• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಶಂಕರಾಚಾರ್ಯರ ಪುತ್ಥಳಿಗೆ ಹಸಿರು ಬಾವುಟ ಪ್ರಕರಣಕ್ಕೆ ತೆರೆ; ಕುಡಿದ ನಶೆಯಲ್ಲಿ ಕೃತ್ಯ, ತಪ್ಪೊಪ್ಪಿಕೊಂಡ ಆರೋಪಿ

ಶಂಕರಾಚಾರ್ಯರ ಪುತ್ಥಳಿಗೆ ಹಸಿರು ಬಾವುಟ ಪ್ರಕರಣಕ್ಕೆ ತೆರೆ; ಕುಡಿದ ನಶೆಯಲ್ಲಿ ಕೃತ್ಯ, ತಪ್ಪೊಪ್ಪಿಕೊಂಡ ಆರೋಪಿ

ಆರೋಪಿ ಮಿಲಿಂದ್.

ಆರೋಪಿ ಮಿಲಿಂದ್.

ಅಲ್ಲಿಗೆ ಚಿಕ್ಕಮಗಳೂರು ಸೇರಿದಂತೆ ನಾಡಿನಾದ್ಯಂತ ಕೋಮು ಸಾಮರಸ್ಯ ಕದಡಬಲ್ಲ ಪ್ರಕರಣವನ್ನು ಪೊಲೀಸರು ಒಂದೇ ದಿನದಲ್ಲಿ ಬೇಧಿಸಿದ್ದಾರೆ. ಈ ಮೂಲಕ ಆಗಬಹುದಾಗಿದ್ದ ಬಹುದೊಡ್ಡ ಅನಾಹುತವೊಂದನ್ನು ಆರಂಭದಲ್ಲೇ ತಡೆಯುವ ಮೂಲಕ ಇದೀಗ ಎಲ್ಲರ ಪ್ರಶಂಶೆಗೆ ಪಾತ್ರರಾಗಿದ್ದಾರೆ.

  • Share this:

ಚಿಕ್ಕಮಗಳೂರು (ಆಗಸ್ಟ್‌ 14); ಬೆಂಗಳೂರಿನ ಡಿ.ಜೆ. ಹಳ್ಳಿ ಗಲಭೆ ತಣ್ಣಗಾಗುವ ಮುನ್ನವೇ ಗುರುವಾರ ಶೃಂಗೇರಿ ಪೀಠದ ಸಂಸ್ಥಾಪಕ ಶಂಕರಾಚಾರ್ಯ ಪುತ್ಥಳಿಯ ಮೇಲೆ ಈದ್ ಮಿಲಾದ್ ಹಬ್ಬದ ಶುಭಕೋರುವ ಬಾವುಟ ಹಾಕಿ ಕೋಮು ಸಾಮರಸ್ಯ ಕದಡಲು ಯತ್ನಿಸಲಾಗಿತ್ತು. ಆ ಬಾವುಟ ಎಸ್‌ಡಿಪಿಐ (ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯ) ಪಕ್ಷಕ್ಕೆ ಸೇರಿದ್ದಾಗಿದೆ ಎಂದು ಗುಲ್ಲು ಎಬ್ಬಿಸಿ ಎರಡು ಕೋಮುಗಳ ನಡುವೆ ದ್ವೇಷ ಮತ್ತು ಗಲಭೆ ಹುಟ್ಟಿಸುವ ಪ್ರಯತ್ನ ಮಾಡಲಾಗಿತ್ತು.


ಮೊನ್ನೆ ಬುಧವಾರ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯ ಜನ ಚಳಿಗೆ ಬೆಚ್ಚಗೆ ಮೈಹೊದ್ದು ಮಲಗಿದ್ದರು. ಬೆಳಗ್ಗೆ ಏಳುವಷ್ಟರಲ್ಲಿ ಚಳಿಯಲ್ಲೂ ಮೈ ಬೆವರೋ ಘಟನೆಯೊಂದು ನಡೆದುಹೋಗಿತ್ತು. ಕಿಡಿಗೇಡಿಗಳು ಶಂಕರಾಚಾರ್ಯ ವೃತ್ತದ ಶಂಕರಾಚಾರ್ಯ ಪುತ್ಥಳಿ ಮೇಲೆ ಅನ್ಯ ಕೋಮಿನ ಭಾವುಟ ಹಾಕಿದ್ದರು. ಘಟನೆಯಿಂದ ಭೂದಿ ಮುಚ್ಚಿದ ಕೆಂಡದಂತಾದ ಶೃಂಗೇರಿಯಲ್ಲಿ ಪ್ರತಿಭಟನೆಗಳು ಜೋರಾದವು.


ಶೃಂಗೇರಿಯ ಮಾಜಿ ಶಾಸಕ ಡಿ ಎನ್ ಜೀವರಾಜ್ ಅವರು ಇದಕ್ಕೆ ಕೋಮು ಬಣ್ಣ ನೀಡಲು ಪ್ರಯತ್ನಿಸಿದ್ದವರಲ್ಲಿ ಪ್ರಮುಖರಾಗಿದ್ದರು. ಅವರು ಪೊಲೀಸರೊಂದಿಗೆ ನಡೆಸಿದ ಸಂಭಾಷಣೆಯ ತುಣುಕುಗಳು ವೈರಲ್ ಆಗಿದ್ದವು.



ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಸಹ ಈ ಘಟನೆಯ ಕುರಿತು ಟ್ವೀಟ್ ಮಾಡುವ ಮೂಲಕ ಈ ಪ್ರಕರಣಕ್ಕೆ ಎಸ್‌ಡಿಪಿಐ ಮತ್ತು ಪಿಎಫ್ಐ ಕಾರಣ ಎಂದು ಹೇಳಿ ಆ ಸಂಘಟನೆಗಳ ನಿಷೇಧಕ್ಕೆ ಆಗ್ರಹಿಸಿದ್ದರು.


ಆದರೆ ಈಗ ಶಂಕರಾಚಾರ್ಯರ ಪುತ್ಥಳಿ ಮೇಲೆ ಬಿದ್ದಿರುವ ಬಾವುಟ ಎಸ್‌ಡಿಪಿಐಗೆ ಸೇರಿದ್ದಲ್ಲ ಎಂದು ಹೇಳಲಾಗುತ್ತಿದೆ. ಅಲ್ಲದೆ ಒಂದು ಹಸಿರು ಬಣ್ಣದ ಬಾವುಟವನ್ನು ಪುತ್ಥಳಿಯ ಹತ್ತಿರವಿದ್ದ ಮಸೀದಿಯಿಂದ ಮಿಲಿಂದ್ ಎಂಬ ಯುವಕ ಕದ್ದು ಹೋಗುತ್ತಿದ್ದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


ಇದನ್ನೂ ಓದಿ : ಹುಣಸೂರು ಶಾಸಕ ಮಂಜುನಾಥ್‌ಗೆ ಜೀವ ಬೆದರಿಕೆ; ಹೆಚ್‌. ವಿಶ್ವನಾಥ್ ಪುತ್ರನ ವಿರುದ್ಧ ಪ್ರಚೋದನೆ ಆರೋಪ


ಪ್ರಕರಣವನ್ನು ಭೇದಿಸಿರುವ ಪೊಲೀಸರು, ಈ ಘಟನೆಯ ಹಿಂದೆ ಯಾವುದೇ ಪಕ್ಷ ಅಥವಾ ಸಂಘಟನೆಗಳಿಲ್ಲ. ಅವನೋರ್ವ ಕುಡುಕು. ಹೆಸರು ಮಿಲಿಂದ್. ಅಲಿಯಾಸ್ ಮಿಲ್ಲಿ. ಕುಡಿದ ಮತ್ತಿನಲ್ಲಿ ಹೀಗೆ ಮಾಡಿದ್ದಾನೆ. ಎಲ್ಲಾ ದಾಖಲೆಗಳಿವೆ. ಆತ ಎಲ್ಲಿ ಕುಡಿದ, ಎಲ್ಲಿಂದ ಬ್ಯಾನರ್ ತಂದ ಎಂಬ ಎಲ್ಲಾ ವಿಡಿಯೋ ಇದೆ. ಬ್ಯಾನರ್ ಈದ್ ಮಿಲಾದ್‌ ಶುಭಕೋರೋ ಸಂದೇಶದ್ದು, ಇದು ಉದ್ದೇಶ ಪೂರ್ವಕವಾಗಿ ಆಗಿರೋ ಘಟನೆಯಲ್ಲ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಅಕ್ಷಯ್ ಮಚೀಂದ್ರ ಸ್ಪಷ್ಟಪಡಿಸಿದ್ದಾರೆ.


ಅಲ್ಲಿಗೆ ಚಿಕ್ಕಮಗಳೂರು ಸೇರಿದಂತೆ ನಾಡಿನಾದ್ಯಂತ ಕೋಮು ಸಾಮರಸ್ಯ ಕದಡಬಲ್ಲ ಪ್ರಕರಣವನ್ನು ಪೊಲೀಸರು ಒಂದೇ ದಿನದಲ್ಲಿ ಬೇಧಿಸಿದ್ದಾರೆ. ಈ ಮೂಲಕ ಆಗಬಹುದಾಗಿದ್ದ ಬಹುದೊಡ್ಡ ಅನಾಹುತವೊಂದನ್ನು ಆರಂಭದಲ್ಲೇ ತಡೆಯುವ ಮೂಲಕ ಇದೀಗ ಎಲ್ಲರ ಪ್ರಶಂಶೆಗೆ ಪಾತ್ರರಾಗಿದ್ದಾರೆ.

top videos
    First published: