಭೀಕರ ಮಳೆ ಸುರಿಯದಿದ್ದರೂ ಸುರಿದ ಸಾಧಾರಣ ಮಳೆಗೆ ಹಲವೆಡೆ ಮತ್ತೆ ಮತ್ತೆ ಅನಾಹುತಗಳು ಸಂಭವಿಸುತ್ತಿದ್ದು ಇನ್ನೂ ಒಂದು ತಿಂಗಳು ಮಳೆ ಸುರಿಯುವ ಸಾಧ್ಯತೆ ಇದೆ. ಹೀಗಾಗಿ ಜನರಲ್ಲಿ ಆತಂಕ ಇದ್ದೇ ಇದೆ.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

Published by:Latha CG
First published: