• ಹೋಂ
  • »
  • ನ್ಯೂಸ್
  • »
  • Corona
  • »
  • Mahesh Babu: ದತ್ತು ಪಡೆದ ಗ್ರಾಮದ ಜನರಿಗೆ ಉಚಿತವಾಗಿ ಕೋವಿಡ್​ ಲಸಿಕೆ ಕೊಡಿಸಿದ ಮಹೇಶ್ ಬಾಬು

Mahesh Babu: ದತ್ತು ಪಡೆದ ಗ್ರಾಮದ ಜನರಿಗೆ ಉಚಿತವಾಗಿ ಕೋವಿಡ್​ ಲಸಿಕೆ ಕೊಡಿಸಿದ ಮಹೇಶ್ ಬಾಬು

ಒಂದು ಹಳ್ಳಿಯ ಜನರಿಗೆ ಉಚಿತವಾಗಿ ಕೊರೋನಾ ಲಸಿಕೆ ಕೊಡಿಸಿದ ಮಹೇಶ್​ ಬಾಬು

ಒಂದು ಹಳ್ಳಿಯ ಜನರಿಗೆ ಉಚಿತವಾಗಿ ಕೊರೋನಾ ಲಸಿಕೆ ಕೊಡಿಸಿದ ಮಹೇಶ್​ ಬಾಬು

ಗುಂಟೂರು ಜಿಲ್ಲೆಯಲ್ಲಿರುವ ಬುರ್ರಿಪಾಲೆಂ ಹಳ್ಳಿಯ ಜನರಿಗೆ ಉಚಿತವಾಗಿ ಕೊರೋನಾ ಲಸಿಕೆ ಕೊಡಿಸಿದ್ದಾರೆ ಪ್ರಿನ್ಸ್​. ಪ್ರಿನ್​ ಮಾಡಿರುವ ಕೆಲಸಕ್ಕೆ ಈಗ ಬಹಳ ಮೆಚ್ಚುಗೆ ವ್ಯಕ್ತವಾಗುತ್ತಿದೆ.

  • Share this:

ನಟ ಕೃಷ್ಣ ಟಾಲಿವುಡ್​ನಲ್ಲಿ ಸೂಪರ್ ಸ್ಟಾರ್ ಎಂದೇ ಖ್ಯಾತರಾದವರು. ಅಮ್ಮ ದೊಂಗ, ಅಗ್ನಿ ಪರ್ವತಂ, ಸಿಂಹಾಸನಂಗಳಂತ ಹಿಟ್​ ಸಿನಿಮಾಗಳಲ್ಲಿ ನಟಿಸಿದ್ದಾರೆ. 350ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ  ಕೃಷ್ಣ ಅವರು ನಿನ್ನೆಯಷ್ಟೆ ಅವರು ತಮ್ಮ78ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಹಿರಿಯ ನಟನ ಹುಟ್ಟುಹಬ್ಬಕ್ಕೆ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ವಿಶ್​ ಮಾಡಿದ್ದಾರೆ. ಅಂತೆಯೇ ಮಗ ಮಹೇಶ್​ ಬಾಬು ಸಹ ಅಪ್ಪನ ಹುಟ್ಟುಹಬ್ಬಕ್ಕೆ ಪ್ರತಿ ವರ್ಷದಂತೆ ವಿಶ್​ ಮಾಡಿದ್ದಾರೆ. ಇನ್ನು ಅಪ್ಪನ ಹುಟ್ಟುಹಬ್ಬದಂದು ಒಂದೊಳ್ಳೆ ಕೆಲಸ  ಸಹ ಮಾಡಿದ್ದಾರೆ ಮಹೇಶ್​ ಬಾಬು. 


ಟಾಲಿವುಡ್​ ಪ್ರಿನ್ಸ್​ ಮಹೇಶ್​ ಬಾಬು ಅವರ ತಂದೆ ಸೂಪರ್ ಸ್ಟಾರ್​ ಕೃಷ್ಣ ಅವರು ತಮ್ಮ 78ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅಪ್ಪನ ಹುಟ್ಟುಹಬ್ಬದಂದು ನಟ ಮಹೇಶ್​ ಬಾಬು ಅವರು ಹಳ್ಳಿಯೊಂದರದಲ್ಲಿ ಉಚಿತವಾಗಿ ಲಸಿಕೆ ನೀಡುವ ಕಾರ್ಯಕ್ರಮ ಆಯೋಜಿಸಿದ್ದರು. ಆಂಧ್ರ ಹಾಸ್ಪಿಟಲ್ಸ್ ಸಹಯೋಗದೊಂದಿಗೆ ಮಹೇಶ್ ಬಾಬು ಕೋವಿಡ್​ -19 ವ್ಯಾಕ್ಸಿನೇಷನ್​ ಡ್ರೈವ್​ ಆಯೋಜಿಸಿದ್ದರು.


Tollywood Actor Mahesh Babu: Tollywood Prince Mahesh Babu buys a New Luxurious Vanity Van check the Specialties.
ಮಹೇಶ್ ಬಾಬು


ಗುಂಟೂರು ಜಿಲ್ಲೆಯಲ್ಲಿರುವ ಬುರ್ರಿಪಾಲೆಂ ಹಳ್ಳಿಯ ಜನರಿಗೆ ಉಚಿತವಾಗಿ ಕೊರೋನಾ ಲಸಿಕೆ ಕೊಡಿಸಿದ್ದಾರೆ ಪ್ರಿನ್ಸ್​. ಪ್ರಿನ್​ ಮಾಡಿರುವ ಕೆಲಸಕ್ಕೆ ಈಗ ಬಹಳ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಲ್ಲದೆ ಮಹೇಶ್ ಬಾಬು ಸಹ ಹಳ್ಳಿಯ ಜನರು ತೋರಿದ ಸಹಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ.



ಮಹೇಶ್​ ಬಾಬು ಈಗಾಗಲೇ ಸಾಕಷ್ಟು ಸಾಮಜಮುಖಿ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಹೀಲ್​ ಎ ಚೈಲ್ಡ್​ ಫೌಂಡೇಶನ್​ ಜತೆ ಸೇರಿ ಆರ್ಥಿಕವಾಗಿ ಕಷ್ಟದಲ್ಲಿರುವ ಕುಟುಂಬಗಳಲ್ಲಿರುವ ಮಕ್ಕಳ ಚಿಕತ್ಸೆಗೆ ಸಹಾಯ ಮಾಡುತ್ತಿದ್ದಾರೆ. ಈಗಾಗಲೇ ಮಹೇಶ್ ಬಾಬು ಅವರು ಆಂಧ್ರ ಪ್ರದೇಶದಲ್ಲಿರುವ ಬುರ್ರಿಪಾಲೆಂ ಹಾಗೂ ತೆಲಂಗಾಣ ಸಿದ್ದಾಪುರಂ ಹಳ್ಳಿಗಳನ್ನು ದತ್ತು ಪಡೆದಿದ್ದಾರೆ. ಒಂದೂವರೆ ವರ್ಷದ ಹಿಂದೆಯೇ ಈ ಹಳ್ಳಿಗಳಲ್ಲಿ ಮಕ್ಕಳಿಗಾಗಿ ಹೊಸ ಶಾಲೆ ಕಟ್ಟಿದ್ದಾರೆ.


ಇದನ್ನೂ ಓದಿ: ಪ್ರಣೀತಾ ವಿವಾಹವಾದ ಬೆನ್ನಲ್ಲೇ ಮತ್ತೆ ಚರ್ಚೆಯಾಗುತ್ತಿದೆ ಮೋಹಕ ತಾರೆ ರಮ್ಯಾ ಮದುವೆ ಸುದ್ದಿ..!


ಇನ್ನು ಅಪ್ಪನ ಹುಟ್ಟುಹಬ್ಬದಂದು ಮಹೇಶ್​ ಬಾಬು ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್​ ಮಾಡಿದದಾರೆ. ಅಪ್ಪನಿಗೆ ವಿಶ್​ ಮಾಡಿದ್ದು ಅಪ್ಪನ ಜತೆಗಿನ ಫೋಟೋ ಸಹ ಹಂಚಿಕೊಂಡಿದ್ದಾರೆ. ನನಗೆ ಉತ್ತಮವಾದ ದಾರಿಯಲ್ಲಿ ನಡೆಯುವಂತೆ ಮಾಡಿದ್ದಕ್ಕೆ ಧನ್ಯವಾದ ಎಂದಿದ್ದಾರೆ ಪ್ರಿನ್ಸ್​.




ಮಹೇಶ್​ ಬಾಬು ಅವರ ಸಿನಿಮಾ ವಿಷಯಕ್ಕೆ ಬಂದರೆ ಪ್ರಿನ್ಸ್​ ಸರ್ಕಾರು ವಾರಿ ಪಾಟ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರು. ಕಳೆದ ವರ್ಷ ಅಪ್ಪನ ಹುಟ್ಟುಹಬ್ಬದಂದು ಅಂದರೆ ಮೇ 31ಕ್ಕೆ ಸಿನಿಮಾದ ಪೋಸ್ಟರ್​ ರಿಲೀಸ್​ ಮಾಡಿದ್ದರು.


ಇದನ್ನೂ ಓದಿ: Manoranjan Ravichandran: ಮುದ್ದಿನ ಸಾಕು ನಾಯಿಯ ಹುಟ್ಟುಹಬ್ಬ ಆಚರಿಸಿದ ಮನೋರಂಜನ್​ ರವಿಚಂದ್ರನ್​..!


ಕಳೆದ ಸಲದಂತೆ ಈ ವರ್ಷವೂ ಕೃಷ್ಣ ಅವರ ಹುಟ್ಟುಹಬ್ಬಕ್ಕೆ ಏನಾದರೂ ಸರ್ಪ್ರೈಸ್​ ಕೊಡಲಿದ್ದಾರೆ ಅಂತ ಅಭಿಮಾನಿಗಳು ಕಾಯುತ್ತಿದ್ದರು. ಆದರೆ ಮಹೇಶ್​ ಬಾಬು ಈ ವರ್ಷ ಸಿನಿಮಾ ಕುರಿತಾದ ಯಾವುದೇ ಪ್ರಕಟಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದರು. ಸದ್ಯಕ್ಕೆ ಇರುವ ಸಂಕಷ್ಟದ ಪರಿಸ್ಥಿತಿಯಲ್ಲಿ ಸಿನಿಮಾ ಬಗ್ಗೆ ಅಪ್ಡೇಟ್​ ಕೊಡುವುದು ಸರಿಯಲ್ಲ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಸಿನಿಮಾ ಕುರಿತಾದ ಮಾಹಿತಿಯನ್ನು ತಮ್ಮ ಅಧಿಕೃತ ಖಾತೆಯಲ್ಲೇ ಸಮಯ ಬಂದಾಗ ಪ್ರಕಟಿಸುವುದಾಗಿಯೂ ತಿಳಿಸಿದ್ದಾರೆ. ಸರ್ಕಾರು ವಾರಿ ಪಾಟ ಸಿನಿಮಾ ಹೊರತಾಗಿ ನಿರ್ದೇಶಕ ತ್ರಿವಿಕಂ ಅವರೊಂದಿಗೆ ಮಹೇಶ್​ ಬಾಬು ಹೊಸ ಸಿನಿಮಾಗೆ ಸಹಿ ಮಾಡಿದ್ದಾರೆ. ಈ ಹಿಂದೆ ತ್ರಿವಿಕ್ರಂ ಅವರೊಂದಿಗೆ ಮಹೇಶ್ ಬಾಬು ಅತಡು ಹಾಗೂ ಖಲೇಜಾ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ.

Published by:Anitha E
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು