• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಶಾಸ್ತ್ರೋಕ್ತವಾಗಿ ಹಾಸನಾಂಬ ದೇವಿ‌ ದೇಗುಲದ ಬಾಗಿಲು ಮುಚ್ಚಿದ ಜಿಲ್ಲಾಡಳಿತ; ಮತ್ತೆ ತೆರೆಯುವುದು ಮುಂದಿನ ವರ್ಷ

ಶಾಸ್ತ್ರೋಕ್ತವಾಗಿ ಹಾಸನಾಂಬ ದೇವಿ‌ ದೇಗುಲದ ಬಾಗಿಲು ಮುಚ್ಚಿದ ಜಿಲ್ಲಾಡಳಿತ; ಮತ್ತೆ ತೆರೆಯುವುದು ಮುಂದಿನ ವರ್ಷ

ಹಾಸನಾಂಬೆ ದೇಗುಲ

ಹಾಸನಾಂಬೆ ದೇಗುಲ

ದೇವಿಯನ್ನು ಪೂಜಿಸಿ ಪ್ರಾರ್ಥನೆ ಮಾಡಿ ದೇವಾಲಯದ ಗರ್ಭಗುಡಿಯಲ್ಲಿ ದೀಪವನ್ನು ಹಚ್ಚಲಾಗಿದೆ. ಈ ವರ್ಷ ಹಚ್ಚಿದ ದೀಪ ಮುಂದಿನ ವರ್ಷದವರೆಗೆ ಉರಿಯುತ್ತಿರುತ್ತದೆ ಅನ್ನೋ ನಂಬಿಕೆಯಿದೆ. ಮುಂದಿನ ವರ್ಷ 2021 ಕ್ಕೆ ದೇವಾಲಯದ ಬಾಗಿಲು ತೆರೆಯಲಿದ್ದು, ಇನ್ನೂ ದಿನಾಂಕ ನಿಗದಿಯಾಗಿಲ್ಲ. ಮುಂದಿನ ಕೆಲ ದಿನಗಳಲ್ಲಿ ಪಂಚಾಂಗದ ಪ್ರಕಾರ ಜ್ಯೋತಿಷಿಗಳ ಮಾಹಿತಿ ಪಡೆದು ಮುಂದಿನ ವರ್ಷದ ಜಾತ್ರಾ ಮಹೋತ್ಸವದ ದಿನಾಂಕವನ್ನು ಜಿಲ್ಲಾಡಳಿತ ಪ್ರಕಟಿಸಲಿದೆ. 

ಮುಂದೆ ಓದಿ ...
  • Share this:

ಹಾಸನ; ಹಾಸನದ ಹಾಸನಾಂಬ ದೇವಿ ದೇವಾಲಯದ ಬಾಗಿಲು ತೆರೆದು ಇಂದಿಗೆ 11 ದಿನವಾಗಿದ್ದು, ಇಂದು ಮಧ್ಯಾಹ್ನ ದೇವಾಲಯದ ಬಾಗಿಲು ಮುಚ್ಚಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ, ಜಿಲ್ಲಾಧಿಕಾರಿ ಮತ್ತು ದೇವಾಲಯದ ಪ್ರಮುಖರ ಮುಂದಾಳತ್ವದಲ್ಲಿ ಇಂದು ಮಧ್ಯಾಹ್ನ 1 ಗಂಟೆ 30 ನಿಮಿಷಕ್ಕೆ ಸರಿಯಾಗಿ ಶಾಸ್ತ್ರೋಕ್ತವಾಗಿ ದೇವಾಲಯದ ಬಾಗಿಲು ಮುಚ್ಚಿ, ಬೀಗ ಮುದ್ರೆ ಹಾಕಲಾಯಿತು. ಕೊರೋನಾ ಹಾವಳಿಯಿಂದಾಗಿ ಈ ಬಾರಿ ದೇವಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಿರಲಿಲ್ಲ. ನಿನ್ನೆ ಮತ್ತು ಇಂದು ದೀಪಾವಳಿ ಹಬ್ಬವಾಗಿದ್ದರಿಂದ ಎರಡು ದಿನಗಳ ಕಾಲ ಮಾತ್ರ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.


ನವೆಂಬರ್ 5 ರಂದು ಮಧ್ಯಾಹ್ನ 12 ಗಂಟೆ 45 ನಿಮಿಷಕ್ಕೆ ಸರಿಯಾಗಿ ದೇವಾಲಯದ ಬಾಗಿಲು ತೆರೆಯಲಾಯಿತು.  11 ದಿನ ಪೂಜೆಯ ಬಳಿಕ ಇಂದು ಮಧ್ಯಾಹ್ನ 1 ಗಂಟೆ 30 ನಿಮಿಷಕ್ಕೆ ದೇವಾಲಯದ ಗರ್ಭಗುಡಿಗೆ ಬೀಗ ಹಾಕಿ ಮುದ್ರೆ ಹಾಕಲಾಯಿತು. ಇದಕ್ಕೂ ಮುನ್ನ ಅರ್ಚಕರು ದೇವಿಗೆ ನೈವೇದ್ಯ ಮತ್ತು ವಿವಿಧ ಪೂಜಾ ಕೈಂಕಯಗಳನ್ನು ನೆರವೇರಿಸಿದರು. ವಿಶ್ವರೂಪ ದರ್ಶನ ನೀಡಿದ ಬಳಿಕ ಮಾತೆ ಹಾಸನಾಂಬ ದೇವಾಲಯವನ್ನು ಇಂದು ಮುಚ್ಚಲಾಗಿದೆ. ಇಂದೂ ಕೂಡ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆಯಲು ಕಾತರರಾಗಿದ್ದರು. ಉಸ್ತುವಾರಿ ಸಚಿವರ ಸೂಚನೆಯಂತೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಯಿತು.


ಇಂದು 1 ಗಂಟೆ 30 ನಿಮಿಷಕ್ಕೆ ಸರಿಯಾಗಿ ದೇವಾಲಯದ ಗರ್ಭಗುಡಿಯ ಬಾಗಿಲು ಮುಚ್ಚಲಾಗಿದೆ. ಇದಕ್ಕೂ ಮುನ್ನ ಅರ್ಚಕರು ದೇವಿಯನ್ನು ನೆನೆದು ಪ್ರಾರ್ಥನೆ ಮಾಡಿ ದೇವಾಲಯದಲ್ಲಿ ದೀಪ ಹಚ್ಚಿ, ದೇವಿಗೆ ಅನ್ನವನ್ನು ಎಡೆ ಇಟ್ಟರು ಮತ್ತು ಹೂವನ್ನು ಹಾಕಿದರು. ಈ ದೇವಾಲಯದ ವಿಶೇಷ ಅಂದರೆ ಈ ವರ್ಷ ಎಡೆ ಇಟ್ಟ ಅನ್ನ ಹಾಗೂ ಅಚ್ಚಿದ ದೀಪ ಮುಂದಿನ ವರ್ಷ ಬಾಗಿಲು ತೆರೆಯುವವರೆಗೂ ದೀಪ ಉರಿಯುತ್ತಿರುತ್ತದೆ ಮತ್ತು ಅನ್ನ ಹಳಸಿರುವುದಿಲ್ಲ. ದೇವಿಯ ಈ ವಿಶೇಷದಿಂದಲೇ ಈ ದೇವಾಲಯ ನಾಡಿನಾದ್ಯಂತ ಪ್ರಸಿದ್ಧಿ ಪಡೆದಿದೆ. ಹಾಗಾಗಿಯೇ ಪ್ರತಿವರ್ಷ ಹಾಸನಾಂಬ ದೇವಿ ದರ್ಶನ ಪಡೆಯಲು ಲಕ್ಷಾಂತರ ಮಂದಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.


ಇದನ್ನು ಓದಿ: ಅಂಬರೀಶ್ ಇರುವವರೆಗೂ ಯಾರಿಗೂ ಮಾತನಾಡುವ ಧೈರ್ಯ ಇರಲಿಲ್ಲ; ಪ್ರತಾಪ್ ಸಿಂಹ ಹೇಳಿಕೆಗೆ ಸುಮಲತಾ ತಿರುಗೇಟು


 ದೇವಾಲಯದ ಬಾಗಿಲು ಹಾಕಿದ ನಂತರ ದೇವಿಯ ಒಡವೆಯನ್ನು ಅರ್ಚಕರು ತಮ್ಮ ತಲೆಯ ಮೇಲೆ ಹೊತ್ತುಕೊಂಡು ದೇವಾಲಯದ ಸುತ್ತ ಮೂರು ಸುತ್ತು ಪ್ರದಕ್ಷಿಣೆ ಹಾಕಿದರು. ಈ ವೇಳೆ ಹಾಸನಾಂಬೆಗೆ ಜೈಕಾರ ಹಾಕಿದರು. ದೇವಾಲಯದಲ್ಲಿ ಭಕ್ತರು ಜೈಕಾರ ಮೊಳಗಿಸಿದರು.  ಇಂದು ಒಂದೇ ದಿನ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಸುಮಾರು 5 ಸಾವಿರ ಮಂದಿ ದೇವಿಯ ದರ್ಶನ ಪಡೆದಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.


ದೇವಿಯನ್ನು ಪೂಜಿಸಿ ಪ್ರಾರ್ಥನೆ ಮಾಡಿ ದೇವಾಲಯದ ಗರ್ಭಗುಡಿಯಲ್ಲಿ ದೀಪವನ್ನು ಹಚ್ಚಲಾಗಿದೆ. ಈ ವರ್ಷ ಹಚ್ಚಿದ ದೀಪ ಮುಂದಿನ ವರ್ಷದವರೆಗೆ ಉರಿಯುತ್ತಿರುತ್ತದೆ ಅನ್ನೋ ನಂಬಿಕೆಯಿದೆ. ಮುಂದಿನ ವರ್ಷ 2021 ಕ್ಕೆ ದೇವಾಲಯದ ಬಾಗಿಲು ತೆರೆಯಲಿದ್ದು, ಇನ್ನೂ ದಿನಾಂಕ ನಿಗದಿಯಾಗಿಲ್ಲ. ಮುಂದಿನ ಕೆಲ ದಿನಗಳಲ್ಲಿ ಪಂಚಾಂಗದ ಪ್ರಕಾರ ಜ್ಯೋತಿಷಿಗಳ ಮಾಹಿತಿ ಪಡೆದು ಮುಂದಿನ ವರ್ಷದ ಜಾತ್ರಾ ಮಹೋತ್ಸವದ ದಿನಾಂಕವನ್ನು ಜಿಲ್ಲಾಡಳಿತ ಪ್ರಕಟಿಸಲಿದೆ.


ವರದಿ; ಡಿಎಂಜಿ ಹಳ್ಳಿಅಶೋಕ್

Published by:HR Ramesh
First published: