• ಹೋಂ
  • »
  • ನ್ಯೂಸ್
  • »
  • Corona
  • »
  • White Fungus: ವ್ಯಕ್ತಿಯಲ್ಲಿ ಅಪರೂಪದ ವೈಟ್ ಫಂಗಸ್ ಪತ್ತೆ: ಮಧುಮೇಹಿ ಅಲ್ಲದಿದ್ದರೂ ವಕ್ಕರಿಸಿದ ಶಿಲೀಂದ್ರಿ!

White Fungus: ವ್ಯಕ್ತಿಯಲ್ಲಿ ಅಪರೂಪದ ವೈಟ್ ಫಂಗಸ್ ಪತ್ತೆ: ಮಧುಮೇಹಿ ಅಲ್ಲದಿದ್ದರೂ ವಕ್ಕರಿಸಿದ ಶಿಲೀಂದ್ರಿ!

 ರೋಗಿಯ ಎಕ್ಸ್​​ರೇ

ರೋಗಿಯ ಎಕ್ಸ್​​ರೇ

ಸಾಮಾನ್ಯವಾಗಿ ಕೊರೊನಾದಿಂದ ಗುಣಮುಖರಾದ ಮಧುಮೇಹಿಗಳಲ್ಲಿ ಬ್ಲ್ಯಾಕ್​ ಫಂಗಸ್​ ಕಂಡು ಬರುತ್ತದೆ. ಆದರೆ ವೈಟ್​ ಫಂಗಸ್​ಗೆ ತುತ್ತಾಗಿರುವ ವ್ಯಕ್ತಿಗೆ ಸಕ್ಕರೆ ಕಾಯಿಲೆ ಇಲ್ಲ. ವೈಟ್​​ ಫಂಗಸ್​​ ಮಧುಮೇಹಿಗಳಲ್ಲದವರಿಗೂ ಬರುತ್ತದೆ ಎಂಬುವುದು ಅಚ್ಚರಿ ತರಿಸಿದೆ.

  • Share this:

ದೇಶಾದ್ಯಂತ ಕೊರೊನಾ 2ನೇ ಅಲೆ ತಗ್ಗಿದ್ದು, 3ನೇ ಅಲೆಯ ಭೀತಿ ಶುರುವಾಗಿದೆ. 2ನೇ ಅಲೆ ವೇಳೆ ಸೋಂಕಿನಿಂದ ಗುಣಮುಖರಾದವರಲ್ಲಿ ಬ್ಲ್ಯಾಕ್​​ ಫಂಗಸ್​ ಕಾಣಿಸಿಕೊಂಡಿತ್ತು. ಸರ್ಕಾರಗಳ ಕಠಿಣ ಕ್ರಮ ಹಾಗೂ ಚಿಕಿತ್ಸೆ ಮೂಲಕ ಸಾವಿನ ಪ್ರಮಾಣವನ್ನು ನಿಯಂತ್ರಿಸಲಾಗಿತ್ತು. ಬ್ಲ್ಯಾಕ್​​ ಫಂಗಸ್​​ ಬೆನ್ನಲ್ಲೇ ಯೆಲ್ಲೋ ಫಂಗಸ್​, ಗ್ರೀನ್​ ಫಂಗಸ್​ ಕೂಡ ಕಾಣಿಸಿಕೊಂಡು ಜನರಲ್ಲಿ ಆತಂಕ ಮೂಡಿಸಿತ್ತು. ಈಗ ಮತ್ತೊಂದು ಅಪರೂಪದ ಫಂಗಸ್​​ ಕಾಣಿಸಿಕೊಂಡಿರುವುದು ದುಗುಡವನ್ನು ಹೆಚ್ಚಿಸಿದೆ. ಕೊರೊನಾದಿಂದ ಗುಣಮುಖರಾದ ಹೈದ್ರಾಬಾದ್​​ನ ವ್ಯಕ್ತಿಯಲ್ಲಿ ವೈಟ್​​ ಫಂಗಸ್​ ಕಾಣಿಸಿಕೊಂಡಿದೆ. ಮೆದುಳಿನಲ್ಲಿ ಅಪರೂಪದ ಬಿಳಿ ಶಿಲೀಂದ್ರಿ ಪತ್ತೆಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.


ಮೇ ತಿಂಗಳಲ್ಲಿ ಕೊರೊನಾ ಸೋಂಕಿಗೆ ತುತ್ತಾಗಿದ್ದ ವ್ಯಕ್ತಿ ಚಿಕಿತ್ಸೆ ಬಳಿಕ ಕೋವಿಡ್​ ರಿಪೋರ್ಟ್​​ ನೆಗೆಟಿವ್​​ ಬಂದಿತ್ತು. ಆದರೆ ಅಂದಿನಿಂದಲೂ ಆರೋಗ್ಯ ಕ್ಷೀಣಿಸುತ್ತಿತ್ತು, ಅಂಗಾಂಗಗಳು ಸೊರಗಲಾರಂಭಿಸಿದವು. ನಂತರ ಮಾತನಾಡಲು ವ್ಯಕ್ತಿಗೆ ಸಾಧ್ಯವಾಗದೇ ಹೋದಾಗ ವೈದ್ಯರು ಎಂಆರ್​​ಐ ಸ್ಕ್ಯಾನ್​​​ಗೆ ಮುಂದಾಗಿದ್ದರು. ಕೊರೊನಾದಿಂದ ಗುಣಮುಖರಾದ ಬಳಿಕ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿರಬಹುದು ಎಂದು ವೈದ್ಯರು ಅಂದಾಜಿಸಿದ್ದರು. ಆದರೆ ಆಪರೇಷನ್​ ಮಾಡಿದಾಗ ಮೆದುಳಿನಲ್ಲಿ ಅಪರೂಪದ ವೈಟ್​ ಫಂಗಸ್​​ ಬೆಳೆದಿರುವುದು ತಿಳಿದು ಬಂದಿದೆ.


ಹೈದ್ರಾಬಾದ್​ ಆಸ್ಪತ್ರೆಯ ಹಿರಿಯ ನ್ಯೂರೋಸರ್ಜನ್​​ ರಂಗಾನಂದಂ ಮಾತನಾಡಿ, ರೋಗಿಯ ಮೆದುಳಿನಲ್ಲಿ ಇನ್​ಫೆಕ್ಷನ್​ ಕಂಡು ಬಂದಿದೆ. ಇದೊಂದು ಅಪರೂಪದ ಪ್ರಕರಣವಾಗಿದೆ. ಸಾಮಾನ್ಯವಾಗಿ ಕೊರೊನಾದಿಂದ ಗುಣಮುಖರಾದ ಮಧುಮೇಹಿಗಳಲ್ಲಿ ಬ್ಲ್ಯಾಕ್​ ಫಂಗಸ್​ ಕಂಡು ಬರುತ್ತದೆ. ಆದರೆ ವೈಟ್​ ಫಂಗಸ್​ಗೆ ತುತ್ತಾಗಿರುವ ವ್ಯಕ್ತಿಗೆ ಸಕ್ಕರೆ ಕಾಯಿಲೆ ಇಲ್ಲ. ವೈಟ್​​ ಫಂಗಸ್​​ ಮಧುಮೇಹಿಗಳಲ್ಲದವರಿಗೂ ಬರುತ್ತದೆ ಎಂಬುವುದು ಅಚ್ಚರಿ ತರಿಸಿದೆ. ಇನ್ನು ಬ್ಲ್ಯಾಕ್​ ಫಂಗಸ್​ನಂತೆ ಇದು ಮೂಗಿನಿಂದ ಮೆದುಳಿಗೆ ಹಬ್ಬಿಲ್ಲ, ಮೆದುಳಿನಲ್ಲೇ ಕಾಣಿಸಿಕೊಂಡಿದೆ ಎಂದು ತಿಳಿಸಿದ್ದಾರೆ.


MRI ಸ್ಕ್ಯಾನ್​ನಲ್ಲಿ ಸಂಶಯಾಸ್ಪದ ವಸ್ತು ಮೆದುಳಿನಲ್ಲಿ ಕಂಡಿತ್ತು. ಆಪರೇಷನ್​ನಿಂದ ವೈಟ್​ ಫಂಗಸ್​​ ಪತ್ತೆಯಾಗಿದೆ. ಕೊರೊನಾದಿಂದ ಚೇತರಿಸಿಕೊಂಡವರಲ್ಲಿ ವೈಟ್​ ಫಂಗಸ್​ ಕಾಣಿಸಿಕೊಳ್ಳುವ ಸಾಧ್ಯತೆಗಳು ಇರಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ವೈದ್ಯಕೀಯ ಸಂಶೋಧನೆ ನಡೆಯಬೇಕು ಎಂದು ಡಾ. ರಂಗಾನಂದಂ ತಿಳಿಸಿದ್ದಾರೆ.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

Published by:Kavya V
First published: