• ಹೋಂ
  • »
  • ನ್ಯೂಸ್
  • »
  • Corona
  • »
  • ಕೋವಿಡ್​-19 ಪರಿಸ್ಥಿತಿ ಕುರಿತು ಚರ್ಚಿಸಲು ಪ್ರಧಾನಿ ನೇತೃತ್ವದಲ್ಲಿ ಶುಕ್ರವಾರ ಸರ್ವಪಕ್ಷ ಸಭೆ

ಕೋವಿಡ್​-19 ಪರಿಸ್ಥಿತಿ ಕುರಿತು ಚರ್ಚಿಸಲು ಪ್ರಧಾನಿ ನೇತೃತ್ವದಲ್ಲಿ ಶುಕ್ರವಾರ ಸರ್ವಪಕ್ಷ ಸಭೆ

ನರೇಂದ್ರ ಮೋದಿ

ನರೇಂದ್ರ ಮೋದಿ

ವಿಡಿಯೋ ಕಾನ್ಫರೆನ್ಸ್​ ಮೂಲಕ ಶುಕ್ರವಾರ ಬೆಳಗ್ಗೆ 10.30ಕ್ಕೆ ಈ ಸಭೆ ನಡೆಯಲಿದೆ.

  • Share this:

    ನವದೆಹಲಿ (ನ.30): ದೇಶದಲ್ಲಿ ಕೊರೋನಾ ಸೋಂಕು ಕಡಿಮೆಯಾಗುತ್ತಿದೆ ಎನ್ನುವ ಹೊತ್ತಿಗೆ ಮತ್ತೆ ಪ್ರಕರಣ ಸಂಖ್ಯೆ ಹೆಚ್ಚಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನಲೆ ಈ ಕುರಿತು ನಾಯಕರ ಜೊತೆ ಚರ್ಚೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ಸರ್ವ ಪಕ್ಷ ಸಭೆ ನಡೆಸಲು ಮುಂದಾಗಿದ್ದಾರೆ. ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಗೆ ಗೃಹ ಸಚಿವ ಅಮಿತ್​ ಶಾ, ಅರೋಗ್ಯ ಸಚಿವ ಹರ್ಷ ವರ್ಧನ್​, ರಕ್ಷಣಾ ಸಚಿವ ರಾಜನಾಥ್​ ಸಿಂಗ್​, ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್​ ಜೋಶಿ, ಅರ್ಜುನ್​ ರಾಮ್​ ಮೇಘಾವಲ್​ ಮತ್ತು ವಿ ಮುರಳೀಧರನ್​ ಸೇರಿದಂತೆ ಕ್ಯಾಬಿನೆಟ್​ ಕಾರ್ಯದರ್ಶಿ ರಾಜೀವ್​ ಗೌಬಾ ಇತರ ಅಧಿಕಾರಿಗಳು ಹಾಜರಿರಲಿದ್ದಾರೆ. ವಿಡಿಯೋ ಕಾನ್ಫರೆನ್ಸ್​ ಮೂಲಕ ನಡೆಯಲಿರುವ ಈ ಸಭೆ ಶುಕ್ರವಾರ ಬೆಳಗ್ಗೆ 10.30ಕ್ಕೆ ನಡೆಯಲಿದೆ. ಸಿಎನ್​ಎನ್​ ನ್ಯೂಸ್​ 18ಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ, ಈಗಾಗಲೇ ರಾಜ್ಯಸಭೆ ಮತ್ತು ಲೋಕಸಭೆಯ ಎಲ್ಲಾ ಮುಖಂಡರಿಗೆ ಈಗಾಗಲೇ ಆಹ್ವಾನ ನೀಡಲಾಗಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವಾಲಯ ತಿಳಿಸಿದೆ.



    ಕೊರೋನಾ ವೈರಸ್​ ಪ್ರಾರಂಭ ಕಾಲದಲ್ಲಿ ಕೂಡ ಪ್ರಧಾನಿಗಳು ಸರ್ವಪಕ್ಷ ಸಭೆ ನಡೆಸಿದ್ದರು. ಈಗ ಮತ್ತೊಮ್ಮೆ ಸಭೆ ಕರೆದಿದ್ದಾರೆ. ಈ ಬಾರಿ ಶಾಸಕಾಂಗ ಸದನದಲ್ಲಿ ಐದು ಸಂಸದರಿಗಿಂತ ಕಡಿಮೆ ಹೊಂದಿರುವ ಪಕ್ಷದ ನಾಯಕರನ್ನು ಆಹ್ವಾನಿಸಲಾಗಿದೆ. ಮೂಲಗಳ ಪ್ರಕಾರ ಅವರಿಗೆ ಮಾತನಾಡುವ ಅವಕಾಶಗಳು ಸಿಗದೇ ಹೋಗಬಹುದು ಎನ್ನಲಾಗಿದೆ.


    ಇದನ್ನು ಓದಿ: ಜನವರಿಯಲ್ಲಿ ರಜನಿಕಾಂತ್​​ ರಾಜಕೀಯ ಪ್ರವೇಶ ಸಾಧ್ಯತೆ; ಶೀಘ್ರದಲ್ಲಿಯೇ ನಿರ್ಧಾರ ಎಂದ ಸೂಪರ್​ಸ್ಟಾರ್​​


    ವಿಶ್ವದಲ್ಲಿಯೇ ಅಮೆರಿಕ ಬಳಿಕ ಭಾರತದಲ್ಲಿ ಅತಿ ಹೆಚ್ಚು ಕೊರೋನಾ ಪ್ರಕರಣಗಳು ಕಂಡು ಬರುತ್ತಿದೆ. ಆದರೆ, ಜಾಗತಿಕವಾಗಿ ಭಾರತದಲ್ಲಿ ಸಾವಿನ ಸಂಖ್ಯೆ ಕಡಿಮೆಯಾಗಿದೆ. ಈ ನಡುವೆಗೆ ಕೋವಿಡ್​ಗೆ ಯಾವಾಗ ಚುಚ್ಚುಮದ್ದು ಸಿಗಲಿದೆ ಎಂಬ ಪ್ರಶ್ನೆ ಕೂಡ ಮೂಡಿದೆ. ಇನ್ನು ಶನಿವಾರ ದೇಶದ ಲಸಿಕಾ ಉತ್ಪಾದನಾ ಕೇಂದ್ರಗಳಿಗೆ ಭೇಟಿ ನೀಡಿದ ಪ್ರಧಾನಿಗಳು ಈ ಕುರಿತು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಲಸಿಕೆ ಉತ್ಪಾದನಾ ಪ್ರಕ್ರಿಯೆ ಎಲ್ಲಿವರೆಗೆ ಬಂದಿದೆ ಎಂಬ ಕುರಿತು ಕೇಂದ್ರಗಳ ವಿಜ್ಞಾನಿಗಳೊಂದಿಗೆ ಚರ್ಚೆ ನಡೆಸಿದರು.

    Published by:Seema R
    First published: