Kodagu Rain: ಭಾರೀ ಮಳೆಗೆ ಭೂಕುಸಿತ; ತಲಕಾವೇರಿ ಬಾಗಮಂಡಲ ಸಂಪರ್ಕ ಸಂಪೂರ್ಣ ಬಂದ್
Karnataka Rain: ತಲಕಾವೇರಿ ಬಾಗಮಂಡಲ ಸುತ್ತಮುತ್ತ ಬರೋಬ್ಬರಿ 75 ಇಂಚು ಮಳೆಯಾಗಿದೆ. ಹೀಗಾಗಿ ಕಾವೇರಿ ನದಿ ತುಂಬಿ ಹರಿಯುತ್ತಿದ್ದು, ಬಾಗಮಂಡಲದ ತ್ರಿವೇಣಿ ಸಂಗಮ ಭರ್ತಿಯಾಗಿದೆ. ಅಲ್ಲದೆ ಬಾಗಮಂಡಲ ನಾಪೋಕ್ಲು ರಸ್ತೆಯಲ್ಲಿ ಮೇಲೆ ನೀರು ಹರಿಯುತ್ತಿದ್ದು, ಬಾಗಮಂಡಲ ನಾಪೋಕ್ಲು ರಸ್ತೆ ಸಂಪರ್ಕ ಕಡಿತವಾಗಿದೆ.
ಕೊಡಗು : ಜಿಲ್ಲೆಯ ಭಾಗಮಂಡಲ, ತಲಕಾವೇರಿ ಸೇರಿದಂತೆ ಸುತ್ತಮುತ್ತ ಭಾರೀ ಮಳೆ ಸುರಿದ ಪರಿಣಾಮ ತಲಕಾವೇರಿ ಚೇರಂಗಾಲ ಮಧ್ಯೆ ಹೆದ್ದಾರಿಯಲ್ಲಿ ಭಾರೀ ಭೂಕುಸಿತ ಉಂಟಾಗಿದೆ.
ಬೆಟ್ಟದ ಮೇಲಿನ ವ್ಯೂವ್ ಪಾಯಿಂಟ್ ಸ್ಥಳದಿಂದ ಭೂಕುಸಿತವಾಗಿದ್ದು, ಭಾರೀ ಗಾತ್ರದ ಮರ, ಮಣ್ಣು ಮತ್ತು ಕಲ್ಲುಗಳು ರಸ್ತೆಗೆ ಉರುಳಿವೆ. ಹೀಗಾಗಿ ಚೇರಂಗಾಲ, ತಲಕಾವೇರಿ ಮತ್ತು ತಲಕಾವೇರಿ ಹಾಗೂ ಬಾಗಮಂಡಲ ರಸ್ತೆ ಸಂಪರ್ಕ ಬಂದ್ ಆಗಿದೆ. ಭೂಕುಸಿತವಾಗಿರುವ ಸ್ಥಳದಿಂದ ನೀರು ಹರಿಯುತ್ತಿದ್ದು ಮತ್ತಷ್ಟು ಭೂ ಕುಸಿತವಾಗುವ ಆತಂಕ ಎದುರಾಗಿದೆ.
ಇನ್ನು ತಲಕಾವೇರಿ ಬಾಗಮಂಡಲ ಸುತ್ತಮುತ್ತ ಬರೋಬ್ಬರಿ 75 ಇಂಚು ಮಳೆಯಾಗಿದೆ. ಹೀಗಾಗಿ ಕಾವೇರಿ ನದಿ ತುಂಬಿ ಹರಿಯುತ್ತಿದ್ದು, ಬಾಗಮಂಡಲದ ತ್ರಿವೇಣಿ ಸಂಗಮ ಭರ್ತಿಯಾಗಿದೆ. ಅಲ್ಲದೆ ಬಾಗಮಂಡಲ ನಾಪೋಕ್ಲು ರಸ್ತೆಯಲ್ಲಿ ಮೇಲೆ ನೀರು ಹರಿಯುತ್ತಿದ್ದು, ಬಾಗಮಂಡಲ ನಾಪೋಕ್ಲು ರಸ್ತೆ ಸಂಪರ್ಕ ಕಡಿತವಾಗಿದೆ.
ಮತ್ತೊಂದೆಡೆ ಮಡಿಕೇರಿಯಲ್ಲಿ ಮಂಗಳವಾರ ಬೆಳಿಗ್ಗೆಯಿಂದಲೂ ಮಳೆ ಬಿಟ್ಟು ಸುರಿದಿದ್ದು ಮಡಿಕೇರಿ ಆಕಾಶವಾಣಿ ಬಳಿ ಬರೆ ಕುಸಿದಿದೆ. 2018 ರಲ್ಲಿ ಬರೆಕುಸಿದಿದ್ದ ಸ್ಥಳದಲ್ಲೇ ಈ ಬಾರಿಯೂ ಮತ್ತೆ ಬರೆ ಕುಸಿದಿದೆ. ಹಿಂದೆಯೇ ಬರೆ ಕುಸಿದಿದ್ದರಿಂದ ಮಳೆಗಾಲದ ಸಂದರ್ಭ ಬರೆ ಕುಸಿಯದಂತೆ ತಡೆಗೋಡೆ ನಿರ್ಮಿಸಲಾಗುತಿತ್ತು. ಈ ವೇಳೆ ಬಾರೀ ಪ್ರಮಾಣದ ಮಣ್ಣು ಜಾರಿದೆ.
ಅದೃಷ್ಟವಷಾತ್ ಕಾಮಗಾರಿ ಮಾಡುತ್ತಿದ್ದ ಕಾರ್ಮಿಕರು ಸ್ಥಳದಿಂದ ಓಡಿದ್ದಾರೆ. ಇದರಿಂದ ಕಾರ್ಮಿಕರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಒಟ್ಟಿನಲ್ಲಿ ಕೊಡಗಿನಲ್ಲಿ ಸುರಿಯುತ್ತಿರುವ ಮಳೆಗೆ ಜಿಲ್ಲೆಯಲ್ಲಿ ಹಲವೆಡೆ ಭೂ ಕುಸಿತ ಮತ್ತು ಬರೆ ಕುಸಿದಂತಹ ಘಟನೆಗಳು ನಡೆಯುತ್ತಿರುವುದು ಜನರಲ್ಲಿ ಕಳೆದ ವರ್ಷದ ನೆರೆಯನ್ನು ನೆನಪಿಸುತ್ತಿದೆ. ಅಲ್ಲದೆ, ಭಯಕ್ಕೂ ಕಾರಣವಾಗಿದೆ.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ