ಲಕ್ನೋ: ಒಂದು ಹೆಣ್ಣು ಮದುವೆಯಾಗುವ (Marriage) ವೇಳೆ ನೂರಾರು ಕನಸು, ಆಸೆ, ಆಕಾಂಕ್ಷೆ ಒತ್ತಿಕೊಂಡು ಗಂಡನ (Husband) ಮನೆಗೆ ಕಾಲಿಡುತ್ತಾಳೆ. ತವರನ್ನು ಬಿಟ್ಟು ಗಂಡನ ಮನೆಗೆ ಕಾಲಿಡುವ ಮಹಿಳೆ ತನ್ನ ಗಂಡನಿಂದ ಪ್ರೀತಿ, ಕಾಳಜಿ, ಬೆಂಬಲ, ತನ್ನನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಬಯಸುತ್ತಾಳೆ. ಯಾರೇ ಎದುರಾದರೂ ಗಂಡನೊಬ್ಬ ತನ್ನ ಕಷ್ಟ ಮತ್ತು ಸುಖದಲ್ಲಿ ಜೊತೆಯಾಗಿರಲಿ ಎಂಬ ಭಾವನೆಯನ್ನು ಹೊಂದಿರುತ್ತಾಳೆ. ಆದರೆ ಒಬ್ಬ ಹೆಂಡತಿಗೆ ಗಂಡನೇ ಶತ್ರುವಾದರೆ, ಜೀವನವೇ ಅಲ್ಲೋಲ, ಕಲ್ಲೋಲವಾಗಿ ಹೋಗುತ್ತದೆ. ಗಂಡನೇ ಹೆಂಡತಿಗೆ ಚಿತ್ರಹಿಂಸೆ ನೀಡಲು ಆರಂಭಿಸಿದರೆ, ಪತ್ನಿ ಏಕಾಂಗಿಯಾಗಿ ಬಿಡುತ್ತಾಳೆ. ಸದ್ಯ ಉತ್ತರ ಪ್ರದೇಶದ (Uttar Pradesh) ಲಕ್ನೋದಲ್ಲಿ (Lucknow) ಮತಾಂತರವಾಗಲು ವಿರೋಧಿಸಿದ ಪತ್ನಿಗೆ ಪತಿ ಚಿತ್ರಹಿಂಸೆ (Torture) ನೀಡಿದ್ದಾನೆ. ತನ್ನ ಮೇಲೆ ದೈಹಿಕ ಹಲ್ಲೆ ನಡೆಸಿದ್ದಲ್ಲದೇ, ಸಿಗರೇಟ್ನಿಂದ (Cigarette Butts) ಸುಟ್ಟು, ಮಾಂಸ ತಿನ್ನುವಂತೆ ಕಿರುಕುಳ ನೀಡಿದ್ದಾನೆ ಎಂದು ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
ಧರ್ಮವನ್ನು ಮುಚ್ಚಿಟ್ಟು ಮದುವೆಯಾಗಿದ್ದ ಆರೋಪಿ
ಆರೋಪಿಯನ್ನು ಚಾಂದ್ ಮೊಹಮ್ಮದ್ ಎಂದು ಗುರುತಿಸಲಾಗಿದ್ದು, ಪತಿ ಚಾಂದ್ ಮೊಹಮ್ಮದ್ ತನ್ನ ಧರ್ಮವನ್ನು ಮುಚ್ಚಿಟ್ಟು ಮದುವೆಯಾಗಿ ವಂಚಿಸಿರುವುದಾಗಿ ಮಹಿಳೆ ಆರೋಪಿಸಿದ್ದಾರೆ. ಆರೋಪಿ ಮೊಹಮ್ಮದ್ ಸಾನಿ ಮೌರ್ಯ ಎಂಬ ಹೆಸರನ್ನು ಹೇಳಿಕೊಂಡು ತನ್ನನ್ನು ಮದುವೆಯಾಗಿದ್ದಾನೆ. ನಂತರ ಇಬ್ಬರು ನಗರದಲ್ಲಿ ಬಾಡಿಗೆ ಮನೆ ಪಡೆದು ವಾಸಿಸುತ್ತಿದ್ದೇವು ಎಂದು ಮಹಿಳೆ ತಿಳಿಸಿದ್ದಾಳೆ.
ಸಿಗರೇಟ್ನಿಂದ ಪತ್ನಿಗೆ ಸುಟ್ಟಿದ್ದ ಆರೋಪಿ
ಇಸ್ಲಾಂ ಧರ್ಮಕ್ಕೆ ಮತಾಂತರವಾಗಲು ನಿರಾಕರಿಸಿದ್ದರಿಂದ ಪತಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ, ಸಿಗರೇಟ್ ತುಂಡುಗಳಿಂದ ಸುಟ್ಟಿದ್ದಾನೆ ಮತ್ತು ಬಿಸಿ ಎಣ್ಣೆಯನ್ನು ತನ್ನ ಮೇಲೆ ಎರಚಿದ್ದಾನೆ. ಇಷ್ಟೇ ಅಲ್ಲದೇ ತನ್ನ ವಿರುದ್ಧ ಪೊಲೀಸರಿಗೆ ದೂರು ನೀಡಿದರೆ ಕೊಲೆ ಮಾಡುವುದಾಗಿ ಮತ್ತು ಸಂಬಂಧಿಕರಿಂದ ಅತ್ಯಾಚಾರ ಮಾಡಿಸುವುದಾಗಿ ಬೆದರಿಕೆಯೊಡ್ಡಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಪತ್ನಿಯನ್ನು ಕೋಣೆಯಲ್ಲಿ ಕೂಡಿ ಹಾಕಿದ್ದ ಪತಿ
ಎಲ್ಲಿ ಮನೆ ಬಿಟ್ಟು ಹೋಗಿ ತನ್ನ ಮೇಲೆ ದೂರು ದಾಖಲಿಸುತ್ತಾಳೋ ಎಂಬ ಭಯದಲ್ಲಿ ಆರೋಪಿ ಆಕೆಯನ್ನು ಕೋಣೆಯೊಳಗೆ ಬೀಗ ಹಾಕಿ ಕೂಡಿ ಹಾಕಿದ್ದನು. ಅಲ್ಲದೇ ಐದು ತಿಂಗಳ ಗರ್ಭಿಣಿಯಾಗಿದ್ದಾಗ ಆರೋಪಿ ಮೊಹಮ್ಮದ್ ಹೊಟ್ಟೆಗೆ ಒದ್ದಿದ್ದು, ಆಗ ಗರ್ಭಪಾತ ಕೂಡ ಆಗಿತ್ತು ಎಂದು ಮಹಿಳೆ ಆರೋಪಿಸಿದ್ದಾಳೆ. ಆದ್ಯಾಗೋ, ಮಹಿಳೆ ಆ ನರಕದಿಂದ ತಪ್ಪಿಸಿಕೊಂಡು ಈಗ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಿಸಿದ್ದಾಳೆ.
ಮತಾಂತರವಾಗಲು ನಿರಾಕರಿಸಿದ್ದ ಗೆಳತಿಯನ್ನು 4ನೇ ಮಹಡಿಯಿಂದ ತಳ್ಳಿ ಹತ್ಯೆ
ಕೆಲವು ದಿನಗಳ ಹಿಂದೆ ಮುಸ್ಲಿಂ ಯುವಕನೊಬ್ಬ ಮತಾಂತರವಾಗಲು ನಿರಾಕರಿಸಿದ್ದ ತನ್ನ 19 ವರ್ಷದ ಗೆಳತಿಯನ್ನು 4ನೇ ಮಹಡಿಯಿಂದ ತಳ್ಳಿ ಹತ್ಯೆಗೈದಿದ್ದ. ಇನ್ನೂ ಈ ಘಟನೆ ಉತ್ತರ ಪ್ರದೇಶದ ಲಕ್ನೋನಲ್ಲಿ ನಡೆದಿತ್ತು. ಆರೋಪಿ ಸೂಫಿಯಾನ್ ಹಾಗೂ ನಿಧಿ ಗುಪ್ತ ದುಬಗ್ಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೇ ವಾಸಿಸುತ್ತಿದ್ದರು. ನಿಧಿ ಬ್ಯೂಟಿಷಿಯನ್ ತರಬೇತಿ ಪಡೆದಿದ್ದಳು. ಒಂದೆರಡು ತಿಂಗಳಿನಿಂದ ಇಬ್ಬರು ಪ್ರೀತಿಸುತ್ತಿದ್ದರು.
ಯುವತಿಗೆ ಇಸ್ಲಾಂಗೆ ಮತಾಂತರವಾಗುವಂತೆ ಬ್ರೈನ್ವಾಶ್
ಸೂಫಿಯಾನ್ ನಿಧಿಗೆ ಮೊಬೈಲ್ (Mobile) ಸಹ ಕೊಡಿಸಿದ್ದ. ಕರೆ ಮಾಡಿದಾಗೆಲ್ಲಾ, ಸಂದೇಶಗಳನ್ನು ಕಳಿಸುವಾಗ ಆಕೆಯನ್ನು ಇಸ್ಲಾಂಗೆ ಮತಾಂತರವಾಗುವಂತೆ ಬ್ರೈನ್ವಾಶ್ ಮಾಡುತ್ತಿದ್ದ. ಈ ವಿಷಯ ತಿಳಿದ ನಿಧಿ ಪೋಷಕರು ಸೂಫಿಯಾನ್ ಮತ್ತು ಅವನ ಕುಟುಂಬಕ್ಕೆ ಬೆದರಿಕೆ ಹಾಕಿದ್ದರು. ಬಲವಂತವಾಗಿ ಮತಾಂತಗೊಳಿಸಲು ಪ್ರಯತ್ನಿಸುತ್ತಿದ್ದರಿಂದ ನಿಧಿಯನ್ನು ಅಜ್ಜಿ ಮನೆಗೆ ಕಳುಹಿಸಿದ್ದರು. ಇದರಿಂದ ಕೆಲ ದಿನಗಳಿಂದ ಸೂಫಿಯಾನ್ನೊಂದಿಗೆ ಮಾತನಾಡುವುದು ನಿಂತಿತ್ತು.
Stringent action will be taken & unlawful activities will not be tolerated. We've instructed police officials of all units to identify such people & take strict action, one that their generations will remember: Uttar Pradesh Deputy CM Brajesh Pathak on Lucknow death case https://t.co/sv0sJo4QRL
— ANI UP/Uttarakhand (@ANINewsUP) November 16, 2022
ಇದನ್ನೂ ಓದಿ: Koppal: ಕಾರಟಗಿಯಲ್ಲಿ ಮತಾಂತರ ಆರೋಪ; ಪಾಸ್ಟರ್ ಮಗನಿಂದ ಅಪ್ರಾಪ್ತೆ ಮೇಲೆ ಅತ್ಯಾಚಾರ?
ಸೂಫಿಯಾನ್ ದುರ್ವರ್ತನೆಯಿಂದ ಪೋಷಕರು ದೂರು ನೀಡಿದ್ದರು. ಬಳಿಕ ರಾಜಿ ಮಾಡಿಕೊಳ್ಳಲಾಗಿತ್ತು. ಆದರೆ ಭಾನುವಾರ ನಿಧಿ ತನ್ನ ಮನೆಯ ನಾಲ್ಕನೇ ಮಹಡಿಗೆ ಬಂದಾಗ ಬಾಲ್ಕನಿಯಿಂದ ಎಸೆದಿದ್ದಾನೆ ಎಂದು ಕುಟುಂಬಸ್ಥರು ದೂರು ನೀಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ