• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಮಕ್ಕಳಿಗೆ ಮೊಬೈಲ್ ಕೊಡುತ್ತೀರಾ? ಈ ಸುದ್ದಿನೋಡಿ – ಪೋಕ್ಸೋ ಕೇಸ್ ಹೆಚ್ಚಾಗಲು ಕಾರಣ ಬಿಚ್ಚಿಟ್ಟ ಮನೋವೈದ್ಯರು

ಮಕ್ಕಳಿಗೆ ಮೊಬೈಲ್ ಕೊಡುತ್ತೀರಾ? ಈ ಸುದ್ದಿನೋಡಿ – ಪೋಕ್ಸೋ ಕೇಸ್ ಹೆಚ್ಚಾಗಲು ಕಾರಣ ಬಿಚ್ಚಿಟ್ಟ ಮನೋವೈದ್ಯರು

ಚಿಕ್ಕಮಗಳೂರು ನಗರ

ಚಿಕ್ಕಮಗಳೂರು ನಗರ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಪೋಕ್ಸೋ ಕೇಸ್ ಹೆಚ್ಚಾಗಲು ಮೊಬೈಲ್ ಕಾರಣ ಎಂಬ ಮನೋ ವೈದ್ಯರ ಅಭಿಪ್ರಾಯಕ್ಕೆ ಪೋಷಕರು ಬೆಚ್ಚಿಬಿದ್ದಿದ್ದಾರೆ. ಲಾಕ್​ಡೌನ್ ಟೈಮ್​ನಲ್ಲಿ ಮಕ್ಕಳು ಹೆಚ್ಚು ಮೊಬೈಲ್ ಬಳಕೆ ಮಾಡಿದ್ದಾರೆ ಅಂತಿದ್ದಾರೆ ವೈದ್ಯರು.

  • Share this:

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಫೆಬ್ರವರಿಯ ಮೊದಲ 20 ದಿನದಲ್ಲಿ ಎಂಟಕ್ಕೂ ಹೆಚ್ಚು ಪೋಕ್ಸೋ (POCSO) ಕೇಸ್‍ಗಳು ದಾಖಲಾಗಿವೆ. ಆದ್ರೀಗ, ಮಕ್ಕಳ ಮೇಲೆ ದೌರ್ಜನ್ಯ ಎಸಗುವ ಈ ಕೇಸ್‍ಗಳಿಗೆ ಮೊಬೈಲ್, ಸೋಶಿಯಲ್ ಮೀಡಿಯಾವೇ ಮೂಲ ಕಾರಣವೆಂಬ ಆಘಾತಕಾರಿ ಅಂಶವನ್ನ ಮಾನಸಿಕ ತಜ್ಞರೇ ಹೇಳ್ತಾ ಇದ್ದಾರೆ.


ಜಿಲ್ಲೆಯಲ್ಲಿ ಈ ತಿಂಗಳ 20 ದಿನಕ್ಕೆ ಎಂಟು ಪೋಕ್ಸೋ ಕೇಸ್ ದಾಖಲಾಗಿದ್ವು. ಅದರಲ್ಲಿ ಎರಡು ಮಲೆನಾಡ ಬೆಚ್ಚಿ ಬೀಳುವಂತಹದ್ದು. ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಪೋಕ್ಸೋ ಕೇಸ್ ದಾಖಲಾದ ನಂತರ ಪೊಲೀಸರು ಎಫ್.ಐ.ಆರ್ ದಾಖಲಿಸಿದ ಬಳಿಕ ದೌರ್ಜನ್ಯಕ್ಕೆ ಒಳಗಾದವರನ್ನ ಮಾನಸಿಕ ತಜ್ಞರ ನೇತೃತ್ವದಲ್ಲಿ ತಪಾಸಣೆಗೆ ಒಳಪಡಿಸಿ ಕೌನ್ಸಿಲಿಂಗ್ ಮಾಡಲಾಗುತ್ತೆ. ಆಗ ಹೊರಬೀಳೋ ಸತ್ಯಗಳು ವೈದ್ಯರಿಗೇ ಶಾಕ್ ನೀಡುವಂಥದ್ದು. ಬಹುತೇಕ ಪ್ರಕರಣಗಳಲ್ಲಿ ಸೋಶಿಯಲ್ ಮೀಡಿಯಾಗಳೇ ಮೂಲ ಅನ್ನೋದನ್ನ ತಜ್ಞರೇ ಹೇಳುತ್ತಿದ್ದಾರೆ.


ಹೆತ್ತವರು ಮಕ್ಕಳಿಗೆ ಮೊಬೈಲ್ ಕೊಡಿಸಿ ಅವರ ಬಗ್ಗೆ ಗಮನ ಹರಿಸೋದಿಲ್ಲ ಎಂದು ವೈದ್ಯರು ಪೋಷಕರ ಬಗ್ಗೆಯೂ ಅಸಮಾಧಾನ ಹೊರಹಾಕಿದ್ದಾರೆ. ಮಕ್ಕಳಿಗೆ ಮೊಬೈಲ್ ಕೊಡಿಸಿ ಅವರು ಏನ್ ಮಾಡ್ತಿದ್ದಾರೆ ಎಂದು ಅವರ ಚಲನವಲನಗಳ ಮೇಲೆ ನಿಗಾ ವಹಿಸಬೇಕು. ಆಗ ಇಂತಹ ಅಚಾತುರ್ಯ ನಡೆಯುವುದಿಲ್ಲ. ಪೋಷಕರು ಎಚ್ಚರ ವಹಿಸಬೇಕು ಅನ್ನೋದು ವೈದ್ಯರ ಅಭಿಪ್ರಾಯ. ಈಗಾಗಲೇ ಪೊಲೀಸ್ ಇಲಾಖೆ ಕೂಡ ಅಖಾಡಕ್ಕೆ ಇಳಿದು ನಾವು-ನೀವು ಫ್ರೆಂಡ್ಸ್ ಅಂತ ಅಪ್ರಾಪ್ತರಿಗೆ ಅರಿವು ಮೂಡಿಸ್ತಿದ್ದಾರೆ. ಈ ಮಧ್ಯೆಯೂ ಕೂಡ ಕೆಲವು ಪ್ರಕರಣಗಳು ಬೆಳಕಿಗೆ ಬಂದ್ರೆ ಇನ್ನೂ ಹಲವು ಪ್ರಕರಣಗಳು ಹಾಗೇ ಮುಚ್ಚಿಹೋಗ್ತಿವೆ ಅನ್ನೋ ಅನುಮಾನವೂ ಇದೆ. ಪೋಷಕರು ಮಕ್ಕಳ ಮೇಲೆ ಎಚ್ಚರಿಕೆ ವಹಿಸುವ ಅಗತ್ಯವಿದೆ. ತಜ್ಞರ ತಂಡ ಕೂಡ ಅಪ್ರಾಪ್ತರ ಚಲನವಲನಗಳ ಬಗ್ಗೆ ಎಚ್ಚರಿಕೆ ವಹಿಸಿದ್ರೆ ಮಾತ್ರ ಇಂತಹ ಪ್ರಕರಣ ತಡೆಯೋಕೆ ಸಾಧ್ಯ ಅಂತಾರೇ ಚಿಕ್ಕಮಗಳೂರಿನ ಮನೋವೈದ್ಯರು.


ಇದನ್ನೂ ಓದಿ: Astrology: ಮಾಘ ಹುಣ್ಣಿಮೆಯ ಈ ದಿನ ಯಾವ ರಾಶಿಗೆ ಒಳಿತಾಗಲಿದೆ; ಇಲ್ಲಿದೆ ದ್ವಾದಶಿ ರಾಶಿ ಭವಿಷ್ಯ


ಒಟ್ಟಾರೆ, ಕಾಫಿನಾಡಲ್ಲಿ ಒಂದು ತಿಂಗಳಲ್ಲಿ ದಾಖಲಾದ ಪ್ರಕರಣಗಳು ಜಿಲ್ಲೆಯ ಜನರ ನಿದ್ದೆಗೆಡಿಸಿದೆ. ಇದು ಒಂದೆಡೆಯಾದರೆ ಬಹುತೇಕ ಪ್ರಕರಣಗಳಿಗೆ ಸೋಷಿಯಲ್ ಮೀಡಿಯಾಗಳೇ ಕಾರಣ ಅನ್ನೋ ಆಘಾತಕಾರಿ ಅಂಶ ಹೊರಬಿದ್ದಿರೋದು ಜನರಲ್ಲಿ ಇನ್ನಷ್ಟು ಅತಂಕ ಹುಟ್ಟಿಸಿದೆ. ಮಕ್ಕಳ ಸುರಕ್ಷತೆಯ ದೃಷ್ಟಿಯಿಂದಾದರೂ ಸಾಮಾಜಿಕ ಜಾಲತಾಣಗಳಿಂದ ಮಕ್ಕಳನ್ನ ದೂರ ಇಡುವ ಮಹತ್ವದ ಜವಾಬ್ದಾರಿ ಪಾಲಕರ ಮೇಲಿದೆ. ಇನ್ನಾದರೂ ಪೋಷಕರು ಮಕ್ಕಳ ಮೇಲೆ ನಿಗಾ ವಹಿಸಿ ಇಂತಹ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಹಾಕುವ ಅನಿವಾರ್ಯತೆ ಬಹಳಷ್ಟಿದೆ.


ವರದಿ: ವೀರೇಶ್ ಹೆಚ್ ಜಿ

Published by:Vijayasarthy SN
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು