ಬೆಂಗಳೂರು: ಉದ್ಯಾನ ನಗರಿಯಲ್ಲಿ ಪ್ರತಿಭಟನೆಯ ಬಿಸಿ ಮುಂದುವರಿದಿದೆ. ನಗರದ ಹೃದಯಭಾಗದಲ್ಲಿರುವ ಮೈಸೂರು ಬ್ಯಾಂಕ್ ವೃತ್ತದಲ್ಲಿ ಮೂರು ಪ್ರತಿಭಟನೆಗಳು ನಡೆದಿವೆ. ಕಸ ನಿರ್ವಹಣೆ ಶುಲ್ಕ ಹೆಚ್ಚಿಸಿದ ಬಿಬಿಎಂಪಿ ಕ್ರಮದ ವಿರುದ್ಧ ಆಮ್ ಆದ್ಮಿ ಪಕ್ಷ ಕರ ನಿರಾಕರಣೆ ಚಳುವಳಿ ನಡೆಸಿತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿ ವಿರುದ್ಧ ಆಲ್ ಇಂಡಿಯಾ ಎಂಎಸ್ಎಸ್ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಹಾಗೆಯೇ, ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಯನ್ನು ವಿರೋಧಿಸಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿದರು. ತತ್ಪರಿಣಾಮವಾಗಿ ಮೈಸೂರು ಬ್ಯಾಂಕ್ ಸರ್ಕಲ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು.
ಕಾರ್ಪೊರೇಷನ್ ಕಡೆಯಿಂದ ಮೆಜೆಸ್ಟಿಕ್ ಕಡೆ ಹೋಗುವ ರಸ್ತೆಗಳಲ್ಲಿ ನಿಂತ ವಾಹನಗಳನ್ನ ಕ್ಲಿಯರ್ ಮಾಡಲು ಪೊಲೀಸರು ಹರಸಾಹಸ ಮಾಡಿದರು. ಮೈಸೂರು ಬ್ಯಾಂಕ್ ವೃತ್ತದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಮೂರು ಕೆಎಸ್ಆರ್ಪಿ ತುಕಡಿಗಳನ್ನ ನಿಯೋಜಿಸಲಾಗಿದೆ.
ಇದನ್ನೂ ಓದಿ: ಕೆಲಸ ಸಿಗಲ್ಲ, ಭಿಕ್ಷೆಗೆ ಬಿಡಲ್ಲ, ಏನು ಮಾಡಣ? ಸಿಎಂ ಕಾಣಲು ಹಠಕ್ಕೆ ಬಿದ್ದ ದೃಷ್ಟಿಚೇತನ ಯುವತಿ
ಆಪ್ ಪ್ರತಿಭಟನೆ ಯಾಕೆ?
ಬೆಂಗಳೂರಿನಲ್ಲಿ ಕಸ ನಿರ್ವಹಣೆ ಜೊತೆಗೆ ಗಾರ್ಬೆಜ್ ಸೆಸ್ ಎಂದು ಉಪಕರವನ್ನು 200 ರೂನಿಂದ 600 ರೂಗೆ ಹೆಚ್ಚಳ ಮಾಡಲು ಬಿಬಿಎಂಪಿ ನಿರ್ಧರಿಸಿದೆ. ಇದನ್ನು ಬಲವಾಗಿ ವಿರೋಧಿಸಿರುವ ಆಮ್ ಆದ್ಮಿ ಪಕ್ಷ, ಬಿಬಿಎಂಪಿಯಿಂದ ಸಾರ್ವಜನಿಕರ ಸುಲಿಗೆ ಆಗುತ್ತಿದೆ ಎಂದು ಆರೋಪಿಸಿದೆ.
ಬಿಜೆಪಿ ಸರಕಾರ ಬೆಂಗಳೂರಿಗರ ಮೇಲೆ ಹೇರಿರುವ ಕಸವಿಲೇವಾರಿಯ ಮೇಲಿನ ಹೆಚ್ಚುವರಿ ತೆರಿಗೆಯ ವಿರುದ್ಧ ಇಂದಿನ ನಮ್ಮ ಹೋರಾಟ!
ಜನಸಾಮಾನ್ಯರೇ ಒಂದಾಗಿ!!@AamAadmiParty pic.twitter.com/l9f8U58J7O
— AAP Bengaluru (@AAPBangalore) December 2, 2020
ಬೆಂಗಳೂರು ಹಾಗೂ ಕರ್ನಾಟಕದ ಜನಸಾಮಾನ್ಯರಿಗೋಸ್ಕರ ನಮ್ಮ ಕರೆ! pic.twitter.com/2pluYHow5F
— AAP Bengaluru (@AAPBangalore) December 2, 2020
ಇದನ್ನೂ ಓದಿ: YSV Datta: ದೇವೇಗೌಡರು ಇರೋವರೆಗೂ ಜೆಡಿಎಸ್ನಲ್ಲೇ ಇರುತ್ತೇನೆ; ವದಂತಿಗಳಿಗೆ ತೆರೆ ಎಳೆದ ವೈಎಸ್ವಿ ದತ್ತ
ಬಂದ್ ನಿಲ್ಲಿಸುವ ಸರ್ಕಾರದ ಪ್ರಯತ್ನ ವಿಫಲ ಆಗುತ್ತದೆ: ವಾಟಾಳ್
ಅನುಮತಿ ನಿರಾಕರಿಸಿದ್ದರೂ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳು ಇಂದು ಮೈಸೂರು ಬ್ಯಾಂಕ್ ಸರ್ಕಲ್ನಲ್ಲಿ ಪ್ರತಿಭಟನೆ ನಡೆಸಿದವು. ಈ ಸಂದರ್ಭದಲ್ಲಿ ಮಾತನಾಡಿದ ವಾಟಾಳ್ ನಾಗರಾಜ್, ಕರ್ನಾಟಕ ಬಂದ್ಗೆ ಕನ್ನಡಿಗರು ತಯಾರಾಗಿದ್ದಾರೆ ಎಂದು ಹೇಳಿದರು.
ಕರ್ನಾಟಕ ಬಂದ್ ಅನ್ನು ವಿಫಲಗೊಳಿಸಲು ಸರ್ಕಾರ ರಹಸ್ಯ ಪ್ರಯತ್ನ ಮಾಡುತ್ತಿದೆ. ಆದರೆ, ಬಂದ್ ಸಂಪೂರ್ಣ ಯಶಸ್ವಿಯಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಸರ್ಕಾರದ ಆದೇಶವನ್ನು ಬೆಂಕಿಗೆ ಹಾಕುತ್ತೇವೆ. ಜನರು ಬಸ್ ನಿಲ್ದಾಣಕ್ಕೆ ಬರಬೇಡಿ. ಬಸ್ ಸಂಚರಿಸುವುದಿಲ್ಲ. ಸಾರಿಗೆ ನೌಕರರು ಬೆಂಬಲ ಕೊಡದಿದ್ದರೆ ನಾವು ಬಸ್ ತಡೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ವರದಿ: ಆಶಿಕ್ ಮುಲ್ಕಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ