ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಉತ್ತರ ಪ್ರದೇಶದ ನೋಯ್ಡಾದ ಆಮ್ರಪಾಲಿ ಹೌಸಿಂಗ್ ಪ್ರಾಜೆಕ್ಟ್ಗಳ 1,800 ಮನೆ ಖರೀದಿದಾರರಿಗೆ ಎರಡು ವಾರಗಳಲ್ಲಿ ತಮ್ಮ ಬಾಕಿ ಹಣ ಪಾವತಿಸುವಂತೆ ಸೂಚಿಸಲಾಗಿದೆ.
ಸುಪ್ರೀಂ ಕೋರ್ಟ್ ನೇಮಿಸಿದ ರಿಸೀವರ್ ಹಾಗೂ ಹಿರಿಯ ವಕೀಲ ಆರ್ ವೆಂಕಟರಮಣಿ, ವಸತಿ ಯೋಜನೆಯ ನಿವಾಸಿಗಳು ನೋಟಿಸ್ ನೀಡಿದ 15 ದಿನಗಳೊಳಗೆ ಪಾವತಿಗಳನ್ನು ಮಾಡುವಂತೆ ಸೂಚಿಸಲಾಗಿದೆ ಎಂಬುದಾಗಿ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಮನೆ ಖರೀದಿದಾರರು ಗ್ರಾಹಕರ ಡೇಟಾಬೇಸ್ನಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಲು ವಿಫಲವಾದರೆ ಮತ್ತು ಅವರು ನಿಗದಿತ ಕಾಲಮಿತಿಯೊಳಗೆ ಪಾವತಿ ಮಾಡಲು ವಿಫಲವಾದರೆ ಈ ಮನೆ ಖರೀದಿದಾರರಿಂದ ಬುಕ್ ಮಾಡಲಾದ ಫ್ಲ್ಯಾಟ್ಗಳ ಹಂಚಿಕೆಗಳು ರದ್ದಾಗುವ ಸಾಧ್ಯತೆಯಿದೆ. ಈ ಸಂಬಂಧ ಧೋನಿ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಮೊದಲು ಆಮ್ರಪಾಲಿ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದ ಮಹೇಂದ್ರ ಸಿಂಗ್ ಧೋನಿ, 2016ರ ಏಪ್ರಿಲ್ನಲ್ಲಿ ಆ ಹುದ್ದೆಗೆ ರಾಜೀನಾಮೆ ನೀಡಿದ್ದರು. ನೋಯ್ಡಾ ಮತ್ತು ಗ್ರೇಟರ್ ನೋಯ್ಡಾ ಪ್ರದೇಶದಲ್ಲಿ ಸ್ಥಗಿತಗೊಂಡ ಯೋಜನೆಗಳನ್ನು ಪೂರ್ಣಗೊಳಿಸುವ ಸಲುವಾಗಿ ಆಮ್ರಪಾಲಿ ಸ್ಥಗಿತಗೊಂಡ ಯೋಜನೆಗಳ ಹೂಡಿಕೆ ಪುನರ್ ನಿರ್ಮಾಣ ಸ್ಥಾಪನೆ (ASPIRE) ಎಂಬ ಸಂಸ್ಥೆಯನ್ನೂ ರಚಿಸಲಾಗಿದೆ.
ಸರ್ಕಾರಿ ಸ್ವಾಮ್ಯದ ಎನ್ಬಿಸಿಸಿಗೆ 20ಕ್ಕೂ ಹೆಚ್ಚು ವಸತಿ ಯೋಜನೆಗಳ ನಿರ್ಮಾಣವನ್ನು 8,000 ಕೋಟಿ ರೂ.ಗಳ ಅಂದಾಜು ಹೂಡಿಕೆಯ ಬಜೆಟ್ ಪೂರ್ಣಗೊಳಿಸಲು ಸೂಚಿಸಲಾಗಿದ್ದು, ಈ ಯೋಜನೆಯು ನ್ಯಾಯಾಲಯ ನೇಮಿಸಿದ ಸಮಿತಿಯ ವ್ಯಾಪ್ತಿಗೆ ಬರುತ್ತಿದೆ ಎಂದು ವರದಿಯಾಗಿದೆ.
''ಕಸ್ಟಮರ್ ಡೇಟಾದಲ್ಲಿ ನೋಂದಾಯಿಸಲು ಮತ್ತು ಈ ಸೂಚನೆ ಬಂದ ದಿನದಿಂದ 15 ದಿನಗಳಲ್ಲಿ ಪಾವತಿ ಮಾಡಲು ಪ್ರಾರಂಭಿಸುವುದನ್ನು ವಿಫಲವಾದರೆ ಹಂಚಿಕೆಗಳನ್ನು ಸ್ವಯಂಚಾಲಿತವಾಗಿ ರದ್ದುಗೊಳಿಸಲು ಕಾರಣವಾಗುತ್ತದೆ'' ಎಂದು ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ.
ಈ ಹಿಂದೆ, ಆಗಸ್ಟ್ 14, 2021ರಂದು, ಉನ್ನತ ನ್ಯಾಯಾಲಯವು ಸಹ ಈ ಬಗ್ಗೆ ಎಚ್ಚರಿಕೆ ನೀಡಿತ್ತು. ಮನೆ ಖರೀದಿದಾರರು ಬಾಕಿ ಮೊತ್ತ ಪಾವತಿಸಲು ಮತ್ತು ನೋಂದಾಯಿಸಲು 15 ದಿನಗಳ ನೋಟಿಸ್ ನೀಡುವುದಾಗಿ ಹೇಳಿತ್ತು. ಇದನ್ನು 9,538 ಖರೀದಿದಾರರಿಗೆ ನೀಡಬೇಕಿತ್ತು. ಹಾಗೂ ಗಡುವನ್ನು ಪೂರೈಸಲು ವಿಫಲವಾದರೆ, ಫ್ಲ್ಯಾಟ್ಗಳನ್ನು ಮಾರಾಟ ಮಾಡಲಾಗುವುದಿಲ್ಲ ಮತ್ತು ಹರಾಜು ಮಾಡಲಾಗುತ್ತದೆ ಎಂದೂ ಹೇಳಲಾಗಿತ್ತು.
ನ್ಯಾಯಾಧೀಶರಾದ ಯು.ಯು.ಲಲಿತ್ ಮತ್ತು ಅಜಯ್ ರಸ್ತೋಗಿ ಅವರನ್ನೊಳಗೊಂಡ ನ್ಯಾಯಪೀಠ,
ಮನೆ ಖರೀದಿದಾರರ ಪರ ಹಾಜರಾದ ವಕೀಲ ಎಂಎಲ್ ಲಾಹೋಟಿ ನಂತರ ಈ ವಿಷಯದ ಕುರಿತು ಆದೇಶ ಹೊರಡಿಸುವುದಾಗಿ ಹೇಳಿತ್ತು.
ಜುಲೈ 2019ರಲ್ಲಿ, ಸುಪ್ರೀಂ ಕೋರ್ಟ್ ಆಮ್ರಪಾಲಿ ಗ್ರೂಪ್ ಅನ್ನು NCRನಲ್ಲಿನ ಪ್ರಮುಖ ಸ್ಥಳಗಳಿಂದ ಭೂಮಿಗೆ ಗುತ್ತಿಗೆಯನ್ನು ರದ್ದುಗೊಳಿಸುವ ಮೂಲಕ ತೀರ್ಪು ನೀಡಿತು. ರೇರಾ ರಿಯಲ್ ಎಸ್ಟೇಟ್ ಕಾನೂನಿನ ಅಡಿಯಲ್ಲಿ ನೋಂದಾಯಿಸುವುದನ್ನು ಸಹ ತಡೆಯಲಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ