• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • Karnataka Bandh - ಕರ್ನಾಟಕ ಬಂದ್ ಸಹಜ ಸ್ಥಿತಿಯಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

Karnataka Bandh - ಕರ್ನಾಟಕ ಬಂದ್ ಸಹಜ ಸ್ಥಿತಿಯಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

ಕೆಂಪೇಗೌಡ ವಿಮಾನ ನಿಲ್ದಾಣ

ಕೆಂಪೇಗೌಡ ವಿಮಾನ ನಿಲ್ದಾಣ

ಕರ್ನಾಟಕ ಬಂದ್ ದಿನದಂದು ದೇವನಹಳ್ಳಿ ಬಳಿಯ ವಿಮಾನ ನಿಲ್ದಾಣ ಎಂದಿನಂತೆ ಕಾರ್ಯ ನಿರ್ವಹಿಸುತ್ತಿದೆ. ಬೆಳಗ್ಗೆ ಓಲಾ, ಊಬರ್ ಸಂಚಾರ ಕೂಡ ಇತ್ತು. ಮಧ್ಯಾಹ್ನ ವಿಮಾನ ಹತ್ತಬೇಕಾದವರು ಬೆಳಗ್ಗೆಯೇ ನಿಲ್ದಾಣ ತಲುಪಿ ವಿಮಾನಕ್ಕಾಗಿ ಕಾಯುತ್ತಿದ್ಧಾರೆ.

  • Share this:

ದೇವನಹಳ್ಳಿ: ಮಾರಾಠ ಅಭಿವೃದ್ಧಿ ನಿಗಮಕ್ಕೆ ಮುಂದಾಗಿರುವ ಸರ್ಕಾರದ ಕ್ರಮ ಖಂಡಿಸಿ ಕನ್ನಡ ಸಂಘಟನೆಗಳ ಒಕ್ಕೂಟ ಇಂದು ಕರೆ ನೀಡಿದ ಕರ್ನಾಟಕ ಬಂದ್​ನ ಬಿಸಿ ಕೆಂಪೇಗೌಡ  ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಯಾವುದೇ  ಪರಿಣಾಮ ಬೀರಿಲ್ಲ. ಎಂದಿನಂತೆ ವಿಮಾನ ನಿಲ್ದಾಣದ ಟ್ಯಾಕ್ಸಿ  ಸೇರಿದಂತೆ  ಬಿಎಂಟಿಸಿ, ಕೆಎಸ್ ಆರ್ ಟಿಸಿ ಬಸ್​ಗಳು  ಓಡಾಡುತ್ತಿವೆ.  ಏರ್​ಪೋರ್ಟ್ ಟ್ಯಾಕ್ಸಿ , ಓಲಾ,  ಊಬರ್ ಸಹ ಸಂಚರಿಸುತ್ತಿವೆ. 


ಬಂದ್​ನಿಂದ ಸಾರಿಗೆ  ವ್ಯವಸ್ಥೆ ಇರುತ್ತೋ ಇಲ್ಲವೋ ಅನ್ನೋ  ಭಯದಲ್ಲಿ  ಪ್ರಯಾಣಿಕರು ಬೆಳ್ಳಂಬೆಳಗ್ಗೆಯೇ ವಿಮಾನ ನಿಲ್ದಾಣಕ್ಕೆ  ಬರುತ್ತಿದ್ದಾರೆ. ಮಧ್ಯಾಹ್ನದ ಸಮಯಕ್ಕೆ ವಿಮಾನ ಇರುವವರೂ ಕೂಡ ಈಗಾಗಲೇ ವಿಮಾನ  ನಿಲ್ದಾಣಕ್ಕೆ  ಬಂದಿದ್ದು ಏರ್​ಪೋರ್ಟ್ ಟರ್ಮಿನಲ್​ನಲ್ಲಿ ತಮ್ಮ ವಿಮಾನಕ್ಕಾಗಿ  ಕಾಯುತ್ತಿದ್ದಾರೆ.


ವಿದೇಶಗಳಿಂದ ಮತ್ತು ಹೊರ ರಾಜ್ಯಗಳಿಂದ  ಬರುವ ಪ್ರಯಾಣಿಕರಿಗೂ ಸಹ ಯಾವುದೇ ತೊಂದರೆಯಾಗಿಲ್ಲ.  ಏರ್​ಪೋರ್ಟ್​ನಿಂದ  ಟ್ಯಾಕ್ಸಿ  ಸೇವೆ ಮತ್ತು ಕೆಎಸ್ ಆರ್ಟಿಸಿ  ಮತ್ತು  ಬಿಎಂಟಿಸಿ ಬಸ್ ಗಳು ಸೇವೆಗೆ  ಸಿದ್ದವಾಗಿದ್ದು  ಪ್ರಯಾಣಿಕರನ್ನ  ತಮ್ಮ  ಸ್ಥಳಗಳಿಗೆ  ತಲುಪಿಸುತ್ತಿವೆ.


ಇದನ್ನೂ ಓದಿ: Karnataka Bandh Updates – ಬೆಂಗಳೂರಿನಲ್ಲಿ ಕಾವೇರಿದ ಬಂದ್; ಪ್ರತಿಭಟನಾಕಾರರು ಪೊಲೀಸರ ವಶಕ್ಕೆ


ಬಂದ್ ಹಿನ್ನೆಲೆ  ವಿಮಾನ  ನಿಲ್ದಾಣದಲ್ಲಿ ಪೊಲೀಸ್  ಬಿಗಿ ಬಂದೋಬಸ್ತ್  ಮಾಡಲಾಗಿದೆ. ವಿಮಾನ ನಿಲ್ದಾಣದ ಪ್ರವೇಶದಲ್ಲಿ ವಾಹನಗಳ  ತಪಾಸಣೆಯನ್ನ ಪೊಲೀಸರು  ಮಾಡುತ್ತಿದ್ದಾರೆ. ಬೋರ್ಡಿಂಗ್  ಪಾಸ್ ಇದ್ದವರಿಗೆ  ಮಾತ್ರ ವಿಮಾನ ನಿಲ್ದಾಣದ ಒಳಗೆ  ಪ್ರವೇಶ ನೀಡಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ 7 ರಲ್ಲಿ ಎಂದಿನಂತೆ  ವಾಹನಗಳ ಸಂಚಾರ ಇದ್ದು, ಬಂದ್ ಹಿನ್ನೆಲೆ ರಜೆ ಇರುವುದರಿಂದ  ಯುವ ಜನತೆ ಜಾಲಿ ರೈಡ್ ಹೊರಟ್ಟಿದ್ದಾರೆ.


ವರದಿ: ನವೀನ್ ಕುಮಾರ್

First published: