• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಮೈಸೂರು ರಾಜವಂಶಸ್ಥರ ಖಾಸಗಿ ಜಾಗದಲ್ಲಿ ಹೆಲಿಟೂರಿಸಂಗೆ ಸಮ್ಮತಿ: ಮೈಸೂರು-ಬೆಂಗಳೂರು ಶೀಘ್ರ ಚಾಲನೆ!

ಮೈಸೂರು ರಾಜವಂಶಸ್ಥರ ಖಾಸಗಿ ಜಾಗದಲ್ಲಿ ಹೆಲಿಟೂರಿಸಂಗೆ ಸಮ್ಮತಿ: ಮೈಸೂರು-ಬೆಂಗಳೂರು ಶೀಘ್ರ ಚಾಲನೆ!

ಹೆಲಿ ಟೂರಿಸಂಗೆ ಮೈಸೂರಿನಲ್ಲಿ ನಡೆಯುತ್ತಿರುವ ಸಿದ್ಧತೆ.

ಹೆಲಿ ಟೂರಿಸಂಗೆ ಮೈಸೂರಿನಲ್ಲಿ ನಡೆಯುತ್ತಿರುವ ಸಿದ್ಧತೆ.

ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಇನ್ನೂ ಕೆಲವೇ ದಿನದಲ್ಲಿ ಹೆಲಿಟೂರಿಸಂ ಬಗ್ಗೆ ಪ್ರಪೋಸಲ್‌ ಕಳುಹಿಸುವುದಾಗಿ ತಿಳಿಸಿರುವ ಸಿ.ಪಿ.ಯೋಗೇಶ್ವರ್, ದಸರೆಗೂ ಮುನ್ನವೇ ಹೆಲಿಟೂರಿಸಂ ಆರಂಭಿಸುವ ಉದ್ದೇಶ ಹೊಂದಿದ್ದಾರೆ.

  • Share this:

ಮೈಸೂರು: ಪ್ರವಾಸೋಧ್ಯಮದ ಅಭಿವೃದ್ದಿಗಾಗಿ ಹೆಲಿಟೂರಿಸರಂ ಆರಂಭಿಸುವುದಾಗಿ ಹೇಳಿದ್ದ ನೂತನ ಪ್ರವಾಸೋಧ್ಯಮ ಸಚಿವ ಸಿ.ಪಿ.ಯೋಗೇಶ್ವರ್‌, ಮೈಸೂರು ರಾಜಮನೆತನದ ಖಾಸಗಿ ಜಾಗದಲ್ಲೆ ಹೆಲಿಟೂರಿಸಂ ಆರಂಭಿಸಲು ರಾಜಮನೆತನದವರ ಜೊತೆ ಮಾತುಕತೆ ನಡೆಸಿದ್ದಾರೆ. ನೂತನ ಸಚಿವರ ಪ್ರಸ್ತಾವನೆಗೆ ಸಮ್ಮತಿ ಸೂಚಿಸಿರುವ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ತಮ್ಮ ಖಾಸಗಿ ಜಾಗದಲ್ಲಿ ಹೆಲಿಟೂರಿಸಂ ನಡೆಸಲು ನಮ್ಮ ಒಪ್ಪಿಗೆ ಇದೆ ಎಂದು ಹೇಳಿದ್ದಾರೆ. ಈ ಬೆನ್ನಲ್ಲೆ ಮೈಸೂರು ಬೆಂಗಳೂರು ನಡುವೆ ಹೆಲಿಟೂರಿಸಂ ಯೋಜನೆಗೆ ನೀಲಿ ನಕ್ಷೆ ಸಿದ್ದತೆಯಾಗುವ ನಿರೀಕ್ಷೆ ಇದೆ. ಹೌದು ಮೈಸೂರು ಬೆಂಗಳೂರು ನಡುವೆ ಶೀಘ್ರದಲ್ಲೆ ಹೆಲಿಟೂರಿಸಂ ಆರಂಭವಾಗುವ ಸಾಧ್ಯತೆ ಇದೆ. ಹೆಲಿಟೂಸಿರಂಗಾಗಿ ಲಲಿತಮಹಾಲ್‌ ಹೆಲಿಪ್ಯಾಡ್ ಬಳಕೆಗೆ ರಾಜವಂಶಸ್ಥರು ಅನುಮತಿ ನೀಡಿದ್ದು,  ಪ್ರವಾಸೋಧ್ಯಮ ಸಚಿವ ಸಿ.ಪಿ.ಯೋಗೇಶ್ವರ್‌ ಮನವಿಗೆ ಸಮ್ಮತಿಸಿದ ಪ್ರಮೋದಾದೇವಿ ಒಡೆಯರ್, ಬೆಂಗಳೂರಿನಲ್ಲು ರಾಜವಂಶ್ಥರ ಖಾಸಗಿ ಜಾಗದಲ್ಲೆ ಹೆಲಿಟೂರಸಂ ಮಾಡಿ ಎಂದಿದ್ದಾರೆ.


ಈ ಹಿನ್ನೆಯಲ್ಲಿ  ಬೆಂಗಳೂರು ಅರಮನೆ ಮೈದಾನ ಹಾಗೂ ಮೈಸೂರಿನ ಲಲಿತಮಹಾಲ್‌ ಹೆಲಿಪ್ಯಾಡ್‌ನಲ್ಲಿ ಹೆಲಿಟೂರಿಸಂ ಆರಂಭಿಸಲು ಚಿಂತನೆ ನಡೆಸಿದ್ದು,  ಶೀಘ್ರದಲ್ಲೇ ಹೆಲಿಟೂರಿಸಂ ಯೋಜನೆಯ ರೂಪುರೇಷೆ ನಿರ್ಮಾಣ ಮಾಡಲಿರುವ ಪ್ರವಾಸೋಧ್ಯಮ ಇಲಾಖೆ, ರಾಜಮನೆತನದ ಖಾಸಗಿ ಜಾಗ ಬಳಕೆಗೆ ಮನವಿ ಕೋರಿ ಪ್ರಮೋದಾ ದೇವಿಯವರಿಗೆ ಅಧಿಕೃತ ಹೆಲಿಟೂರಿಸಂ ಪ್ರಪೋಸಲ್‌ ರವಾನೆ ಮಾಡಲಿದೆ.


ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಇನ್ನೂ ಕೆಲವೇ ದಿನದಲ್ಲಿ ಹೆಲಿಟೂರಿಸಂ ಬಗ್ಗೆ ಪ್ರಪೋಸಲ್‌ ಕಳುಹಿಸುವುದಾಗಿ ತಿಳಿಸಿರುವ ಸಿ.ಪಿ.ಯೋಗೇಶ್ವರ್, ದಸರೆಗೂ ಮುನ್ನವೇ ಹೆಲಿಟೂರಿಸಂ ಆರಂಭಿಸುವ ಉದ್ದೇಶ ಹೊಂದಿದ್ದಾರೆ.


ಲಲಿತಮಹಾಲ್‌ ಹೆಲಿಪ್ಯಾಡ್‌ ಜಾಗದ ಸಂಬಂಧ ನ್ಯಾಯಾಲಯದಲ್ಲಿ ಕೇಸು ನಡೆಯುತ್ತಿತ್ತು. ಮೈಸೂರು ರಾಜಮನೆತನ ಹಾಗೂ ಮೈಸೂರು ಜಿಲ್ಲಾಡಳಿತದ ನಡುವಿನ 20 ವರ್ಷದ ವಾದವಿವಾದ ಬಳಿಕ. 2020 ಡಿಸೆಂಬರ್‌ನಲ್ಲಿ ಸರ್ಕಾರ ಹಾಗೂ ರಾಜವಂಶಸ್ಥರ ನಡುವಿನ ಕೇಸ್‌ನಲ್ಲಿ ರಾಜವಂಶಸ್ಥರ ಪರವಾಗಿ ತೀರ್ಪು ಬಂದಿತ್ತು. ತೀರ್ಪು ಬಂದ ನಂತರ ಹೆಲಿಪ್ಯಾಡ್ ಮೈದಾನದಕ್ಕೆ ತಂತಿಬೇಲಿ ಹಾಕಿದ್ದ ರಾಜಮನೆತನ,  ಯಾರೋಬ್ಬರಿಗೂ ಪ್ರವೇಶ ನೀಡದೆ ಜಾಗದಲ್ಲಿ ಭದ್ರತಾ ಸಿಬ್ಬಂದಿಯನನ್ನು ನೇಮಕ ಮಾಡಿತ್ತು. ಅದಕ್ಕಾಗಿ ಲಲಿತಮಹಾಲ್ ಹೆಲಿಪ್ಯಾಡ್‌ ಜಾಗವನ್ನ ಹೆಲಿಟೂರಿಸಂಗಾಗಿ ಬಳಕೆಗೆ ಈ ಸ್ವತಹ ರಾಜವಂಶಸ್ಥೆ ಅನುಮತಿ ನೀಡಿದ್ದು, ಬೆಂಗಳೂರಿನ ಅರಮನೆ ಮೈದಾನವನ್ನು ಬಳಸಿಕೊಳ್ಳಲು ಒಪ್ಪಿಗೆ ನೀಡಿದ್ದಾರೆ.


ಇದನ್ನೂ ಓದಿ: Mallikarjun Kharge: ಬೆಲೆ ಏರಿಕೆ ಕುರಿತ ಚರ್ಚೆಗೆ ಸಂಸತ್​ನಲ್ಲಿ ಅವಕಾಶ ನೀಡಿ; ರಾಜ್ಯಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಒತ್ತಾಯ


ದಸರಾ ಸಂದರ್ಭದಲ್ಲಿ 10 ದಿನಗಳ ಕಾಲ ನಡೆಯುತ್ತಿದ್ದ ಹೆಲಿಕ್ಯಾಪ್ಟರ್ ರೈಡ್‌ನಿಂದ ಈ ಯೋಜನೆಯ ಉದ್ದೇಶ ರೂಪುಗೊಂಡಿದ್ದು, ಮೈಸೂರಿನ ದೃಶ್ಯ ವೈಭವವನ್ನ ಹೆಲಿಕ್ಯಾಪ್ಟರ್‌ನಿಂದ ನೋಡುವುದು, ಹಾಗೂ ಮೈಸೂರು ಬೆಂಗಳೂರು ನಡುವೆ ಹೆಲಿಕ್ಯಾಪ್ಟರ್ ಸೇವೆಯನ್ನು ನೀಡುವ ಮೂಲಕ ಹೊಸ ಪ್ರವಾಸೋಧ್ಯಮದ ಹಾದಿ ತೆರೆಯುವುದೇ ಈ ಹೆಲಿಟೂರಿಸಂನ ಮೂಲ ಉದ್ದೇಶವಾಗಿದೆ.


ದಸರಾ ಸಂದರ್ಭದಲ್ಲಿ 2500 ರೂಪಾಯಿಗೆ ಓರ್ವ ವ್ಯಕ್ತಿ 6 ರಿಂದ 10 ನಿಮಿಷದ ಹೆಲಿಕ್ಯಾಪ್ಟರ್ ರೈಡ್ ಎಂಜಾಯ್ ಮಾಡಬಹುದಿತ್ತು. ಇದೀಗ ಪೂರ್ಣ ಪ್ರಮಾಣದಲ್ಲಿ ಹೆಲಿಟೂರಿಸಂ ಆರಂಭವಾಗುವುದರಿಂದ ಹೆಲಿಕ್ಯಾಪ್ಟರ್ ರೈಡ್‌ಗೆ ಎಷ್ಟು ಹಣ ನಿಗಧಿ ಮಾಡಲಿದ್ದಾರೆ ಅನ್ನೋದನ್ನ ಕಾದು ನೋಡಬೇಕಿದೆ. ಅದೇನೆ ಇದ್ದರೂ ಪ್ರವಸೋಧ್ಯಮದ ಅಭಿವೃದ್ದಿಗೆ ಹೊಸ ಹೊಸ ಯೋಜನೆಗಳನ್ನ ರೂಪಿಸುತ್ತಿರೋದು ಮೈಸೂರಿನ ಇತಿಹಾಸ ತಿಳಿಯುವವರಿಗೆ ಸಹಕಾರಿಯಾಗೋದಂತು ಸುಳ್ಳಲ್ಲ.

Published by:MAshok Kumar
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು