ಚಿತ್ರದುರ್ಗ : ವೀಕೆಂಡ್ ಪಾರ್ಟಿ ಮಾಡೋಕೆ ಹೋಗಿದ್ದ ಇಬ್ಬರು ರೈಲಿಗೆ ಸಿಲುಕಿ ಸ್ಥಳದಲ್ಲಿಯೇ ಮೃತಪಟ್ಟಿರೋ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ. ಕಳೆದ ವರ್ಷದಿಂದ ರಾಜ್ಯದಲ್ಲಿ ಕೊರೋನಾ ಸೋಂಕು ಅನೇಕ ಬದಲಾವಣೆಗಳನ್ನ ಮಾಡಿದೆ. ಅದರಲ್ಲೂ ಹಳ್ಳಿ ಬಿಟ್ಟು ಪಟ್ಟಣ ಸೇರಿದ್ದ ಅದೆಷ್ಟೋ ಮಂದಿ ಜನರು ಲಾಕ್ ಡೌನ್ ನಿಂದ ಮತ್ತೆ ಸಿಟಿ ಬಿಟ್ಟು ಹಳ್ಳಿಗಳಿಗೆ ಬಂದು ನೆಲಸಿರೋ ಸಾಕಷ್ಟು ಉದಾಹರಣೆಗಳು ಇವೆ. ಇದರಿಂದ ಜೀವನ, ಕೆಲಸದ ಒತ್ತಡ, ದುಡಿಮೆ ಅಂತ ಬ್ಯುಸಿಯಾಗಿ, ಎಲ್ಲರಿಂದ ದೂರವಿದ್ದು ಬದುಕು ಹಂತ ತಲುಪಿದ್ದ ಜನರು ಕೊಂಚ ರಿಲಾಕ್ಸ್ ಆಗಿ ಸ್ನೇಹಿತರು, ಸಂಬಂಧ, ಅಂತ ಹಳೆಯ ನೆನಪುಗಳನ್ನ ನೆನೆದು ಜೀವಿಸೋಕೆ ಪ್ರಾರಂಭ ಮಾಡಿದ್ರು. ಅದ್ರಲ್ಲೂ ಯುವಕರಂತೂ ಗುಂಡು ತುಂಡಿನ ಪಾರ್ಟಿಗಳನ್ನ ಮಾಡುತ್ತಾ ಶಾಲೆ, ಕಾಲೇಜು ಜೀವನ ಮೆಲುಕು ಹಾಕುತ್ತಾ ಖುಷಿ ಅನುಭವಿಸಿದ ದಿನಗಳು ಸಾಕಷ್ಟು.
ಆದರೇ ಈ ಸಂತೋಷದ ಕ್ಷಣ ಚಿತ್ರದುರ್ಗ ಜಿಲ್ಲೆಯ ಇಬ್ಬರು ಗಳೆಯರ ಪಾಲಿಗೆ ಮರಣದ ದಿನವಾಗಿ ಜೀವವನ್ನೆ ಬಲಿಪಡೆದಿದೆ. ಅದೇನಂದ್ರೆ ಕೊರೋನಾ ಎರಡನೇ ಅಲೆ ಶುರುವಾದ ಪರಿಣಾಮ ಎಲ್ಲೆಲ್ಲಿಯೋ ಇದ್ದ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೋಕಿನ ಬೋವಿ ಕಾಲೋನಿಯಲ್ಲಿ ಇದ್ದ ಯುವಕರು ಊರಿಗೆ ವಾಪಾಸ್ ಆಗಿದ್ರು. ಕೋವಿಡ್ ತಡೆಯೋಕೆ ಸರ್ಕಾರ ಹೇರಿದ್ದ ಲಾಕ್ಡೌನಲ್ಲ್ಲಿ ದಿನವಿಡೀ ಕೆಲಸವಿಲ್ಲದೆ ಕಾಲ ಕಳೆಯೋದು ಅನಿವಾರ್ಯವಾಗಿತ್ತು. ಇದರ ನಡುವೆ ಗ್ರಾಮದ ದೇವರಾಜ್ ಹಾಗೂ ಸುನೀಲ್ ಎಂಬ ಗೆಳಯರಿಬ್ಬರು ಭಾನುವಾರ ಬಂತು ಅಂದ್ರೆ ವೀಕೆಂಡ್ ಪಾರ್ಟಿ ಮಾಡೋದು, ಅಲ್ಲಿ ತಮ್ಮ ಇಷ್ಟದ ಹಾಡುಗಳನ್ನ ಹಾಡೋದು, ಸಂತೋಷದ ಸಮಯದಲ್ಲಿ ಒಳ್ಳೊಳ್ಳೆ ಹಾಡುಗಳನ್ನ ಹಾಕಿಕೊಂಡು ಕುಣಿದು ಕುಪ್ಪಳಿಸುತ್ತಿದ್ದರು. ಬೋವಿ ಕಾಲೋನಿ ನಿವಾಸಿ ದೇವರಾಜ್ ಹಲವು ವರ್ಷಗಳಿಂದ ಸರ್ಕಾರಿ ಶಾಲೆ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಲಾಕ್ ಡೌನಲ್ಲಿ ಶಾಲೆಗಳಿಗೆ ರಜೆ ಇದ್ದದ್ದರಿಂದ ಊರಲ್ಲಿಯೇ ಉಳಿದಿದ್ದರು. ಊರಲ್ಲಿದ್ದರೆ ಸ್ನೇಹಿತರ ಜೊತೆ ಸೇರಿ ಕಾಲ ಕಳೆಯೋಕೆ ನಿನ್ನೆ ಭಾನುವಾರ ಆಗಿದ್ರಿಂದ ವೀಕೆಂಡ್ ಪಾರ್ಟಿ ಮಾಡೋಕೆ ಅಂತ ಗುಂಡು, ತುಂಡು ತಯಾರಿ ಜೊತೆ, ಹಾಡು ಕೇಳೋಕೆ ಅಂತ ಸ್ಪೀಕರ್ ಬಾಕ್ಸ್, ಮೈಕ್, ಇಯರ್ ಫೋನ್ ತಂಗಡು , ಗ್ರಾಮದ ಪಕ್ಕದಲ್ಲಿದ್ದ ರೈಲ್ವೆ ಟ್ರಾಕ್ ಪಕ್ಕದ ಜಾಗಕ್ಕೆ ತೆರಳಿದ್ರು, ಸಮಯ ಕಳೆದಂತೆಲ್ಲ ಎಣ್ಣೆ ನಿಷೆ ಏರಿ ಫುಲ್ ಟೈಟಾಗಿದ್ರು, ಆ ಎಣ್ಣೆ ಮತ್ತಲ್ಲಿ ಇಬ್ಬರು ಕರೋಕೆ ಹಾಡು ಹಾಕಿ, ಕಿವಿಗಳಿಗೆ ಇಯರ್ ಫೋನ್ ಹಾಕಿಕೊಂಡು ಎಂಜಾಯ್ ಮಾಡ್ತಿದ್ರಂತೆ. ಇವರು ಎಣ್ಣೆ ಮತ್ತಲಿರುವಾಗಲೇ ಹಳಿ ದಾಟಲು ಬಂದ ವೇಳೆ ರಭಸವಾಗಿ ಬಂದ ರೈಲು ಇಬ್ಬರ ಮೇಲೆ ಹರಿದು ಹೋಗಿದೆ. ರೈಲು ಹರಿದ ಪರಿಣಾಪ ದೇವರಾಜ್, (43) ಸುನೀಲ್ (28) ಇಬ್ಬರ ಸ್ಥಳದಲ್ಲಿಯೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ಅಲ್ಲದೆ ರೈಲು ಹರಿದ ವೇಗಕ್ಕೆ ಇಬ್ಬರ ಮೃತ ದೇಹಗಳು ಛಿದ್ರ ಛಿದ್ರವಾಗಿವೆ. ಘಟನೆ ಬಳಿಕ ಸ್ಥಳಕ್ಕೆ ಬಂದ ರೈಲ್ವೆ ಪೋಲೀಸರು, ತಳಕು ಠಾಣೆ ಪೋಲೀಸರು, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ