• ಹೋಂ
  • »
  • ನ್ಯೂಸ್
  • »
  • Corona
  • »
  • ಬಿಜೆಪಿ ಸರ್ಕಾರಕ್ಕೆ ಒಂದು ವರ್ಷ: ಇದು ಬ್ಲಾಕ್​ ಡೇ ಎಂದ ಕಾಂಗ್ರೆಸ್​​​ ಶಾಸಕ ಕೆ.ವೈ ನಂಜೇಗೌಡ

ಬಿಜೆಪಿ ಸರ್ಕಾರಕ್ಕೆ ಒಂದು ವರ್ಷ: ಇದು ಬ್ಲಾಕ್​ ಡೇ ಎಂದ ಕಾಂಗ್ರೆಸ್​​​ ಶಾಸಕ ಕೆ.ವೈ ನಂಜೇಗೌಡ

ಕಾಂಗ್ರೆಸ್​ ಶಾಸಕ ಕೆವೈ ನಂಜೇಗೌಡ

ಕಾಂಗ್ರೆಸ್​ ಶಾಸಕ ಕೆವೈ ನಂಜೇಗೌಡ

ಬಿಜೆಪಿ ಸರ್ಕಾರ ಒಂದು ವರ್ಷ ಕೆಟ್ಟ ಆಡಳಿತ ಕೊಟ್ಟಂತಹ ಸರ್ಕಾರ. ಇಂತಹ ಸರ್ಕಾರದಲ್ಲಿ ನಾವೂ ಶಾಸಕರಾಗಿದ್ದೇವೆ. ಹೀಗಾಗಿ ವರ್ಷಾಚರಣೆ ಬದಲು ಬ್ಲಾಕ್ ಡೇ ಆಚರಿಸಬೇಕು ಎಂದು ನಂಗೇಗೌಡ ಕಿಡಿಕಾರಿದ್ದಾರೆ.

  • Share this:

ಮಾಲುರು(ಜು.27): ಸಿಎಂ ಬಿಎ.ಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಒಂದು ವರ್ಷ ಪೂರೈಸಿದೆ. ಈ ಬಿಜೆಪಿ ಸರ್ಕಾರ ವರ್ಷಾಚರಣೆಗೆ ನನ್ನ ವಿರೋಧವಿದೆ. ಬಿಜೆಪಿ ಸರ್ಕಾರ ಒಂದು ವರ್ಷ ಕೆಟ್ಟ ಆಡಳಿತ ನೀಡಿದ ಸರ್ಕಾರ. ಇಂತಹ ನಾಲಾಯಕ್​​ ಸರ್ಕಾರದಲ್ಲಿ ನಾವೂ ಶಾಸಕರಾಗಿದ್ದೇವೆ. ಹೀಗಾಗಿ ವರ್ಷಾಚರಣೆ ಬದಲು ಬ್ಲಾಕ್ ಡೇ ಆಚರಿಸಬೇಕು ಎಂದು ಮಾಲೂರು ಕಾಂಗ್ರೆಸ್ ಶಾಸಕ‌ ಕೆ.ವೈ ನಂಜೇಗೌಡ ವಾಗ್ದಾಳಿ ನಡೆಸಿದ್ದಾರೆ.


ಮಾಲೂರು ತಾಲೂಕಿನಲ್ಲಿ 500 ಬೆಡ್​ಗಳು ಹೊಂದಿರುವ ಕೋವಿಡ್-19 ಕೇರ್ ಸೆಂಟರ್​ವೊಂದನ್ನು ಆರಂಭಿಸಲು ಕೋಲಾರ ಜಿಲ್ಲಾಡಳಿತ ಅಡ್ಡಗಾಲು ಹಾಕಿದೆ. ಮಾಲೂರಿನಲ್ಲೇ ಎರಡು ಕಡೆ ಕೋವಿಡ್-19 ಕೇರ್ ಸೆಂಟರ್ ಆರ‌ಂಭಿಸಲು 500 ಬೆಡ್​ಗಳು ಮತ್ತಿತರ ಸಲಕರಣೆಗಳನ್ನು ನಾನು ಖರೀದಿ ಮಾಡಿದ್ದೇನೆ. ಮೊದಲಿಗೆ ಕೋವಿಡ್​​-19 ಕೇರ್​ ಸೆಂಟರ್​​ ಆರಂಭಿಸಲು ಒಪ್ಪಿದ್ದ ಜಿಲ್ಲಾಡಳಿತ ಈಗ ಜಿಲ್ಲೆಯಲ್ಲಿರುವ ಪ್ರಭಾವಿ ರಾಜಕಾರಣಿಗಳು ಒತ್ತಡ ಹಾಕಿದ್ದರಿಂದ ದಿಢೀರ್​ ಅನುಮತಿ ನಿರಾಕರಿಸಿದ್ಧಾರೆ ಎಂದು ಕುಟುಕಿದರು.


ಹೀಗೆ ಮುಂದುವರಿದ ಕೆ.ವೈ ನಂಜೇಗೌಡ, ಕೋವಿಡ್-19 ವಿಚಾರದಲ್ಲಿ ಬಿಜೆಪಿ ಸರ್ಕಾರ ಕಾಂಗ್ರೆಸ್​ ವಿಫಲವಾಗಿದೆ. ಈಗ ಬೇಕಂತೆಲೇ ಕಾಂಗ್ರೆಸ್ ಶಾಸಕರು ಮಾಡುವ ಸಮಾಜ ಸೇವೆಯನ್ನು ರಾಜಕೀಯ ದೃಷ್ಟಿಯಿಂದ ನೋಡುತ್ತಿದೆ. ಹಾಗಾಗಿ ನಮ್ಮ ಸಮಾಜ ಸೇವೆಯನ್ನು ಡಿಸಿ ಮೂಲಕ ತಡೆಯುವಂತೆ ಮಾಡಿ ರಾಜಕಾರಣ ಮಾಡುತ್ತಿದೆ ಎಂದು‌ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದಿರುವ ಇವರು, ಕಲಾಪದಲ್ಲಿ ವಿಚಾರ ಪ್ರಸ್ತಾಪಿಸುವುದಾಗಿ ತಿಳಿಸಿದ್ದಾರೆ.


ಇದನ್ನೂ ಓದಿ: ಯಡಿಯೂರಪ್ಪ ಸರ್ಕಾರ ತಿಂದಿರುವುದನ್ನು ಕಕ್ಕಿಸುವುದು ನಮ್ಮ ಕರ್ತವ್ಯ; ಡಿ.ಕೆ. ಶಿವಕುಮಾರ್ ವಾಗ್ದಾಳಿ


ಇದನ್ನೂ ಓದಿ: Chines App Ban - ಭಾರತದಲ್ಲಿ ಮತ್ತೆ 47 ಚೀನೀ ಆ್ಯಪ್​ಗಳ ನಿಷೇಧ? PUBG ಸೇರಿ 275 ಆ್ಯಪ್​ಗಳು ಸರ್ಕಾರದ ಕಣ್ಗಾವಲಿನಲ್ಲಿ


ಇದೇ ವೇಳೆ ಮಾತಾಡಿದ ಕೋಲಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ್ಯ ಕೆ. ಚಂದ್ರಾರೆಡ್ಡಿ, ಕಳೆದ ವರ್ಷ ಮಳೆಹಾನಿ ಪ್ರದೇಶಗಳಲ್ಲಿ ಕೈಗೊಂಡ ಕಾರ್ಯ ಇನ್ನೂ ಮುಗಿದಿಲ್ಲ. ಪೂರ್ಣ ಪ್ರಮಾಣದಲ್ಲಿ ಸಂತ್ರಸ್ತರಿಗೆ ಪರಿಹಾರವೂ ನೀಡಿಲ್ಲ. ಈಗ ಕೊರೋನಾ ಸಮಯದಲ್ಲಿ ಸರ್ಕಾರ ಹಣವನ್ನ ಲೂಟಿ ಮಾಡಿದೆ. ಇದರ ಲೆಕ್ಕ ಕೇಳಿದವರ ವಿರುದ್ದವೇ ಆರೋಪಗಳನ್ನ ಮಾಡುತ್ತಿದೆ. ರಾಜ್ಯ ಸರ್ಕಾರದ ಒಂದು ವರ್ಷ ಸಾಧನೆಯೆಂದರೆ, ಸರ್ಕಾರದ ಬೊಕ್ಕಸ ಖಾಲಿ ಮಾಡಿದ್ದು ಎಂದಿದ್ದಾರೆ.

Published by:Ganesh Nachikethu
First published: