• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಕೃಷಿ ವಿಜ್ಞಾನ ಕೇಂದ್ರಗಳು ರೈತರಿಗೆ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಗಳಿದ್ದಂತೆ; ವಿಜ್ಞಾನಿ ಡಾ.ಅಶೋಕ್

ಕೃಷಿ ವಿಜ್ಞಾನ ಕೇಂದ್ರಗಳು ರೈತರಿಗೆ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಗಳಿದ್ದಂತೆ; ವಿಜ್ಞಾನಿ ಡಾ.ಅಶೋಕ್

 ವಿಶ್ವ ಮಣ್ಣು ಆರೋಗ್ಯ ದಿನಾಚರಣೆ ಪ್ರಯುಕ್ತ ಕೃಷಿ ವಿಜ್ಞಾನ ಕೇಂದ್ರ ಹನುಮನಮಟ್ಟಿ ಹಾಗೂ ಕೃಷಿ ಇಲಾಖೆ ಹಾನಗಲ್ ಇವರ ಸಂಯೋಗದೊಂದಿಗೆ ವಿಶ್ವ ಮಣ್ಣು ದಿನಾಚರಣೆಯನ್ನು ಹಾವೇರಿ ಜಿಲ್ಲೆ ಹಾನಗಲ್ ತಾಲೂಕು ಕೊಪ್ಪರಸಿಕೊಪ್ಪ ಗ್ರಾಮದಲ್ಲಿ ಆಯೋಜನೆ ಮಾಡಲಾಗಿತ್ತು.

ವಿಶ್ವ ಮಣ್ಣು ಆರೋಗ್ಯ ದಿನಾಚರಣೆ ಪ್ರಯುಕ್ತ ಕೃಷಿ ವಿಜ್ಞಾನ ಕೇಂದ್ರ ಹನುಮನಮಟ್ಟಿ ಹಾಗೂ ಕೃಷಿ ಇಲಾಖೆ ಹಾನಗಲ್ ಇವರ ಸಂಯೋಗದೊಂದಿಗೆ ವಿಶ್ವ ಮಣ್ಣು ದಿನಾಚರಣೆಯನ್ನು ಹಾವೇರಿ ಜಿಲ್ಲೆ ಹಾನಗಲ್ ತಾಲೂಕು ಕೊಪ್ಪರಸಿಕೊಪ್ಪ ಗ್ರಾಮದಲ್ಲಿ ಆಯೋಜನೆ ಮಾಡಲಾಗಿತ್ತು.

ಒಂದು ಬೆಳೆ ಉತ್ತಮವಾಗಿ ಬೆಳೆಯಬೇಕಾದರೆ 17 ಪೋಷಕಾಂಶಗಳ ಅವಶ್ಯಕತೆ ಇರುತ್ತದೆ ಈ  ಎಲ್ಲಾ ಪೋಷಕಾಂಶಗಳು ತಿಪ್ಪೆ ಗೊಬ್ಬರದಲ್ಲಿರುತ್ತವೆ. ಹೀಗಾಗಿ ರೈತರು ರಾಸಾಯನಿಕ ಗೊಬ್ಬರಗಳನ್ನು ಕಡಿಮೆ ಮಾಡಿ, ತಿಪ್ಪೆ ಗೊಬ್ಬರಗಳನ್ನು ಹೆಚ್ಚಾಗಿ ಬಳಸಬೇಕು ಎಂದು ರೈತರಿಗೆ ಕಿವಿಮಾತು ಹೇಳಿದರು.

  • Share this:

ಹಾವೇರಿ; ಕೃಷಿ ವಿಜ್ಞಾನ ಕೇಂದ್ರಗಳು ರೈತರಿಗೆ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಗಳಿದ್ದಂತೆ. ರೈತರ ಬೆಳೆಗಳಿಗೆ ಯಾವ ರೋಗ ಬಂದರೂ ಸಹ ವಿಜ್ಞಾನ ಕೇಂದ್ರಗಳಲ್ಲಿ ಪರಿಹಾರ ದೊರೆಯುತ್ತದೆ ಎಂದು ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಡಾ. ಅಶೋಕ್ ಪಿ ಹೇಳಿದ್ದಾರೆ.


ಇಂದು ವಿಶ್ವ ಮಣ್ಣು ಆರೋಗ್ಯ ದಿನಾಚರಣೆ ಪ್ರಯುಕ್ತ ಕೃಷಿ ವಿಜ್ಞಾನ ಕೇಂದ್ರ ಹನುಮನಮಟ್ಟಿ ಹಾಗೂ ಕೃಷಿ ಇಲಾಖೆ ಹಾನಗಲ್ ಇವರ ಸಂಯೋಗದೊಂದಿಗೆ ವಿಶ್ವ ಮಣ್ಣು ದಿನಾಚರಣೆಯನ್ನು ಹಾವೇರಿ ಜಿಲ್ಲೆ ಹಾನಗಲ್ ತಾಲೂಕು ಕೊಪ್ಪರಸಿಕೊಪ್ಪ ಗ್ರಾಮದಲ್ಲಿ ಆಯೋಜನೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಡಾ. ಅಶೋಕ್ ಪಿ, ಏಕದಳ ಧಾನ್ಯಗಳು ಭೂಮಿಯ ಫಲವತ್ತತೆಯನ್ನು ಕಡಿಮೆ ಮಾಡುತ್ತವೆ. ಆದರೆ ದ್ವಿದಳ ಧಾನ್ಯಗಳು ಗಾಳಿಯಲ್ಲಿರುವ ಸಾರಜನಕವನ್ನು ಹೀರಿಕೊಂಡು ಭೂಮಿಯ ಫಲವತ್ತತೆಯನ್ನು ಹೆಚ್ಚಿಗೆ ಮಾಡುತ್ತೇವೆ. ಹೀಗಾಗಿ ರೈತರು ಕೇವಲ ಒಂದೇ ಬೆಳೆಗಳನ್ನು ಬೆಳೆಯದೆ ವಿವಿಧ ಬೆಳೆಗಳನ್ನು ಬೆಳೆಯಬೇಕು ಎಂದು ಮಾರ್ಗದರ್ಶನ ನೀಡಿದರು.


ಇದನ್ನು ಓದಿ: Karnataka Bandh | ರಾಮನಗರದಲ್ಲಿ ಬಂದ್​ಗೆ ನೀರಸ ಪ್ರತಿಕ್ರಿಯೆ; ರೈತರು-ಪೊಲೀಸರ ನಡುವೆ ಮಾತಿನ ಚಕಮಕಿ


ಒಂದು ಬೆಳೆ ಉತ್ತಮವಾಗಿ ಬೆಳೆಯಬೇಕಾದರೆ 17 ಪೋಷಕಾಂಶಗಳ ಅವಶ್ಯಕತೆ ಇರುತ್ತದೆ ಈ  ಎಲ್ಲಾ ಪೋಷಕಾಂಶಗಳು ತಿಪ್ಪೆ ಗೊಬ್ಬರದಲ್ಲಿರುತ್ತವೆ. ಹೀಗಾಗಿ ರೈತರು ರಾಸಾಯನಿಕ ಗೊಬ್ಬರಗಳನ್ನು ಕಡಿಮೆ ಮಾಡಿ, ತಿಪ್ಪೆ ಗೊಬ್ಬರಗಳನ್ನು ಹೆಚ್ಚಾಗಿ ಬಳಸಬೇಕು ಎಂದು ರೈತರಿಗೆ ಕಿವಿಮಾತು ಹೇಳಿದರು.


ಈ ಸಂದರ್ಭದಲ್ಲಿ ಡಾ. ರಾಜಕುಮಾರ್ ಜೆ ಆರ್ ಮಣ್ಣು ವಿಜ್ಞಾನಿಗಳು ಕೃಷಿ ವಿಜ್ಞಾನ ಕೇಂದ್ರ ಹನುಮನಮಟ್ಟಿ, ಡಾ. ಶಾಂತವೀರಯ್ಯ ಹವಾಮಾನ ತಜ್ಞರು ಕೃಷಿ ವಿಜ್ಞಾನ ಕೇಂದ್ರ ಹನುಮನಮಟ್ಟಿ, ಸಂಗಮೇಶ ಹಕ್ಕಲಪ್ಪನವರ ಕೃಷಿ ಅಧಿಕಾರಿಗಳು ಹಾನಗಲ್, ಬಸುರಾಜ ಮಣಕೂರ ತಾಂತ್ರಿಕ ವ್ಯವಸ್ಥಾಪಕರು ಕೃಷಿ ಇಲಾಖೆ ಹಾನಗಲ್, ಕುಮಾರ ಮಲಗುಂದ ಸಹಾಯಕರು, ಕೃಷಿ ಇಲಾಖೆ ಹಾನಗಲ್, ಸರ್ವಜ್ಞ ಪರಿಸರ ಹಾಗೂ ಸಮಗ್ರ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಸಿಬ್ಬಂದಿಗಳು, ಮತ್ತು ಕೊಪ್ಪರಸಿಕೊಪ್ಪ, ಹಾರೆಗೊಪ್ಪ, ಗ್ರಾಮದ ರೈತರಾದ ಗದಿಗೆಪ್ಪಗೌಡ ಅರಳೇಶ್ವರ, ಶಿವಾಜಿ ಸಾಳುಂಕೆ, ಬಸವರಾಜ ಚೆಲ್ಲಾಳ, ಹನುಮಂತ ಚವ್ಹಾಣ, ಮಂಜುನಾಥ ಗಾಯಕವಾಡ, ಮಂಜುನಾಥ ಪವರ್, ಹನುಮಂತ ಜಾದವ್ ಮಾರುತಿ ಜಾದವ್, ಶಿವಪ್ಪ ಮಾಳಾಪುರ, ಲಕ್ಷ್ಮಣ ಗಾಯಕವಾಡ ಉಪಸ್ಥಿತರಿದ್ದರು.

top videos
    First published: