• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಆರ್​ಎಎಫ್ ಬೆಟಾಲಿಯನ್ ಗುದ್ದಲಿ ಪೂಜೆ ನೆರವೇರಿಸಲು ಜ.16ಕ್ಕೆ ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ ಅಮಿತ್​ ಶಾ

ಆರ್​ಎಎಫ್ ಬೆಟಾಲಿಯನ್ ಗುದ್ದಲಿ ಪೂಜೆ ನೆರವೇರಿಸಲು ಜ.16ಕ್ಕೆ ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ ಅಮಿತ್​ ಶಾ

ಅಮಿತ್ ಶಾ.

ಅಮಿತ್ ಶಾ.

ಅಮಿತ್​ ಶಾ 16 ರಂದು ದೆಹಲಿಯಿಂದ ಬೆಂಗಳೂರಿಗೆ ಆಗಮಿಸಲಿದ್ದಾರೆ. ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಭದ್ರಾವತಿಗೆ  ಆಗಮಿಸಲಿದ್ದಾರೆ. ಇನ್ನು ಶಂಕುಸ್ಥಾಪನೆ  ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸೇರಿದಂತೆ ಹಲವು ಸಚಿವರು ಭಾಗವಹಿಸಲಿದ್ದಾರೆ.

ಮುಂದೆ ಓದಿ ...
  • Share this:

ಶಿವಮೊಗ್ಗ (ಜನವರಿ 13); ಕೇಂದ್ರ ಗೃಹ ಸಚಿವ ಅಮಿತ್ ಶಾ ಜನವರಿ 16 ರಂದು ಭದ್ರಾವತಿಗೆ ಭೇಟಿ ನೀಡಲಿದ್ದಾರೆ. ಹೀಗಾಗಿ ಎಲ್ಲಾ ಸಿದ್ದತೆಗಳು ನಡೆಯುತ್ತಿವೆ. ಭದ್ರಾವತಿ ನಗರದ ಬುಳ್ಳಾಪುರದಲ್ಲಿ ಸಿಆರ್​ಪಿಎಫ್ ಅಡಿ ಬರುವ ರಾಪಿಡ್ ಆಕ್ಷನ್ ಫೋರ್ಸ್ (ಆರ್​ಎಎಫ್) ಬೆಟಾಲಿಯನ್ ಭದ್ರಾವತಿಯಲ್ಲಿ ಸ್ಥಾಪನೆ ಮಾಡಲಾಗುತ್ತಿದೆ. ಅದರ ಗುದ್ದಲಿ ಪೂಜೆ ಕಾರ್ಯವನ್ನು ಜನವರಿ 16 ರಂದು ಶನಿವಾರ ಕೇಂದ್ರ ಗೃಹ ಸಚಿವ ಅಮಿತ್ ಷಾ ನೆರವೇರಿಸಲಿದ್ದಾರೆ. ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಕಾರ್ಯಕ್ರಮ ನಡೆಯುವ ಬುಳ್ಳಾಪುರಕ್ಕೆ ತೆರಳಿ ಗುದ್ದಲಿ ಪೂಜೆ ನೆರವೇರಿಸುವ ಸ್ಥಳ ಪರಿಶೀಲನೆ ನಡೆಸಿದರು. ಈ ವೇಳೆ  ಕಾರ್ಯಕ್ರಮದ ಬಗ್ಗೆ  ಮಾಹಿತಿ ನೀಡಿದ್ದಾರೆ.


ಅಮಿತ್​ ಶಾ 16 ರಂದು ದೆಹಲಿಯಿಂದ ಬೆಂಗಳೂರಿಗೆ ಆಗಮಿಸಲಿದ್ದಾರೆ. ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಭದ್ರಾವತಿಗೆ  ಆಗಮಿಸಲಿದ್ದಾರೆ. ಇನ್ನು ಶಂಕುಸ್ಥಾಪನೆ  ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸೇರಿದಂತೆ ಹಲವು ಸಚಿವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.  ಭದ್ರಾವತಿಯಲ್ಲಿ ಸ್ಥಾಪನೆಯಾಗಲಿರುವ ಬೆಟಾಲಿಯನ್ ಗೆ  445 ಜನಕ್ಕೆ ನೇಮಕ ಸಹ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.


ಈ ಹಿಂದೆ 17 ಕ್ಕೆ ಅಮಿತ್ ಶಾ ಆಗಮಿಸುತ್ತಾರೆ ಎಂದು ಹೇಳಲಾಗುತ್ತಿತ್ತು, ಅದರೆ ಈಗ 16 ರಂದೇ ಆಗಮಿಸುತ್ತಿದ್ದಾರೆ. ಜನವರಿ 16 ರಂದು  ಬೆಳಗ್ಗೆ ದೆಹಲಿಯಿಂದ 8-30ಕ್ಕೆ ಹೊರಡಲಿದ್ದಾರೆ. 11-15 ಕ್ಕೆ ಬೆಂಗಳೂರಿಗೆ ಬರಲಿದ್ದಾರೆ. 12-30ಕ್ಕೆ ಭದ್ರಾವತಿಗೆ ಬರಲಿದ್ದಾರೆ. 12-45 ಕ್ಕೆ ಗುದ್ದಲೆ ಪೂಜೆ ನೆರವೇರಿಸಲಿದ್ದಾರೆ. ನಂತರ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಭದ್ರಾವಯಿತಿಂದ ಬೆಳಗಾವಿ ಮತ್ತು ಬಾಗಲಕೋಟೆಗೆ ತೆರಳಲಿದ್ದಾರೆ.


ಇದನ್ನೂ ಓದಿ: H Nagesh: ಸಚಿವ ಹೆಚ್. ನಾಗೇಶ್​ ಮನವೊಲಿಕೆ ಯಶಸ್ವಿ; ರಾಜೀನಾಮೆಗೆ ಸೂಚಿಸಿದ ಸಿಎಂ ಯಡಿಯೂರಪ್ಪ


ಭದ್ರಾವತಿಯ ಬುಳ್ಳಾಪುರದಲ್ಲಿ ಕ್ಷಿಪ್ರ ಕಾರ್ಯ ಪಡೆ (ಆರ್ಎಎಫ್) ಬೆಟಾಲಿಯನ್ ಸ್ಥಾಪನೆ ಮಾಡಲಾಗುತ್ತಿದೆ. ದಕ್ಷಿಣ ಭಾರತದ ಪ್ರಮುಖ ಬೆಟಾಲಿಯನ್​ಗಳಲ್ಲಿ ಇದು ಒಂದಾಗಲಿದೆ ಎಂದು ತಿಳಿಸಿದರು. ತುರ್ತು ಸಂದರ್ಭಗಳಾದ ಭೂಕಂಪ, ನೆರೆ ಹಾವಳಿ, ಕೋಮು ಗಲಭೆ ವೇಳೆ  ಆಂಧ್ರಪ್ರದೇಶ, ತಮಿಳುನಾಡಿನಿಂದ ಆರ್​ಎಎಫ್​ ತುಕಡಿಗಳನ್ನು ಕರೆಸಿಕೊಳ್ಳಲಾಗುತ್ತಿತ್ತು. ಅದರೆ ಇನ್ನು ಮುಂದೆ ಭದ್ರಾವತಿಯಿಂದಲೇ ಆರ್ ಎ ಎಫ್ ತುಕಡಿಗಳು ಆಗಮಿಸಲಿವೆ.


ರಾಜ್ಯದಲ್ಲಿ ತುರ್ತು ಸಂದರ್ಭಗಳಲ್ಲಿ ಅಗತ್ಯ ಬಿದ್ದರೆ ಭದ್ರಾವತಿಯಿಂದಲೇ ಆರ್ಎಎಫ್ ತುಕಡಿಗಳನ್ನು ರವಾನಿಸಲಾಗುತ್ತದೆ ಎಂದು ತಿಳಿಸಿದರು. ದಕ್ಷಿಣ ಭಾರತದ ರಾಜ್ಯಗಳಾದ ತಮಿಳುನಾಡು, ಗೋವಾ, ಪುದುಚೇರಿ, ಸೇರಿದಂತೆ ಐದು ರಾಜ್ಯಗಳಿಗೆ ಇದುವೇ ಮುಖ್ಯ ಕೇಂದ್ರವಾಗಲಿದೆ.  ಬುಳ್ಳಾಪುರದಲ್ಲಿ ಆರ್​ಎಎಫ್ ಟೌನ್ ಶಿಪ್ ಸಹ ನಿರ್ಮಾಣವಾಗುತ್ತಿದೆ. ಸುಮಾರು  ನಾಲ್ಕೈದು ಸಾವಿರ ಕುಟುಂಬಗಳು ಇಲ್ಲಿ ವಾಸಿಸಲಿವೆ ಎಂದು ಸಂಸದ ರಾಘವೇಂದ್ರ ತಿಳಿಸಿದರು.

top videos
    First published: