• ಹೋಂ
  • »
  • ನ್ಯೂಸ್
  • »
  • Corona
  • »
  • Boris Johnson: ಇಂಗ್ಲೆಂಡ್​ನಲ್ಲಿ ಕೈಮೀರಿದ ಕೊರೋನಾ ಸ್ಥಿತಿ; ಭಾರತದ ಭೇಟಿ ರದ್ದುಗೊಳಿಸಿದ ಬ್ರಿಟನ್ ಪ್ರಧಾನಿ ಬೋರಿಸ್

Boris Johnson: ಇಂಗ್ಲೆಂಡ್​ನಲ್ಲಿ ಕೈಮೀರಿದ ಕೊರೋನಾ ಸ್ಥಿತಿ; ಭಾರತದ ಭೇಟಿ ರದ್ದುಗೊಳಿಸಿದ ಬ್ರಿಟನ್ ಪ್ರಧಾನಿ ಬೋರಿಸ್

ಬೋರಿಸ್ ಜಾನ್ಸನ್ ಮತ್ತು ನರೇಂದ್ರ ಮೋದಿ.

ಬೋರಿಸ್ ಜಾನ್ಸನ್ ಮತ್ತು ನರೇಂದ್ರ ಮೋದಿ.

ಪ್ರಧಾನಿ ನರೇಂದ್ರ ಮೋದಿ ಸಹ ಬೋರಿಸ್​ ಜಾನ್ಸನ್​ ಅವರಿಗೆ ಧೈರ್ಯ ತುಂಬಿದ್ದು, ಯುಕೆಯಲ್ಲಿನ ಅಸಾಧಾರಣ ಪರಿಸ್ಥಿತಿಯ ಬಗ್ಗೆ ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಕೊರೋನಾ ಸಾಂಕ್ರಾಮಿಕ ರೋಗ ಹರಡುವಿಕೆಯನ್ನು ತ್ವರಿತವಾಗಿ ನಿಯಂತ್ರಿಸಲು ಶುಭ ಕೋರಿದ್ದಾರೆ ಎಂದು ತಿಳಿದುಬಂದಿದೆ.

ಮುಂದೆ ಓದಿ ...
  • Share this:

    ಲಂಡನ್​: ಹೊಸದಾಗಿ ಪತ್ತೆಯಾಗಿರುವ ರೂಪಾಂತರಿ ಕೊರೋನಾ ವೈರಸ್​ ಇಂಗ್ಲೆಂಡ್​ ದೇಶವನ್ನು ಬಿಟ್ಟೂ ಬಿಡದೆ ಕಾಡುತ್ತಿದೆ. covid-19 ಗಿಂತಲೂ ಈ ವೈರಸ್​ ಸಾಕಷ್ಟು ವೇಗವಾಗಿ ಹರಡುತ್ತಿರುವುದು ಇಂಗ್ಲೆಂಡ್​ಗೆ ತಲೆನೋವಾಗಿ ಪರಿಣಮಿಸಿದೆ. ಇದೇ ಕಾರಣಕ್ಕೆ ಬ್ರಿಟೀಷ್​ ದೇಶದಲ್ಲಿ ಮುಂದಿನ 6 ವಾರಗಳ ಕಾಲ ಮತ್ತೊಂದು ಸುತ್ತಿನ ಲಾಕ್​ಡೌನ್​ ಘೋಷಣೆ ಮಾಡಲಾಗಿದೆ. ಆದರೆ, ಮುಂದಿನ ಜನವರಿ 26 ರಂದು ಭಾರತದ ಗಣರಾಜ್ಯೋತ್ಸವಕ್ಕೆ ಬ್ರಿಟನ್ ಪ್ರಧಾನಿ ಬೋರಿಸ್​ ಜಾನ್ಸನ್​ ಅವರನ್ನು ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಲಾಗಿತ್ತು. ಬೋರಿಸ್​ ಸಹ ಭಾರತದ ಗಣರಾಜ್ಯೋತ್ಸವ ಸಂಭ್ರಮದಲ್ಲಿ ಪಾಲ್ಗೊಳ್ಳುವ ಇಂಗಿತವನ್ನು ವ್ಯಕ್ತಪಡಿಸಿದ್ದರು. ಆದರೆ, ಇದೀಗ ಇಂಗ್ಲೆಂಡ್​ನಲ್ಲಿ ಕೊರೋನಾ ಸ್ಥಿತಿ ಕೈಮೀರಿದ್ದು, ಬೋರಿಸ್​ ಜಾನ್ಸನ್ ಏಕಾಏಕಿ ಭಾರತದ ಭೇಟಿಯನ್ನು ರದ್ದು ಮಾಡಿದ್ದಾರೆ. ಈ ಮೂಲಕ ಭಾರತ ಕಳೆದ 50 ವರ್ಷದಲ್ಲಿ ಮೊದಲ ಭಾರಿಗೆ ವಿಶೇಷ ಅತಿಥಿ ಇಲ್ಲದೆ ಗಣರಾಜ್ಯೋತ್ಸವ ಆಚರಿಸುವಂತಾಗಿದೆ.


    ಇನ್ನೂ ಜಾನ್ಸನ್​ ಬೋರಿಸ್​ ಅವರ ಭಾರತದ ಭೇಟಿ ರದ್ದುಗೊಂಡಿರುವ ಕುರಿತು ನಿನ್ನೆ ಸಂಜೆಯೇ ಟ್ವೀಟ್​ ಮಾಡುವ ಮೂಲಕ ಸ್ಪಷ್ಟಪಡಿಸಿದ್ದ ಎಎನ್​ಐ, "ಕಳೆದ ರಾತ್ರಿ ಘೋಷಿಸಿದ ರಾಷ್ಟ್ರೀಯ ಲಾಕ್‌ಡೌನ್ ಮತ್ತು ಕೊರೋನಾ ವೈರಸ್‌ನ ಹೊಸ ರೂಪಾಂತರ ಪ್ರಭೇದವು ವೇಗವಾಗಿ ಹರಡುತ್ತಿರುವುದರಿಂದ ಇಂಗ್ಲೆಂಡ್​ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಬ್ರಿಟನ್‌ನಲ್ಲಿ ಉಳಿಯಬೇಕಾಗಿದೆ ಎಂದು ಬ್ರಿಟನ್ ಸರ್ಕಾರ ಹೇಳಿದೆ" ಎಂದು ವರದಿ ಮಾಡಿತ್ತು.



    ಇಂತಹ ಸಂದಿಗ್ಧ ಸಮಯದಲ್ಲಿ ಬೋರಿಸ್​ ಜಾನ್ಸನ್​ ಇಂಗ್ಲೆಂಡ್​ನಲ್ಲೇ ಇರುವ ಅಗತ್ಯವನ್ನು ವಿವರಿಸಿರುವ ಇಂಗ್ಲೆಂಡ್​ ಪ್ರಧಾನಿ ಕಚೇರಿ, "ಬೋರಿಸ್​ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಈ ಕುರಿತು ಮಾತನಾಡಿದ್ದಾರೆ. ಇಂತಹ ಸಮಯದಲ್ಲಿ ಕೊರೋನಾ ಪರಿಸ್ಥಿತಿಯ ಮೇಲ್ವಿಚಾರಣೆ ಮಾಡಲು ಅವರು ಯುಕೆ ಯಲ್ಲಿ ಉಳಿಯುವುದು ಬಹಳ ಮುಖ್ಯ. ಇದರಿಂದಾಗಿ ಅವರು ವೈರಸ್​ ಕುರಿತ ದೇಶೀಯ ಪ್ರತಿಕ್ರಿಯೆಯತ್ತ ಗಮನ ಹರಿಸಬಹುದು" ಎಂದು ತಿಳಿಸಿದೆ.


    ಇದನ್ನೂ ಓದಿ: Union Budget 2021: ಜನವರಿ 29 ರಿಂದ ಸಂಸತ್ ಅಧಿವೇಶನ : ಫೆಬ್ರವರಿ 1ಕ್ಕೆ ಬಜೆಟ್ ಮಂಡನೆ


    "ಪ್ರಧಾನಿ ನರೇಂದ್ರ ಮೋದಿ ಸಹ ಬೋರಿಸ್​ ಜಾನ್ಸನ್​ ಅವರಿಗೆ ಧೈರ್ಯ ತುಂಬಿದ್ದು, ಯುಕೆಯಲ್ಲಿನ ಅಸಾಧಾರಣ ಪರಿಸ್ಥಿತಿಯ ಬಗ್ಗೆ ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಕೊರೋನಾ ಸಾಂಕ್ರಾಮಿಕ ರೋಗ ಹರಡುವಿಕೆಯನ್ನು ತ್ವರಿತವಾಗಿ ನಿಯಂತ್ರಿಸಲು ಶುಭ ಕೋರಿದ್ದಾರೆ" ಎಂದು ತಿಳಿದುಬಂದಿದೆ.


    ಕಳೆದ ವರ್ಷ ಇಂಗ್ಲೆಂಡ್​ ಯುರೋಪಿಯನ್ ಒಕ್ಕೂಟವನ್ನು ತೊರೆದ ನಂತರ ಹೊಸ ದ್ವಿಪಕ್ಷೀಯ ಒಪ್ಪಂದಗಳ ಹುಡುಕಾಟದಲ್ಲಿ ತೊಡಗಿದೆ. ಇದೆ ಕಾರಣಕ್ಕೆ ಬ್ರಿಟನ್‌ನೊಂದಿಗೆ ವ್ಯಾಪಾರದ ಕುರಿತು ಮಾತುಕತೆ ಚುರುಕುಗೊಳಿಸುವ ಪ್ರಯತ್ನಗಳ ಭಾಗವಾಗಿ ಭಾರತಕ್ಕೆ ಭೇಟಿ ನೀಡುವ ಜಾನ್ಸನ್ ಅವರ ಉದ್ದೇಶವನ್ನು ಕಳೆದ ತಿಂಗಳು ಬ್ರಿಟಿಷ್ ಸರ್ಕಾರ ಪ್ರಕಟಿಸಿತ್ತು. ಆದರೆ ಬ್ರಿಟನ್​ನಲ್ಲಿ ಪ್ರಸ್ತುತ Mutant Covid ಪರಿಸ್ಥಿತಿ ದಿನದಿಂದ ದಿನಕ್ಕೆ ಉದ್ವಿಗ್ನಗೊಳ್ಳುತ್ತಿದ್ದು, ಬೋರಿಸ್​ ಜಾನ್ಸನ್ ಅವರ ಮಹತ್ವದ ಭಾರತದ ಭೇಟಿ ರದ್ದಾಗಿರುವುದು ದುರಾದೃಷ್ಟಕರ ಎನ್ನಲಾಗುತ್ತಿದೆ.

    Published by:MAshok Kumar
    First published: