• ಹೋಂ
  • »
  • ನ್ಯೂಸ್
  • »
  • Crime
  • »
  • Bengaluru: ಅಪಾರ್ಟ್​ಮೆಂಟ್​​ನ 11ನೇ ಮಹಡಿಯಿಂದ ಜಿಗಿದ ಯುವತಿ; ಮೊಬೈಲ್​​ನಲ್ಲಿ ಮಾತನಾಡುತ್ತಾ ಆತ್ಮಹತ್ಯೆಗೆ ಶರಣು!

Bengaluru: ಅಪಾರ್ಟ್​ಮೆಂಟ್​​ನ 11ನೇ ಮಹಡಿಯಿಂದ ಜಿಗಿದ ಯುವತಿ; ಮೊಬೈಲ್​​ನಲ್ಲಿ ಮಾತನಾಡುತ್ತಾ ಆತ್ಮಹತ್ಯೆಗೆ ಶರಣು!

ಮೃತ ಯುವತಿಯ ಸಿಸಿಟಿವಿ ದೃಶ್ಯ

ಮೃತ ಯುವತಿಯ ಸಿಸಿಟಿವಿ ದೃಶ್ಯ

ಯುವತಿ ಈ ಅಪಾರ್ಟ್​​ಮೆಂಟ್ ಆಗಮಿಸುವ ಮುನ್ನ ಬೇರೆ ಒಂದು ಅಪಾರ್ಟ್​ಮೆಂಟ್​ಗೆ ಎಂಟ್ರಿ ಕೊಡಲು ಪ್ರಯತ್ನಿಸಿದ್ದಳಂತೆ. ಆದರೆ ಅದು ಸಾಧ್ಯವಾಗದ ಹಿನ್ನೆಲೆಯಲ್ಲಿ ಹೆಚ್​​ಪಿ-3 ಅಪಾರ್ಟ್​​ಮೆಂಟ್ ಬಳಿ ಬಂದಿದ್ದಾಳೆ ಎನ್ನಲಾಗಿದೆ. ಮೃತ ಯುವತಿಯ ಬಳಿ 300 ರೂಪಾಯಿ ಹಣ ಮಾತ್ರ ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಮುಂದೆ ಓದಿ ...
  • News18 Kannada
  • 4-MIN READ
  • Last Updated :
  • Bangalore [Bangalore], India
  • Share this:

SBengaluru: ಅಪಾರ್ಟ್​​ಮೆಂಟ್ (Apartment)​ ಮೇಲಿಂದ ಬಿದ್ದು ಯುವತಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ (Bengaluru) ಚಾಲುಕ್ಯ ಸರ್ಕಲ್ (Chalukya Circle) ಬಳಿ ಇರುವ ಹೆಚ್​​ಪಿ-3 ಅಪಾರ್ಟ್​​ಮೆಂಟ್​​ ಬಳಿ ಸಂಭವಿಸಿದೆ. ಅಪಾರ್ಟ್​​ಮೆಂಟ್​​ನ 11ನೇ ಮಹಡಿಯಿಂದ ಯುವತಿ (Woman) ಕೆಳಕ್ಕೆ ಬಿದ್ದಿದ್ದು, ಅಪಾರ್ಟ್​​ಮೆಂಟ್​ ಪಾರ್ಕಿಂಗ್​​ ಪ್ರದೇಶದಲ್ಲಿ ನಿಲ್ಲಿಸಿದ್ದ ಕಾರಿನ (Car) ಮೇಲೆ ಯುವತಿ ಬಿದ್ದಿದ್ದು, ಸ್ಥಳದಲ್ಲೇ ಆಕೆ ಸಾವನ್ನಪ್ಪಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಪಾರ್ಟ್​​ಮೆಂಟ್ ನಿವಾಸಿಗಳು, ಯುವತಿ ಅಪಾರ್ಟ್​​ಮೆಂಟ್​ಗೆ ಬರುವ ಸಂದರ್ಭದಲ್ಲಿ ಹಿಂದಿಯಲ್ಲಿ (Hindi) ಮಾತನಾಡುತ್ತಿದ್ದಳು ಎಂದು ತಿಳಿಸಿದೆ. ಮೃತ ಯುವತಿಯ ಸಂಜಯನಗರ (Sanjaynagara) ನಿವಾಸಿಯಾಗಿ ಪ್ರಕೃತಿ ಎಂದು ತಿಳಿದು ಬಂದಿದ್ದು, ಯುವತಿಯ ತಾಯಿ (Mother) ತೇಜು ಎಂಬವರು ಮೃತದೇಹವನ್ನು ನೋಡಿ ಗುರುತು ಖಚಿತಪಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ಸ್ಥಳಕ್ಕೆ ಹೈಗ್ರೌಂಡ್​​ ಪೊಲೀಸರು (High Ground Police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತ ಯುವತಿಯ ದೇಹವನ್ನು ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.


ಸ್ಥಳಕ್ಕೆ ಕೇಂದ್ರ ವಿಭಾಗ ಡಿಸಿಪಿ ಶ್ರೀನಿವಾಸ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸದ್ಯ ಮೃತಪಟ್ಟ ಯುವತಿ ಪ್ರಕೃತಿ ಬಗ್ಗೆ ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ. ಅಲ್ಲದೆ ಪ್ರಕೃತಿ ಅಪಾರ್ಟ್​​ಮೆಂಟ್ ನಿವಾಸಿ ಅಲ್ಲ ಹೊರಗಡೆಯಿಂದ ಬಂದು ಇಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ. ಮೃತ ಯುವತಿ ಸೋಫಿಯಾ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದಳು. ಆದರೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.


ಪ್ರಾತಿನಿಧಿಕ ಚಿತ್ರ


ಇದನ್ನೂ ಓದಿ: Zameer Ahmed Khan: ಎಲೆಕ್ಷನ್‌ಗೆ ಕುಕ್ಕರ್, ಸೀರೆ ಆಯ್ತು ಈಗ ವಿದೇಶಿ ಕರೆನ್ಸಿ ಸರದಿ; ಸೌದಿ ರಿಯಾಲ್ಸ್‌ ವಿತರಿಸಿದ ಶಾಸಕ ಜಮೀರ್​ ಅಹ್ಮದ್


ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಡಿಸಿಪಿ ಶ್ರೀನಿವಾಸ ಗೌಡ ಅವರು, ಹೈಗ್ರೌಂಡ್ ಪೊಲೀಸ್​ ಠಾಣಾ ವ್ಯಾಪ್ತಿಯ ಅಪಾರ್ಟ್​ಮೆಂಟ್​​ನಲ್ಲಿ ಘಟನೆ ನಡೆದಿದೆ. 17-20 ವರ್ಷ ವಯಸ್ಸಿನ ಯುವತಿ ಸಾವನ್ನಪ್ಪಿದ್ದಾಳೆ.


ಯುವತಿ ಬಳಿ ಮೊಬೈಲ್​ವೊಂದು ಸಿಕ್ಕಿದ್ದು, ಆದರೆ ಅದು ಸಂಪೂರ್ಣ ನಾಶವಾಗಿದೆ. ಸ್ಥಳೀಯರು ಈಕೆ ಅಪಾರ್ಟ್​ಮೆಂಟ್ ನಿವಾಸಿ ಅಲ್ಲ ಎಂದು ತಿಳಿಸಿದ್ದಾರೆ. ಅಪಾರ್ಟ್​​ಮೆಂಟ್​​ ಬಳಿ ಎರಡು ನಿಮಿಷ ಓಡಾಡುತ್ತಿದ್ದ ಯುವತಿ ಕೆಲ ಸಮಯದ ಬಳಿಕ ನನಗೆ ಗೊತ್ತಿರುವವರು ಅಪಾರ್ಟ್​​ಮೆಂಟ್​​ನಲ್ಲಿದ್ದಾರೆ ಅಂತ ಸೆಕ್ಯೂರಿಟಿ ಗಾರ್ಡ್​​ಗೆ ಹೇಳಿ ಒಳ ಬಂದಿದ್ದಾರೆ. ಆ ಬಳಿಕ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ.




ಇದನ್ನೂ ಓದಿ: Bengaluru: ಜ್ವರ ಅಂತ ಆಸ್ಪತ್ರೆ ಸೇರಿದ್ದ 25 ವರ್ಷದ ಯುವಕ ಏಕಾಏಕಿ ಸಾವು; ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾದ್ನಾ ಅಮಾಯಕ?


ಯುವತಿ ಈ ಅಪಾರ್ಟ್​​ಮೆಂಟ್ ಆಗಮಿಸುವ ಮುನ್ನ ಬೇರೆ ಒಂದು ಅಪಾರ್ಟ್​ಮೆಂಟ್​ಗೆ ಎಂಟ್ರಿ ಕೊಡಲು ಪ್ರಯತ್ನಿಸಿದ್ದಳಂತೆ. ಆದರೆ ಅದು ಸಾಧ್ಯವಾಗದ ಹಿನ್ನೆಲೆಯಲ್ಲಿ ಹೆಚ್​​ಪಿ-3 ಅಪಾರ್ಟ್​​ಮೆಂಟ್ ಬಳಿ ಬಂದಿದ್ದಾಳೆ ಎನ್ನಲಾಗಿದೆ. ಮೃತ ಯುವತಿಯ ಬಳಿ 300 ರೂಪಾಯಿ ಹಣ ಮಾತ್ರ ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.


ಬಿಜೆಪಿ ಶಾಸಕರ ಜೊತೆ ಕಾಣಿಸಿಕೊಂಡ ರೌಡಿಗಳು!


ಬಿಜೆಪಿ ಶಾಸಕ SR ವಿಶ್ವನಾಥ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರೌಡಿಗಳು ಭಾಗಿಯಾಗಿದ್ದರು. ಬೆಂಗಳೂರು ಉತ್ತರ ತಾಲೂಕಿನ ಹುಸ್ಕೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ, ಬೆತ್ತನಗೆರೆ ಮಂಜ ಹಾಗೂ ಹುಸ್ಕೂರು ಶಿವ ವಿಶ್ವನಾಥ್ ಬೆನ್ನಿಗೆ ನಿಂತಿದ್ದರು.


SR ವಿಶ್ವನಾಥ್


ಬೆಮೆಲ್‌ ಕೃಷ್ಣಪ್ಪ ಕೊಲೆ ಪ್ರಕರಣದಲ್ಲಿ ಬೆತ್ತನಗೆರೆ ಮಂಜ ಆರೋಪಿಯಾಗಿದ್ದಾನೆ. ಹುಸ್ಕೂರ್ ಶಿವ ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯ ರೌಡಿಶೀಟರ್ ಆಗಿದ್ದಾನೆ. ಇನ್ನೂ ರೌಡಿಗಳೊಂದಿಗೆ ಗುರುತಿಸಿಕೊಂಡಿದ್ದಷ್ಟೇ ಅಲ್ಲ, ಪ್ರಚೋದನಾಕಾರಿ ಭಾಷಣವೂ ಮಾಡಿದ್ದರು. ‘ನನ್ನ ಬಳಿ ಪಿಟ್​ಬುಲ್​ ನಾಯಿಗಳಿವೆ, ಬಿಟ್ಟರೆ ಸೀಳಿ ಹಾಕ್ತಾವೆ’ ಅಂತಾ ಬಿಜೆಪಿ ಶಾಸಕ ಗುಟುರಿದ್ದಾರೆ.

Published by:Sumanth SN
First published: