• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಪ್ರತಿಪಕ್ಷಗಳ 20 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ, ಯತ್ನಾಳ್​ಗೆ ಶಿಸ್ತು ಸಮಿತಿ ನೊಟೀಸ್​; ನಳೀನ್ ಕುಮಾರ್​

ಪ್ರತಿಪಕ್ಷಗಳ 20 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ, ಯತ್ನಾಳ್​ಗೆ ಶಿಸ್ತು ಸಮಿತಿ ನೊಟೀಸ್​; ನಳೀನ್ ಕುಮಾರ್​

ನಳೀನ್ ಕುಮಾರ್ ಕಟೀಲ್.

ನಳೀನ್ ಕುಮಾರ್ ಕಟೀಲ್.

ಈ ಮಧ್ಯೆ, ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರಿಗೆ ಬಿಜೆಪಿ ಶಿಸ್ತು ಸಮಿತಿ ನೊಟೀಸ್ ಕಳುಹಿಸಿದೆ.  ಅದು ತಲುಪಿದ ಮೇಲೆ ಯತ್ನಾಳ್​ ಉತ್ತರ ನೀಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟೀಲ್ ತಿಳಿಸಿದ್ದಾರೆ.

  • Share this:

ವಿಜಯಪುರ (ಫೆಬ್ರವರಿ. 17)- ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ 15-20 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ್​ ಕಟೀಲ್​ ಹೊಸ ಬಾಂಬ್ ಸಿಡಿಸಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, "ಸಚಿವ ರಮೇಶ ಜಾರಕಿಹೊಳಿ 5 ಶಾಸಕರು ಸಂಪರ್ಕದಲ್ಲಿದ್ದಾರೆ ಅಂತ ಹೇಳಿದ್ದಾರಲ್ವ ಎಂಬ ಪ್ರಶ್ನೆಗೆ ಅವರು ಉತ್ತರಿಸಿದರು.  ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಅಸಮಾಧಾನದಲ್ಲಿದ್ದಾರೆ.  ಇಂಥ 15 ರಿಂದ 20 ಶಾಸಕರು ತಮ್ಮ ಸಂಪರ್ಕಲ್ಲಿದ್ದಾರೆ.  ಆದರೆ, ನಮಗೆ ಈಗ ಅವಶ್ಯಕತೆ ಇಲ್ಲ.  ಅವರೇ ನಮ್ಮನ್ನು ಸೇರಿಸಿಕೊಳ್ಳಿ ಎಂದು ಕೇಳುತ್ತಿದ್ದಾರೆ.  ನಮಗೆ ಪ್ರತಿಪಕ್ಷಗಳ ಶಾಸಕರ ಅವಶ್ಯಕತೆಯಿಲ್ಲ.  ಚುನಾವಣೆ ಸಂದರ್ಭದಲ್ಲಿಯೂ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳುವುದಿಲ್ಲ" ಎಂದು ನಳೀನ್ ಕುಮಾರ್​ ಕಟೀಲ್ ತಿಳಿಸಿದರು.


ಇದೇ ವೇಳೆ, ಬಸವ ಕಲ್ಯಾಣ, ಮಸ್ಕಿ ಮತ್ತು ಸಿಂದಗಿ ವಿಧಾನ ಸಭೆ ಬೈ ಎಲೆಕ್ಷನ್ ಮತ್ತು ಬೆಳಗಾವಿ ಬೈ ಎಲೆಕ್ಷನ್ ಕುರಿತು ಮಾತನಾಡಿರುವ ನಳೀನ್ ಕುಮಾರ್​ ಕಟೀಲ್, "ರಾಜ್ಯದಲ್ಲಿ ಮೂರು ವಿಧಾನಸಭೆ ಮತ್ತು ಒಂದು ಲೋಕಸಭೆ ಬೈ ಎಲೆಕ್ಷನ್ ನಡೆಯಲಿದೆ.  ಪಕ್ಷದ ಹೈಕಮಾಂಡ್ ಸೂಕ್ತ ಸಂದರ್ಭದಲ್ಲಿ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದೆ" ಎಂದು ತಿಳಿಸಿದರು.


ಶಾಸಕ ಯತ್ನಾಳ್​ಗೆ ನೊಟೀಸ್ ನೀಡಲಾಗಿದೆ;


ಈ ಮಧ್ಯೆ, ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರಿಗೆ ಬಿಜೆಪಿ ಶಿಸ್ತು ಸಮಿತಿ ನೊಟೀಸ್ ಕಳುಹಿಸಿದೆ.  ಅದು ತಲುಪಿದ ಮೇಲೆ ಯತ್ನಾಳ್​ ಉತ್ತರ ನೀಡಲಿ ಎಂದು ತಿಳಿಸಿದರು. ಈ ಮೂಲಕ ಯತ್ನಾಳ್ ಅವರಿಗೆ ಶಿಸ್ತು ಸಮಿತಿ ನೊಟೀಸ್ ನೀಡಿರುವುದನ್ನು ನಳೀನಕುಮಾರ ಕಟೀಲ ಖಚಿತ ಪಡಿಸಿದರು.


ಇದನ್ನೂ ಓದಿ: ಪಂಜಾಬ್​ ಸ್ಥಳೀಯ ಚುನಾವಣೆ; ರೈತ ಹೋರಾಟಕ್ಕೆ ಬಿಜೆಪಿ ಧೂಳೀಪಟ, ಹೊಸ ಇತಿಹಾಸ ನಿರ್ಮಿಸಿದ ಕಾಂಗ್ರೆಸ್​!

top videos


    ಯತ್ನಾಳ್ ಅವರ ಎಲ್ಲಾ ಮಾತುಗಳಿಗೆ ನಾನು ಉತ್ತರ ಕೊಡುವುದಿಲ್ಲ. ಅದಕ್ಕೆಲ್ಲ ಸಂಬಂಧಿಸಿದವರು ಉತ್ತರ ನೀಡಲಿದ್ದಾರೆ.  ಪಕ್ಷದ ಕಾರ್ಯಕರ್ತರಿಗೆ ನಿಗಮ, ಮಂಡಳಿಯಲ್ಲಿ ಸೂಕ್ತ ಸ್ಥಾನಮಾನ ನೀಡಿಲ್ಲ ಎಂಬುದು ಯತ್ನಾಳ ಅವರ ಭಾವನೆ ಅಷ್ಟೇ.


    ವಿಜಯೇಂದ್ರ ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿ ಏನು ಕೆಲಸ ಮಾಡಬೇಕು ಅದನ್ನು ಮಾಡುತ್ತಿದ್ದಾರೆ. ಅವರಿಗೆ ಸರಕಾರದ ಯಾವುದೇ ಕೆಲಸ ನೀಡಿಲ್ಲ. ಅವರ ಸಾಮರ್ಥ್ಯ ನೋಡಿ ಪಕ್ಷ ಸಂಘಟನೆ ಜವಾಬ್ದಾರಿ ನೀಡಿದೆ. ಅದನ್ನು ವಿಜಯೇಂದ್ರ ಮಾಡುತ್ತಿದ್ದಾರೆ" ಎಂದು ತಿಳಿಸಿದರು.

    First published: