• ಹೋಂ
  • »
  • ನ್ಯೂಸ್
  • »
  • Corona
  • »
  • Telangana: ಇಳಿಕೆಯಾದ ಸೋಂಕು: ತೆಲಂಗಾಣದಲ್ಲಿ ಕೋವಿಡ್​​ ಲಾಕ್​ಡೌನ್​ ಸಂಪೂರ್ಣ ತೆರವು

Telangana: ಇಳಿಕೆಯಾದ ಸೋಂಕು: ತೆಲಂಗಾಣದಲ್ಲಿ ಕೋವಿಡ್​​ ಲಾಕ್​ಡೌನ್​ ಸಂಪೂರ್ಣ ತೆರವು

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

ಕೋವಿಡ್​ನಿಂದ ತೀವ್ರವಾಗಿ ತತ್ತರಿಸಿದ ರಾಜ್ಯಗಳಲ್ಲಿ ತೆಲಂಗಾಣ ಕೂಡ ಒಂದಾಗಿತ್ತು. ತೆಲಂಗಾಣದಲ್ಲಿ ಸದ್ಯ ಕೋವಿಡ್​ ಪಾಸಿಟಿವಿಟಿ ರೇಟ್​ 1. 14ರಷ್ಟಿದೆ.

  • Share this:

ಕೋವಿಡ್​ ಎರಡನೇ ಅಲೆ ಹಿನ್ನಲೆ ವಿಧಿಸಿದ್ದ ರಾಜ್ಯದ್ಯಾಂತ ವಿಧಿಸಿದ್ದ ಲಾಕ್​ಡೌನ್ ಅನ್ನು ಸಂಪೂರ್ಣವಾಗಿ ತೆಗೆಯಲು ತೆಲಂಗಾಣ ಸರ್ಕಾರ ನಿರ್ಧರಿಸಿದೆ. ರಾಜ್ಯದಲ್ಲಿ ಸೋಂಕಿನ ಪ್ರಮಾಣ ಇಳಿಕೆಯಾಗಿರುವ ಹಿನ್ನಲೆ ನಾಳೆಯಿಂದಲೇ ರಾಜ್ಯದಲ್ಲಿ ಈ ಮುಂಚೆ ವಿಧಿಸಿರುವ ಲಾಕ್​ಡೌನ್​ ​ನಿಯಮವನ್ನು ಸಡಿಲಿಕೆ ಮಾಡಲಾಗುವುದು. ಇದರ ಜೊತೆಗೆ ಯಾವುದೇ ನಿರ್ಬಂಧವನ್ನು ಮುಂದುವರೆಸಲಾಗುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ರಾಜ್ಯದಲ್ಲಿ ಕೋವಿಡ್​ ಪಾಸಿಟಿವಿಟಿ ರೇಟ್​ ಗಮನಾರ್ಹವಾಗಿ ಕಡಿಮೆಯಾಗಿದೆ, ರಾಜ್ಯದಲ್ಲಿ ಕೋವಿಡ್​ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ. ಈ ಹಿನ್ನಲೆ ಲಾಕ್​ಡೌನ್​ ಮುಂದುವರೆಸುವ ಅವಶ್ಯಕತೆ ಇಲ್ಲ ಎಂಬ ಬಗ್ಗೆ ರಾಜ್ಯ ಆರೋಗ್ಯ ಇಲಾಖೆ ವರದಿ ನೀಡಿದೆ.


ಈ ವರದಿ ಅನ್ವಯ ರಾಜ್ಯದಲ್ಲಿ ಕೋವಿಡ್​ ಹಿನ್ನಲೆ ಹೇರಿರುವ ನಿರ್ಬಂಧಗಳನ್ನು ತೆಗೆದುಹಾಕುವಂತೆ ವಿವಿಧ ಇಲಾಖೆಗಳು ಕೂಡ ಶಿಫಾರಸ್ಸು ಮಾಡಿದ್ದವು. ಈ ಕುರಿತು ಚರ್ಚೆ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿದ ಬಳಿಕ ನಾಳೆ ರಾತ್ರಿ ಅಂದರೆ ಜೂ. 20ರಿಂದ ರಾತ್ರಿ ಕರ್ಫ್ಯೂ ತೆಗೆದುಹಾಕಲು ನಿರ್ಧರಿಸಲಾಗಿದೆ.


ಕೋವಿಡ್​ನಿಂದ ತೀವ್ರವಾಗಿ ತತ್ತರಿಸಿದ ರಾಜ್ಯಗಳಲ್ಲಿ ತೆಲಂಗಾಣ ಕೂಡ ಒಂದಾಗಿತ್ತು. ತೆಲಂಗಾಣದಲ್ಲಿ ಸದ್ಯ ಕೋವಿಡ್​ ಪಾಸಿಟಿವಿಟಿ ರೇಟ್​ 1. 14ರಷ್ಟಿದೆ. ಕಳೆದ 24 ಗಂಟೆಗಳಲ್ಲಿ 1.400 ಹೊಸ ಸೋಂಕಿನ ಪ್ರಕರಣ ದಾಖಲಾಗಿದ್ದು, 12 ಸಾವು ಸಂಭವಿಸಿದೆ,
ಇತ್ತೀಚೆಗಷ್ಟೇ ತೆಲಂಗಾಣ ಸರ್ಕಾರ ಜೂನ್​ 10ರಿಂದ ಜೂನ್​ 20ರವರೆಗೆ ಲಾಕ್​ಡೌನ್​ ವಿಸ್ತರಿಸಿ ಆದೇಶ ನೀಡಿತ್ತು.


ರಾಜ್ಯದಲ್ಲಿ ಸೋಂಕು ಗಣನೀಯವಾಗಿ ಕಡಿಮೆಯಾಗಿರುವ ಹಿನ್ನಲೆ ರಾಜ್ಯ ಸರ್ಕಾರ ಶಿಕ್ಷಣ ಇಲಾಖೆಗೆ ಶಾಲೆಗಳನ್ನು ಪುನರ್​ ಆರಂಭಿಸುವಂತೆ ನಿರ್ದೇಶನ ಕೂಡ ನೀಡಿದೆ.
ರಾಜ್ಯದಲ್ಲಿ ಸೋಂಕಿನ ಪ್ರಕರಣ ಇಳಿಕೆ ಆಗಿದೆ ಎಂದ ಮಾತ್ರಕ್ಕೆ ಜನರು ಮೈ ಮರೆಯಬಾರದು. ಜನರು ಕಡ್ಡಾಯವಾಗಿ ಮಾಸ್ಕ್​ ಧರಿಸುವುದು, ಸಾಮಾಜಿಕ ಅಂತರ ಕಾಪಾಡಬೇಕು ಎಂದು ತಿಳಿಸಿದೆ.


ಕೇಂದ್ರದಿಂದ ಎಚ್ಚರಿಕೆ
ವಿವಿಧ ರಾಜ್ಯ ಮತ್ತು ಕೇಂದ್ರಾಡಳಿ ಪ್ರದೇಶಗಳಲ್ಲಿ ಸೋಂಕು ಇಳಿಕೆಯಾಗುತ್ತಿರುವ ಹಿನ್ನಲೆ ಅನ್​ಲಾಕ್​ ಮೊರೆ ಹೋಗುತ್ತಿರುವ ದೇಶದ ವಿವಿಧ ರಾಜ್ಯಗಳಿಗೆ ಇಂದು ಕೇಂದ್ರ ಸರ್ಕಾರ ಕಿವಿ ಮಾತು ಹೇಳಿದೆ. ಲಾಕ್​ಡೌನ್​ ಸಡಿಲಿಕೆ ಪ್ರಕ್ರಿಯೆಯನ್ನು ಎಚ್ಚರಿಕೆಯ ಮಾಪನಾಂಕ ಮೂಲಕ ನಿರ್ಣಯಿಸಲಾಗಿದೆ ಎಂಬುದನ್ನು ಖಾತ್ರಪಡಿಸಿಕೊಳ್ಳಬೇಕು. ಅಲ್ಲದೇ ಕೋವಿಡ್​ ನಿಯಮವಾಳಿಗಳನ್ನು ಚಾಚೂತಪ್ಪದೇ ಅನುಸರಿಸಬೇಕು. ಮಾರ್ಕೆಟ್​ ಸೇರಿದಂತೆ ವಿವಿಧೆಡೆ ಜನಸಂದಣಿಯಾಗದಂತೆ ನೋಡಿಕೊಳ್ಳಬೇಕು ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ಅಜಯ್​ ತಿಳಿಸಿದ್ದಾರೆ.


ಲಾಕ್​ಡೌನ್​ ಸಡಿಲಿಕೆ ಬಳಿಕವೂ ಕೋವಿಡ್​ ನಿಯಮಾವಳಿ ಪಾಲನೆ ಪರೀಕ್ಷೆ, ಪತ್ತೆ ಹಚ್ಚುವಿಕೆ, ಚಿಕಿತ್ಸೆ, ವಾಕ್ಸಿನ್​ ಐದು ತಂತ್ರಗಳನ್ನು ಅನುಸರಿಸುವುದು ಮುಖ್ಯ ಎಂದು ತಿಳಿಸಿದೆ.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು

top videos
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು