ಕೊರೋನಾ ರೋಗಿಯ ಶವವನ್ನು ಬಸ್ಸ್ಟಾಂಡ್ನಲ್ಲಿಟ್ಟ ಆಸ್ಪತ್ರೆ ಸಿಬ್ಬಂದಿ; ರಾಣೆಬೆನ್ನೂರಿನಲ್ಲೊಂದು ಅಮಾನವೀಯ ಘಟನೆ
Haveri Coronavirus: ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಆಸ್ಪತ್ರೆ ಸಿಬ್ಬಂದಿ ಸಾವನ್ನಪ್ಪಿದ ಕೊರೋನಾ ರೋಗಿಯ ಶವವನ್ನು ಪಿಪಿಇ ಕಿಟ್ನಲ್ಲಿ ಸುತ್ತಿ, ಜನಸಂದಣಿ ಇರುವ ಬಸ್ಸ್ಟಾಂಡ್ನಲ್ಲಿ ಇಟ್ಟುಹೋಗಿದ್ದಾರೆ.
ಹಾವೇರಿ (ಜು. 5): ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಮನುಷ್ಯರ ಜೀವ ಕಾಪಾಡುವ ವೈದ್ಯರು ಮಾನವೀಯತೆ ಮರೆತು ನಡೆದುಕೊಂಡಿರುವ ಘಟನೆಗಳು ಕೂಡ ಹೆಚ್ಚಾಗಿವೆ. ಹಾವೇರಿಯಲ್ಲಿ ಕೊರೋನಾ ರೋಗಿಯ ಮೃತದೇಹವನ್ನು ಪಿಪಿಇ ಕಿಟ್ನಲ್ಲಿ ಸುತ್ತಿ, ಬಸ್ಸ್ಟಾಂಡ್ನಲ್ಲಿಟ್ಟು ಹೋಗಿರುವ ಅಮಾನವೀಯ ಘಟನೆ ನಡೆದಿದೆ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಆಸ್ಪತ್ರೆ ಸಿಬ್ಬಂದಿ ಸಾವನ್ನಪ್ಪಿದ ಕೊರೋನಾ ರೋಗಿಯ ಶವವನ್ನು ಪಿಪಿಇ ಕಿಟ್ನಲ್ಲಿ ಸುತ್ತಿ, ಜನಸಂದಣಿ ಇರುವ ಬಸ್ಸ್ಟಾಂಡ್ನಲ್ಲಿ ಇಟ್ಟುಹೋಗಿದ್ದಾರೆ. ಸುಮಾರು 3 ಗಂಟೆಗಳ ಕಾಲ ಅಲ್ಲೇ ಇದ್ದ ಶವದ ಬಳಿ ಹೋಗಲು ಸ್ಥಳೀಯರೂ ಹೆದರಿದ್ದಾರೆ. ಆಸ್ಪತ್ರೆಯ ಸಿಬ್ಬಂದಿಯ ಈ ವರ್ತನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾರುತಿನಗರದ 45 ವರ್ಷದ ವ್ಯಕ್ತಿ ತೀವ್ರ ಜ್ವರದಿಂದ ಬಳಲುತ್ತಿದ್ದ. ಒಂದು ವಾರವಾದರೂ ಜ್ವರ ಕಡಿಮೆಯಾಗಿರಲಿಲ್ಲ. ಹೀಗಾಗಿ, ರಾಣೆಬೆನ್ನೂರಿನ ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸಿಕೊಳ್ಳಲು ಆತ ನಿರ್ಧರಿಸಿದ್ದ. ಜೂನ್ 28ರಂದು ಆತನ ಸ್ವಾಬ್ ಟೆಸ್ಟ್ಗೆ ಕಳಿಸಲಾಗಿತ್ತು. ತನ್ನ ವೈದ್ಯಕೀಯ ವರದಿಯನ್ನು ತೆಗೆದುಕೊಳ್ಳಲು ಆಸ್ಪತ್ರೆಗೆ ಬಂದಿದ್ದ ಆತನ ವರದಿ ಇನ್ನೂ ಬಂದಿರಲಿಲ್ಲ. ಹೀಗಾಗಿ, ಅಲ್ಲಿಯವರೆಗೂ ಬಸ್ ಸ್ಟಾಂಡ್ನಲ್ಲಿ ಕುಳಿತುಕೊಳ್ಳಲು ಆತ ನಿರ್ಧರಿಸಿದ್ದ. ಆದರೆ, ಹಾಗೆ ಕುಳಿತಿದ್ದಾಗ ಬಸ್ ಸ್ಟಾಂಡ್ನಲ್ಲಿಯೇ ಆತ ಸಾವನ್ನಪ್ಪಿದ್ದ.
ಈ ವಿಷಯ ರಾಣೆಬೆನ್ನೂರಿನ ಸರ್ಕಾರಿ ಆಸ್ಪತ್ರೆ ಸಿಬ್ಬಂದಿಗೆ ತಿಳಿದಿದ್ದರಿಂದ ಅವರು ತಕ್ಷಣೆ ಸ್ಥಳಕ್ಕೆ ಬಂದು, ಶವವನ್ನು ಶವಾಗಾರಕ್ಕೆ ತೆಗೆದುಕೊಂಡು ಹೋಗುವ ಬದಲು ಪಿಪಿಇ ಕಿಟ್ನಲ್ಲಿ ಸುತ್ತಿಟ್ಟು ಹೋಗಿದ್ದರು. ಆತನ ಅಂತ್ಯಕ್ರಿಯೆಗೆಂದು ವಾಪಾಸ್ ಬರುವಷ್ಟರಲ್ಲಿ ಆ ಹೆಣವನ್ನು ಬಸ್ ಸ್ಟಾಂಡ್ನಲ್ಲಿಟ್ಟ ವಿಡಿಯೋ ವೈರಲ್ ಆಗಿತ್ತು. ನಂತರ ಆ್ಯಂಬುಲೆನ್ಸ್ನಲ್ಲಿ ಬಂದು ಶವವನ್ನು ತೆಗೆದುಕೊಂಡು ಹೋಗಿದ್ದರು.
ಆಸ್ಪತ್ರೆಯ ಸಿಬ್ಬಂದಿ ಯಾವ ಕಾರಣಕ್ಕೆ ಶವವನ್ನು ಪಿಪಿಇ ಕಿಟ್ನಲ್ಲಿ ಸುತ್ತಿಟ್ಟಿದ್ದಾರೆ ಎಂದು ಗೊತ್ತಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವೈದ್ಯಕೀಯ ವರದಿಯಲ್ಲಿ ಆತನಿಗೆ ಕೊರೋನಾ ಇರುವುದು ಖಚಿತವಾಗಿದೆ.
Published by:Sushma Chakre
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ