• ಹೋಂ
  • »
  • ನ್ಯೂಸ್
  • »
  • Corona
  • »
  • ಅಲೋಪತಿ ಅವಿವೇಕಿಗಳ ವಿಜ್ಞಾನ ಎಂದ ರಾಮ್​ದೇವ್​ ವಿರುದ್ಧ ಐಎಂಎ ನೋಟಿಸ್; ವಿಡಿಯೋದಲ್ಲಿನ ಹೇಳಿಕೆ ನಿರಾಕರಿಸಿದ ಪತಂಜಲಿ

ಅಲೋಪತಿ ಅವಿವೇಕಿಗಳ ವಿಜ್ಞಾನ ಎಂದ ರಾಮ್​ದೇವ್​ ವಿರುದ್ಧ ಐಎಂಎ ನೋಟಿಸ್; ವಿಡಿಯೋದಲ್ಲಿನ ಹೇಳಿಕೆ ನಿರಾಕರಿಸಿದ ಪತಂಜಲಿ

ರಾಮ್​ದೇವ್​​

ರಾಮ್​ದೇವ್​​

ಆಧುನಿಕ ವೈದ್ಯ ಪದ್ಧತಿ ಬಗ್ಗೆ ಜನರಲ್ಲಿ ಈ ರೀತಿ ತಪ್ಪು ಕಲ್ಪನೆ ಮೂಡಿಸುತ್ತಿರುವ ರಾಮ್​ದೇವ್​​ ವಿರುದ್ಧ ಕ್ರಮಕ್ಕೆ ಮುಂದಾಗಬೇಕು ಎಂದು ಐಎಂಎ ತಿಳಿಸಿದೆ.

  • Share this:

    ನವದೆಹಲಿ (ಮೇ. 22):  ದೇಶದೆಲ್ಲೆಡೆ ಸೋಂಕಿನ ವಿರುದ್ಧ ಜೀವ ಪಣಕ್ಕಿಟ್ಟು ಮುಂಚೂಣಿ ಕಾರ್ಯಕರ್ತರಾಗಿರುವ ವೈದ್ಯರು ಹೋರಾಡುತ್ತಿದ್ದಾರೆ. ಸೋಂಕಿತರ ಚಿಕಿತ್ಸೆಗೆ ಹಗಲಿರುಳು ಶ್ರಮಿಸುತ್ತಿರುವ ಈ ಸಂದರ್ಭದಲ್ಲಿ ವೈದ್ಯಕೀಯ ವೈದ್ಯರನ್ನು ಕೊಲೆಗಾರರು ಎಂದು ಯೋಗ ಗುರು ಬಾಬಾ ರಾಮ್​ದೇವ್​ ಕರೆದಿದ್ದಾರೆ. ​ ವಿಡಿಯೋವೊಂದರಲ್ಲಿ ಯೋಗ ಗುರು ರಾಮ್​ದೇವ್​ ಅವರು, ಅಲೋಪತಿ ಅಥವಾ ವೈದ್ಯಕೀಯ ವಿಜ್ಞಾನ (ಎಂಬಿಬಿಎಸ್​) ಅನ್ನು ಅವಿವೇಕಿಗಳ ವಿಜ್ಞಾನ ಎಂದು ಟೀಕಿಸಿದ್ದರು. ಕೋವಿಡ್​ ನಿಯಂತ್ರಿಸುವಲ್ಲಿ ಅಲೋಪತಿ ಸೋತಿದೆ. ಡ್ರಗ್ಸ್​ ಕಂಟ್ರೋಲರ್​ ಜನರಲ್​ ಆಫ್​ ಇಂಡಿಯಾ (ಡಿಸಿಜಿಐ) ಅನುಮೋದಿಸಿದ ರೆಮಿಡಿಸಿವಿರ್​, ಫೆವಿ ಫ್ಲೂ ಇತರೆ ಔಷಧಗಳ ಪ್ರಯೋಗಿಸಿದರೂ ಸೋಂಕಿತರನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ವೈದ್ಯರುಗಳು ಕೊಲೆಗಾರರು ಎಂದು ಆಪಾದಿಸಿದ್ದರು. ಈ ವಿಡಿಯೋ ಆಧಾರದ ಮೇಲೆ ಕ್ರಮಕ್ಕೆ ಮುಂದಾಗಿರುವ ಐಎಂಎ ಈಗ ಯೋಗ ಗುರುಗೆ ಲೀಗಲ್​ ನೋಟಿಸ್​ ಜಾರಿ ಮಾಡಿದೆ.


    ವೈದ್ಯಕೀಯ ವಿಜ್ಞಾನಕ್ಕೆ ಧಕ್ಕೆ ಮೂಡುವ ರೀತಿ ಹೇಳಿಕೆ ನೀಡಿ, ಸಾರ್ವಜನಿಕರಿಗೆ ದಾರಿ ತಪ್ಪಿಸುವ ಕೆಲಸವನ್ನು ರಾಮ್​ ದೇವ್​ ಮಾಡುತ್ತಿದ್ದಾರೆ. ಈ ಹಿನ್ನಲೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಆರೋಗ್ಯ ಸಚಿವ ಡಾ ಹರ್ಷ್​ ವರ್ಧನ್​ ಗೂ ಮನವಿ ಮಾಡಲಾಗಿದೆ. ಏಮ್ಸ್​ ನಿವಾದಲ್ಲಿ ಇಂದು ವೈದ್ಯರ ಸಂಘ, ಸಫ್ಧರ್ಜಂಗ್​ ಆಸ್ಪತ್ರೆಯ ಆರ್​ಡಿಎ ಮತ್ತು ಇತರ ವೈದ್ಯಕೀಯ ಸಂಸ್ಥೆಗಳು ಸಭೆ ನಡೆಸಿ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.


    ಇದನ್ನು ಓದಿ: 18-44ವರ್ಷದ ಎಲ್ಲರಿಗೂ ಕೋವಿಡ್​ ಲಸಿಕೆ ಇಲ್ಲ; ಆದ್ಯತಾ ವಲಯಕ್ಕೆ ಮಾತ್ರ: ಸರ್ಕಾರದ ಸ್ಪಷ್ಟನೆ


    ಆದರೆ, ಈ ಹೇಳಿಕೆಗಳನ್ನು ನಿರಾಕರಿಸಿರುವ ಪತಂಜಲಿ ಯೋಗ ಪೀಠ್​ ಟ್ರಸ್ಟ್​​, ರಾಮದೇವ್​ ವೈದ್ಯಕೀಯ ವಿಜ್ಞಾನದ ಬಗ್ಗೆ ಧಕ್ಕೆ ತರುವ ಹೇಳಿಕೆ ನೀಡಿಲ್ಲ. ಕೋವಿಡ್​ ಬಿಕ್ಕಟ್ಟಿನ ಇಂತಹ ಸವಾಲಿನ  ಸಂದರ್ಭದಲ್ಲಿ ವೈದ್ಯರು ಹಗಲು ರಾತ್ರಿ ಎನ್ನದೇ ಸೋಂಕಿತರ ರಕ್ಷಣೆಗೆ ಕೆಲಸ ಮಾಡುತ್ತಿದ್ದಾರೆ. ಅಂತಹ ವೈದ್ಯರು ಮತ್ತು ವೈದ್ಯಕೀಯ ಸಹಾಯಕರ ಬಗ್ಗೆ ರಾಮದೇವ್​​ಗೆ ಅತ್ಯಂತ ಗೌರವ ಇದೆ ಎಂದು ಸಮಾಜಾಯಿಷಿ ನೀಡಿದೆ.


    ಇದನ್ನು ಓದಿ: ತಾರತಮ್ಯ ಮಾಡುವ ಕೇಂದ್ರದ ನಿರೀಕ್ಷೆ ಬಿಟ್ಟು, ಬ್ಲಾಕ್​ ಫಂಗಸ್​ ಔಷಧ ನೇರ ಖರೀದಿಗೆ ರಾಜ್ಯ ಸರ್ಕಾರ ಮುಂದಾಗಲಿ; ಎಚ್​ಡಿಕೆ


    ಆಧುನಿಕ ವೈದ್ಯ ಪದ್ಧತಿ ಬಗ್ಗೆ ಜನರಲ್ಲಿ ಈ ರೀತಿ ತಪ್ಪು ಕಲ್ಪನೆ ಮೂಡಿಸುತ್ತಿರುವ ರಾಮ್​ದೇವ್​​ ವಿರುದ್ಧ ಕ್ರಮಕ್ಕೆ ಮುಂದಾಗಬೇಕು ಎಂದು ಐಎಂಎ ವಾದಿಸಿದೆ. ಅಲ್ಲದೇ ರಾಮ್​ ದೇವ್​, ಅವರ ಈ ಹೇಳಿಕೆಯಿಂದ ದೇಶದ ಜನರು, ಬಡವರಿಗೆ ಅಪಾಯವಾಗಲಿದೆ. ಈ ಹಿನ್ನಲೆ ಅವರ ವಿರುದ್ಧ ಸಾಂಕ್ರಾಮಿಕ ಕಾಯಿಲೆ ಕಾಯ್ದೆ ಅಡಿ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದೆ.


    ರಾಮದೇವ್​ ಕೋವಿಡ್​ ಪರಿಸ್ಥಿತಿಯ ಲಾಭಾ ಪಡೆದು ಜನರಲ್ಲಿ ಭಯ ಮತ್ತು ಹತಾಶೆ ಮೂಡಿಸುತ್ತಿರುವ ಪ್ರಯತ್ನ ನಡೆಸುತ್ತಿದ್ದಾರೆ. ಈ ಮೂಲಕ ಅವರು ತಮ್ಮ ಅನುಮೋದಿತವಲ್ಲದ ಕಾನೂನು ಬಾಹಿರ ಔಷಧಗಳನ್ನು ಮಾರಾಟ ಮಾಡಬಹುದು. ಈ ಮೂಲಕ ಹಣವನ್ನು ಗಳಿಸಬಹುದು ಎಂಬ ಯೋಜನೆ ರೂಪಿಸಿದ್ದಾರೆ. ಸರಿಯಾದ ಕಲಿಕೆ ಇಲ್ಲದ ರಾಮ್​ದೇವ್​ ಇಂತಹ ಹೇಳಿಕೆಗಳ ವಿರುದ್ಧ ಸ್ವತಃ ವೈದ್ಯರು ಆಗಿರುವ ಆರೋಗ್ಯ ಸಚಿವ ಹರ್ಷವರ್ಧನ್​ ಅವರು ಸುಮೋಟೋ ಕೇಸ್​ ದಾಖಲಿಸಬೇಕು. ಇಂತಹ ಹೇಳಿಕೆಗಳು ಸಮಾಜಕ್ಕೆ ದೊಡ್ಡ ಅಪಾಯ ತಂದೊಡ್ಡುತ್ತದೆ ಎಂದು ಐಎಂಎ ತಿಳಿಸಿದೆ.


    ರಾಮ್​ ದೇವ್ ಅವರ​ ಹೇಳಿಕೆಯನ್ನು ಏಮ್ಸ್​ನ ರೆಸಿಡೆಂಟ್​ ಡಾಕ್ಟರ್ಸ್​​​ ಅಸೋಸಿಯೇಷನ್​ ಬಲವಾಗಿ ಖಂಡಿಸಿದೆ.

    Published by:Seema R
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು