• ಹೋಂ
  • »
  • ನ್ಯೂಸ್
  • »
  • Crime
  • »
  • Crime News: ಹೆಂಡ್ತಿ ಕೊಂದು ಎಸ್ಕೇಪ್​​ ಆಗಿದ್ದ ನಕಲಿ ಟೆಕ್ಕಿ ಭಾರತದ ಪ್ರಜೆಯೇ ಅಲ್ಲ; ವಿಚಾರಣೆ ವೇಳೆ ಪೊಲೀಸರಿಗೆ ಶಾಕ್!

Crime News: ಹೆಂಡ್ತಿ ಕೊಂದು ಎಸ್ಕೇಪ್​​ ಆಗಿದ್ದ ನಕಲಿ ಟೆಕ್ಕಿ ಭಾರತದ ಪ್ರಜೆಯೇ ಅಲ್ಲ; ವಿಚಾರಣೆ ವೇಳೆ ಪೊಲೀಸರಿಗೆ ಶಾಕ್!

ಆರೋಪಿ ನಾಸಿರ್ ಹುಸೇನ್/ ಕೊಲೆಯಾದ ನಾಝ್​

ಆರೋಪಿ ನಾಸಿರ್ ಹುಸೇನ್/ ಕೊಲೆಯಾದ ನಾಝ್​

ಹೆಂಡತಿಯನ್ನು ಕೊಂದು ವಿಮಾನದಲ್ಲಿ ಎಸ್ಕೇಪ್​ ಆಗಿದ್ದ ಆರೋಪಿ ನಾಸಿರ್ ಹುಸೇನ್ ಕ್ರಿಮಿನಲ್ ಬ್ಯಾಕ್​ಗ್ರೌಂಡ್​​ ಕೇಳಿದರೆ ನಿಜಕ್ಕೂ ಶಾಕ್ ಆಗುತ್ತೆ!

  • News18 Kannada
  • 3-MIN READ
  • Last Updated :
  • Bangalore [Bangalore], India
  • Share this:

ಬೆಂಗಳೂರು: ಆತ ಪಿಯುಸಿಯಲ್ಲಿ (PUC) ಫೇಲ್, ಆದರೆ ಟೆಕ್ನಾಲಜಿಯಲ್ಲಿ ಫುಲ್ ಫಾಸ್ಟ್. ಯಾವ ಸಾಫ್ಟ್‌ವೇರ್ ಇಂಜಿನಿಯರ್​ಗಿಂತಲೂ (Software Engineer ) ಆತ ಕಮ್ಮಿ ಇಲ್ಲ‌. ಯಾವುದೇ ಮೊಬೈಲ್ (Mobile), ಲ್ಯಾಪ್ ಟ್ಯಾಪ್ (Laptop) ಕೊಟ್ರು ಕ್ಷಣ ಮಾತ್ರದಲ್ಲಿ ರಿಪೇರಿ ಮಾಡುತ್ತಿದ್ದ. ತಿಂಗಳಿಗೆ ಲಕ್ಷ ಲಕ್ಷ ದುಡಿಯುತ್ತಿದ್ದ, ಆದರೆ ಆತ ಬಂದಿದ್ದೆಲ್ಲಿಂದ. ಆತನ ಕ್ರಿಮಿನಲ್ ಬ್ಯಾಕ್​ಗ್ರೌಂಡ್​​ ಕೇಳಿದರೆ ನಿಜಕ್ಕೂ ಶಾಕ್ ಆಗುತ್ತೆ. ಹೌದು ಹೆಂಡತಿಯನ್ನು (Wife) ಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ ಬೆಂಗಳೂರಿಗೆ (Bengaluru) ಕರೆತಂದಿದ್ದು, ಆತನ ವಿಚಾರಣೆ ವೇಳೆ ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿದೆ.


ಬಾಂಗ್ಲಾದಿಂದ ನುಸುಳಿ ಬಂದ, ಎಂಜಿನಿಯರ್ ಆದ!


ಆರೋಪಿ ನಾಸಿರ್​ ಹುಸೇನ್​​ನನ್ನು ಪೊಲೀಸರು ಬಂಧನ ಮಾಡಿದ್ದಾರೆ. ಈತ ಕೋರಮಂಗಲದ ಪ್ರತಿಷ್ಠಿತ ಕಂಪನಿಯಲ್ಲಿ ಸಾಫ್ಟ್ ವೇರ್ ಇಂಜನಿಯರ್ ಆಗಿದ್ದ. ತಿಂಗಳಿಗೆ 1 ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಿದ್ದ. ಆದರೆ ಈತ 2014 ರಲ್ಲಿ ಬಾಂಗ್ಲಾದೇಶದಿಂದ ಅಕ್ರಮವಾಗಿ ಬಂದು ಬೆಂಗಳೂರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಆಧಾರ್, ಪಾನ್ ಹಾಗೂ ವೋಟರ್ ಐಡಿ ಕೂಡ ಮಾಡಿಕೊಂಡಿದ್ದ. ಇದೇ ಜನವರಿ 16ರಂದು ತನ್ನ ಹೆಂಡತಿಯನ್ನು ಕೊಂದು ಎಸ್ಕೇಫ್​ ಆಗಿದ್ದ ನಾಸಿರ್ ಹುಸೇನ್ ಈಗ ಖಾಕಿ ಬಲೆಗೆ ಬಿದ್ದಿದ್ದಾನೆ.


ಆರೋಪಿ ನಾಸಿರ್ ಹುಸೇನ್


ಇದನ್ನೂ ಓದಿ: Bengaluru: ಕಿಲ್ಲರ್ ಬಿಎಂಟಿಸಿ ಬಸ್​ಗೆ ಮತ್ತೊಂದು ಬಲಿ; ಚಾಲಕನ ನಿಯಂತ್ರಣ ತಪ್ಪಿ ಸರಣಿ ಅಪಘಾತ, ಮೂವರಿಗೆ ಗಾಯ


ಅಕ್ರಮ ಬಾಂಗ್ಲಾ ಪ್ರಜೆಯ ಬಗ್ಗೆ ಹಲವು ಅನುಮಾನ!


ಆರೋಪಿಯನ್ನು ಬಂಧಿಸಿದ ವೇಳೆ ಆತನ ಅಕೌಂಟ್ ನಲ್ಲಿ 25 ಲಕ್ಷ ರೂಪಾಯಿ ಇರೋದು ಪತ್ತೆಯಾಗಿದೆ. ಇದರ ಜೊತೆಗೆ ಹಲವು ರಾಜ್ಯಗಳ ಅಡ್ರಸ್​​​​​ ಇರುವ ದಾಖಲೆಗಳೂ ಸಿಕ್ಕಿದೆ. ಈತನ ಸಂಪರ್ಕದಲ್ಲಿ ಯಾರೆಲ್ಲಾ ಇದ್ದರೂ ಅನ್ನೋ ಬಗ್ಗೆಯೂ ಆಗ್ನೇಯ ವಿಭಾಗ ಡಿಸಿಪಿ ಸಿಕೆ ಬಾಬಾ ನೇತೃತ್ವದ ಟೀಂ ವಿಚಾರಣೆ ಮಾಡ್ತಿದ್ದಾರೆ.


ಈ ಕುರಿತಂತೆ ಮಾಹಿತಿ ನೀಡಿರುವ ಅಗ್ನೇಯ ವಿಭಾಗದ ಡಿಸಿಪಿ ಸಿಕೆ ಬಾಬಾ, ಈತ ಓರ್ವ ಬಾಂಗ್ಲಾದೇಶದ ಪ್ರಜೆ. ಸುಳ್ಳು ದಾಖಲೆಗಳನ್ನು ಸೃಷ್ಠಿ ಮಾಡಿ ಬೆಂಗಳೂರಿನಲ್ಲಿ ಕೆಲಸ ಶುರು ಮಾಡಿದ್ದ. ಕೊನೆಗೆ ಹೆಂಡತಿಯನ್ನು ಕೊಲೆ ಮಾಡಿ ಎಸ್ಕೇಪ್​ ಆಗಿದ್ದ ಈತ ಬಾಂಗ್ಲಾ ದೇಶದ ಗಡಿಯಲ್ಲಿ ಬರುವ ಸಂದರ್ಭದಲ್ಲಿ ಆರೋಪಿಯನ್ನು ಬಂಧನ ಮಾಡಿದ್ದೇವೆ. ಇದಕ್ಕೆ ಪಶ್ಚಿಮ ಬಂಗಾಳದ ಐದು ಜಿಲ್ಲೆಯ ಪೊಲೀಸರು ನಿರಂತರವಾಗಿ ನಮಗೆ ಸಹಕಾರ ನೀಡಿದ್ದರು. ಅವರು ಈ ವ್ಯಕ್ತಿಯನ್ನು ಗುರುತಿಸಿ ರೋಚಕವಾಗಿ ಕಾರ್ಯಾಚರಣೆ ನಡೆಸಿ ಬಂಧನ ಮಾಡಲು ಕಾರಣರಾಗಿದ್ದರು. ನಾವು ದೆಹಲಿಯಲ್ಲಿದ್ದರೆ ಆತ ನಮಗಿಂತ 2-3 ಗಂಟೆ ಮುಂಚೆ ಇರುತ್ತಿದ್ದ. ಸದ್ಯ ಆರೋಪಿಯ ವಿಚಾರಣೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ.


ಸ್ಥಳ ಪರಿಶೀಲನೆ ನಡೆಸಿದ ಪೊಲೀಸರು


ಏನೆಲ್ಲಾ ದುಷ್ಕೃತ್ಯಕ್ಕೆ ಸಂಚು ಹೂಡಿದ್ದ?


ನಾಸಿರ್ ಹುಸೇನ್ ಬಾಂಗ್ಲಾದಿಂದ ನುಸುಳಿಬಂದಿದ್ದು, ಇಂಥಾ ಇನ್ನೂ ಎಷ್ಟು ಜನ ಹೀಗೇ ಬೆಂಗಳೂರಲ್ಲಿದ್ದಾರೋ ಎನ್ನುವ ಅನುಮಾನ ಮೂಡಿದೆ. ಈ ನಾಸಿರ್ ಹುಸೇನ್ ಬೆಂಗಳೂರಲ್ಲಿ ಏನೆಲ್ಲಾ ದುಷ್ಕೃತ್ಯಕ್ಕೆ ಸಂಚು ಹೂಡಿದ್ದ ಅನ್ನೋ ಬಗ್ಗೆ ವಿಚಾರಣೆಯಿಂದ ಬಯಲಾಗ್ಬೇಕಿದೆ.


ಇದನ್ನೂ ಓದಿ: Crime News: ಮದ್ದೂರು ತಹಶೀಲ್ದಾರ್ ಕಚೇರಿಯಲ್ಲಿ ವ್ಯಕ್ತಿಯ ಮೇಲೆ ಡೆಡ್ಲಿ ಅಟ್ಯಾಕ್; ಸಿನಿಮೀಯ ಶೈಲಿಯಲ್ಲಿ ಮಚ್ಚಿನಿಂದ ಕೊಚ್ಚಿ ಕೊಲೆಗೆ ಯತ್ನ




ಏನಿದು ಪ್ರಕರಣ?


ಬೆಂಗಳೂರಿನ ಸುದ್ದುಗುಂಟೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ತಾವರೆಕೆರೆಯ ಸುಭಾಷ್​ ನಗರದ ಅಪಾರ್ಟ್​​ಮೆಂಟ್​​ ಸಮುಚ್ಚಯವೊಂದರಲ್ಲಿ ಜನವರಿ 16ರಂದು ನಾಸಿರ್ ಹುಸೇನ್ ಎಂಬಾತ ಗರ್ಭಿಣಿಯಾಗಿದ್ದ ತನ್ನ ಹೆಂಡತಿ ನಾಝ್​ಳನ್ನ ಕೊಲೆ ಮಾಡಿ ಎಸ್ಕೇಪ್ ಆಗಿದ್ದ.ಕೊಲೆ ಮಾಡಿ ಬಾಮೈದನಿಗೆ ಫೋನ್ ಮಾಡಿ ನಿನ್ನ ತಂಗಿಯನ್ನ ಕೊಲೆ ಮಾಡಿದ್ದೇನೆ, ಶವ ಮನೆಯಲ್ಲಿ ಬಿದ್ದಿದೆ ಎಂದು ಹೇಳಿ ಪರಾರಿಯಾಗಿದ್ದ.


ಆರೋಪಿ ನಾಸಿರ್ ಹುಸೇನ್/ ಕೊಲೆಯಾದ ನಾಝ್​


ಕೂಡಲೇ ಮನೆಗೆ ಹೋಗಿ ನೋಡಿದಾಗ ಮನೆಯಲ್ಲಿ ನಾಝ್​ಳ ಶವ ಬಿದ್ದಿತ್ತು. ತಕ್ಷಣವೇ ಸುದ್ದುಗುಂಟೆಪಾಳ್ಯ ಪೊಲೀಸರಿಗೆ ಮೃತ ಮಹಿಳೆಯ ಪೊಲೀಸರು ಮಾಹಿತಿ ನೀಡಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಕೊಲೆ ಮಾಡಿದ ನಾಸಿರ್​ಗಾಗಿ 3 ತಂಡಗಳನ್ನು ರಚನೆ ಮಾಡಿದ್ದರು. ಕೊಲೆ ಮಾಡಿ ಪರಾರಿಯಾಗಿದ್ದ ನಾಸೀರ್​ ಸೀದಾ ಏರ್​ಪೋರ್ಟ್​ಗೆ ತೆರಳಿ ಅಲ್ಲಿಂದ ವಿಮಾನ ಹತ್ತಿ ಪಶ್ಚಿಮ ಬಂಗಾಳಕ್ಕೆ ಎಸ್ಕೇಪ್ ಆಗಿದ್ದನಂತೆ. ಇತ್ತ ನಾಸೀರ್​ನ್ನ ಹುಡುಕಾಟ ನಡೆಸುತ್ತಿದ್ದ ಪೊಲೀಸರು ಸಿಸಿಟಿವಿ, ಕಾಲ್​ ಲೋಕೇಶನ್​ ಮೂಲಕ ಆರೋಪಿ ಇರುವ ಸ್ಥಳವನ್ನು ಟ್ರೇಸ್ ಮಾಡಿ ಬಂಧನ ಮಾಡಿದ್ದರು.

Published by:Sumanth SN
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು