• ಹೋಂ
  • »
  • ನ್ಯೂಸ್
  • »
  • Crime
  • »
  • Anekal: ಚರಂಡಿ ಕ್ಲೀನ್​ ಮಾಡೋ ವಿಚಾರಕ್ಕೆ ಹೊಡೆದಾಟ, ನಡುರಸ್ತೆಯಲ್ಲೇ ದೊಣ್ಣೆಗಳಿಂದ ಬಡಿದಾಟ!

Anekal: ಚರಂಡಿ ಕ್ಲೀನ್​ ಮಾಡೋ ವಿಚಾರಕ್ಕೆ ಹೊಡೆದಾಟ, ನಡುರಸ್ತೆಯಲ್ಲೇ ದೊಣ್ಣೆಗಳಿಂದ ಬಡಿದಾಟ!

ದೊಣ್ಣೆಗಳಿಂದ ಬಡಿದಾಡಿಕೊಂಡ ಗುಂಪುಗಳು

ದೊಣ್ಣೆಗಳಿಂದ ಬಡಿದಾಡಿಕೊಂಡ ಗುಂಪುಗಳು

ಚರಂಡಿಯಲ್ಲಿ ನೀರು ಕೊಟ್ಟಿಕೊಂಡ ಕಾರಣದಿಂದ ಸಂಪತ್ ಕುಮಾರ್ ಎಂಬಾತ ಜೆಸಿಪಿ ಕರೆಯಿಸಿ ಕ್ಲೀಸ್ ಮಾಡಿಸುತ್ತಿದ್ದನಂತೆ. ಇದೇ ವೇಳೆ ಸೈಟ್ ನಂಬರ್ 11ರ ವಾಸಿ ಗಿರೀಶ್ ಕೆಲಸಕ್ಕೆ ಹೋಗಲು ಬಂದಿದ್ದ ವೇಳೆ ಜಗಳ ಆರಂಭವಾಗಿದೆ.

  • Share this:

ಬೆಂಗಳೂರು: ಚರಂಡಿ ಕ್ಲೀನ್ (Drainage Cleaning) ಮಾಡುವ ವಿಚಾರಕ್ಕೆ ಎರಡು ತಂಡಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ಬೆಂಗಳೂರು (Bengaluru) ಹೊರವಲಯದ ಆನೇಕಲ್ (Anekal) ತಾಲೂಕಿನ ಸರ್ಜಾಪುರ ಸಮೀಪದ ಮುಗಳೂರಿನಲ್ಲಿ ಘಟನೆ ನಡೆದಿದೆ. ಲೇಔಟ್​​ನ ಚರಂಡಿಯಲ್ಲಿ ನೀರು (Water) ನಿಂತ ಕಾರಣ ಸೊಳ್ಳೆಗಳು ಹೆಚ್ಚಾಗಿದ್ದವು, ಲೇಔಟಿನ ಅಧ್ಯಕ್ಷರ ಸೂಚನೆ ಪಡೆದು ಜೆಸಿಬಿಯನ್ನು (JCB) ಕರೆಸಿ ಚರಂಡಿ ಕ್ಲೀನ್ ಮಾಡಲು ಒಂದು ಗುಂಪು ಮುಂದಾಗಿತ್ತು. ಅದೇ ವೇಳೆ ಸೈಟ್ ನಂಬರ್ 11ರ ವಾಸಿ ಗಿರೀಶ್ ಕೆಲಸಕ್ಕೆ ಹೋಗಲು ಬಂದಿದ್ದು, ಈ ವೇಳೆ ಮಾತಿಗೆ ಮಾತು ಬೆಳೆದು ದೊಣ್ಣೆಗಳಿಂದ ಎರಡು ಗುಂಪಿನವರು ಬಡಿದಾಟ ಮಾಡಿಕೊಂಡಿದ್ದಾರೆ.


ಅಸಲಿಗೆ ಆಗಿದ್ದೇನು?


ಚರಂಡಿಯಲ್ಲಿ ನೀರು ಕೊಟ್ಟಿಕೊಂಡ ಕಾರಣದಿಂದ ಸಂಪತ್ ಕುಮಾರ್ ಎಂಬಾತ ಜೆಸಿಪಿ ಕರೆಯಿಸಿ ಕ್ಲೀಸ್ ಮಾಡಿಸುತ್ತಿದ್ದನಂತೆ. ಇದೇ ವೇಳೆ ಸೈಟ್ ನಂಬರ್ 11ರ ವಾಸಿ ಗಿರೀಶ್ ಕೆಲಸಕ್ಕೆ ಹೋಗಲು ಬಂದಿದ್ದು, ದುರಸ್ತಿ ಕಾರ್ಯ ನೋಡಿ ಸ್ವಲ್ಪ ಸಮಯ ಕಾದಿದ್ದಾನೆ. ಈ ವೇಳೆ ಕೆಲಸ ಮಾಡಿಸುತ್ತಿದ್ದ ಸಂಪತ್ ಕುಮಾರ್ 10 ನಿಮಿಷ ಆಗುತ್ತದೆ ಕಾಯುವಂತೆ ಹೇಳಿದ್ದು, ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳ ಆರಂಭವಾಗಿತ್ತು ಎನ್ನಲಾಗಿದೆ.




ಇದನ್ನೂ ಓದಿ: Crime News: ಒಂಟಿಯಾಗಿ ಓಡಾಡೋರೇ ಹುಷಾರ್​! ಆಟೋ ಡ್ರೈವರ್ ಮೇಲೆ ಅಟ್ಯಾಕ್‌‌, ಯುವತಿ ಅಡ್ಡಗಟ್ಟಿ ಸುಲಿಗೆ ಮಾಡಿದ್ದ ಗ್ಯಾಂಗ್ ಅಂದರ್


ಇತ್ತ ಜಗಳ ಆರಂಭವಾಗುತ್ತಿದ್ದಂತೆ ಗಿರೀಶ್ ತನ್ನ ಮನೆಯವರನ್ನ ಸ್ಥಳಕ್ಕೆ ಕರೆಸಿಕೊಂಡಿದ್ದು, ಸ್ಥಳಕ್ಕೆ ಬಂದ ಮಮತಾ, ಸಂಜಯ್, ಸರೋಜಮ್ಮ ಎನ್ನುವವರು ಜಗಳ ಆರಂಭ ಮಾಡಿದ್ದರಂತೆ. ಇತ್ತ ಮಾತಿಗೆ ಮಾತು ಬೆಳೆದು ಸಂಜಯ್ ಹಲ್ಲೆ ಆಗಿದ್ದು, ಈ ಸಂದರ್ಭದಲ್ಲಿ ಗಿರೀಶ್​ಗೆ ಸಂಜಯ್​ ಎಂಬಾತ ಕಪಾಳ ಮೋಕ್ಷ ಮಾಡಿದ್ದನಂತೆ. ಇದೇ ವೇಳೆ ಜಗಳ ಬಿಡಿಸಲು ಬಂದ ಸುಧಿ ಮತ್ತು ವೆಂಕಟೇಶ್‌ ಎಂಬವರ ಮೇಲೂ ಹಲ್ಲೆ ನಡೆದಿದೆ.


ಸಂಜಯ್ ಮತ್ತು ಗಿರೀಶ್ ಹಾಗೂ ಸರೋಜಮ್ಮ ಮತ್ತು ಮಮತಾ ಎಂಬುವವರು ಗಲಾಟೆ ಮಾಡಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಗಲಾಟೆ ಸಂದರ್ಭದಲ್ಲಿ ದೊಣ್ಣೆ ಹಿಡಿದು ಮನಸ್ಸು ಇಚ್ಚೆ ಎರಡು ಕಡೆಯುವರು ಬಡಿದಾಡಿಕೊಂಡಿದ್ದಾರೆ. ಸದ್ಯ ಎರಡು ಕಡೆಯವರಿಂದ ದೂರು ಹಾಗೂ ಪ್ರತಿ ದೂರು ದಾಖಲಾಗಿದ್ದು, ಇದೇ ತಿಂಗಳು 24ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಗಲಾಟೆ ನಡೆದ ಸಂದರ್ಭದಲ್ಲಿ ಮನೆಯ ಕಿಟಕಿ ಗಾಜು ಹೊಡೆದು ಹಾಕಲಾಗಿದ್ದು, ಬೈಕ್​ ಕೂಡ ಜಖಂಗೊಳಿಸಿದ್ದಾರೆ.

First published: