ಬಾಲಿವುಡ್ ನಟ ಸೋನು ಸೂದ್ (Sonu Sood) ಕೊರೋನಾದಿಂದಾಗಿ ಎದುರಾಗಿರುವ ಸಂಕಷ್ಟದ ಕಾಲದಲ್ಲಿ ದೇಶದ ಜನತೆಯ ಪಾಲಿನ ಹೀರೋ ಆಗಿದ್ದಾರೆ. ಕಳೆದ ವರ್ಷ ಕೊರೋನಾ ಲಾಕ್ಡೌನ್ (Lockdown) ಆರಂಭವಾದಾಗಲಿಂದ ಅನೇಕ ಜನ ಸಾಮಾನ್ಯರಿಗೆ ಸಹಾಯ ಮಾಡುತ್ತಲೇ ಬಂದಿದ್ದಾರೆ. ಈ ಬಾರಿಯೂ ಕೂಡ ಸಾಕಷ್ಟು ಜನರಿಗೆ ಸಹಾಯ ಮಾಡುತ್ತಲೇ ಇದ್ದಾರೆ. ಈ ಹಿನ್ನೆಲೆ ಜನ ಸಾಮಾನ್ಯರು ಸೋನು ಸೂದ್ ಅವರನ್ನು ನಿಜವಾದ ದೇವರು, ಹೀರೋ ಎಂದೆಲ್ಲ ಕೊಂಡಾಡುತ್ತಿದ್ದಾರೆ. ಕಳೆದ ಬಾರಿ ಲಾಕ್ಡೌನ್ ವೇಳೆ ಸೋನು ಸೂದ್ ಅವರ ಸಹಾಯದಿಂದ ತಮ್ಮ ಗೂಡು ಸೇರಿಕೊಂಡಿದ್ದ ಗರ್ಭಿಣಿ ಮಹಿಳೆ ತಮಗೆ ಹುಟ್ಟಿದ ಮಗುವಿಗೆ ಸೂನು ಹೆಸರನ್ನೇ ಇಡುವ ಮೂಲಕ ಸುದ್ದಿಯಾಗಿದ್ದರು. ಇನ್ನೂ ಒಬ್ಬರು ಸೋನು ಸೂದ್ ಹೆಸರಿನ ಟ್ಯಾಟೂ ಹಾಕಿಸಿಕೊಂಡಿದ್ದರು. ಈಗ ಇಂತಹದ್ದೇ ಮತ್ತೊಂದು ಘಟನೆ ತೆಲಂಘಾಣದಲ್ಲಿ ನಡೆದಿದೆ.
ಈಗ ಇದೇ ರೀತಿ, ತೆಲಂಗಾಣದಲ್ಲಿ ಮಟನ್ ಶಾಪ್ವೊಂದಕ್ಕೆ ಸೋನು ಸೂದ್ ಅವರ ಹೆಸರನ್ನು ಮಟನ್ ಶಾಪ್ವೊಂದಕ್ಕೆ ಇಡಲಾಗಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಇದಕ್ಕೆ ನಟ ಸೋನು ಸೂದ್ ಟ್ವೀಟ್ ಮೂಲಕ ತಮಾಷೆಯಾಗಿ ಪ್ರತಿಕ್ರಿಯೆ ನೀಡಿದ್ದಾರೆ.
మటన్ కొంటే.. సోనుసూద్ కు పైసలు #Mutton #SonuSood #TeenmaarNews #Karimnagar #TeenmaarNews @SonuSood pic.twitter.com/GE6eUtdzeR
— V6 News (@V6News) May 29, 2021
ಇದನ್ನೂ ಓದಿ: Sparsha Rekha: ನಿರ್ದೇಶಕಿಯಾಗಿ ನಿಮ್ಮ ಮುಂದೆ ಬರಲಿದ್ದಾರೆ ಸ್ಪರ್ಶ ರೇಖಾ..!
ಟ್ವಿಟ್ಟರ್ನಲ್ಲಿ ಈ ಕುರಿತಾಗಿ ಟ್ವೀಟ್ ಮಾಡಿರುವ ನಟ, ಸಖತ್ ಹ್ಯೂಮರಸ್ ಆಗಿ ಹಾಗೂ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ನಾನು ಸಸ್ಯಾಹಾರಿ... ನನ್ನ ಹೆಸರಿನಲ್ಲಿ ಮಟನ್ ಅಂಗಡಿ..? ನಾನು ಅವರಿಗೆ ಯಾವುದಾದರೂ ಸಸ್ಯಾಹಾರಕ್ಕೆ ಸಂಬಂಧಿಸಿದ ವ್ಯಾಪಾರ ಮಾಡಲು ಸಹಾಯ ಮಾಡಬಹುದೇ..?' ಎಂದು ಭಾನುವಾರ ಅಂದರೆ ಮೇ 30ರಂದು ಟ್ವೀಟ್ ಮಾಡಿದ್ದಾರೆ.
ಸೋನು ಸೂದ್ ಮಾಡಿರುವ ಲೆಟೆಸ್ಟ್ ಟ್ವೀಟ್
I am a vegetarian..
N mutton shop on my name?🙈
Can I help him open something vegetarian 😄 https://t.co/jYO40xAgRd
— sonu sood (@SonuSood) May 30, 2021
ಕೋವಿಡ್ -19 ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಮಧ್ಯೆ, ನಟ ಕೋವಿಡ್ ರೋಗಿಗಳಿಗೆ ಆಮ್ಲಜನಕ ಸಾಂದ್ರಕಗಳನ್ನು ಮತ್ತು ಇತರ ಅಗತ್ಯ ಸಾಧನಗಳನ್ನೂ ವ್ಯವಸ್ಥೆ ಮಾಡುತ್ತಿದ್ದಾರೆ. ಜೂನ್ನಲ್ಲಿ ಆಂಧ್ರಪ್ರದೇಶದಲ್ಲಿ ಒಂದೆರಡು ಆಮ್ಲಜನಕ ಘಟಕಗಳನ್ನು ಸ್ಥಾಪಿಸುವುದಾಗಿ ಸೋನು ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಘೋಷಣೆ ಮಾಡಿದ್ದರು.
ಇದನ್ನೂ ಓದಿ: ಮಾದಕ ನೋಟದಿಂದಲೇ ಮತ್ತು ಬರಿಸುತ್ತಿರುವ ದುಬಾರಿ ನಟಿ ಶ್ರೀಲೀಲಾ
ನನ್ನ ಮೊದಲ ಆಮ್ಲಜನಕ ಸ್ಥಾವರಗಳನ್ನು ಕರ್ನೂಲ್ ಸರ್ಕಾರಿ ಆಸ್ಪತ್ರೆಯಲ್ಲಿ ಮತ್ತು ಆಂಧ್ರ ಪ್ರದೇಶದ ನೆಲ್ಲೂರಿನ ಆತ್ಮಕೂರಿನ ಒಂದು ಜಿಲ್ಲಾಸ್ಪತ್ರೆಯಲ್ಲಿ ಜೂನ್ ತಿಂಗಳಲ್ಲಿ ಸ್ಥಾಪಿಸಲಾಗುವುದು ಎಂದು ಘೋಷಿಸಲು ತುಂಬಾ ಸಂತೋಷವಾಗಿದೆ. ಇತರ ರಾಜ್ಯಗಳಲ್ಲಿ ಅಗತ್ಯವಿರುವ ಕಡೆಗಳಲ್ಲಿ ಹೆಚ್ಚಿನ ಸ್ಥಾವರಗಳನ್ನು ಸ್ಥಾಪಿಸುವ ಮೂಲಕ ಇದನ್ನು ವಿಸ್ತರಿಸುವ ಯೋಜನೆ ಇದೆ. ಇದು ಗ್ರಾಮೀಣ ಭಾರತವನ್ನು ಬೆಂಬಲಿಸುವ ಸಮಯ ಎಂದು ಅವರು ಇತ್ತೀಚೆಗೆ ಟ್ವೀಟ್ ಮಾಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ