ಕೋಲಾರ: ಇತ್ತೀಚೆಗೆ ಹಾಸನದಲ್ಲಿ ಕೋತಿಗಳ ಮಾರಣಹೋಮ (Monkey Death in Hassan) ಪ್ರಕರಣ, ರಾಜ್ಯ ಮಟ್ಟದಲ್ಲಿ ಸುದ್ದಿಯಾಗಿತ್ತು, ಆ ಘಟನೆ ಮಾಸುವ ಮುನ್ನವೇ ಬಯಲುಸೀಮೆ ಕೋಲಾರ ಜಿಲ್ಲೆಯಲ್ಲು ಇಂತದ್ದೇ ಘಟನೆ ನಡೆಯುವ ಮೂಲಕ, ಮನುಷ್ಯರು ಮತ್ತೊಮ್ಮೆ ಮೃಗಗಳಂತೆ (Inhuman Act) ವರ್ತಿಸಿದ್ದಾರೆ, ಕೋಲಾರ ನಗರ ಹೊರವಯದ ಟಮಕ ನಿರ್ಜನ ಪ್ರದೇಶದಲ್ಲಿ 16 ಕೋತಿಗಳ ಶವಗಳು ಪತ್ತೆಯಾಗಿದೆ, ಬೇರೆಕಡೆ ಕೋತಿಗಳಿಗೆ ವಿಷಪ್ರಾಸನ (Poisoning) ಮಾಡಿ ಕೊಂದಿರುವ ದುಷ್ಕರ್ಮಿಗಳು, ಮೂರು ಮೂಟೆಗಳಲ್ಲಿ ಕೋತಿಗಳ ಶವಗಳನ್ನ ತಂದು ಬಿಸಾಡಿ ಹೋಗಿದ್ದಾರೆ. ಬುಧವಾರ ಬೆಳಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ತಳಕ್ಕೆ ಅರಣ್ಯ ಇಲಾಖೆ (Forest Department) ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಳಿಕ ಕೋತಿಗಳ ಶವಗಳನ್ನು ಕೋಲಾರದ ಮಡೇರಹಳ್ಳಿ ಅರಣ್ಯ ಪ್ರದೇಶಕ್ಕೆ ರವಾನಿಸಿ, ಮೃತ ಕೋತಿಗಳ ಮರಣೋತ್ತರ ಪರೀಕ್ಷೆ ನಡೆಸಿದರು, ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ದಹನ ಸಂಸ್ಕಾರ ಮಾಡಲಾಯಿತು.
ಕೋತಿಗಳಿಗೆ ವಿಷಪ್ರಾಶನ ?
ಕೋತಿಗಳ ಮಾರಣಹೋಮದ ಕುರಿತು ಪ್ರತಿಕ್ರಿಯೆ ನೀಡಿದ ಜಿಲ್ಲಾ ಉಪ ಅರಣ್ಯಾಧಿಕಾರಿ ಇ.ಶಿವಶಂಕರ್ ಅವರು,
ಕೋತಿಗಳ ಸಾವು ಮೇಲ್ನೋಟಕ್ಕೆ ಸಹಜವಾಗಿಲ್ಲ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ, ಕೋತಿಗಳನ್ನ ಗಮನಿಸಿದಾಗ ದೇಹದ ಮೇಲೆ ಯಾವುದೇ ಸುಟ್ಟ ಗಾಯಗಳು ಇಲ್ಲ, ಜೊತೆಗೆ ಹಲ್ಲೆಯಾಗಿರುವ ಗಾಯಗಳು ಕಂಡುಬಂದಿಲ್ಲ, ಆದರೆ ಕೋತಿಗಳ ಮುಖ ಕೆಂಪು ಬಣ್ಣಕ್ಕೆ ತಿರುಗಿದ್ದು ಕಂಡುಬಂದಿದೆ, ಹೀಗಾಗಿ
ಕೋತಿಗಳಿಗೆ ವಿಷಪ್ರಾಸನ ಮಾಡಿರುವ ಸಾಧ್ಯತೆಯಿದೆ ಎಂದಿದ್ದಾರೆ, ರೈತರ ತೋಟಗಳಲ್ಲಿ ಔಷಧಿ ಸೇವಿಸಿದ ಕೆಲವು ಕೋತಿಗಳು ಸಾಯಬೇಕಿತ್ತು, ಆದರೆ 16 ಕೋಟಿಗಳು ಒಟ್ಟಿಗೆ ಸಾವನ್ನಪ್ಪಿರುವ ಕಾರಣ ಇದು ಸಹಜ ಸಾವಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನೂ ಓದಿ: ಅನಾರೋಗ್ಯದಿಂದ ಕೋತಿ ಸಾವು; ಶಾಸ್ತ್ರೋಕ್ತವಾಗಿ ಅಂತ್ಯಕ್ರಿಯೆ ನೆರವೇರಿಸಿ ಸಮಾಧಿ ನಿರ್ಮಿಸಿದ ಗ್ರಾಮಸ್ಥರು
ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಈ ಬಗ್ಗೆ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ,
ಕೋತಿಗಳ ಅಸಹಜ ಸಾವಿನ ಕುರಿತು ತೀವ್ರ ಸಂತಾಪ ಸೂಚಿಸಿರುವ ಕೋಲಾರದ ಪ್ರಾಣಿ ಪ್ರೇಮಿ ತ್ಯಾಗರಾಜು ಅವರು, ಹಾಸನದ ಕೋತಿಗಳ ಮಾರಣಹೋಮದ ಘಟನೆಯಂತೆ ಕೋಲಾರದ ಘಟನೆಯನ್ನು ಭಾವಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ, ಜೊತೆಗೆ ಕಾಡು ಪ್ರದೇಶಗಳಲ್ಲಿ ಕೋತಿಗಳಿಗೆ ಬೇಕಾಗುವ ಹಣ್ಣು, ಹಸಿ ತರಕಾರಿ ಗಿಡಿಗಳನ್ನ ಬೆಳೆಸಲು ಇಲಾಖೆಗೆ ಮನವಿ ಮಾಡುವುದಾಗಿ ತಿಳಿಸಿದ್ದಾರೆ.
ಅರಣ್ಯ ಇಲಾಖೆಯಿಂದಲೂ ತನಿಖೆ ಚುರುಕು
ಕೋತಿಗಳ ಮಾರಣಹೋಮದ ಘಟನೆಯನ್ನ ಗಂಭೀರವಾಗಿ ಪರಿಗಣಿಸಿರೊ ಅರಣ್ಯ ಇಲಾಖೆಯ ಅಧಿಕಾರಿಗಳು, ಒಂದು ವಾರದಲ್ಲಿ ಮರಣೋತ್ತರ ಪರೀಕ್ಷೆ ವರದಿ ಕೈ ಸೇರಿದ ನಂತರ ಮುಂದಿನ ಕ್ರಮ ಕೈಗೊಳ್ಳುವ ಮಾತಾಡಿದ್ದಾರೆ, ಕೋತಿಗಳಿಗೆ ವಿಷಪ್ರಾಸನ ಮಾಡುವುದು, ಬೇಟೆಯಾಡುವುದಷ್ಟೆ ಅಪರಾಧವಾಗಿದ್ದು, ಆರೋಪ ಸಾಬೀತಾದಲ್ಲಿ, 2 ವರ್ಷ ಕಠಿಣ ಸಜೆ, ಹಾಗು ದಂಡವೂ ಕಟ್ಟಬೇಕಾಗಿದ್ದು, ಸಾರ್ವಜನಿಕರಿಗೆ ಕೋತಿಗಳಿಂದ ಏನಾದರು ಸಮಸ್ಯೆಯಿದ್ದಲ್ಲಿ ಅರಣ್ಯ ಇಲಾಖೆಯ ಗಮನಕ್ಕೆ ತಂದರೆ ಕೋತಿಗಳನ್ನ ಹಿಡಿದು ಬೇರೆಡೆ ಸ್ತಳಾಂತರ ಮಾಡುವುದಾಗಿ ಮನವಿ ಮಾಡಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ