ಈಡಿಗ ಸಮುದಾಯದ ಕೈತಪ್ಪಿ ಮುಜರಾಯಿ ಇಲಾಖೆಗೆ ಸೇರುತ್ತಾ ಸಿಗಂದೂರು ದೇವಸ್ಥಾನ..?

ಸಿಗಂದೂರು ಚೌಡೇಶ್ವರಿ

ಸಿಗಂದೂರು ಚೌಡೇಶ್ವರಿ

ಅರ್ಚಕ ಶೇಷಗಿರಿ ಭಟ್ ಅವರ ತಪ್ಪುಗಳಿಗೆ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ದೇವಸ್ಥಾನದಲ್ಲಿ ಭಕ್ತರ ಮೇಲೆ ಹಲ್ಲೆ ನಡೆಸಿದ್ದರ ಬಗ್ಗೆ ಕ್ರಮ ಕೈಗೊಳ್ಳಬೇಕು, ಇಲ್ಲವೇ ಎಚ್ಚರಿಕೆ ನೀಡಬೇಕು ಎಂದು ಆಗ್ರಹಿಸಿದ್ದಾರೆ

  • Share this:

ಶಿವಮೊಗ್ಗ(ಅಕ್ಟೋಬರ್​. 28): ಸಿಗಂದೂರು ದೇವಸ್ಥಾವದಲ್ಲಿ ಪ್ರಧಾನ ಆರ್ಚಕರು ಮತ್ತು ಧರ್ಮದರ್ಶಿಗಳ ನಡುವಿನ ಗಲಾಟೆಯಿಂದಾಗಿ ದೇವಸ್ಥಾನಕ್ಕೆ ಮೇಲ್ವಿಚಾರಣೆ ಮತ್ತು ಸಲಹಾ ಸಮಿತಿ ನೇಮಿಸಲಾಗಿದೆ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮೇಲ್ವಿಚಾರಣೆ ಸಮಿತಿ ಕಾರ್ಯ ನಿರ್ವಹಿಸಲಿದೆ. ಸಲಹಾ ಸಮಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಇರಲಿದ್ದಾರೆ. ಈ ಎಲ್ಲಾ ಸೂಚನೆಗಳನ್ನು ನೋಡಿದರೆ, ದೇವಸ್ಥಾನ ಮುಜರಾಯಿ ಇಲಾಖೆ ವ್ಯಾಪ್ತಿಗೆ ಸರ್ಕಾರ ಸೇರಿಸಿಕೊಳ್ಳುತ್ತಾ ಎಂಬ ಅನುಮಾನಗಳು ಶುರವಾಗಿವೆ. ಹೀಗಾಗಿ ಈಡಿಗ ಸಮುದಾಯವರು ಇದಕ್ಕೆ ಬಾರಿ ವಿರೋಧ ವ್ಯಕ್ತಪಡಿಸಿದೆ. ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಮುಜರಾಯಿ ಇಲಾಖೆಗೆ ಸೇರಿಸಿಕೊಳ್ಳುವ ಪ್ರಯತ್ನ ಮಾಡಬಾರದು ಎಂದು ಆಗ್ರಹಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸಿಗಂದೂರು ಚೌಡೇಶ್ವರಿ ದೇವಸ್ಥಾನ ವಿವಾದ ಇನ್ನು ಬಗೆಹರಿದಂತೆ ಕಾಣುತ್ತಿಲ್ಲ. ಶಿವಮೊಗ್ಗ ಜಿಲ್ಲಾಧಿಕಾರಿ ದೇವಸ್ಥಾನಕ್ಕೆ ಮೇಲ್ವಿಚಾರಣೆ ಮತ್ತು ಸಲಹಾ ಸಮಿತಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಜೊತೆಗೆ ಸರ್ಕಾರಕ್ಕೆ 12 ಪುಟಗಳ ವರದಿ ಸಲ್ಲಿಸಿದ್ದಾರೆ. ಯಾವಾಗ ಜಿಲ್ಲಾಧಿಕಾರಿ ಈ ಕ್ರಮ ಕೈಗೊಂಡರು, ಇದರಿಂದಾಗಿ ಈಗ ಈಡಿಗ ಸಮುದಾಯದವರಲ್ಲಿ ಆತಂಕ ಸೃಷ್ಠಿಯಾಗಿದೆ.


ಸರ್ಕಾರ ಮುಜರಾಯಿ ಇಲಾಖೆಗೆ  ತೆಗೆದುಕೊಳ್ಳುವ ಮೊದಲ ಪ್ರಯತ್ನ ಇದಾಗಿದೇಯಾ ಎಂಬ ಅನುಮಾನ ಕಾಡುತ್ತಿದೆ. ಹೀಗಾಗಿ ಈಡಿಗ ಸಮುದಾಯದವರು ಯಾವುದೇ ಕಾರಣಕ್ಕೂ ಸರ್ಕಾರ ಮುಜರಾಯಿ ಇಲಾಖೆಗೆ ಸೇರಿಸಿಕೊಳ್ಳುವಂತ ಪ್ರಯತ್ನ ಮಾಡಬಾರದು ಎಂದು ಆಗ್ರಹಿಸಿದ್ದಾರೆ. ಜಿಲ್ಲಾಧಿಕಾರಿಗಳು ಆದೇಶ ನೋಡಿದರೆ, ಮುಜರಾಯಿ ಇಲಾಖೆಗೆ ಸೇರಿಸಿಕೊಳ್ಳುವ ಒಂದು ಉನ್ನಾರ ಆಗಿದೆಯಾ ಎಂಬ ಅನುಮಾನ  ವ್ಯಕ್ತಪಡಿಸಿದ್ದಾರೆ.


ಜಿಲ್ಲಾಧಿಕಾರಿಗಳು ಏಕ ಪಕ್ಷೀಯವಾಗಿ ಈ ನಿರ್ಣಯ ತೆಗೆದುಕೊಂಡಿದ್ದಾರೆ. ಯಾರೋ  ಹೇಳಿಕೆ, ದೂರು ನೀಡಿದನ್ನು ಪರಿಗಣಿಸಿ ಮೇಲ್ವಿಚಾರಣ ಸಮಿತಿ ರಚನೆಗೆ ಆದೇಶ ಮಾಡಿದ್ದಾರೆ. ಸಿಗಂಧೂರು ದೇವಾಲಯದ ಧರ್ಮದರ್ಶಿ ರಾಮಪ್ಪನವರ ವಾದದ ಬಗ್ಗೆ ಪರಿಶೀಲನೆ ನಡೆಸಿಲ್ಲ, ಅವರಿಗೆ ಮನ್ನಣೆ ನೀಡಿಲ್ಲ ಎಂದು ದೂರಿದ್ದಾರೆ. ಇದು ಕೇವಲ ಈಡಿಗ ಸಮುದಾಯಕ್ಕೆ ಸೇರಿದ ದೇವಸ್ಥಾನದಲ್ಲಿ ಎಲ್ಲಾ ಸಮುದಾಯಕ್ಕೆ ಸೇರಿದ ದೇವಸ್ಥಾನ. ಈ ದೇವಸ್ಥಾನವನ್ನು ಧರ್ಮದರ್ಶಿ ರಾಮಪ್ಪನವರ ಆಡಳಿತದಲ್ಲೇ ನಡೆಯುವಂತಾಗಬೇಕು ಎಂದು ತಿಳಿಸಿದ್ದಾರೆ.


ಇದನ್ನೂ ಓದಿ : ಆರ್​ಆರ್​ನಗರ ಉಪಚುನಾವಣೆ: ಸಿದ್ದರಾಮಯ್ಯ ಪ್ರಚಾರಕ್ಕೆ ಬಿಜೆಪಿ ಕಾರ್ಯಕರ್ತರಿಂದ ಅಡ್ಡಿ


ಅರ್ಚಕ ಶೇಷಗಿರಿ ಭಟ್ ಅವರ ತಪ್ಪುಗಳಿಗೆ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ದೇವಸ್ಥಾನದಲ್ಲಿ ಭಕ್ತರ ಮೇಲೆ ಹಲ್ಲೆ ನಡೆಸಿದ್ದರ ಬಗ್ಗೆ ಕ್ರಮ ಕೈಗೊಳ್ಳಬೇಕು, ಇಲ್ಲವೇ ಎಚ್ಚರಿಕೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.  ಸರ್ಕಾರ ಮುಜುರಾಯಿಗೆ ತೆಗೆದುಕೊಳ್ಳವ ಪ್ರಯತ್ನ ಮುಂದುವರೆಸಿದರೇ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದ್ದಾರೆ. ಸರ್ಕಾರ ಇದಕ್ಕೂ ಮನ್ನಣೆ ನೀಡದೇ ಹೋದರೆ ಹೋರಾಟದ ಸ್ವರೂಪ ಉಗ್ರವಾಗುತ್ತದೇ ಎಂದು ಮಾಹಿತಿ ನೀಡಿದ್ದಾರೆ.


ಸಿಗಂದೂರು ದೇವಸ್ಥಾನ ರಾಮಪ್ಪನವರ ಟ್ರಸ್ಟ್ ಗೆ ಸೇರಿದ್ದು, ಅಲ್ಲಿ ನಡೆದಿರುವ ಘಟನೆಗಳ ಬಗ್ಗೆ ರಾಮಪ್ಪನವರ ಮತ್ತು ಶೇಷಗಿರಿ ಭಟ್ ಕುಳಿತುಕೊಂಡು ಸಮಸ್ಯೆ ಬಗೆ ಹರಿಸಿಕೊಳ್ಳುತ್ತಾರೆ. ಅವರಿಬ್ಬರ ವೈಮನಸ್ಸುನ್ನು ಮುಂದೆ ಇಟ್ಟುಕೊಂಡು ದೇವಸ್ಥಾನವನ್ನು ಯಾವುದೇ ಕಾರಣಕ್ಕೂ ಮುಜುರಾಯಿಗೆ ಸೇರಿಸಿಕೊಳ್ಳಬಾರದು ಎಂದು ಆಗ್ರಹಿಸಿದ್ದಾರೆ.

Published by:G Hareeshkumar
First published: