Pfizer/BioNTech ಲಸಿಕೆಯು ಕೋವಿಡ್-19 ಲಸಿಕೆಯು ಸೋಂಕುಗಳು ಹಾಗೂ ರೋಗಲಕ್ಷಣದ ಕಾಯಿಲೆ ಅಂದರೆ ಗಂಭೀರ ಅನಾರೋಗ್ಯವನ್ನು ತಡೆಗಟ್ಟುವಲ್ಲಿ ಈ ಲಸಿಕೆ ಹೆಚ್ಚು ಪರಿಣಾಮಕಾರಿಯಾಗಿದ್ದರೂ ಲಸಿಕೆಯ ಪ್ರಭಾವವು ಕ್ಷೀಣಿಸುತ್ತದೆ ಎಂದು ಇಸ್ರೇಲ್ ವರದಿ ಮಾಡಿದೆ. ಲಸಿಕೆಯು ತನ್ನ ಪ್ರಭಾವವನ್ನು ಕಳೆದುಕೊಳ್ಳುತ್ತಿರುವುದಕ್ಕೆ ಮುಖ್ಯ ಕಾರಣ ಡೆಲ್ಟಾ ರೂಪಾಂತರದ ಹರಡುವಿಕೆ ಮತ್ತು ಇಸ್ರೇಲ್ನಲ್ಲಿ ಸಾಮಾಜಿಕ ಅಂತರ ನಿರ್ಬಂಧಗಳನ್ನು ಕೈಬಿಟ್ಟ ನಂತರವಾಗಿದೆ. ಕೋವಿಡ್ ಪ್ರಕರಣಗಳು ಇಳಿಮುಖವಾದ ನಂತರ ಕೋವಿಡ್ ನಿಯಮಗಳಲ್ಲಿ ಇಸ್ರೇಲ್ ಸಡಿಲಿಕೆಯನ್ನು ಮಾಡಿತ್ತು. ಆದರೆ ಇದೇ ಸಮಯದಲ್ಲಿ ಕೊರೋನಾ ರೂಪಾಂತರ ಡೆಲ್ಟಾ ತನ್ನ ದಾಳಿಯನ್ನು ನಡೆಸಿದ್ದರ ಜೊತೆಗೆ ನಿಯಮಗಳಲ್ಲಿ ಉಂಟಾದ ಸಡಿಲಿಕೆಯು ಕೋವಿಡ್ ಅನ್ನು ಕ್ಷಿಪ್ರವಾಗಿ ಹರಡಲು ಕಾರಣವಾಗಿದೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ವರದಿ ಮಾಡಿದೆ.
ಜೂನ್ 6 ರಿಂದ ಸೋಂಕು ಹಾಗೂ ರೋಗಲಕ್ಷಣದ ವಿರುದ್ಧ ಲಸಿಕೆಯ ಪರಿಣಾಮವು 64% ಗೆ ಕುಸಿದಿದೆ ಎಂಬುದಾಗಿ ಆರೋಗ್ಯ ಸಚಿವಾಲಯ ವರದಿ ಮಾಡಿದೆ. ಅದೇ ಸಮಯದಲ್ಲಿ ಆಸ್ಪತ್ರೆಗೆ ದಾಖಲಾಗುವುದನ್ನು ಮತ್ತು ಕೊರೋನಾ ವೈರಸ್ನ ಸೋಂಕಿಗೆ ತೀವ್ರ ತುತ್ತಾಗುವುದನ್ನು ಲಸಿಕೆಯು 93% ದಷ್ಟು ತಡೆದಿದೆ ಎಂಬುದಾಗಿ ಆರೋಗ್ಯ ಸಚಿವಾಲಯ ತಿಳಿಸಿದೆ.
ಸಚಿವಾಲಯವು ಈ ಹಿಂದಿನ ಸ್ಥಿತಿಗತಿಗಳ ಬಗ್ಗೆ ಮಾಹಿತಿ ನೀಡಿಲ್ಲ. ಫೈಜರ್ ಲಸಿಕೆಯ ಎರಡು ಡೋಸ್ ಆಸ್ಪತ್ರೆಗೆ ದಾಖಲಾಗುವುದು, ಸೋಂಕಿಗೆ ತುತ್ತಾಗುವುದು ಮತ್ತು ತೀವ್ರ ಕಾಯಿಲೆಯಿಂದ 95% ದಷ್ಟು ಸುರಕ್ಷತೆಯನ್ನು ಒದಗಿಸಿದೆ. ಫೈಜರ್ ವಕ್ತಾರರು ಇಸ್ರೇಲ್ನ ದತ್ತಾಂಶದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು, ಆದರೆ ಲಸಿಕೆಯಿಂದ ಹೊರಹೊಮ್ಮಿದ ಪ್ರತಿಕಾಯಗಳು ಡೆಲ್ಟಾ ಸೇರಿದಂತೆ ಎಲ್ಲಾ ಪರೀಕ್ಷಿತ ರೂಪಾಂತರಗಳನ್ನು ತಟಸ್ಥಗೊಳಿಸಲು ಇನ್ನೂ ಸಮರ್ಥವಾಗಿವೆ ಎಂದು ತೋರಿಸುವ ಇತರ ಸಂಶೋಧನೆಗಳನ್ನು ಉಲ್ಲೇಖಿಸಿ, ಪ್ರತಿಕಾಯಗಳು ಕಡಿಮೆ ಶಕ್ತಿಯನ್ನು ಹೊಂದಿದ್ದರೂ ಸಹ ರೋಗದ ವಿರುದ್ಧ ಸಮರ್ಥವಾಗಿ ಹೋರಾಡಬಲ್ಲವು ಎಂಬುದನ್ನು ತಿಳಿಸಿದ್ದಾರೆ.
ಇಸ್ರೇಲ್ನ 9.3 ಮಿಲಿಯನ್ ಜನಸಂಖ್ಯೆಯಲ್ಲಿ 60% ದಷ್ಟು ಜನರು ವ್ಯಾಕ್ಸಿನ್ನ ಕನಿಷ್ಠ ಒಂದು ಡೋಸ್ ಅನ್ನು ಸ್ವೀಕರಿಸಿದ್ದಾರೆ. ಜನವರಿಗೆ ಹೋಲಿಸಿದಾಗ ದಿನದ ಕೇಸ್ನಲ್ಲಿ 10,000 ದಷ್ಟು ಇಳಿಮುಖಗೊಂಡು ಕಳೆದ ತಿಂಗಳು ಒಮದಂಕಿಗೆ ಕುಸಿದಿತ್ತು ಎಂಬುದನ್ನು ಸಮೀಕ್ಷೆಯು ಖಾತ್ರಿಪಡಿಸಿದೆ.
ಈ ಇಳಿಮುಖವನ್ನು ಕಂಡುಕೊಂಡ ನಂತರ ಸರಕಾರವು ಕೋವಿಡ್ ನಿಯಮಾವಳಿಗಳಲ್ಲಿ ಕೆಲವೊಂದು ಬದಲಾವಣೆಗಳನ್ನು ತಂದಿತು. ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು, ಮೊದಲಾದ ನಿಯಮಗಳನ್ನು ಸಲಡಿಗೊಳಿಸಿತು. ಇದೇ ಸಮಯದಲ್ಲಿ ಕೊರೋನಾ ವೈರಸ್ನ ರೂಪಾಂತರವಾಗಿರುವ ಡೆಲ್ಟಾದ ಆಳ್ವಿಕೆ ಆರಂಭವಾಗಿ ದೈನಂದಿನ ಪ್ರಕರಣಗಳಲ್ಲಿ ಏರಿಕೆಯಾಯಿತು. ಭಾನುವಾರ ಪ್ರಕರಣಗಳ ಸಂಖ್ಯೆ 343 ಕ್ಕೆ ಏರಿಕೆಯಾಗಿದೆ. ತೀವ್ರ ಅನಾರೋಗ್ಯವು 21 ರಿಂದ 35 ಕ್ಕೆ ಏರಿಕೆಯಾಯಿತು. ಆದರೂ, ಲಸಿಕೆಯಿಂದ ತೀವ್ರ ಅನಾರೋಗ್ಯ ಇಳಿಮುಖವಾಗುತ್ತಿದೆ.
ಇಸ್ರೇಲ್ನ ವೈಜ್ಮನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನ ಡೇಟಾ ವಿಜ್ಞಾನಿ ಎರಾನ್ ಸೆಗಲ್ ಹೇಳುವಂತೆ ದೇಶದಲ್ಲಿ ವರ್ಷದ ಆರಂಭದಲ್ಲಿ ಕಂಡುಬಂದ ಹೆಚ್ಚಿನ ಆಸ್ಪತ್ರೆ ದಾಖಲಾತಿ ಪ್ರಖರಣಗಳು ಈ ವರ್ಷ ಕಡಿಮೆಯಾಗಲಿದೆ. ಏಕೆಂದರೆ ಸಮೀಕ್ಷೆ ಪ್ರಕಾರ ಕೋವಿಡ್ ಪ್ರಕರಣಗಳು ಕಡಿಮೆ ಇದೆ. ಜನಜೀವನವನ್ನು ಹಿಂದಿನಂತೆ ಯಾವುದೇ ನಿರ್ಬಂಧಗಳಿಲ್ಲದೆ ನಡೆಸಬಹುದು ಎಂಬುದಾಗಿ ವಿಜ್ಞಾನಿ ದೃಢಪಡಿಸಿದ್ದಾರೆ. ದೇಶದಲ್ಲಿ ಲಸಿಕೆ ನೀಡುವುದು ಮತ್ತು ಹೊರದೇಶದಿಂದ ಸ್ವದೇಶಕ್ಕೆ ಮರಳುತ್ತಿರುವವರ ಪರೀಕ್ಷೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಮಾತ್ರವೇ ಕೋವಿಡ್ ನಿಯಮಗಳಲ್ಲಿ ಸಡಿಲಿಕೆ ಮಾಡಬಹುದು ಎಂಬುದಾಗಿ ವಿಜ್ಞಾನಿ ಅಭಿಪ್ರಾಯಪಟ್ಟಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ