• ಹೋಂ
  • »
  • ನ್ಯೂಸ್
  • »
  • Crime
  • »
  • Crime News: ಒಬ್ಬರಿಗೊಬ್ಬರು ಚಾಕು ಹಾಕಿಕೊಂಡ ಸ್ನೇಹಿತರು; ಓರ್ವ ಸಾವು, ಮಧ್ಯರಾತ್ರಿ ಬಿತ್ತು ಹೆಣ!

Crime News: ಒಬ್ಬರಿಗೊಬ್ಬರು ಚಾಕು ಹಾಕಿಕೊಂಡ ಸ್ನೇಹಿತರು; ಓರ್ವ ಸಾವು, ಮಧ್ಯರಾತ್ರಿ ಬಿತ್ತು ಹೆಣ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಒಂದೇ ಏರಿಯಾದ ಇಬ್ಬರು ಯುವಕರು ಮೊದಲು ಸ್ನೇಹಿತರಾಗಿದ್ದರು. ಆದರೆ ಇಬ್ಬರ ನಡುವೆ ಹಣಕಾಸಿನ ವ್ಯವಹಾರ ದ್ವೇಷ ಹುಟ್ಟುವಂತೆ ಮಾಡಿತ್ತು. ಈ ನಡುವೆ ಇಬ್ಬರ ನಡುವೆ ನಡೆದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯವಾಗಿದೆ.

  • News18 Kannada
  • 2-MIN READ
  • Last Updated :
  • Bangalore [Bangalore], India
  • Share this:

ಬೆಂಗಳೂರು: ಇವರಿಬ್ಬರು ಸ್ನೇಹಿತರು (Friends), ಹಣಕಾಸಿನ (Finance) ಹಿನ್ನೆಲೆ ಸ್ವಲ್ಪ ವೈಮನಸ್ಸಿತ್ತು. ಅದೇ ವಿಚಾರದಲ್ಲಿ ಮುಖಾಮುಖಿ ಆದಾಗ ಕತ್ತಿ ಮಸೆಯುತ್ತಿದ್ದರು. ರಾತ್ರಿ ಕುಡಿದ ಅಮಲಿನಲ್ಲಿ ಹಳೆ ಸ್ನೇಹಿತರ ನಡುವೆ ಕಿರಿಕ್ ಶುರುವಾಗಿದ್ದು, ಈ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿದೆ. ಹೌದು, ಫೆಬ್ರವರಿ 10ರ ರಾತ್ರಿ 11:30ರ ಸಮಯದಲ್ಲಿ ಬೆಂಗಳೂರಿನ (Bengaluru) ಕೋಣನಕುಂಟೆ ಕ್ರಾಸ್ (Konanakunte) ಬಳಿಯ ಮಂದಾರ್ತಿ ಹೋಟೆಲ್ ಬಳಿ ನಾಲ್ಕೈದು ಜನ ಜಗಳವಾಡುತ್ತಿದ್ದರು. ದಾರಿಯಲ್ಲಿ ಯಾರೋ ಕುಡಿದು ಗಲಾಟೆ (Fight) ಮಾಡುತ್ತಿದ್ದಾರೆ, ಯಾವಾಗಲೂ ಇದು ಇದ್ದಿದ್ದೆ ಅಂತ ಜನ ಕೂಡ ಮಾತನಾಡಿಕೊಂಡು ಸುಮ್ಮನಾಗಿದ್ದರು. ಆದರೆ ಇದ್ದಕ್ಕಿದ್ದಂತೆ ಸ್ಥಳದಲ್ಲಿ ಯುವಕನ (Youth) ರಕ್ತ ಚೆಲ್ಲಿತ್ತು. ಎದುರಾಳಿಯ ಮೇಲೆ ಅಟ್ಯಾಕ್ ಮಾಡಲು ಕೈಲಿ ಚಾಕು ಹಿಡಿದು ಬಂದವನು ಎದುರಾಳಿಗೆ ಇರಿಯಲು ಮುಂದಾಗಿದ್ದ, ಆದರೆ ತಾನೇ ಚಾಕು ಇರಿತಕ್ಕೆ ಬಲಿಯಾಗಿದ್ದಾನೆ. ಮೃತ ಯುವಕನನ್ನು ಶರತ್ ಎಂದು ಗುರುತಿಸಲಾಗಿದ್ದು, ಕೋಣನಕುಂಟೆ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


ಏನಿದು ಪ್ರಕರಣ?


ಕೋಣನಕುಂಟೆ ನಿವಾಸಿ ಶರತ್ ಹಾಗೂ ಅದೇ ಏರಿಯಾದ ಲೋಕೇಶ್ ಇಬ್ಬರು ಸ್ನೇಹಿತರು. ಕೆಲ ವರ್ಷಗಳ ಹಿಂದೆ ಜೊತೆಯಲ್ಲೇ ಹಣಕಾಸಿನ ವ್ಯವಹಾರ ಮಾಡುತ್ತಿದ್ದರು. ಆದರೆ ಇದರ ನಡುವೆ ಇಬ್ಬರ ನಡುವೆ ವೈಮನಸ್ಸು ಮೂಡಿ ದೂರ ಆಗಿದ್ದರು. ಆ ಬಳಿಕ ಸ್ನೇಹಿತರಾಗಿದ್ದವರು ಬದ್ಧ ವೈರಿಗಳಾಗಿ ಬದಲಾಗಿದ್ದರು.


ಸಾಂದರ್ಭಿಕ ಚಿತ್ರ


ಇದನ್ನೂ ಓದಿ: Traffic Fines Discount: 9 ದಿನದಲ್ಲಿ ಟ್ರಾಫಿಕ್​ ಪೊಲೀಸ್‌ ಅಕೌಂಟ್​​ಗೆ ಹರಿದು ಬಂತು ₹120 ಕೋಟಿ, ಇಂದು ಒಂದೇ ದಿನ ₹31.26 ಕೋಟಿ ಸಂಗ್ರಹ


ಫೆಬ್ರವರಿ 10ರ ರಾತ್ರಿ‌ ಕೋಣನಕುಂಟೆ ಕ್ರಾಸ್ ಬಳಿಯ ಬಾರ್​ನಲ್ಲಿ ಕುಡಿಯಲು ಬಂದಿದ್ದ ಶರತ್​ನನ್ನ ನೋಡಿದ ಲೋಕೇಶ್​ ಗುರಾಯಿಸಿದ್ದ. ಅಲ್ಲದೆ ಅಲ್ಲೇ ಇದ್ದ ಬಾಟಲ್ ತೆಗೆದು ಟೇಬಲ್​ಗೆ ಹೊಡೆದಿದ್ದ. ಇದರಿಂದ ಇಬ್ಬರ ನಡುವೆ ಜಗಳ ಶುರುವಾಗಿತ್ತು. ಈ ವೇಳೆ ಲೋಕೇಶ್ ಹಾಗೂ ಆತನ ಜೊತೆಗಿದ್ದ ಸಂತೋಷ್ ಹಲ್ಲೆ ಮಾಡಿದ್ದರು.




ಚಾಕು ಹಾಕಲು ಬಂದವನನ್ನೇ ಮುಗಿಸಿದ್ರು!


ಹಲ್ಲೆ ಮಾಡಿದ್ದಕ್ಕೆ ಆಕ್ರೋಶಗೊಂಡ ಶರತ್, ಪಕ್ಕದಲ್ಲೇ ಇದ್ದ ಅಂಗಡಿಗೆ ಹೋಗಿ ಚಾಕು ತೆಗೆದುಕೊಂಡು ಬಂದು ಲೋಕೇಶ್​ ಮೇಲೆ ಅಟ್ಯಾಕ್ ಮಾಡಿದ್ದ. ಆ ವೇಳೆ ಶರತ್ ಮೇಲೆ ಲೋಕೇಶ್ ಹಾಗೂ ಸಂತೋಷ್ ಅಟ್ಯಾಕ್ ಮಾಡಿ, ತಮ್ಮ ಬಳಿ ಇದ್ದ ಚಾಕು ತೆಗೆದುಕೊಂಡು ಶರತ್ ಎದೆಗೆ ಬಲವಾಗಿ ಚುಚ್ಚಿದ್ದರಂತೆ. ಆ ವೇಳೆ ತೀವ್ರ ರಕ್ತಸ್ರಾವಕ್ಕೊಳಗಾದ ಶರತ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.


ಶರತ್, ಲೋಕೇಶ್


ಓರ್ವ ಆರೋಪಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ


ಗಲಾಟೆಯಲ್ಲಿ ಶರತ್​ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಲೋಕೇಶ್​ ಮತ್ತು ಸಂತೋಷ್ ಆರೋಪಿಗಳಿದ್ದಾರೆ. ಲೋಕೇಶ್ ಈಗ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಮುಂದಿನ ತನಿಖೆಯನ್ನು ಕೈಗೊಂಡಿದ್ದೇವೆ. ಏಕಾಏಕಿ ಒಬ್ಬರ ಮೇಲೆ ಒಬ್ಬರು ಹಲ್ಲೆ ಮಾಡಿಕೊಂಡಿದ್ದಾರೆ. ಇದರಲ್ಲಿ ಓರ್ವ ಸಾವನ್ನಪ್ಪಿದ್ದಾನೆ ಎಂದು ದಕ್ಷಿಣ ವಿಭಾಗ ಡಿಸಿಪಿ ಪಿ.ಕೃಷ್ಣಕಾಂತ್ ತಿಳಿಸಿದ್ದಾರೆ.


ಇದನ್ನೂ ಓದಿ: DK Shivakumar: 'ಕಮಲ ಕೆರೆಯಲ್ಲಿದ್ರೆ ಚೆಂದ, ತೆನೆ ಹೊಲದಲ್ಲಿದ್ರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ರೆ ಚೆಂದ'! ಡಿಕೆಶಿ ಕವನ ವಾಚನ


ಗಲಾಟೆಯಲ್ಲಿ ಆರೋಪಿ ಲೋಕೇಶ್ ಕೈ ನರಗಳು ಸಹ ಕಟ್ಟಾಗಿದ್ದು, ಆಸ್ಪತ್ರೆಗೆ ದಾಖಲಾಗಿ ಪ್ರಾಣಪಾಯದಿಂದ ಪಾರಾಗಿದ್ದಾನೆ. ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಕುಮಾರಸ್ವಾಮಿ ಲೇಔಟ್ ಪೊಲೀಸರು ಆರೋಪಿಗಳನ್ನ ಬಂಧಿಸಿ, ತನಿಖೆ ಮುಂದುವರಿಸಿದ್ದಾರೆ.

Published by:Sumanth SN
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು