• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಸರ್ಕಾರದ ನಿರ್ದೇಶನದ ಹೊರತಾಗಿ ಫೀಸ್ ವಸೂಲಿ, ಅಂಕಪಟ್ಟಿ ಕೊಡದೆ ವಿದ್ಯಾರ್ಥಿಗಳ ಜೊತೆ ಖಾಸಗಿ ಶಾಲೆ ಚೆಲ್ಲಾಟ

ಸರ್ಕಾರದ ನಿರ್ದೇಶನದ ಹೊರತಾಗಿ ಫೀಸ್ ವಸೂಲಿ, ಅಂಕಪಟ್ಟಿ ಕೊಡದೆ ವಿದ್ಯಾರ್ಥಿಗಳ ಜೊತೆ ಖಾಸಗಿ ಶಾಲೆ ಚೆಲ್ಲಾಟ

ಶಾಲೆಯ ಮುಂದೆ ಪ್ರತಿಭಟನೆ ನಡೆಸಿದ ಪೋಷಕರು.

ಶಾಲೆಯ ಮುಂದೆ ಪ್ರತಿಭಟನೆ ನಡೆಸಿದ ಪೋಷಕರು.

ಫೀಸ್ ಗಾಗಿ ಒತ್ತಡ ಹಾಕಬಾರದೆಂದು ಸರ್ಕಾರ ಸೂಚಿಸಿದ್ದರೂ, ಸೇಂಟ್ ಆ್ಯಂಥೊನಿ ಶಾಲೆ ಅದನ್ನು ಧಿಕ್ಕರಿಸೋ ರೀತಿಯಲ್ಲಿ ವರ್ತಿಸ್ತಿದೆ ಎಂದು ಶಾಲಾ ಆಡಳಿತ ಮಂಡಳಿ ಕಾರ್ಯ ವೈಖರಿಗೆ ಪೋಷಕರು ಮತ್ತು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  • Share this:

ಹುಬ್ಬಳ್ಳಿ; ಫೀಸ್ ವಿಷಯದಲ್ಲಿ ರಾಜ್ಯ ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ. ಇದರ ಹೊರತಾಗಿಯೂ ಕೆಲ ಖಾಸಗಿ ಶಾಲೆಗಳು ಪೂರ್ತಿ ಫೀಸ್ ಕಟ್ಟುವಂತೆ ತಾಕೀತು ಮಾಡಿವೆ. ಫೀಸ್ ಕೊಡದವರಿಗೆ ಮಾರ್ಕ್ಸ್ ಕಾರ್ಡ್ ನೀಡದೇ ಸತಾಯಿಸುತ್ತಿವೆ. ಪೂರ್ತಿ ಫೀಸ್ ಕಟ್ಟಿಲ್ಲವೆಂದು ವಿದ್ಯಾರ್ಥಿಗಳ ಅಂಕಪಟ್ಟಿ ನೀಡಲು ಶಾಲೆ ನಿರಾಕರಿಸಿರೋ ಘಟನೆ ಹುಬ್ಬಳ್ಳಿಯ ಕಾಳಿದಾಸ ನಗರದಲ್ಲಿ ನಡೆದಿದೆ. ಕಾಳಿದಾಸ ನಗರದ ಸೇಂಟ್ ಅಂಥೋನಿ ಪಬ್ಲಿಕ್ ಶಾಲೆಯಲ್ಲಿ ಘಟನೆ ಬೆಳಕಿಗೆ ಬಂದಿದೆ.


ಕಳೆದ ವರ್ಷ ಸೇಂಟ್ ಆ್ಯಂಥೋನಿ ಶಾಲೆ ವಾರ್ಷಿಕ 18 ಸಾವಿರ ರೂಪಾಯಿ ಫೀಸ್ ನಿಗದಿಗೊಳಿಸಿತ್ತು. ಈ ಪೈಕಿ ಹತ್ತು ಸಾವಿರ ರೂಪಾಯಿ ಟ್ಯೂಷನ್ ಫೀಸ್ ಎಂದು ನಿಗದಿಪಡಿಸಲಾಗಿತ್ತು. ಆದರೆ ರಾಜ್ಯ ಸರ್ಕಾರ ಕೇವಲ ಶೇ. 70 ಬೋಧನಾ ಶುಲ್ಕ ಪಡೆಯುವಂತೆ ಆದೇಶಿಸಿತ್ತು. ಶಾಲೆ ಈಗಾಗಲೇ ಪೋಷಕರಿಂದ 9 ಸಾವಿರ ರೂಪಾಯಿ ಕಟ್ಟಿಸಿಕೊಂಡಿದೆ. ಸರ್ಕಾರದ ಆದೇಶದ ಪ್ರಕಾರ 7 ಸಾವಿರ ರೂಪಾಯಿ ಟ್ಯೂಶನ್ ಫೀಸ್ ಆಗುತ್ತೆ. ಸರ್ಕಾರದ ಆದೇಶಕ್ಕಿಂತ 2 ಸಾವಿರ ರೂಪಾಯಿ ಈಗಾಗಲೇ ಹೆಚ್ಚು ಪಾವತಿಸಲಾಗಿದೆ. ಇಷ್ಟಾದರೂ ಪೂರ್ತಿ ಫೀಸ್ ಕಟ್ಟುವಂತೆ ಪೋಷಕರ ಮೇಲೆ ಒತ್ತಡ ತರುತ್ತಿದೆ ಎಂದು ಆರೋಪಿಸಲಾಗಿದೆ. ಪೂರ್ತಿ ಫೀಸ್ ಕಟ್ಟಿಲ್ಲವೆಂದು ಅಂಕಪಟ್ಟಿ ನೀಡಲು ನಿರಾಕರಿಸಲಾಗಿದೆ ಎಂದು ಶಾಲಾ ಆಡಳಿತ ಮಂಡಳಿ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಸರ್ಕಾರ ನಿಗದಿಗೊಳಿಸಿದ ಫೀಸ್ ಗಿಂತ ಹೆಚ್ಚು ಹಣ ಕಟ್ಟಿದ್ದೇವೆ. ಮತ್ತೇಕೆ ಹಣ ಕಟ್ಟಬೇಕೆಂದು ಪಾಲಕರು ಪ್ರಶ್ನಿಸಿದ್ದಾರೆ.


ಇದನ್ನು ಓದಿ: West Bengal Election 2021: ಟಿಎಂಸಿ ಸಮೀಕ್ಷೆ ಪ್ರಕಾರವೂ ಬಿಜೆಪಿಗೇ ಗೆಲುವು; ಬಿರುಗಾಳಿ ಎಬ್ಬಿಸಿದ ಪ್ರಶಾಂತ್ ಕಿಶೋರ್ ಆಡಿಯೋ!


ಶಾಲೆಯ ಆಡಳಿತ ಮಂಡಳಿ ಸದಸ್ಯರು ಅನುಚಿತವಾಗಿ ವರ್ತಿಸಿದ್ದಾರೆಂದ ಕಿಡಿಕಾರಿದ್ದಾರೆ. ಶಾಲೆ ಮುಂದೆ ಜಮಾವಣೆಗೊಂಡ ಪೋಷಕರಿಂದ ಆಕ್ರೋಶ ವ್ಯಕ್ತವಾಗಿದೆ. ಶಾಲೆಯ ಒತ್ತಡ ತಂತ್ರದಿಂದ ಮಕ್ಕಳೂ ಮಂಕಾಗುವಂತಾಗಿದೆ. ಫೀಸ್ ಗಾಗಿ ಒತ್ತಡ ಹಾಕಬಾರದೆಂದು ಸರ್ಕಾರ ಸೂಚಿಸಿದ್ದರೂ, ಸೇಂಟ್ ಆ್ಯಂಥೊನಿ ಶಾಲೆ ಅದನ್ನು ಧಿಕ್ಕರಿಸೋ ರೀತಿಯಲ್ಲಿ ವರ್ತಿಸ್ತಿದೆ ಎಂದು ಶಾಲಾ ಆಡಳಿತ ಮಂಡಳಿ ಕಾರ್ಯ ವೈಖರಿಗೆ ಪೋಷಕರು ಮತ್ತು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಈ ಸಂಬಂಧ ಮಧ್ಯ ಪ್ರವೇಶ ಮಾಡುವ ಮೂಲಕ ಖಾಸಗಿ ಶಾಲೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಪೋಷಕರು ಆಗ್ರಹಿಸಿದ್ದಾರೆ. ಆದರೆ ಪೂರ್ತಿ ಕಟ್ಟಬೇಕೆಂದು ಶಾಲಾ ಆಡಳಿತ ಮಂಡಳಿ ವಾದ ಮಾಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಶಾಲೆಯ ಅಧ್ಯಕ್ಷ ಕೆ.ಎ.ಪ್ರಸಾದ್,  ಸರ್ಕಾರದ ಆದೇಶ ಸರಿಯಿಲ್ಲವೆಂದು ಖಾಸಗಿ ಶಾಲೆಗಳು ಕೋರ್ಟ್ ಮೊರೆ ಹೋಗಿವೆ. ಪೂರ್ತಿ ಫೀಸ್ ಕಟ್ಟಬೇಕೆಂದು ಸುಪ್ರೀಂ ಕೋರ್ಟ್ ಸಹ ತಿಳಿಸಿದೆ. ಕರ್ನಾಟಕ ಹೈಕೋರ್ಟ್ ಈಗಾಗಲೇ ರಾಜ್ಯ ಸರ್ಕಾರಕ್ಕೆ ನೋಟೀಸ್ ಸಹ ನೀಡಿದೆ. ಹೀಗಾಗಿ ಪೋಷಕರು ಪೂರ್ತಿ ಕಟ್ಟಲೇಬೇಕು. ಒಂದು ವೇಳೆ ಕೋರ್ಟ್ ಸರ್ಕಾರದ ಆದೇಶವನ್ನು ಪಾಲಿಸುವಂತೆ ಸೂಚಿಸಿದರೆ ಹಣ ವಾಪಸ್ ಕೊಡುತ್ತೇವೆ. ಸದ್ಯಕ್ಕೆ ಪೂರ್ತಿ ಫೀಸ್ ಕಟ್ಟಲೇಬೇಕೆಂದು ಶಾಲೆಯ ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ.

  • ವರದಿ - ಶಿವರಾಮ ಅಸುಂಡಿ

First published: